ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Team Udayavani, Apr 24, 2024, 2:24 PM IST
ಬಳ್ಳಾರಿ: ಇದೇ ತಿಂಗಳು 26 ಕ್ಕೆ ರಾಹುಲ್ ಗಾಂಧಿ ಬಳ್ಳಾರಿ ನಗರಕ್ಕೆ ಬರ್ತಾರೆ. ಇದು ರಾಹುಲ್ ಗಾಂಧಿಯವರ ತಾಯಿಯವರ ಕ್ಷೇತ್ರವಾಗಿತ್ತು ಭಾರತ್ ಜೋಡೋ ಯಾತ್ರೆ ಸಹ ಬಳ್ಳಾರಿಯಲ್ಲಿ ಮಾಡಿದ್ದರು. ಬಳ್ಳಾರಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಇಲ್ಲಿ ನಡೆಯುವ ಸಮಾವೇಶ ನಮಗೆ ಬಹಳ ಮುಖ್ಯ ಎಂದು ಸಚಿವ ನಾಗೇಂದ್ರ ಹೇಳಿದರು.
ರಾಹುಲ್ ಗಾಂಧಿ ಸಮಾವೇಶ ಹಿನ್ನೆಲೆ ಕಾಂಗ್ರೆಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಎಐಸಿಸಿ ಅಧ್ಯಕ್ಷರು ಬರಲಿದ್ದಾರೆ. ಜೊತೆಗೆ ಅವಳಿ ಜಿಲ್ಲೆಯ ಎಲ್ಲಾ ಶಾಸಕರು, ಕೊಪ್ಪಳದ ಅಭ್ಯರ್ಥಿ ಕೂಡ ಬರಲಿದ್ದಾರೆ ಸಮಾವೇಶಕ್ಕೆ ಲಕ್ಷಕ್ಕಿಂತ ಅಧಿಕ ಜನ ಸೇರಲಿದ್ದಾರೆ ಎಂದರು.
ರಾಹುಲ್ ಗಾಂಧಿ ಬಂದು ಹೋದಲ್ಲೆಲ್ಲಾ ನಾವು ವಿಧಾನಸಭೇಲಿ ಗೆದ್ದಿದೀವಿ. ಈ ಚುನಾವಣೆ ನಮಗೆ ಪ್ರತಿಷ್ಠೆಯ ಚುನಾವಣೆ. ನಾವು ಸೋನಿಯಾಜಿ ಅವರ ನಂತರ ಇಲ್ಲಿ ಗೆದ್ದಿಲ್ಲ. ಇದೀಗ ನಾವೆಲ್ಲ ಸೇರಿ ಈ ಕ್ಷೇತ್ರವನ್ನು ಕಾಂಗ್ರೆಸ್ ಮಯ ಮಾಡಲು ಪಣ ತೊಟ್ಟಿದೀವಿ ಈ ಬಾರಿ ಗೆಲುವು ನಮಗೆ ನಿಶ್ಚಿತವಾಗಿದೆ. ರಾಹುಲ್ ಗಾಂಧಿಯವರ ಆಗಮನ ನಮಗೆ ಉತ್ಸಾಹ ತುಂಬಲಿದೆ ಎಂದು ಹೇಳಿದರು.
ಈ ಬಾರಿ ಕಾಂಗ್ರೆಸ್ ಗೆಲ್ಲಿಸುವ ಜವಬ್ದಾರಿ ಎಲ್ಲರ ಮೇಲಿದೆ. ಮಂತ್ರಿಗಳಿಂದ ಹಿಡಿದು ಸಣ್ಣ ಕಾರ್ಯಕರ್ತರವರೆಗೂ ಸಹ ಜವಾಬ್ದಾರಿ ಇದೆ. ಇದೀಗ ಕಾಂಗ್ರೆಸ್ ಗೆ ಅನುಕೂಲದ ವಾತಾವರಣವಿದೆ. ಪಂಚ ಗ್ಯಾರೆಂಟಿ ಯೋಜನೆಗಳ ಬಲ ನಮಗಿದೆ. ಜೊತೆಗೆ ರಾಹುಲ್ ಗಾಂಧಿಯವರು ಸಹ ಗ್ಯಾರೆಂಟಿ ಘೋಷಿಸಿದಾರೆ. ದೇಶವೇ ಇದೀಗ ನಮ್ಮತ್ತ ತಿರುಗಿ ನೋಡುತ್ತಿದೆ. ಮೊದಲು ಗುಜರಾತ್ ಅಂತಿದ್ರು, ಆದರೆ ಕರ್ನಾಟಕ ಮಾಡೆಲ್ ಜನ ನೋಡ್ತಿದಾರೆ ಎಂದು ಹೇಳಿದರು.
