![ದೇವರಮನೆ ಗುಡ್ಡದಲ್ಲಿ ಪ್ರವಾಸಿಗರ ದಂಡು; ಟ್ರಾಫಿಕ್ ನಲ್ಲಿ ಸಿಲುಕಿದ ಟೂರಿಸ್ಟ್](https://www.udayavani.com/wp-content/uploads/2024/07/dev-415x229.jpg)
ಅಪೂರ್ಣ ಮಾಹಿತಿ ನೀಡಿದ ಅಧಿಕಾರಿಗಳ ತರಾಟೆ
ತಾಲೂಕಿನಲ್ಲಿ 5 ದೈಹಿಕ, 10 ಮುಖ್ಯಗುರುಗಳ ಹುದ್ದೆ ಖಾಲಿ ಇದೆ
Team Udayavani, Jun 25, 2022, 5:50 PM IST
![ಅಪೂರ್ಣ ಮಾಹಿತಿ ನೀಡಿದ ಅಧಿಕಾರಿಗಳ ತರಾಟೆ](https://www.udayavani.com/wp-content/uploads/2022/06/Belagavi-2-620x255.jpg)
ಸವದತ್ತಿ: ಕೆಆರ್ಡಿಎಲ್ ಪ್ರಭುಕುಮಾರ, ಜಿಪಂ ಎಇಇ ಎಚ್.ಸಿ. ತಳವಾರ ಸೇರಿ ಅಪೂರ್ಣ ಮಾಹಿತಿಯೊಂದಿಗೆ ತಾಪಂನಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಗೆ ಹಾಜರಾದ ಅಧಿಕಾರಿಗಳನ್ನು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ತರಾಟೆಗೆ ತೆಗೆದುಕೊಂಡರು.
ಒಳಾಂಗಣ ಕ್ರೀಡಾಂಗಣ ನಿರ್ಮಿಸಲು 1 ಕೋಟಿ ರೂ. ಮೀಸಲಿರಿಸಿ 6 ವರ್ಷ ಕಳೆದಿವೆ. ಕಾಮಗಾರಿ ಪೂರ್ಣಗೊಂಡಿಲ್ಲ ಏಕೆ? ಎಂದು ಮಾಮನಿ ಪ್ರಶ್ನಿಸಿದರು. ಇದಕ್ಕೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲವೆಂದು ಲ್ಯಾಂಡ್ ಆರ್ಮಿ ಪ್ರಭುಕುಮಾರ ತಿಳಿಸಿದರು. ಅನುದಾನವಿದ್ದ ಕಾಮಗಾರಿಗಳೂ ನಡೆದಿಲ್ಲ. ಸಿ.ಸಿ ರಸ್ತೆಗೆ ನಾಗಾಲೋಟ ಹಾಗೂ ಕಟ್ಟಡ ಕಾಮಗಾರಿಗೆ ಆಮೆ ಗತಿ ವೇಗವಿದೆ.
ಎಲ್ಲದಕ್ಕೂ ಸರ್ಕಾರವೇ ಮುಂಗಡ ನೀಡುವುದಾದರೆ ನಿಗಮದಿಂದ ಶೇ.3 ಕಮೀಷನ್ ಏಕೆ ಪಡೆಯುತ್ತೀರಿ? ಎಂದು ಅಸಮಾದಾನ ವ್ಯಕ್ತಪಡಿಸಿ, ಅ.15ಕ್ಕೆ ಕ್ರೀಡಾಂಗಣ ಉದ್ಘಾಟನೆ ಆಗಬೇಕು ಎಂದು ಮಾಮನಿ ಸೂಚಿಸಿದರು.
ನಿಮ್ಮಲ್ಲಿಯ ಹಾಗೂ ಇಲ್ಲಿ ಇರಿಸಿದ ಮಾಹಿತಿ ಬೇರೆ ಏಕೆಂದು ಜಿಪಂ ಎಇಇ ತಳವಾರ ಅವರನ್ನು ಪ್ರಶ್ನಿಸಿ, ಯರಗಟ್ಟಿ, ಸತ್ತಿಗೇರಿಗಳು ಅಭಿವೃದ್ಧಿ ಕಂಡಿಲ್ಲ. ಯರಗಟ್ಟಿಯಲ್ಲಿ ಪೈಪ್ಲೈನ್ ಒಡೆದು ರಸ್ತೆ ಮೇಲೆ ನೀರು ನಿಲ್ಲುವಂತಾಗಿದೆ. ಗುತ್ತಿಗೆದಾರನಿಗೆ ತಿಳಿಸಿ. ಇಲ್ಲವೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ. ಜೆಜೆಎಂ ಕಾಮಗಾರಿಗೆ ಜಾಲಿಕಟ್ಟಿ, ಚಿಕ್ಕಉಳ್ಳಿಗೇರಿಯಲ್ಲಿ ಮಾತ್ರ ಚಾಲನೆ ನೀಡಲಾಗಿದೆ. ಉಳಿದವು ಗಣನೆಗಿಲ್ಲ. ಮುಂದಿನ ಸಭೆಗೆ ಗ್ರಾಮವಾರು ಮಾಹಿತಿ ಸಲ್ಲಿಸಲು
ತಿಳಿಸಿದರು.
