ಪೋಲೆಂಡ್ ಗಡಿ: 1 ಕಿ.ಮೀ.ಕಾಲ್ನಡಿಗೆಯಿಂದ ಚೆಕ್ ಪಾಯಿಂಟ್ಗೆ ತೆರಳಿದ ಬೆಳಗಾವಿ ವಿದ್ಯಾರ್ಥಿಗಳು
Team Udayavani, Mar 2, 2022, 9:27 PM IST
ಬೆಳಗಾವಿ: ಕರ್ನಾಟಕ ಮೂಲದ 14 ಜನರ ತಂಡ ಖಾರ್ಕಿವ್ ವಿಶ್ವವಿದ್ಯಾಲಯದಿಂದ ಮಂಗಳವಾರದಿಂದ ಪ್ರಯಾಣ ಬೆಳೆಸಿ ಬುಧವಾರ ಸಂಜೆ ಪೋಲೆಂಡ್ ದೇಶದ ಗಡಿಗೆ ಬಂದು ತಲುಪಿದ್ದು, ಒಂದು ಕಿ.ಮೀ. ಕಾಲ್ನಡಿಗೆಯಲ್ಲಿ ಚೆಕ್ ಪಾಯಿಂಟ್ಗೆ ಬಂದಿರುವ ಬಗ್ಗೆ ಮಗಳು ಅಮೋಘಾ ಮಾಹಿತಿ ನೀಡಿದ್ದಾಳೆ ಎಂದು ಅಮೋಘಾ ಅವರ ತಂದೆ ಧನಂಜಯ ಚೌಗಲಾ ತಿಳಿಸಿದರು.
‘ಉದಯವಾಣಿ’ಯೊಂದಿಗೆ ಬುಧವಾರ ಮಾತನಾಡಿದ ಅವರು, ಬೇರೆ ಬೇರೆ ತಂಡ ಮಾಡಿಕೊಂಡು ವಿದ್ಯಾರ್ಥಿಗಳು ಬರುತ್ತಿದ್ದಾರೆ. 8 ಹುಡುಗರು ಹಾಗೂ 6 ಜನ ಹುಡುಗಿಯರಿದ್ದಾರೆ. ಬಾಂಬ್ ಹಾಗೂ ಶೆಲ್ ದಾಳಿಗಳ ಸದ್ದು ಬರುತ್ತಿದೆ. ರಿಸ್ಕ್ ತೆಗೆದುಕೊಂಡು ನಮ್ಮ ಮಗಳು ಸೇರಿದಂತೆ ನಾಲ್ಕು ಜನ ಬುಧವಾರ ಬೆಳಗ್ಗೆ ರೈಲು ನಿಲ್ದಾಣಕ್ಕೆ ಬಂದಿದ್ದಾರೆ. ಅದರಲ್ಲಿ ಒಟ್ಟು 14 ಜನರ ತಂಡವಿದ್ದು, ಭಾರತೀಯ ರಾಯಭಾರಿ ಕಚೇರಿಯವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದರು.
ಖಾರ್ಕಿವ್ ನಗರದಿಂದ ಕಿವ್ಗೆ ಬಂದು ಅಲ್ಲಿಂದ ಲೀವಿವ್ ನಗರಕ್ಕೆ ಬಂದಿಳಿದ್ದಾರೆ. ಲಿವಿವ್ ನಗರದಿಂದ ಟ್ಯಾಕ್ಸಿ ಮಾಡಿಕೊಂಡು ಪೋಲೆಂಡ್ ಗಡಿವರೆಗೆ ಪ್ರಯಾಣ ಬೆಳೆಸಿ ಭಾರತೀಯ ಕಾಲಮಾನ ಬುಧವಾರ ಸಂಜೆ 7:45ರ ಸುಮಾರಿಗೆ ಗಡಿಗೆ ಬಂದಿದ್ದಾರೆ. 60 70 ಕಿ.ಮೀ.ವರೆಗೆ ಈ ಪ್ರಯಾಣ ಇದ್ದು, ಮೂರು ಟ್ಯಾಕ್ಸಿಗಳಲ್ಲಿ ಈ 14 ಜನರು ಬರುತ್ತಿದ್ದಾರೆ. ಪೋಲೆಂಡ್ಗೆ ಸುರಕ್ಷಿತವಾಗಿ ಮರಳಿದ್ದಾರೆ. ಇಲ್ಲಿಂದ 1 ಕಿ.ಮೀ. ವರೆಗೆ ಕಾಲ್ನಡಿಗೆಯಲ್ಲಿ ಚೆಕ್ ಪಾಯಿಂಟ್ಗೆ ಬಂದು ಅಲ್ಲಿಂದ ಭಾರತೀಯ ರಾಯಭಾರಿ ಕಚೇರಿಯವರನ್ನು ತಲುಪಲಿದ್ದಾರೆ ಎಂದರು.
ಭಾರತೀಯ ಕಚೇರಿಯವರು ಬಹಳಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಬೇರೆ ದಏಶದವರಿಗಿಂತಲೂ ನಮ್ಮ ಕೇಂದ್ರ ಸರ್ಕಾರ ಮಾಡುತ್ತಿರುವ ಪ್ರಯತ್ನ ಹೆಮ್ಮೆ ಎನಿಸುತ್ತಿದೆ., ಪ್ರತಿ ಕ್ಷಣ ಕ್ಷಣಕ್ಕೂ ನಮ್ಮೊಂದಿಗೆ ಮತ್ತು ನಮ್ಮ ಮಕ್ಕಳೊಂದಿಗೆ ಸಂಪರ್ಕ ಸಾಧಿಸಿ ಭಾರತಕ್ಕೆ ಕರೆ ತರುವ ಪ್ರಯತ್ನ ಮಾಡುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಳಸಾ ನಾಲಾದಲ್ಲಿ ರಾಜಕೀಯ ಕೊಳಕು: ಸರ್ವ ಪಕ್ಷ ನಿಯೋಗ ಒಯ್ಯುವ ಚಕಾರವೇ ಇಲ್ಲ!
Belagavi; ದರ್ಬಾರ್ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್!
Chikkodi; ಈದ್ ಮಿಲಾದ್ ಮೆರವಣಿಗೆಯಲ್ಲಿ ಹಾರಾಡಿದ ಪ್ಯಾಲೇಸ್ತೀನ್ ಧ್ವಜ
BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ: ಶಾಸಕ ವಿನಯ ಕುಲಕರ್ಣಿ ಆಕ್ರೋಶ
Belagavi: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಶೆಟ್ಟರ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.