ಶಾಂತಿದೂತ ಏಸುಕ್ರಿಸ್ತನ ಜನ್ಮದಿನ-ನಮನ
Team Udayavani, Dec 26, 2021, 3:16 PM IST
ಬಳ್ಳಾರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತಶಾಂತಿಧೂತ ಏಸುಕ್ರಿಸ್ತನ ಜನ್ಮದಿನಾಚರಣೆಶ್ರದ್ಧೆ ಭಕ್ತಿ, ಸಡಗರ ಸಂಭ್ರಮಗಳಿಂದ ಶನಿವಾರಆಚರಿಸಲಾಯಿತು.ಕ್ರಿಸ್ಹಬ್ಬದ ನಿಮಿತ್ತ ನಗರದ ಪ್ರಸಿದ್ಧ ಮೇರಿಮಾತಾಚರ್ಚ್, ಸಿಎಸ್ಐ ಚರ್ಚ್ ಸೇರಿ ಹಲವು ಚಚ್ìಗಳನ್ನು ಸುಣ್ಣಬಣ್ಣಗಳನ್ನು ಬಳಿಯಲಾಗಿತ್ತು.
ಚಿಕ್ಕಚಿಕ್ಕ ವಿದ್ಯುದ್ದೀಪ, ವಿವಿಧ ಬಣ್ಣದ ಅಲಂಕಾರಿಕಹೂವುಗಳಿಂದ ಅಲಂಕರಿಸುವ ಮೂಲಕ ಚಚ್ìಗಳಲ್ಲಿ ಹಬ್ಬದ ವಾತಾವರಣ ಕಂಗೊಳಿಸುವಂತೆಸಡಗರ, ಸಂಭ್ರಮ ಕಂಡುಬಂತು.ಡಿ. 24ರಂದು ಮಧ್ಯರಾತ್ರಿ ಬಾಲಏಸುಕ್ರಿಸ್ತನು ಜನ್ಮತಾಳಿದನು. ಅಂದಿನಿಂದಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗುತ್ತದೆ.ಏಸುಕ್ರಿಸ್ತ ಎಂದರೆ ಎಲ್ಲರ ಸುಖವನ್ನುಬಯಸುವವನು, ಶಾಂತಿ ಸಮಾಧಾನವನ್ನು,ಪ್ರತಿಭೆಗಳನ್ನು ಹಂಚುವವನು, ಮನುಷ್ಯರಪಾಪಗಳನ್ನು ಸಹ ಕ್ಷಮಿಸಿ, ಕತ್ತಲಿಂದ ಬೆಳಕಿನೆಡೆಗೆಕೊಂಡೊಯ್ಯುವವನು ಏಸುಕ್ರಿಸ್ತನಾಗಿದ್ದಾನೆ.
ಅವನು ಜಯಂತಿಯನ್ನು ಕ್ರಿಸ್ಮಸ್ ಹಬ್ಬವನ್ನಾಗಿಪ್ರತಿವರ್ಷ ಡಿ. 25ರಂದು ಶ್ರದ್ಧೆ ಭಕ್ತಿ, ಸಡಗರ,ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಬಳ್ಳಾರಿಪ್ರಾಂತದ ಧರ್ಮಾಧ್ಯಕ್ಷರ ಪಿಆರ್ಒ ಐವನ್ಪಿಂಟೋತಿಳಿಸಿದರು.ಕ್ರಿಸ್ಮಸ್ ಹಬ್ಬವನ್ನು ಪ್ರತಿವರ್ಷ ಡಿ. 24ರಂದುಮಧ್ಯರಾತ್ರಿಯಿಂದಲೇ ಆಚರಿಸಲಾಗುತ್ತದೆ.
ಡಿ.24ರಂದು ಮಧ್ಯರಾತ್ರಿ 12 ಗಂಟೆಗೆ ಕ್ರಿಸ್ತ ಜಯಂತಿಯವಿವಿಧ ಗೀತೆಗಳನ್ನು ಹಾಡಲಾಗುತ್ತದೆ. ಕೊನೆಯಲ್ಲಿಮಹೋನ್ನತ ಗೀತೆಯನ್ನು ಹಾಡಿ ಅಂದು ರಾತ್ರಿಕೊನೆಗೊಳಿಸಿ, ಮರುದಿನ ಡಿ. 25ರಂದು ಬೆಳಗ್ಗೆಆಚರಿಸಲಾಗುತ್ತದೆ. ಎಲ್ಲ ಚರ್ಚ್ಗಳಲ್ಲಿ ಬೆಳಗ್ಗೆಯೇಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕಸಾರ್ವಜನಿಕರು ಸಹ ಚರ್ಚ್ಗಳಿಗೆ ತೆರಳಿ ಮೇಣದಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸುವ ಮೂಲಕ ಭಕ್ತಿಸಮರ್ಪಿಸಿದರು.
ನಂತರ ಮನೆಗಳಿಗೆ ತೆರಳಿ ಹಬ್ಬದನಿಮಿತ್ತ ಸಿದ್ಧಪಡಿಸಲಾಗಿದ್ದ ಸಿಹಿ ತಿನಿಸಿನೊಂದಿಗೆಬೂರಿಭೋಜನ ಸವೆದರೆ, ಇನ್ನು ಕೆಲವರುಅನ್ಯಧರ್ಮಗಳ ಸ್ನೇಹಿತರನ್ನು, ನೆರೆಹೊರೆಯವರನ್ನುಮನೆಗೆ ಆಹ್ವಾನಿಸಿ ಅವರೊಂದಿಗೆ ಹಬ್ಬದಭೋಜನವನ್ನು ಸವೆಯುವ ಮೂಲಕ ಕ್ರಿಸ್ಮಸ್ನ್ನು ಆಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ
Bellary; ಕಳಪೆ ಆಹಾರ ಪೂರೈಕೆ; ಎಸ್ಸಿ, ಎಸ್ಟಿ ವಸತಿ ನಿಲಯದಲ್ಲಿ ಪ್ರತಿಭಟನೆ
Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್ ದೂರು?
Bellary: ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತಾಯಿ, ಅಕ್ಕ
Ballari: ಕೊನೆಗೂ ನಟ ದರ್ಶನ್ ಸೆಲ್ಗೆ ಟಿವಿ; ಡಿಡಿ ಚಾನೆಲ್ ಮಾತ್ರ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.