ಶಿರಸಂಗಿ, ಮುನವಳ್ಳಿ ಸೇರಿ ಹಲವೆಡೆ ಸಣ್ಣ ರೈತರಿಗೆ ಬೀಜ-ಗೊಬ್ಬರ ಕೊರತೆ ಇದೆ. ಬೂದಿಗೊಪ್ಪ ಗ್ರಾಮದ ರಸ್ತೆ ಮೇಲಿನ 150ಕ್ಕೂ ಹೆಚ್ಚಿನ ಎಲ್ಲ ಸಮುದಾಯದ ಹೂವಿನ ವ್ಯಾಪಾರಿಗಳಿಗೆ ದೂಡುವ ಗಾಡಿಯಿಲ್ಲ. ಬೇರೆ ತಾಲೂಕಿನಲ್ಲಿ ಗಾಡಿ ವ್ಯವಸ್ಥೆಯಿದೆ. ಹೂವು ಮಾರಿ ಬದುಕು ಕಟ್ಟಿಕೊಂಡಿದ್ದಾರೆ. ಇವರಿಗೆ ತೋಟಗಾರಿಕೆ ಇಲಾಖೆಯಿಂದ ವ್ಯವಸ್ಥೆ ಕಲ್ಪಿಸಲು ಸೂಚಿದರು.
ತಾಲೂಕಿನಲ್ಲಿ 5 ದೈಹಿಕ, 10 ಮುಖ್ಯಗುರುಗಳ ಹುದ್ದೆ ಖಾಲಿ ಇದೆ. ತೆಗ್ಗಿಹಾಳ, ಜಕಬಾಳಗಳಲ್ಲಿ ನಿವೃತ್ತಿ ಕಾರಣ ಬೇರೆ ಶಿಕ್ಷಕರಿಗೆ ಅಧಿ ಕಾರ ನೀಡಲಾಗಿದೆ. ತಾಲೂಕಿನಲ್ಲಿ ಶೇ.70 ಪುಸ್ತಕ ಹಂಚಿಕೆಯಾಗಿದೆ. ಕೆಲ ಅನುದಾನರಹಿತ ಶಾಲೆಗಳಿಗೆ ಹಣ ಪಾವತಿಸದ ಕಾರಣ ಪೂರೈಕೆ ಆಗಿಲ್ಲವೆಂದು ಬಿಇಒ ಎಸ್.ಸಿ. ಕರೀಕಟ್ಟಿ ಸಭೆಗೆ ಮಾಹಿತಿ ನೀಡಿದಾಗ ಸಿ.ಎಂ. ಮಾಮನಿ ಚಾರಿಟೇಬಲ್ನಿಂದ ಆ ಶಾಲೆಗಳಿಗೆ ಪುಸ್ತಕ ಪೂರೈಸಲಾಗುವುದೆಂದು ಮಾಮನಿ ತಿಳಿಸಿದರು.
