ತೆಲಸಂಗ: ಪ್ರಯಾಣಿಕರ ದಾರಿ ತಪ್ಪಿಸುವ ಮಾರ್ಗಸೂಚಿ ಫಲಕಗಳು


Team Udayavani, Jun 10, 2024, 5:17 PM IST

ತೆಲಸಂಗ: ಪ್ರಯಾಣಿಕರ ದಾರಿ ತಪ್ಪಿಸುವ ಮಾರ್ಗಸೂಚಿ ಫಲಕಗಳು

ಉದಯವಾಣಿ ಸಮಾಚಾರ
ತೆಲಸಂಗ: ರಸ್ತೆಗಳ ಬದಿಗಳಲ್ಲಿ ಅಳವಡಿಸುವ ಗ್ರಾಮಗಳ ಮಾರ್ಗಸೂಚಿ ಫಲಕಗಳು ಮಾರ್ಗಸೂಚಿಯಾಗಿರಬೇಕು. ಆದರೆ ಅಥಣಿ ತಾಲೂಕಿನ ಕಕಮರಿಯಿಂದ ತೆಲಸಂಗ ಸಾವಳಗಿವರೆಗೆ ಅಭಿವೃದ್ಧಿ ಪಡಿಸಿರುವ ಕರ್ನಾಟಕ ಎಸ್‌.ಎಚ್‌ 260 ರಸ್ತೆ ಬದಿಯಲ್ಲಿ ಅಳವಡಿಸಿರುವ ಗ್ರಾಮಗಳ ಕಿ.ಮೀ ಮಾರ್ಗಸೂಚಿ ಫಲಕಗಳು ಪ್ರಯಾಣಿಕರಿಗೆ ದಾರಿ ತಪ್ಪಿಸುತ್ತಿವೆ.

ಫಲಕಗಳಲ್ಲಿ ಕಿ.ಮೀ. ಲೋಪದೋಷಗಳಾಗಿವೆ. ಹಾಲಳ್ಳಿ ಮಾರ್ಗದಿಂದ ತೆಲಸಂಗ ಕ್ರಾಸ್‌ ರಸ್ತೆ ದಾಟುವ ಮುನ್ನ ಹಾಕಿರುವ ಫಲಕದಲ್ಲಿ ತೆಲಸಂಗ 2 ಕಿ.ಮೀ. ಬರೆಯುವ ಬದಲು 3 ಕಿ.ಮೀ ಅಂತ ಬರೆಯಲಾಗಿದೆ. ಆಶ್ಚರ್ಯವೆಂದರೆ ನಾಲ್ಕು ಹೆಜ್ಜೆ ಅಂತರದಲ್ಲಿಯೇ ರಸ್ತೆ ಕ್ರಾಸ್‌ ಮಾಡಿದ ನಂತರ ಇನ್ನೊಂದು ಫಲಕದಲ್ಲಿ ತೆಲಸಂಗ 4 ಕಿ.ಮೀ ಅಂತ ಫಲಕದಲ್ಲಿದೆ. ಅಲ್ಲದೇ ಈ ನೂತನ ಫಲಕದ ಪಕ್ಕದಲ್ಲೇ ಹಳೇ ಕಲ್ಲಿನ ಫಲಕದಲ್ಲಿ ತೆಲಸಂಗ 2 ಕಿ.ಮೀ ಅಂತ ಸ್ಪಷ್ಟವಾಗಿ ಬರೆದಿದ್ದರೂ 3 ಕಿ.ಮೀ, 4
ಕಿ.ಮೀ ಅಂತ ತಪ್ಪಾದ ಫಲಕ ಹಾಕಿ ಗೊಂದಲ ಸೃಷ್ಟಿಸಲಾಗಿದೆ.

ತೆಲಸಂಗ ಗ್ರಾಮದ ಅಂಬೇಡ್ಕರ್‌ ವೃತ್ತದಲ್ಲೂ ತಪ್ಪು ಫಲಕ ಹಾಕಲಾಗಿದೆ. 4 ಕಿ.ಮೀ ಅಂತರದ ಕನ್ನಾಳ ಗ್ರಾಮಕ್ಕೆ 6.5 ಕಿ.ಮೀ ಅಂತ, 10 ಕಿ.ಮೀ ಅಂತರದ ಕಕಮರಿ ಗ್ರಾಮಕ್ಕೆ 13 ಕಿ.ಮೀ ಅಂತ  ಹಾಕಲಾಗಿದೆ. ಫಲಕ ಹಾಕಿ 8 ತಿಂಗಳ ಕಳೆದರೂ ಫಲಕ ತಪ್ಪೆಂದು ಗೊತ್ತಾಗದ ಅಧಿಕಾರಿಗಳ

