ಬಳ್ಳಾರಿ: ವಿನಾಶದ ಅಂಚಿಗೆ ಸಂಡೂರು ನೈಸರ್ಗಿಕ ಸಂಪತ್ತು?

ಅದಾಗಲೇ 700-800 ಎಂಎಂಟಿ ಅದಿರನ್ನು ನೆಲದಿಂದ ತೆಗೆಯಲಾಗಿದೆ.

Team Udayavani, Jul 8, 2024, 5:43 PM IST

ಬಳ್ಳಾರಿ: ವಿನಾಶದ ಅಂಚಿಗೆ ಸಂಡೂರು ನೈಸರ್ಗಿಕ ಸಂಪತ್ತು?

ಉದಯವಾಣಿ ಸಮಾಚಾರ
ಬಳ್ಳಾರಿ: ಗಣಿನಾಡಿನ ಸಸ್ಯಕಾಶಿ ಎಂದೇ ಖ್ಯಾತಿಗಳಿಸಿರುವ ಸಂಡೂರು ಕಾಡಿನಲ್ಲಿರುವ ಗಣಿ ಇನ್ನೂ ಕೆಲವೇ ವರ್ಷಗಳಲ್ಲಿ ಖಾಲಿಯಾಗಿ, ಅಲ್ಲಿನ ಜನ, ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳ ಜೀವನ ಸಂಪೂರ್ಣ ವಿನಾಶದ ಅಂಚಿಗೆ ತಲುಪಲಿದೆಯಾ? ಇಂತಹದೊಂದು ಆತಂಕ ಸೃಷ್ಟಿಸುವ ವಿಚಾರವನ್ನು ಜನಸಂಗ್ರಾಮ ಪರಿಷತ್‌ ಸದಸ್ಯರಾದ ಶ್ರೀಶೈಲ ಆಲ್ದಳ್ಳಿ, ಟಿ.ಎಂ.ಶಿವಕುಮಾರ್‌, ಮೂಲೆಮನೆ ಈರಣ್ಣ, ನಾಗರಾಜ ಜಿ.ಕೆ. ಅವರು, ಈಚೆಗೆ ಜಿಲ್ಲೆಗೆ ಆಗಮಿಸಿದ್ದ ಸುಪ್ರೀಂಕೋರ್ಟ್‌ನ ಕೇಂದ್ರ ಉನ್ನತಾಧಿಕಾರಿಗಳ ಸಮಿತಿ (ಸಿಇಸಿ)ಗೆ ಸಲ್ಲಿಸಿರುವ ಮನವಿಯಲ್ಲಿ ಹೊರಹಾಕಿದೆ. ಸುಪ್ರೀಂ ಕೋರ್ಟ್‌ಗೆ ಈ ಎಲ್ಲ ಅಂಶಗಳನ್ನು ಸೇರಿಸಿ, ವರದಿ ಸಲ್ಲಿಸಬೇಕು ಎಂದೂ ಕೋರಿದೆ.

ಇದನ್ನೂ ಓದಿ:Ex-Minister ಬಿ.ಸಿ.ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ

ಈ ಭಾಗದಲ್ಲಿ ಸದ್ಯ ವರ್ಷಕ್ಕೆ 45 ಮೆಟ್ರಿಕ್‌ ಟನ್‌ ನಷ್ಟು ಅದಿರನ್ನು ಭೂಮಿಯಿಂದ ಹೊರ ತೆಗೆಯಲಾಗುತ್ತಿದೆ. ಬಗೆದ ಅದಿರನ್ನು ಬೇರೆಡೆಗೆ ಸಾಗಿಸಲು ಪ್ರತಿನಿತ್ಯ 4-5 ಸಾವಿರ ಲಾರಿಗಳು ಈ ಭಾಗದಲ್ಲಿ ಸಂಚರಿಸುತ್ತವೆ. ಇದರಿಂದ ಅನೇಕ ಅವಘಡಗಳು ಸಂಭವಿಸುತ್ತವೆ. ಇಂಡಿಯನ್‌ ಬ್ಯುರೊ ಆಫ್‌ ಮೈನ್ಸ್‌ 2018ರಲ್ಲಿ ಅಂದಾಜಿಸಿದಂತೆ ಸಂಡೂರು ಭಾಗದಲ್ಲಿ 2500 ಮಿಲಿನಯ್‌ ಮೆಟ್ರಿಕ್‌ ಟನ್‌ (ಎಂಎಂಟಿ) ಕಬ್ಬಿಣದ ಅದಿರು ಇದ್ದು, ಈ ಪೈಕಿ ಅದಾಗಲೇ 700-800 ಎಂಎಂಟಿ ಅದಿರನ್ನು ನೆಲದಿಂದ ತೆಗೆಯಲಾಗಿದೆ.

