ಸೇವೆ ಸ್ಥಗಿತಗೊಳಿಸಿ ಅಂಚೆ ನೌಕರರ ಪ್ರತಿಭಟನೆ
ಖಾಲಿ ಹುದ್ದೆ ಭರ್ತಿ-ಹಳೇ ಪಿಂಚಣಿ ಮುಂದುವರಿಸಲು ಒತ್ತಾಯ
Team Udayavani, Mar 29, 2022, 2:22 PM IST
ಬೈಲಹೊಂಗಲ: ಕೇಂದ್ರ ಸರ್ಕಾರ ಅಂಚೆ ವ್ಯವಸ್ಥೆಯಲ್ಲಿ ಅನುಸರಿಸುತ್ತಿರುವ ನೀತಿ ಖಂಡಿಸಿ ಮತ್ತು ತಮ್ಮ ಬೇಡಿಕೆಗೆ ಆಗ್ರಹಿಸಿ ಮಾ.28, 29ರಂದು ಬಂದ್ಗೆ ಕರೆ ನೀಡಿದ ಪ್ರಯುಕ್ತ ಬೆಂಬಲ ನೀಡಿ ಪಟ್ಟಣದ ಪ್ರಧಾನ ಅಂಚೆ ಕಚೇರಿ ನೌಕರರ ವರ್ಗ ಕಚೇರಿ ಕಾರ್ಯ ಸ್ಥಗಿತಗೊಳಿಸಿ ಪ್ರತಿಭಟಿಸಿದರು.
ಜನವರಿ 2020ರಿಂದ 2021ರವರೆಗೆ ತಡೆ ಹಿಡಿಯಲಾಗಿರುವ ಡಿಎ, ಡಿಆರ್ ಬಾಕಿ ಶೀಘ್ರ ಪಾವತಿಸಬೇಕು. ಪೋಸ್ಟ್ಮ್ಯಾನ್, ಜೆಡಿಎಸ್, ಜಿಡಿಎಸ್ ಹುದ್ದೆ ಭರ್ತಿ ಮಾಡಬೇಕು. ಬಡ್ತಿಗಾಗಿ ಅತ್ಯುತ್ತಮ ಬೆಂಚ್ ಮಾರ್ಕ್ ಮಾನದಂಡ ತೆಗೆದು ಹಾಕಬೇಕು. ಅಂಚೆ ಇಲಾಖೆ ಖಾಸಗೀಕರಣದ ಧೋರಣೆ ಕೈಬಿಡಬೇಕು. ಇಲಾಖೆಯಲ್ಲಿ ಖಾಲಿ ಹುದ್ದೆ ಕೂಡಲೇ ಭರ್ತಿ ಮಾಡಬೇಕು. ಕೋವಿಡ್ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದ ಪ್ರತಿ ನೌಕರರಿಗೆ ವಿಶೇಷ ರಜೆ ಸೇರಿದಂತೆ ಇತರೆ ಸೌಲಭ್ಯ ಒದಗಿಸಬೇಕು. ಕಮಲೇಶಚಂದ್ರ ವರದಿ ಗ್ರಾಮೀಣ ಪೋಸ್ಟ್ಮನ್ ಗಳಿಗೂ ಅನುಷ್ಠಾನಗೊಳಿಸುವಂತೆ ಆಗ್ರಹಿಸಿದರು.
ಪಟ್ಟಣದಲ್ಲಿರುವ ಪ್ರಧಾನ ಅಂಚೆ ಕಚೇರಿ, ಗ್ರಾಮೀಣ ಪರದೇಶದ ಅಂಚೆ ಕಚೇರಿಗಳಲ್ಲಿ ಆಗುತ್ತಿರುವ ನೆಟ್ ವರ್ಕ್ ಸಮಸ್ಯೆ ಪರಿಹರಿಸಬೇಕು. ಅವೈಜ್ಞಾನಿಕ ಮಿತಿ ನೀಡಿ ನೌಕರರ ಮೇಲೆ ಮಾನಸಿಕ ಒತ್ತಡ ಹೇರುತ್ತಿರುವುದನ್ನು ನಿಲ್ಲಿಸಬೇಕು. 8ನೇ ವೇತನ ಆಯೋಗ ರಚಿಸುವುದು ಸೇರಿ ವಾರಕ್ಕೆ 5 ದಿನ ಕೆಲಸ ನಿರ್ವಹಿಸಲು ಅನುಕೂಲ ಮಾಡಿಕೊಡಬೇಕು. ಎನ್ಪಿಎಸ್ ಪದ್ಧತಿ ರದ್ದುಗೊಳಿಸಿ ನೌಕರರಿಗೆ ಹಳೇ ಪಿಂಚಣಿ ಪದ್ಧತಿಯನ್ನೇ ಮುಂದುವರಿಸಬೇಕು. ಹೀಗೆ ಹಲವು ಸೌಲಭ್ಯ, ವಿರೋಧಿ ನೀತಿ ಖಂಡಿಸಿ ಪ್ರತಿಭಟಿಸಿದರು.