ಇಲ್ಲಿ ಕೇವಲ 9 ಇಲಾಖೆ ಚರ್ಚಿತವಾದವು. ಇನ್ನುಳಿದ ಇಲಾಖೆ ಹಾಗೂ ಮಾಹಿತಿ ಇರದವುಗಳಿಗೆ ಜು.8ರ ಕೆಡಿಪಿ ಸಭೆ ಮುಂದುವರಿಸಲಾಗುವುದು ಎಂದು ಸೂಚಿಸಲಾಯಿತು. ಈ ವೇಳೆ ಆಡಳಿತಾಧಿಕಾರಿ ಶಶಿಧರ ಕುರೇರ, ಯಶವಂತಕುಮಾರ, ಪ್ರಶಾಂತ ಪಾಟೀಲ, ಎಂ.ಎಂ. ಮಠದ ಹಾಗೂ ಇಲಾಖೆ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
![ದೇವರಮನೆ ಗುಡ್ಡದಲ್ಲಿ ಪ್ರವಾಸಿಗರ ದಂಡು; ಟ್ರಾಫಿಕ್ ನಲ್ಲಿ ಸಿಲುಕಿದ ಟೂರಿಸ್ಟ್](https://www.udayavani.com/wp-content/uploads/2024/07/dev-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![belagavi](https://www.udayavani.com/wp-content/uploads/2024/07/belagavi-150x90.jpg)
Belagavi; ಮಳೆಯ ನಡುವೆಯೂ ವಿವಾದಿತ ಕಳಸಾ ನಾಲಾ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ
![Sedam: ಮಹಿಳೆಯರ ರಕ್ಷಣೆ ಮರೆತ ಪಶ್ಚಿಮ ಬಂಗಾಳ: ಸದಾಶಿವ ಶ್ರೀ ಬೇಸರ](https://www.udayavani.com/wp-content/uploads/2024/07/sedam-150x94.jpg)
Sedam: ಮಹಿಳೆಯರ ರಕ್ಷಣೆ ಮರೆತ ಪಶ್ಚಿಮ ಬಂಗಾಳ: ಸದಾಶಿವ ಶ್ರೀ ಬೇಸರ
![Heavy rain in Amboli; Five feet water rise in Hidkal reservoir in one day](https://www.udayavani.com/wp-content/uploads/2024/07/hidkal-150x83.jpg)
Belagavi: ಅಂಬೋಲಿ ಭಾಗದಲ್ಲಿ ಭಾರಿ ಮಳೆ; ಹಿಡಕಲ್ ಜಲಾಶಯದಲ್ಲಿ ಒಂದೇ ದಿನ ಐದಡಿ ನೀರು ಏರಿಕೆ
![belagBelagavi; ನೂತನ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರ ಸ್ವೀಕಾರ](https://www.udayavani.com/wp-content/uploads/2024/07/belag-150x83.jpg)
Belagavi; ನೂತನ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರ ಸ್ವೀಕಾರ
![laxmi-hebbalkar](https://www.udayavani.com/wp-content/uploads/2024/07/laxmi-hebbalkar-150x83.jpg)
Belagavi; ಅಭಯ್ ಪಾಟೀಲ್ ‘ಕೇಂದ್ರದ ಮೊಬೈಲ್’ ಹೇಳಿಕೆಗೆ ಸಚಿವೆ ಹೆಬ್ಬಾಳ್ಕರ್ ಗರಂ
MUST WATCH
ಹೊಸ ಸೇರ್ಪಡೆ
![ದೇವರಮನೆ ಗುಡ್ಡದಲ್ಲಿ ಪ್ರವಾಸಿಗರ ದಂಡು; ಟ್ರಾಫಿಕ್ ನಲ್ಲಿ ಸಿಲುಕಿದ ಟೂರಿಸ್ಟ್](https://www.udayavani.com/wp-content/uploads/2024/07/dev-150x83.jpg)
Chikmagalur; ದೇವರಮನೆ ಗುಡ್ಡದಲ್ಲಿ ಪ್ರವಾಸಿಗರ ದಂಡು; ಟ್ರಾಫಿಕ್ ನಲ್ಲಿ ಸಿಲುಕಿದ ಟೂರಿಸ್ಟ್
![Jaipur: ರಸ್ತೆ ಮಧ್ಯೆ ಕಾರು ಅಡ್ಡಗಟ್ಟಿ ಮೂವರು ಯೂಟ್ಯೂಬರ್ಗಳ ಅಪಹರಣ](https://www.udayavani.com/wp-content/uploads/2024/07/5-7-150x90.jpg)
Jaipur: ರಸ್ತೆ ಮಧ್ಯೆ ಕಾರು ಅಡ್ಡಗಟ್ಟಿ ಮೂವರು ಯೂಟ್ಯೂಬರ್ಗಳ ಅಪಹರಣ
![7-yellapura](https://www.udayavani.com/wp-content/uploads/2024/07/7-yellapura-150x90.jpg)
Yellapura: ನಿಯಂತ್ರಣ ತಪ್ಪಿದ ಕಂಟೈನರ್ ಲಾರಿ; ತಪ್ಪಿದ ಅನಾಹುತ
![belagavi](https://www.udayavani.com/wp-content/uploads/2024/07/belagavi-150x90.jpg)
Belagavi; ಮಳೆಯ ನಡುವೆಯೂ ವಿವಾದಿತ ಕಳಸಾ ನಾಲಾ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ
![Kalaburagi; ವ್ಯಕ್ತಿತ್ವ ನಿರ್ಮಾಣ ದಾಸ ಸಾಹಿತ್ಯದ ಧ್ಯೇಯ: ಡಾ.ಅಗ್ನಿಹೋತ್ರಿ](https://www.udayavani.com/wp-content/uploads/2024/07/sahitya-150x83.jpg)
Kalaburagi; ವ್ಯಕ್ತಿತ್ವ ನಿರ್ಮಾಣ ದಾಸ ಸಾಹಿತ್ಯದ ಧ್ಯೇಯ: ಡಾ.ಅಗ್ನಿಹೋತ್ರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.