ಹೋಸಪೇಟೆಯಲ್ಲಿ ಬಡವರ ಫ್ರಿಡ್ಜ್ ಗೆ ಭಾರಿ ಡಿಮ್ಯಾಂಡ್‌

ಒಂದು ಕೊಡ ನೀರಿನ ಸಾಮರ್ಥ್ಯದ ಮಡಿಕೆಗೆ 300 ರೂ.

Team Udayavani, Apr 12, 2021, 8:44 PM IST

fsdfs

ಹೊಸಪೇಟೆ: ಬೇಸಿಗೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ನಗರ-ಗ್ರಾಮೀಣ ಜನರು ತತ್ತರಿಸಿದ್ದಾರೆ. ತಾಪಮಾನ ಶಮನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮಣ್ಣಿನ ಮಡಿಕೆಗೆ ಭಾರೀ ಡಿಮ್ಯಾಂಡ್‌ ಬಂದಿದ್ದು, ಬಡವ-ಬಲ್ಲಿದರೆನ್ನದೇ ಎಲ್ಲರೂ ಮಡಿಕೆ ಮೊರೆ ಹೋಗುತ್ತಿದ್ದಾರೆ.

ನಗರ ಸೇರಿ ತಾಲೂಕಿನಲ್ಲಿ ಮಧ್ಯಾಹ್ನ ಸೂರ್ಯ ನೆತ್ತಿಗೇರಿದರೆ ಸಾಕು ಬಿಸಿಲಿನ ಜಳ ಅನುಭವವಾಗುತ್ತದೆ. 38ರಿಂದ 41 ಡಿಗ್ರಿ ಸೆಲ್ಸಿಯಸ್‌ ತನಕ ಉಷ್ಣಾಂಶ ದಾಖಲಾಗುತ್ತಿದೆ. ನಗರದ ನಗರಸಭೆ ಕಚೇರಿ ಎದುರುಗಡೆ ಮಣ್ಣಿನ ಮಡಕೆಗಳನ್ನು ಕುಂಬಾರರು ಇಟ್ಟು ಮಾರಾಟದಲ್ಲಿ ತೊಡಗಿದ್ದಾರೆ. ಮನೆಯಲ್ಲಿ ಎಷ್ಟೇ ನೀರು ಸಂಗ್ರಹಿಸಿದರೂ ಬಿಸಿಲಿನ ತಾಪಕ್ಕೆ ಛಾವಣಿ ಕಾಯ್ದು ನೀರು ಬೆಚ್ಚಗಾಗಿ ಕುಡಿಯಲು ಸಂಕಟವೆನಿಸುತ್ತಿದೆ. ಆದರೆ, ಮಡಿಕೆಯಲ್ಲಿನ ನೀರು ನೈಸರ್ಗಿಕವಾಗಿ ತಣ್ಣಗೆ ಉಳಿಯುವುದರಿಂದ ಈ ನೀರು ಕುಡಿದರೆ ದೇಹಕ್ಕೆ ಹಿತಕರ ಅನುಭವ ಮೂಡುವುದರಿಂದ ಮಣ್ಣಿನ ಮಡಿಕೆಗೆ ಎಲ್ಲಿಲ್ಲಿದ ಬೇಡಿಕೆ ಬಂದಿದೆ.

ಬಡವರ ಫ್ರಿಡ್ಜ್:

ಎಸಿ, ಪ್ರಿಜ್‌, ಏರ್‌ಕೂಲರ್‌ ಗಳಿಗೆ ಹೋಲಿಸಿದರೆ ಮಡಿಕೆಯ ಬೆಲೆ ತುಂಬಾ ಕಡಿಮೆ. ಹೀಗಾಗಿ ಇದನ್ನು ಬಡವರ μÅàಜ್‌ ಎಂತಲೂ ಕರೆಯುತ್ತಾರೆ. ನಿತ್ಯ ಕೂಲಿ ನೆಚ್ಚಿಕೊಂಡ ಬಡವರು, ರೈತರು, ಕಾರ್ಮಿಕರು ತಣ್ಣನೆ ನೀರನ್ನು ಕುಡಿಯಲು ಮಡಿಕೆಗಳನ್ನೇ ಬಳಸುತ್ತಾರೆ. ಇದಕ್ಕೆ ಮಾರು ಹೋಗಿರುವ ಜನಸಾಮಾನ್ಯರು, ಫ್ರಿಡ್ಜ್ ಏಕೆ? ಮಣ್ಣಿನ ಮಡಿಕೆ ಇದ್ದರೆ ಸಾಕು ಎಂಬ ವಿಚಾರಕ್ಕೆ ಬಂದಿದ್ದಾರೆ.

