
ಸರಳತೆ-ಸಮಾನತೆಯ ಸಮಾಜ ನಿರ್ಮಿಸೋಣ: ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ
Team Udayavani, May 14, 2024, 2:25 PM IST

ಉದಯವಾಣಿ ಸಮಾಚಾರ
ಕೋಹಳ್ಳಿ: ಸತ್ಸಂಗದಲ್ಲಿ ಪಾಲ್ಗೊಂಡು ಶೃದ್ಧೆ, ಭಕ್ತಿ, ಜ್ಞಾನದ ಅನುಭವವನ್ನು ಪಡೆದು ಗುರುವಿಗೆ ಶರಣಾಗಬೇಕು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಅವರು ಸಮೀಪದ ಕೊಟ್ಟಲಗಿ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ದೇವರ ಆರಾಧನಾ ಮಹೋತ್ಸವದ ನಿಮಿತ್ತ ನಡೆದ ಶಿವಾನುಭವಗೋಷ್ಠಿ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಕೂಡಲಸಂಗಮ ದೇವರ ಒಲಿಸಲು ಬಂದ ಪ್ರಸಾದ ಕಾಯುವ ಕೆಡಿಸಲಾಗದು ಎಂಬ ವಿಷಯದ ಕುರಿತು ಮಾತನಾಡಿ, ಸಂಸಾರದಲ್ಲಿ ಆಸ್ತಿ, ಅಂತಸ್ತು, ಸಂಪತ್ತಿಗೆ ಆಸೆ ಮಾಡದೇ ಗುರುವಿನಲ್ಲಿ ಭಕ್ತಿ, ಭಾವದಿಂದ ದುಡಿಯಬೇಕು. ಜೀವನದ ಸಂಸಾರದ ಬಂಡಿ ಸಾಗಲೆಂದು ನಿಸ್ವಾರ್ಥವಾಗಿ ದುಡಿದರೆ ಮುಕ್ತಿ ಪಡೆಯಲು ಸಾಧ್ಯವಿದೆ.
ಕಾಯಕ, ದಾಸೋಹ, ಪ್ರಸಾದ ಈ ಮೂರು ತತ್ವಗಳ ಮೂಲಕ ಕಾಯಕವನ್ನು ಮಾಡಬೇಕು. ಕಾಯಕದಲ್ಲಿ ಸತ್ಯ, ಶುದ್ಧವಾದ ಮನಸ್ಸಿನಿಂದ ದಾಸೋಹ ನೀಡಬೇಕು. ನಾವು ಗಳಿಸಿದ ಸಂಪತ್ತಿನಲ್ಲಿ ಸ್ವಲ್ಪ ಭಾಗವನ್ನು ದಾಸೋಹಕ್ಕೆ ನೀಡಬೇಕು. ದಾಸೋಹದ ಪ್ರಸಾದವನ್ನು ವಿನಿಮಯ ಮಾಡಿಕೊಂಡು ಸ್ವೀಕರಿಸಬೇಕು. ಶರಣರು ಕಂಡ ಸರಳತೆಯ, ಸಮಾನತೆಯ, ದಾಸ್ಯಮುಕ್ತ ಸಮಾಜ ಮಾಡಬೇಕು ಎಂದರು.
ವಿಜಯಪೂರ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮಿಜಿ ನೇತೃತ್ವ ವಹಿಸಿ ಮಾತನಾಡಿ, ಭಗವಂತ ಕೊಟ್ಟ ಈ ಶರೀರವು ಅಪರೂಪದ ಕಾಣಿಕೆ. ಶರೀರಕ್ಕೆ ವಿವೇಕ ಕೊಟ್ಟು ಭೂಮಿಗೆ ಕಳುಹಿಸಿದ ಭಗವಂತ ನೋಡಬೇಕಾದರೆ ಒಳ್ಳೆಯ ಪ್ರಸಾದಕಾಯುವ ಕಾರ್ಯವನ್ನು ಮಾಡುವ ಮೂಲಕ ಭಗವಂತನಿಗೆ ಹತ್ತಿರವಾಗಬೇಕು. ಪ್ರಸಾದ ಕಾಯುವನಾಗಬೇಕಾದರೆ, ಸತ್ಯ, ಶುದ್ದವಾದ
ಕಾಯಕದಿಂದ ಜೀವನ ನಡೆಸಬೇಕು. ಅಧ್ಯಾತ್ಮವೆಂಬುದು ನಮ್ಮ ದೇಶಕ್ಕೆ ಕೊಟ್ಟ ಕೊಡುಗೆ. ಯಾವ ದೇಶದಲ್ಲಿ ಸಿಗದೇ ಇರುವ ಅಧ್ಯಾತ್ಮದ ರುಚಿಯನ್ನು ಸಿದ್ದೇಶ್ವರ ಶ್ರೀಗಳು ನಮ್ಮ ಭಾರತ ದೇಶದಲ್ಲಿ ಪ್ರವಚನದಿಂದ ಮೂಡಿಸಿದ್ದಾರೆ ಎಂದರು.
ಕಕಮರಿಯ ಅಭಿನವ ಗುರಲಿಂಗ ಸ್ವಾಮಿಜಿ, ಗುರುದೇವಾಶ್ರಮದ ಆತ್ಮಾರಾಮ ಸ್ವಾಮಿಜಿ, ಕಾಗವಾಡದ ಯತೀಶಾನಂದ ಸ್ವಾಮಿಜಿ, ಸವಿತಾನಂದ ಸ್ವಾಮಿಜಿ, ಅನ್ನಪೂರ್ಣ ತಾಯಿವರು, ಸಿದರಾಯ ಯಲಡಗಿ, ಅಪ್ಪಸಾಬ ಬಿರಾದಾರ, ರವಿ ಸಂಕ, ಗುರುಬಸು ಬಂಡಗರಗೋಟ್ಟಿ, ಗುರು ಮುಗ್ಗನ್ನವರ ಸೇರಿದಂತೆ ಅನೇಕ ಸದ್ಬಕ್ತ ಮಂಡಳಿಯ ಸದಸ್ಯರು ಇದ್ದರು. ಮಹೇಶ ಬಂಡರಗೊಟ್ಟಿ ಸ್ವಾಗತಿಸಿ, ನಿರೂಪಿಸಿದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.