ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಲಿ
Team Udayavani, Oct 28, 2018, 5:15 PM IST
ಚಿಕ್ಕೋಡಿ: ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿ ಬೆಳೆದಾಗ ಕಲಾವಿದರಿಗೊಂದು ಅವಕಾಶ ದೊರೆಯುತ್ತಿದೆ ಎಂದು ಚಿತ್ರರಂಗದ ತಾರೆ ರಾಗಿಣಿ ದ್ವಿವೇದಿ ಹೇಳಿದರು. ಪಟ್ಟಣದ ಬಿ.ಕೆ. ಕಾಲೇಜು ಹತ್ತಿರ ಗೊಮ್ಮಟೇಶ ಶಿಕ್ಷಣ ಸಂಸ್ಥೆಯ ಹಾಗೂ ಶೌರ್ಯ ಎಂಟರಟೈನಮೆಂಟ್ಸ್ ಸಹಯೋಗದಲ್ಲಿ ನಡೆದ ಚಿಕ್ಕೋಡಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಚಿಕ್ಕೋಡಿ ಜನತೆ ಭಾಷ್ಯಾ ಬಾಂಧವ್ಯಕ್ಕೆ ಗಟ್ಟಿ ಧ್ವನಿಯಾಗಿ ಗಡಿ ಭಾಗದಲ್ಲಿ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದರು.
ಪುರಸಭೆ ಸದಸ್ಯ ಜಗದೀಶ ಕವಟಗಿಮಠ ಮಾತನಾಡಿ, ಚಿಕ್ಕೋಡಿ ಗಡಿ ಭಾಗದಲ್ಲಿದ್ದರು ಕೂಡಾ ಕನ್ನಡ ಸಾಹಿತ್ಯ ಗಟ್ಟಿಯಾಗಿ ನೆಲೆಯೂರಿದೆ. ಗಡಿ ಭಾಗದಲ್ಲಿ ಕನ್ನಡ-ಮರಾಠಿ ಭಾಷೆಕರು ಸಹೋದರಂತೆ ಜೀವನ ಸಾಗಿಸುತ್ತಿದ್ದು, ಇಂದಿನ ಯುವಕರು ಶಿಸ್ತುನ್ನು ಅಳವಡಿಸಿಕೊಂಡು ಜೀವನದಲ್ಲಿ ಸಾಧನೆ ಮಾಡುವ ಛಲ ಹೊಂದಬೇಕು ಎಂದರು.
ಗೊಮ್ಮಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎನ್.ಎ. ಮಗದುಮ್ ಮಾತನಾಡಿ, ನಾಲ್ಕು ದಿನಗಳವರೆಗೆ ನಡೆಯುವ ಚಿಕ್ಕೋಡಿ ಮಹೋತ್ಸವದಲ್ಲಿ 26 ರಂದು ಡಿ.ಜೆ. ಮಹೋತ್ಸವ, 27ರಂದು ಮರಾಠಿ ಚಲನಚಿತ್ರದ ಪ್ರಖ್ಯಾತಿ ಸೊನಾಲಿ ಕುಲಕರ್ಣಿ ಅವರಿಂದ ಲಾವಣಿ ಮಹೋತ್ಸವ, 28ರಂದು ಹಿನ್ನೆಲೆ ಸಂಗೀತ ಗಾಯಕ ರಾಜೇಶ ಕೃಷ್ಣನ ಅವರಿಂದ ಕರುನಾಡು ಮಹೋತ್ಸವ ನಡೆಯಲಿದೆ ಎಂದರು.
ಯೋಗ ಗುರು ಚನ್ನಬಸವ ಗೂರುಜಿ ಮಾತನಾಡಿದರು. ಈ ವೇಳೆ ಗೊಮ್ಮಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎನ್.ಎ. ಮಗದುಮ್, ರಾವಸಾಹೇಬ ಹವಲೆ, ಮಹೇಶ ಜಗದಾಳೆ, ಸಾಹಿತಿ ಎಸ್.ವೈ. ಹಂಜಿ, ಎಸ್.ಆರ್. ಡೊಂಗರೆ ಸೇರಿದಂತೆರ ಇತರರು ಇದ್ದರು. ಸಿದ್ದು ಪಾಟೀಲ ಸ್ವಾಗತಿಸಿದರು. ಸಾಹಿತಿ ಪಿ.ಜಿ. ಕೆಂಪನ್ನವರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಉದ್ಯಮಿ ಹ*ತ್ಯೆ ಪ್ರಕರಣ: ಪತ್ನಿ ಸೇರಿ ಮೂವರ ಬಂಧನ
Belagavi: ಕಿತ್ತರೂ ಉತ್ಸವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲೂ ರಸಮಂಜರಿ ಕಾರ್ಯಕ್ರಮ
Flight: ಬೆಳಗಾವಿ – ಬೆಂಗಳೂರು ವಿಮಾನ ರದ್ದು ಮಾಡದಂತೆ ಕೇಂದ್ರ ಸಚಿವರಿಗೆ ಶೆಟ್ಟರ್ ಮನವಿ
Bailhongal: ಕರೆಂಟ್ ಶಾಕ್ ತಗುಲಿ ಮಹಿಳೆ ಸಾವು
Belagavi: ಫೇಸ್ಬುಕ್ ಗೆಳೆಯನ ಜೊತೆ ಸೇರಿ ಕೋಟ್ಯಧಿಪತಿ ಗಂಡನನ್ನೇ ಹತ್ಯೆಗೈದಳಾ ಪತ್ನಿ…?
MUST WATCH
ಹೊಸ ಸೇರ್ಪಡೆ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್; ವಿದ್ಯಾರ್ಥಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.