ವರ್ತನೆಗೆ ಜನ ಬೇಸತ್ತಿದ್ದಾರೆ. ಕಕಮರಿಯಿಂದ ತೆಲಸಂಗ ಮಾರ್ಗಕ್ಕೆ ಕಕಮರಿಯಲ್ಲಿ ಅಳವಡಿಸಿರುವ ಫಲಕದಲ್ಲಿ ತೆಲಸಂಗ 10 ಕಿ.ಮೀ ಅಂತ ಸರಿಯಾಗಿಯೇ ಇದೆ. ಈ ಫಲಕದೊಂದಿಗೆ ಅಳವಡಿಸಿರುವ ಇನ್ನುಳಿದ ಫಲಕಗಳಲ್ಲಿ ತಪ್ಪಾಗಿ ನಮೂದಿಸಿ ಅಳವಡಿಸಿರುವ ಫಲಕಗಳಿಂದ ದೂರದ ಪ್ರಯಾಣಿಕರು ಲೋಕೋಪಯೋಗಿ ಇಲಾಖೆಗೆ ಹಿಡಿಶಾಪ ಹಾಕುವಂತಾಗಿದೆ.

ಕುಸಿದ ರಸ್ತೆ: ತೆಲಸಂಗ ಕ್ರಾಸ್‌ದಿಂದ ಹಾಲಳ್ಳಿ ಮಾರ್ಗವಾಗಿ ಹೋಗುವ ಪೋಳ ಅವರ ತೋಟದ ಬಳಿ ಈ ನೂತನ ರಸ್ತೆ ಕುಸಿದಿದೆ. ಇದರಿಂದ ಜೋರಾಗಿ ಬಂದ್‌, ಬೈಕ್‌, ಕಾರ್‌ ಸೇರಿದಂತೆ ವಿವಿಧ ವಾಹನಗಳು ದಿಢೀರ್‌ ವೇಗದಲ್ಲಿ ಜಂಪ್‌ ಆಗಿ ಚಾಲಕನ ನಿಯಂತ್ರಣ ತಪ್ಪುತ್ತಿವೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ.

ಅಧಿಕಾರಿಗಳ ವಿರುದ್ಧ ಆಕ್ರೋಶ
ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಪ್ಯಾಕೇಜ್‌ ಸಂಖ್ಯೆ 508, ಅಥಣಿ ತಾಲೂಕಿನ ರಾಜ್ಯ ಗಡಿ-ಕಕಮರಿ-ತೆಲಸಂಗ-ಸಾವಳಗಿ ರಸ್ತೆ ಸುಧಾರಣೆ ಗುತ್ತಿಗೆ ಮೊತ್ತ 2323.00 ಲಕ್ಷ ರೂ.ಗಳು, ಅಭಿವೃದ್ಧಿ ಪಡಿಸಿರುವ ರಸ್ತೆ ಉದ್ದ 16.00 ಕಿ.ಮೀ. ಕಾಮಗಾರಿ ಪ್ರಾರಂಭ 04-07-2022, ಮುಕ್ತಾಯ 03-01-2024, ಗುತ್ತಿಗೆ ಅವಧಿ 18 ತಿಂಗಳು. ಅವಧಿ ಮುಗಿದು 6 ತಿಂಗಳು ಕಳೆದರೂ ತಪ್ಪಾದ ಫಲಕ ಸರಿಪಡಿಸಿಲ್ಲ. ಕುಸಿದ ರಸ್ತೆಗೆ ಡಾಂಬರ್‌ ಹಾಕಿಲ್ಲ. ಬೀದಿದೀಪ ಉರಿಯುತ್ತಿಲ್ಲ. ಇದರಿಂದ ಅ ಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಪ್ಪು ಫಲಕಗಳಿದ್ದರೆ ಖಂಡಿತ ಅವುಗಳನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಕುಸಿದ ರಸ್ತೆ ಬಗ್ಗೆ ನಮ್ಮ ಎಂಜಿನಿಯರ್‌ ಕಳಿಸಿ ಅದನ್ನು ಸರಿಪಡಿಸುವ ಕೆಲಸವನ್ನು ಶೀಘ್ರ ಮಾಡಲಾಗುವುದು.
*ಜಯಾನಂದ ಹಿರೇಮಠ,
ಎಇಇ, ಪಿಡಬ್ಲ್ಯುಡಿ ಅಥಣಿ.

ಬರುವ ಒಂದೆರೆಡು ವಾರಗಳಲ್ಲಿ ತಪ್ಪುಗಳಾಗಿರುವ ಎಲ್ಲ ನಾಮಫಲಕ ತೆರವುಗೊಳಿಸಿ ಗ್ರಾಮಗಳ ಅಂತರದ ಸರಿಯಾದ ಕಿ.ಮೀ ಮಾರ್ಗಸೂಚಿ ಫಲಕ ಅಳವಡಿಸುವ ಕಾರ್ಯ ಪೂರ್ಣಗೊಳ್ಳಬೇಕು. ಬೀದಿದೀಪ ಉರಿಯಬೇಕು. ಕುಸಿದ ರಸ್ತೆ ಸರಿಪಡಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ.
*ಬುರಾನ ಅರಟಾಳ, ಯುವ ಮುಖಂಡ, ತೆಲಸಂಗ.

