ಕೊರೊನಾ ತಡೆಗೆ ಜನರ ಸಹಕಾರ ಮುಖ್ಯ: ಮಲ್ಲೇಶಪ್ಪ
Team Udayavani, May 19, 2021, 8:46 PM IST
ಸಂಡೂರು: ಕೋವಿಡ್-19 ವಿರುದ್ಧ ಪಟ್ಟಣದಲ್ಲಿ ಪುರಸಭೆಯ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ನಿತ್ಯ ಒಂದಲ್ಲ ಒಂದು ಓಣಿಯನ್ನು ಸೀಲ್ಡೌನ್ ಮಾಡುವುದರ ಜೊತೆಗೆ ಸ್ಯಾನಿಟೈಸರ್ ಸಿಂಪಡಣೆ ಮಾಡುತ್ತಿದ್ದೇವೆ ಎಂದು ಪುರಸಭೆ ಆರೋಗ್ಯ ಅಧಿ ಕಾರಿ ಮಲ್ಲೇಶಪ್ಪ ತಿಳಿಸಿದರು.
ಅವರು ಪಟ್ಟಣದ 14ನೇ ವಾರ್ಡ್ ಹಾಗೂ ಎಲ್ಬಿ ಕಾಲೋನಿಯಲ್ಲಿ ಪೂರ್ಣಪ್ರಮಾಣದ ಸ್ಯಾನಿಟೈಸರ್ ಸಿಂಪಡಿಸುವ ಮೂಲಕ ಕೊರೊನಾ ತೀವ್ರತೆಯನ್ನು ತಡೆಯುವ ಮತ್ತು ಜನರಲ್ಲಿ ಆತ್ಮಸ್ಥೈರ್ಯ ಉಂಟುಮಾಡುವಂಥ ಕಾರ್ಯ ಮಾಡುತ್ತಿದ್ದಾರೆ.
ಕೊರೊನಾ ವಿರುದ್ಧದ ಹೋರಾಟ ಒಂದು ಕಡೆಯಾದರೆ ಮತ್ತೂಂದು ಕಡೆ ನಿತ್ಯದ ಕಾರ್ಯಗಳಾದ ಕಸ ಸಂಗ್ರಹ, ಓಣಿಗಳಲ್ಲಿ ಕಸ ಸಂಗ್ರಹ, ಚರಂಡಿಗಳ ಸ್ವತ್ಛತೆ, ಬ್ಲಿಚಿಂಗ್ ಪೌಡರ್ ಹಾಕುವುದು, ವಾಹನಗಳಲ್ಲಿ ಕೊರೊನಾ ಜಾಗೃತಿಯನ್ನು ಮಾಡುವುದು. ಪುರಸಭೆ ಆವರಣದಲ್ಲಿಯೇ ವ್ಯಾಕ್ಸಿನ್ ಹಾಕುತ್ತಿರುವುದರಿಂದ ಅಲ್ಲಿಯೂ ಸಹ ಜನಜಂಗುಳಿ ಹೆಚ್ಚುತ್ತಿದ್ದು ಅದನ್ನು ತಡೆಯುವ ಮತ್ತು ಸ್ಯಾನಿಟೈಸರ್ ಮಾಡುವಂಥ ನಿತ್ಯಕಾರ್ಯ ಮಾಡಬೇಕಾಗಿದೆ.
ತರಕಾರಿ ಮಾರುಕಟ್ಟೆ ಸ್ಥಳಾಂತರ ಮಾಡಿದರೂ ಸಹ ಒಂದು ಕಡೆ ತಹಶೀಲ್ದಾರ್ ಕೋಲು, ಮೈಕು ಹಿಡಿದು ಹೊರಟರೆ ಮತ್ತೂಂದು ಕಡೆ ಪುರಸಭೆ ಅಧಿ ಕಾರಿಗಳು ತಮ್ಮ ಗಾಡಿ ಮತ್ತು ಸ್ಯಾನಿಟೈಸರ್ ಮಾಡಲು ಯಂತ್ರಗಳನ್ನು ಇಟ್ಟುಕೊಂಡು ಓಡುವಂತಹ ಸ್ಥಿತಿ ಉಂಟಾಗಿದೆ. ಆದರೂ ಸಾರ್ವಜನಿಕರು ನಿರ್ಭಿತಿಯಿಂದ ಓಡಾಡುತ್ತಿದ್ದು, ಪೊಲೀಸರೂ ಲಾಠಿ ಹಿಡಿದು ತಡೆಯುವ ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ, ಒಟ್ಟಾರೆಯಾಗಿ ಕೊರೊನಾ ನಿಯಂತ್ರಣಕ್ಕೆ ಇಡೀ ತಾಲೂಕು ಆಡಳಿತ ತಮ್ಮ ಪ್ರಯತ್ನ ನಡೆಸುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ
Bellary; ಕಳಪೆ ಆಹಾರ ಪೂರೈಕೆ; ಎಸ್ಸಿ, ಎಸ್ಟಿ ವಸತಿ ನಿಲಯದಲ್ಲಿ ಪ್ರತಿಭಟನೆ
Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್ ದೂರು?
Bellary: ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತಾಯಿ, ಅಕ್ಕ
Ballari: ಕೊನೆಗೂ ನಟ ದರ್ಶನ್ ಸೆಲ್ಗೆ ಟಿವಿ; ಡಿಡಿ ಚಾನೆಲ್ ಮಾತ್ರ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ಪದಾರ್ಥಗಳ ಬಳಕೆ: ಸುಬ್ರಹ್ಮಣ್ಯ ಸ್ವಾಮೀಜಿ ಕಳವಳ
Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ
Mangaluru: ಪ್ಯಾನಿಕ್ ಬಟನ್, ಜಿಪಿಎಸ್ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ
BJP; ವಿಪಕ್ಷ ನಾಯಕ ಆರ್. ಅಶೋಕ್ ನಡೆಗೆ ಕಾಂಗ್ರೆಸ್ ಖಂಡನೆ
Nagarhole Park Tiger Fight: ಹುಲಿಗಳ ಕಾದಾಟ ಗಂಡು ಹುಲಿಗೆ ಗಾಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.