ಪ್ರಧಾನ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಭಾರತಿ ಜೀರೆ, ಇಂದುಮತಿ ಖಂಡ್ರೆ, ಪೂರ್ಣಿಮಾ ನಾಡಗೌಡ್ರ, ಸವಿತಾ ಕಬ್ಬೂರ, ಜಗದೀಶ ತ್ಯಾವಟಗಿ, ಪಂಪಾವತಿ ಬೋವಿ, ಹಣಮಂತ ರಾಜಪ್ಪಗೋಳ, ಎಸ್.ಎಂ. ಯರಗಟ್ಟಿ, ರವಿಕುಮಾರ, ಬಸವರಾಜ ಪುಂಡಿ, ರಮೇಶ ಭೂತಾಳಿ, ಪ್ರಕಾಶ ಬಿಜ್ಜೂರ, ಜಿ.ಎ. ಹುದ್ದಾರ, ಶಿವಕುಮಾರ ಆಚಮಟ್ಟಿ, ಚನ್ನಬಸಪ್ಪ ಪಾಟೀಲ, ಅನಂತ ಯಲಿಗಾರ, ಅಮೃತಾ ಕರ್ಜಗಿಮಠ, ಅನಿತಾ ಸವಣೂರ ಹಾಗೂ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಮಹಾನಗರ ಪಾಲಿಕೆ ಸೂಪರ್ ಸೀಡ್ ಮಾಡುವಂತೆ ಬೃಹತ್ ಪ್ರತಿಭಟನೆ
Belgavi: ಹೊಟೇಲ್ನಲ್ಲಿ ಯುವಕನಿಗೆ ಚಾಕು ಇ*ರಿದ ಬಿಎಸ್ಎಫ್ ಯೋಧ ಅರೆಸ್ಟ್
Bailhongal: ಕ್ಷುಲ್ಲಕ ಕಾರಣ; ಕೊಲೆಯಲ್ಲಿ ಅಂತ್ಯ; ಪ್ರಕರಣ ದಾಖಲು
Chikodi: ಆರೋಗ್ಯ ವೃದ್ಧಿಗೆ ಪೌಷ್ಟಿಕ ಆಹಾರ ಅಗತ್ಯ; ಸಚಿವ ಸತೀಶ್ ಜಾರಕಿಹೊಳಿ
Belagavi: ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಮಗ ಸೇರಿ ಮೂವರು ದುರ್ಮರಣ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Alanda: ಕಲುಷಿತ ನೀರು ಸೇವಿಸಿ ನಿಂಬರ್ಗಾ ಗ್ರಾಮದ 80ಕ್ಕೂ ಹೆಚ್ಚು ಮಂದಿ ಅಸ್ವಸ್ಥ
Malpe: ಹುಲ್ಲು ತರಲು ಹೋಗಿದ್ದ ಮಹಿಳೆ ನಾಪತ್ತೆ
Koratagere: ಚಿನ್ನ ನೀಡುವುದಾಗಿ ಹಣ ಪಡೆದು ವಂಚಿಸಿದ ಪ್ರಕರಣ: ಮೂವರ ಬಂಧನ
Dharwad: ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ: ಶಾಸಕ ಅರವಿಂದ ಬೆಲ್ಲದ್ ಭವಿಷ್ಯ
PM Modi ಯಿಂದ ನೆತನ್ಯಾಹುಗೆ ಕರೆ:ನಮ್ಮ ಜಗತ್ತಿನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.