■ ಜಗದೀಶ ತೆಲಸಂಗ

ಟಾಪ್ ನ್ಯೂಸ್

1-india

Semi Final 2; ಇಂಗ್ಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ ಭಾರತ ಫೈನಲ್ ಗೆ ಲಗ್ಗೆ

DKShi

Congress;ಚುನಾವಣ ರಾಜಕೀಯಕ್ಕೆ ನಮ್ಮ ಕುಟುಂಬದವರು ಬರುವ ಪ್ರಶ್ನೆಯೇ ಇಲ್ಲ:ಡಿ.ಕೆ.ಶಿವಕುಮಾರ್

1-wedsadsad

Govt ನಿರ್ಲಕ್ಷ್ಯ; 2000 ಕೋಟಿ ರೂ.ಬಂಡವಾಳದ ಕಂಪನಿ ಮಹಾರಾಷ್ಟ್ರಕ್ಕೆ: ಬೆಲ್ಲದ ಆರೋಪ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

jio

Jio ಪ್ರಿಪೇಡ್ /ಪೋಸ್ಟ್ ಪೇಡ್ ಪ್ಲಾನ್ ಗಳ ದರ ಏರಿಕೆ

26

Bantwal: ಬೈಕ್‌ ಸ್ಕೀಡ್; ಗಂಭೀರ ಗಾಯಗೊಂಡು ಸಹಸವಾರೆ ಮೃತ್ಯು

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-saddas

Lakshmi Hebbalkar;ಅಂಗನವಾಡಿಗಳಿಗೆ ಕಳಪೆ ಆಹಾರ ಉತ್ಪನ್ನಗಳು ಪೂರೈಕೆಯಾದರೆ ಕಠಿನ ಕ್ರಮ

ಸಮಾಜಕ್ಕೆ ಮಠಾಧೀಶರ ಕೊಡುಗೆ ಅಪಾರ: ಶ್ರೀಮುರುಘೇಂದ್ರ ಸ್ವಾಮೀಜಿ

ಸಮಾಜಕ್ಕೆ ಮಠಾಧೀಶರ ಕೊಡುಗೆ ಅಪಾರ: ಶ್ರೀಮುರುಘೇಂದ್ರ ಸ್ವಾಮೀಜಿ

ಅಧೀಕ್ಷಕ ಅಭಿಯಂತರ ವಿರುದ್ಧ ಸುಳ್ಳು ಅತ್ಯಾಚಾರ ಕೇಸ್!

Belagavi; ಸುಳ್ಳು ಅತ್ಯಾಚಾರ ಕೇಸ್ ಹಾಕಿದ್ದ 13 ಮಂದಿಗೆ ಮೂರುವರೆ ವರ್ಷ ಕಾರಾಗೃಹ ಶಿಕ್ಷೆ

ಸೂರ್ಯನಿಗೂ ಗ್ರಹಣ ಹಿಡಿಯುತ್ತದೆ… ಲೋಕಸಭಾ ಸೋಲಿನ ಬಗ್ಗೆ ಹೆಬ್ಬಾಳ್ಕರ್ ಮಾತು

Belagavi; ಸೂರ್ಯನಿಗೂ ಗ್ರಹಣ ಹಿಡಿಯುತ್ತದೆ… ಲೋಕಸಭಾ ಸೋಲಿನ ಬಗ್ಗೆ ಹೆಬ್ಬಾಳ್ಕರ್ ಮಾತು

Shettar appeal for Belgaum-Kittur-Dharwad new rail line project

ಬೆಳಗಾವಿ-ಕಿತ್ತೂರು-ಧಾರವಾಡ ಹೊಸ ರೈಲು ಮಾರ್ಗ ಯೋಜನೆಗೆ ಶೆಟ್ಟರ್ ಮನವಿ

MUST WATCH

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

ಹೊಸ ಸೇರ್ಪಡೆ

Rain: ಇನ್ನೂ ಎರಡು ದಿನ ವರುಣನ ಅಬ್ಬರ

Rain: ಇನ್ನೂ ಎರಡು ದಿನ ವರುಣನ ಅಬ್ಬರ

9

Price Rise: ದರ ಏರಿಕೆ; ನಾಳೆ ರಾಜ್ಯಾದ್ಯಂತ ಬಿಜೆಪಿಯಿಂದ ಕ್ಷೀರ ಅಭಿಯಾನ

1-india

Semi Final 2; ಇಂಗ್ಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ ಭಾರತ ಫೈನಲ್ ಗೆ ಲಗ್ಗೆ

priyanka gandhi (2)

Constitution;’ಜೈ ಸಂವಿಧಾನ’ ಹೇಳುವುದು ತಪ್ಪಾ?: ಪ್ರಿಯಾಂಕಾ ಪ್ರಶ್ನೆ

1-wtr

Moving ರೈಲಿಗೆ ನೀರು ಚಿಮ್ಮಿಸಿದ ಯುವಕರಿಗೆ ಪ್ರಯಾಣಿಕರಿಂದ ಗೂಸಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.