ಉಪ್ಪಾರ ಪ್ರತಿಭಾ ಪುರಸ್ಕಾರ ನಾಡಿದ್ದು
Team Udayavani, Dec 24, 2021, 9:05 PM IST
ಬಳ್ಳಾರಿ: ರಾಜ್ಯ ಉಪ್ಪಾರ ಮಹಾಸಭಾದಿಂದಡಿ.26 ರಂದು ಧಾರವಾಡ ಮಯೂರಆದಿತ್ಯ ರೆಸಾರ್ಟ್ನಲ್ಲಿ ರಾಜ್ಯದ ಮಟ್ಟದಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿದ್ದು, ಸಮುದಾಯದಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಮಹಾಸಭಾ ರಾಜ್ಯ ಉಪಾಧ್ಯಕ್ಷ ಸಿದ್ದೇಶ್ಕುಮಾರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,2020-2021ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಶೇ.80 ಕ್ಕಿಂತಹೆಚ್ಚು ಅಂಕ ಗಳಿಸಿದ್ದ ಸಮುದಾಯದವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದರಾಜ್ಯಾದ್ಯಂತ 1437 ಅರ್ಜಿಗಳು ಆನ್ಲೈನ್ಮೂಲಕ ಸಲ್ಲಿಕೆಯಾಗಿವೆ. ಈ ಪೈಕಿ ಬಳ್ಳಾರಿಜಿಲ್ಲೆಯಿಂದಲೂ 48 ಅರ್ಜಿಗಳು ಬಂದಿದ್ದು,ಎಲ್ಲ ಪ್ರತಿಭಾವಂತ ವಿದ್ಯಾರ್ಥಿಗಳಿಗೂ,ಪುಸ್ತಕ, ಪೆನ್ನು, ಮೆಡಲ್ನ್ನು ನೀಡಿ ಸನ್ಮಾನಿಸಿಪೊÅàತ್ಸಾಹಿಸಲಾಗುವುದು.
ಜತೆಗೆ ಮಾಹಿತಿಕೊರತೆಯಿಂದ ಆನ್ಲೈನ್ನಲ್ಲಿ ಸಲ್ಲಿಕೆಯಾಗದವಿದ್ಯಾರ್ಥಿಗಳಿಂದಲೂ ಅವರ ಅಂಕಪಟ್ಟಿ ಸೇರಿಹಲವು ದಾಖಲೆಗಳನ್ನು ವಾಟ್ಸ್ಆ್ಯಪ್ನಲ್ಲೇತರಿಸಿಕೊಂಡು ಅಂತಹ ವಿದ್ಯಾರ್ಥಿಗಳಿಗೂಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದುಎಂದವರು ವಿವರಿಸಿದರು.ಮಹಾಸಭಾದಿಂದ ಬಡತನರೇಖೆಗಿಂತ ಕೆಳಗಿರುವ ಕುಟುಂಬಗಳಿಂದಮಕ್ಕಳನ್ನು ದತ್ತು ಪಡೆಯಲಾಗುತ್ತದೆ.ಈಗಾಗಲೇ 15 ಮಕ್ಕಳನ್ನು ದತ್ತು ಪಡೆದುಶಿಕ್ಷಣ ಕೊಡಿಸಲಾಗುತ್ತಿದ್ದು, 8 ವಿದ್ಯಾರ್ಥಿಗಳುಪಿಯುಸಿ, ಉಳಿದವರು ಬಿ.ಕಾಂ ವ್ಯಾಸಂಗಮಾಡುತ್ತಿದ್ದಾರೆ.
ಮಹಾಸಭಾದಿಂದಸಮುದಾಯದ ಆಸಕ್ತ ವಿದ್ಯಾರ್ಥಿಗಳಿಗೆಕೆಎಎಸ್, ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಗಳಿಗೆತರಬೇತಿ ಕೊಡಿಸಲಾಗುತ್ತಿದೆ ಎಂದುತಿಳಿಸಿದರು.ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ರಾಜ್ಯದಎಲ್ಲ ಜಿಲ್ಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು,ಅವರ ಪೋಷಕರು ಸಾವಿರಾರು ಸಂಖ್ಯೆಯಲ್ಲಿಆಗಮಿಸಲಿದ್ದಾರೆ.
ಭಗೀರಥ ಪೀಠದಗುರುಗಳಾದ ಪುರುಷೋತ್ತಮಾನಂದಸ್ವಾಮೀಜಿಗಳು, ಉಪ್ಪಾರ ಸಮಾಜದ ಸರ್ವಪೂಜ್ಯರು, ರಾಜಕೀಯ ಮುಖಂಡರು,ಸಮಾಜದ ಹಿರಿಯರು, ಮಹಿಳಾಮುಖಂಡರು ಮತ್ತು ಯುವ ನಾಯಕರನ್ನುಆಹ್ವಾನಿಸಲಾಗಿದ್ದು, ಎಲ್ಲರೂ ಆಗಮಿಸಿಯಶಸ್ವಿಗೊಳಿಸಬೇಕೆಂದು ಕೋರಿದಅವರು, ಶೀಘ್ರದಲ್ಲೇ ಬಳ್ಳಾರಿ ನಗರದಲ್ಲೂಜಿಲ್ಲಾ ಮಟ್ಟದ ಸಮ್ಮೇಳನ ಆಯೋಜಿಸಿ,ಆಗಲೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆಸನ್ಮಾನಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಭಗೀರಥಉಪ್ಪಾರ ಸಂಘದ ಪ್ರಧಾನಕಾರ್ಯದರ್ಶಿ ದುರುಗೇಶ್, ಯುವಕಸಂಘದ ಅಧ್ಯಕ್ಷ ಯು.ಆದಿತ್ಯ, ನಗರ ಅಧ್ಯಕ್ಷಶ್ರೀರಾಮ, ಯುವ ಮುಖಂಡ ರವಿಕುಮಾರ್,ಬಸವರಾಜ, ಚರಕುಂಟೆ ಈರಣ್ಣ, ಕೃಷ್ಣಪ್ಪ,ಮಲ್ಲಪ್ಪ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ
Bellary; ಕಳಪೆ ಆಹಾರ ಪೂರೈಕೆ; ಎಸ್ಸಿ, ಎಸ್ಟಿ ವಸತಿ ನಿಲಯದಲ್ಲಿ ಪ್ರತಿಭಟನೆ
Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್ ದೂರು?
Bellary: ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತಾಯಿ, ಅಕ್ಕ
Ballari: ಕೊನೆಗೂ ನಟ ದರ್ಶನ್ ಸೆಲ್ಗೆ ಟಿವಿ; ಡಿಡಿ ಚಾನೆಲ್ ಮಾತ್ರ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು
School; ಶೀಘ್ರವೇ ಶಾಲಾ ಮಕ್ಕಳಿಗೆ ಆ್ಯಪ್ ಆಧಾರಿತ ಹಾಜರಾತಿ?
Kundapura: ಮುಳುಗುತ್ತಿದ್ದ ಬೋಟ್ ರಕ್ಷಣೆ: 6 ಮೀನುಗಾರರು ಪಾರು
Government Failure: ಹಿಂದೂಗಳ ಮೇಲೆ ಕಾಂಗ್ರೆಸ್ ಸರಕಾರ ದಬ್ಬಾಳಿಕೆ: ಬಿಜೆಪಿ
Daily Horoscope; ಈ ರಾಶಿಯ ಅವಿವಾಹಿತರಿಗೆ ಬಾಳ ಸಂಗಾತಿ ಲಭಿಸುವ ಚಿಂತೆ.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.