ಪುರಾಣ ಕೇಳಿದರೆ ಜೀವನ ಪಾವನ: ಗಿರಿಮಲ್ಲ ಬೆಳ್ಳುಂಡಗಿ
ಪ್ರಚಾರದ ಮೋಹ ಬಿಟ್ಟು ದೈವಿಕ ಪ್ರಜ್ಞೆ ಮೂಡಿಸಿಕೊಳ್ಳುವ ಕೆಲಸ ಸಮಾಜದಲ್ಲಿ ಆಗಬೇಕಿದೆ
Team Udayavani, Aug 12, 2024, 4:59 PM IST
■ ಉದಯವಾಣಿ ಸಮಾಚಾರ
ತೆಲಸಂಗ: ಪುರಾಣ-ಪುಣ್ಯಕಥೆಗಳ ಶ್ರವಣದಿಂದ ಜೀವನ ಪಾವನವಾಗುತ್ತದೆ ಎಂದು ಸಿರಡೋಣದ ಡೊಳ್ಳಿನ ಹಾಡುಗಳ ಹಿರಿಯ ನಿರ್ದೇಶಕ ಗಿರಿಮಲ್ಲ ಬೆಳ್ಳುಂಡಗಿ ಹೇಳಿದರು. ಕನ್ನಾಳ ಗ್ರಾಮದ ಸಿದ್ಧರಾಮೇಶ್ವರ ದೇವಸ್ಥಾನದ ವನದಲ್ಲಿ ನಡೆದ 38ನೇ ಸತ್ಸಂಗ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುರಾಣ ಶ್ರವಣ ಕಾರ್ಯಕ್ರಮ, ಸತ್ಸಂಗ, ಸತ್ಸಂಪ್ರದಾಯದಿಂದ ಜೀವನ ಪಾವನಗೊಂಡು ಶಾಂತಿ ನೆಲೆಸಿದೆ. ಮನುಷ್ಯ ಹೊಟ್ಟೆ ಹಸಿವು ಹೇಗಾದರೂ ಹೋಗಲಾಡಿಸಬಲ್ಲ. ಆದರೆ ಜ್ಞಾನದ ಹಸಿವನ್ನು ಸತ್ಸಂಗದಿಂದ ಮಾತ್ರ ನೀಗಿಸಿಕೊಳ್ಳಲು ಸಾಧ್ಯ. ಸತ್ಸಂಗದ ಮೂಲಕ ದೊರಕಿದ ನಿಶ್ಚಲವಾದ ಭಕ್ತಿ ಮೂಲಕ ಜೀವನದಲ್ಲಿ ಮುಕ್ತಿ ಕಾಣಬಹುದಲ್ಲದೇ ಪುಣ್ಯ ಪ್ರಾಪ್ತಿ ಪಡೆದು ಸಾರ್ಥಕ ಬದುಕು ನಡೆಸಬಹುದು ಎಂದರು.
ನಿವೃತ್ತ ಶಿಕ್ಷಕ ಬಿ.ಜಿ. ಸಾರ್ವಾಡ ಮಾತನಾಡಿ, ಇಂದಿನ ದಿನಗಳಲ್ಲಿ ಮನೆಯಿಂದಲೇ ಸಂಸ್ಕಾರ ನೀಡುವ ಕಾರ್ಯ ನಡೆಯಬೇಕು. ಸಾಮಾಜಿಕವಾಗಿ ಇಂದು ಮನೆ-ಮನಸ್ಸು ಒಂದಾಗಿಸುವ ಕೆಲಸ ನಡೆಯಬೇಕು ಎಂದರು.
ನಿವೃತ್ತ ಶಿಕ್ಷಕ ಬಿ.ಎನ್. ಅವಟಿ ಮಾತನಾಡಿ, ಚಂಚಲ ಮನಸ್ಸಿಗೆ ಬುದ್ಧಿ ನೀಡಿ ಎಚ್ಚರಿಸುತ್ತ ಕರ್ತವ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಚಂಚಲ ಮನಸ್ಸಿನ ಕಡಿವಾಣಕ್ಕೆ ಸಂಸ್ಕಾರ ಬೇಕು. ಪ್ರಚಾರದ ಮೋಹ ಬಿಟ್ಟು ದೈವಿಕ ಪ್ರಜ್ಞೆ ಮೂಡಿಸಿಕೊಳ್ಳುವ ಕೆಲಸ ಸಮಾಜದಲ್ಲಿ ಆಗಬೇಕಿದೆ ಎಂದರು.
ಕನ್ನಾಳದ ಬಸವಲಿಂಗ ಸ್ವಾಮೀಜಿ, ಹಿರಿಯರಾದ ನಾನಾಗೌಡ ಪಾಟೀಲ, ಯಂಕಣ್ಣಾ ಅಸ್ಕಿ, ಧರೆಪ್ಪಾ ದಳವಾಯಿ, ಶೇಖರ ವಳಸಂಗ ಸೇರಿದಂತೆ ಇತರರಿದ್ದರು. ಶ್ರೀಶೈಲ ಇಸರಗೊಂಡ ನಿರೂಪಿಸಿದರು. ಸಂಜೀವ ಅಸ್ಕಿ ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Viral Disease: ಕೇರಳದಲ್ಲಿ ಎಂ ಫಾಕ್ಸ್ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್
Mangaluru: ಕದ್ರಿ ಪಾರ್ಕ್ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ
Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್ ಅಧಿಕಾರಿ: ಪುಷ್ಪಾ ಅಮರನಾಥ್
Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.