ರಾಹುಲ್ ಉತ್ತರ ಕರ್ನಾಟಕಕ್ಕೆ ಇದು ಸಂದೇಶ ನೀಡುವ ಕಾರ್ಯ ಆಗಲಿದೆ: ತುಕಾರಾಂ
ಬಳ್ಳಾರಿ: ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿಗೆ ನಡೆದುಕೊಂಡಿದೆ. ಈ ಹಿಂದಿನ ಎಲ್ಲಾ ಕಾಂಗ್ರೆಸ್ ಸರ್ಕಾರಗಳಲ್ಲು ನಾವು ಪ್ರಣಾಳಿಕೆಯನ್ನು ನೆರವೇರಿಸಿದೀವಿ. ಸಂವಿಧಾನದ ಮೌಲ್ಯಗಳನ್ನು ಕಾಂಗ್ರೆಸ್ ಎತ್ತಿ ಹಿಡಿಯುತ್ತದೆ ಎಂದು ಕಾಂಗ್ರಸ್ ಅಭ್ಯರ್ಥಿ ಈ ತುಕಾರಾಂ ಹೇಳಿದರು.
ಕಾಂಗ್ರೆಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಗೆ ನಾಯಕರಾದ ರಾಹುಲ್ ಗಾಂಧಿ ಬರ್ತಿದಾರೆ. ಉತ್ತರ ಕರ್ನಾಟಕಕ್ಕೆ ಇದು ಸಂದೇಶ ನೀಡುವ ಕಾರ್ಯ ಆಗಲಿದೆ. ಜನರ ಪ್ರೀತಿಯನ್ನು ಕೇಳಲು ರಾಹುಲ್ ಗಾಂಧಿ ಬರ್ತಿದಾರೆ.
ಶ್ರೀರಾಮುಲು ನಾಲ್ಕು ಬಾರಿ ಸಂಸದರಾಗಿ ವಿಫಲರಾಗಿದಾರೆ. ಕರ್ನಾಟಕ ಅತಿಹೆಚ್ಚು ತೆರಿಗೆ ಕಟ್ಟುವ ದೇಶ. ನೀತಿ ಆಯೋಗವನ್ನೇ ಬಿಜೆಪಿಯವರು ತೆಗೆದು ಹಾಕಿದಾರೆ. ನಮಗೆ ಜಿಎಸ್ ಟಿ ಹಾಗೂ ಸೆಸ್ ಅಲ್ಲಿ ಅನ್ಯಾಯ ಆಗ್ತಿದೆ. ಬರ ಪರಿಹಾರದ ವಿಚಾರದಲ್ಲಿ ಸುಪ್ರೀಂ ಕೋರ್ಟೇ ಕೇಂದ್ರಕ್ಕೆ ಛೀಮಾರಿ ಹಾಕಿದೆ. ಆದರ್ಶ ಗ್ರಾಮಗಳು ಎಲ್ಲಿವೆ, ಹೇಳಹೆಸರಿಲ್ಲದೆ ಹೋಗಿವೆ ಸ್ಮಾರ್ಟ್ ಸಿಟಿ ಯೋಜನೆ ಎಲ್ಲೋಯ್ತು..!? ಎಂದು ಶ್ರೀರಾಮುಲುಗೆ ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ದರ್ಶನ್ ಭೇಟಿಗೆ ಬಂದ ವಿಜಯಲಕ್ಷ್ಮಿ-ದಿನಕರ್: ಪ್ರಸಾದ,ಡ್ರೈಫ್ರೂಟ್ಸ್ ತಂದ ಪತ್ನಿ
Valmiki scam; ತುಕಾರಾಮ್ ಗೆಲುವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಶ್ರೀರಾಮುಲು ದಾವೆ
Renukaswamy Case ಚಾರ್ಜ್ಶೀಟ್ನಲ್ಲಿ ಸಾಕ್ಷಿಗಳ ಹೇಳಿಕೆ ಕೇಳಿ ದಂಗಾದ ದರ್ಶನ್
Bellary: ಬಳ್ಳಾರಿ ಜೈಲಿಗೆ ಬಂದ ಶಿಗ್ಲಿ ಬಸ್ಯಾ; ದರ್ಶನ್ ಪರ ವಾದ ಮಾಡಲು ಸಿದ್ದ ಎಂದ ಬಸ್ಯಾ
Renukaswamy Case: ದರ್ಶನ್ ಕಸ್ಟಡಿ ಅಂತ್ಯ; ವಿಡಿಯೋ ಕಾನ್ಪರೆನ್ಸ್ ಮೂಲಕ ಕೋರ್ಟ್ ಗೆ ಹಾಜರು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.