ಇನ್ನು ನೀರಿನಲ್ಲಿ ಒದ್ದೆ ಮಾಡಿದ ಬಟ್ಟೆಯನ್ನು ಮಡಿಕೆಗೆ ಸುತ್ತಿದರೆ ಸಾಕು, ಒಳಗಿರುವ ನೀರು ಮತ್ತಷ್ಟು ತಣ್ಣಗಾಗಿ, ನೀರು ಕುಡಿದರೆ ಇನ್ನೂ ಕುಡಿಯಬೇಕು ಅನಿಸುತ್ತೆ. ಅಷ್ಟೇ ದೇಹಕ್ಕೆ ಆರೋಗ್ಯದಾಯಕ ಎನ್ನುತ್ತಾರೆ ಜನರು.

ಬೇಸಿಗೆಯಲ್ಲಷ್ಟೇ ಬೇಡಿಕೆ:

ಮಣ್ಣಿನ ಮಡಿಕೆಗೆ ಬೇಸಿಗೆಯಲ್ಲಿ ಮಾತ್ರ ಬೇಡಿಕೆಯಿದೆ. ಮಳೆ ಹಾಗೂ ಚಳಿಗಾಲದಲ್ಲಿ ಯಾರು ಕೇಳುವುದಿಲ್ಲ. ಇಂದಿನ ತಂತ್ರಜ್ಞಾನದ ಯುಗದಲ್ಲಿ ಅತ್ಯಧುನಿಕ ಮಾದರಿಯ ನಾನಾ ರೀತಿಯ ವಸ್ತುಗಳು ಮಾರುಕಟ್ಟೆಗೆ ಬರುತ್ತಿರುವುದರಿಂದ ಪುರಾತನ ಕಾಲದಿಂದಲೂ ಬಂದಿರುವ ಮಣ್ಣಿನ ವಸ್ತುಗಳಿಗೆ ಬೆಲೆ ಇಲ್ಲದಂತಾಗಿದೆ ಎನ್ನುತ್ತಾರೆ ಕುಂಬಾರರು.

ಯಾವ ಮಡಿಕೆಗೆ ಎಷ್ಟುಬೆಲೆ?:

ಒಂದು ಕೊಡಪಾನ ನೀರಿನ ಸಾಮರ್ಥ್ಯದಲ್ಲಿ ಮಡಿಕೆಗೆ 300 ರೂ., 3 ಕೊಡಪಾನ ನೀರು ಹಿಡಿಯುವ ನಲ್ಲಿ ಹರವಿಗೆ 450 ರೂ., ಹರವಿಗೆ 150ರಿಂದ 400 ರೂ., ಸಣ್ಣ ಮಡಿಕೆಗೆ 150 ರಿಂದ 250 ರೂ. ಮಾರಾಟ ಮಾಡಲಾಗುತ್ತದೆ. ಕಳೆದ 2020ರಲ್ಲಿ ಕೋವಿಡ್‌ ಕಾರಣದಿಂದ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿತ್ತು. ಇದರಿಂದ ಕುಂಬಾರರು ಮಡಕೆ ತಯಾರಿಸಿದ್ದರೂ ಮಾರಾಟ ಮಾಡಲು ಆಗಿರಲಿಲ್ಲ. ಇದರಿಂದ ಹಾಕಿದ ಬಂಡವಾಳವೂ ಬಾರದೆ ಸಂಕಷ್ಟದಲ್ಲಿ ದಿನ ದೂಡಿದ್ದರು. ಜಾಗ ಬದಲಿಸಿದೆ ಗ್ರಾಹಕರು ಬರುವುದಿಲ್ಲ. ಹೀಗಾಗಿ ಒಂದೇ ಕಡೆ ಇರುತ್ತೇವೆ ಎಂದು ಕುಂಬಾರು ಹೇಳುತ್ತಾರೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.