ಸಮಾಜಕ್ಕೆ ಮಠಾಧೀಶರ ಕೊಡುಗೆ ಅಪಾರ: ಶ್ರೀಮುರುಘೇಂದ್ರ ಸ್ವಾಮೀಜಿ
ಲಿಂ| ಶ್ರೀ ಚನ್ನಬಸವ ಸ್ವಾಮೀಜಿಯವರ 23ನೇ ಪುಣ್ಯ ಸ್ಮರಣೋತ್ಸವ
Team Udayavani, Jun 27, 2024, 3:22 PM IST
■ ಉದಯವಾಣಿ ಸಮಾಚಾರ
ಮುನವಳ್ಳಿ: ಮಠಮಾನ್ಯಗಳು ಹಾಗೂ ಮಠಾಧೀಶರು ಕೇವಲ ಧಾರ್ಮಿಕ ಜಾಗೃತಿಗೆ ಸೀಮಿತರಾಗದೇ ಸಮಾಜ ಮುಖಿಯಾಗಿ ಕೆಲಸ ಮಾಡುವುದರ ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡು ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಅಂಥವರಲ್ಲಿ ಸೋಮಶೇಖರ ಮಠದ ಹಿಂದಿನ ಪೂಜ್ಯರಾದ ಲಿಂ| ಚನ್ನಬಸವ ಸ್ವಾಮೀಜಿ ಅಗ್ರಗಣ್ಯರು. ದೇಶಪ್ರೇಮ, ದೇಶಕ್ಕಾಗಿ ತ್ಯಾಗ ಮಾಡುವಲ್ಲಿ ಮಠಾಧೀಶರು ಹಿಂದೆ ಬಿದ್ದಿಲ್ಲ ಎಂದು ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಸ್ವಾಮೀಜಿ ಹೇಳಿದರು.
ಅವರು ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರ ಸಂಚಾಲಿತ ಶ್ರೀ ಅನ್ನದಾನೇಶ್ವರ ಸ್ವತಂತ್ರ ಪಪೂ ಮಹಾವಿದ್ಯಾಲಯದ ಆವರಣದಲ್ಲಿ ಜರುಗಿದ ಸೋಮಶೇಖರ ಮಠದ ಹಿಂದಿನ ಪೀಠಾಧಿಪತಿ, ಸ್ವಾತಂತ್ರ್ಯ ಹೋರಾಟಗಾರ ಲಿಂ| ಶ್ರೀ ಚನ್ನಬಸವ
ಸ್ವಾಮೀಜಿಯವರ 23ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅರುಣಗೌಡ ಪಾಟೀಲ, ಸಂಜೀವಕುಮಾರ ಕಾಮಣ್ಣವರ, ಮಲ್ಲಿಕಾರ್ಜುನ ಜಮಖಂಡಿ, ಶಂಕರ ಗಯ್ನಾಳಿ, ವಿಜಯಲಕ್ಷ್ಮೀ ಗೊರಾಬಾಳ, ಗಂಗಮ್ಮ ಸಂಕಣ್ಣವರ, ಪ್ರಾ| ಎಂ.ಎಚ್.ಪಾಟೀಲ, ಪ್ರಾ| ಕೆ.ಬಿ. ನಲವಡೆ, ಮಂಜುಳಾ ಭಾಂಡೇಕರ, ದಾನು ಗದಗಿನ, ಶ್ರೀಶೈಲ ಗೋಪಶೆಟ್ಟಿ, ಐ.ಕೆ.ಮಠಪತಿ, ಶೇಖರ ಮುಪ್ಪಿ ನವರಮಠ, ಅಠೊಕ ಸಂಕಣ್ಣವರ, ಪರಶು ಕದಂ, ವೈ.ಟಿ.ತಂಗೋಜಿ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ
Kushtagi: ಕಳೆದೆರೆಡು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಕೋತಿ ಸೆರೆ
700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ
Hubli; ಹೆಚ್ಚುವರಿ ಡಿಸಿಎಂ ಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ಕೈವಾಡವಿದೆ: ಪ್ರಹ್ಲಾದ ಜೋಶಿ
Crime: ಸ್ನೇಹಿತನನ್ನು ಕಟ್ಟಡದಿಂದ ಕೆಳಗೆ ದೂಡಿ ಕೊಲೆಗೈದ ಆರೋಪಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.