ಗಣಿ ತೆಗೆಯುವ ಮೇಲೆ ಕಡಿವಾಣ ಹಾಕದೇ ಇದ್ದರೆ ಇನ್ನು ಉಳಿದಿರುವ 1600-1700 ಎಂಎಂಟಿ ಅದಿರು ಇನ್ನು 15-16 ವರ್ಷದಲ್ಲಿ ಖಾಲಿ ಆಗಿ ಹೋಗಲಿದೆ. ಇದರಿಂದ ಪ್ರಕೃತಿಯಲ್ಲಿ ಆಗುವ ವ್ಯತ್ಯಾಸ ಮತ್ತು ಇಲ್ಲಿನ ಕಾಡು, ಜನ, ಕಾಡು ಜೀವಿಗಳ ಸ್ಥಿತಿ ಯಾವ ಮಟ್ಟಕ್ಕೆ ಹೋಗಲಿದೆ ಎಂಬುದನ್ನು ಗಮನಿಸಬೇಕು ಎಂದು ಪರಿಷತ್‌ನ ಸದಸ್ಯರು ಮನವಿಯಲ್ಲಿ ಕೋರಿದ್ದಾರೆ.

ಸಂಡೂರಿನ ಕಾಡಿನಲ್ಲಿ ಅಪರೂಪದ ಸಸ್ಯಗಳ ರಾಶಿಯೇ ಇದೆ ಎಂದು ಈ ಹಿಂದೆ ಅರಣ್ಯ ಇಲಾಖೆಯ ಡಿಸಿಎಫ್‌, ಎಸಿಎಫ್‌, ಐಎಫ್‌ಎಸ್‌ ಅಧಿಕಾರಿಗಳು ನೀಡಿರುವ ವರದಿಯಲ್ಲಿ ಉಲ್ಲೇಖವಾಗಿದೆ. ಇದೀಗ ಜನಸಂಗ್ರಾಮ ಪರಿಷತ್‌ ಅತೀ ಕಾಳಜಿ ವಹಿಸಿ, ಕಲೆಹಾಕಿರುವ ಮಾಹಿತಿ ಪ್ರಕಾರ ಇನ್ನೂ 15 ವರ್ಷದಲ್ಲಿ ಇಂದು ಅತಿ ಸುಂದರವಾಗಿ ಕಾಣುವ ಕಾಡಿನ ಚಿತ್ರಣ ಸಂಪೂರ್ಣ ಬದಲಾಗಲಿದೆ. ಮರಳುಗಾಡಿನಂತೆ ಆದರೂ ಅಚ್ಚರಿ ಇಲ್ಲ.

ಅತ್ಯುತ್ತಮ ಮಳೆ ಆಗುವ ಪ್ರದೇಶಗಳ ಪೈಕಿ ಸಂಡೂರು ಒಂದು. ಆದರೆ ವರ್ಷದಿಂದ ವರ್ಷಕ್ಕೆ ಮಳೆ ಬೀಳುವ ಪ್ರಮಾಣ ಇಳಿಕೆ ಆಗುತ್ತಿದೆ. ಮಳೆಯಾದರೂ ನಂತರ ಗುಡ್ಡಗಳಿಂದ ಹರಿದು ಬರುವ ನೀರಿಗೆ ಇರುವ ಪ್ರಾಕೃತಿಕ ಮಾರ್ಗಗಳು ಗಣಿಗಾರಿಕೆಯಿಂದ ಸಂಪೂರ್ಣ ನಾಶವಾಗಿವೆ. ಪರಿಣಾಮ ಅಳಿದುಳಿದ ಗುಡ್ಡಗಳ ಮೇಲೂ ಇದು ದೊಡ್ಡ ಪರಿಣಾಮ ಬೀರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಶ್ರೀ ಕುಮಾರ ಸ್ವಾಮಿ ನೆಲೆಸಿರುವ ಈ ನಾಡು ಇದೀಗ ಎಲ್ಲರಿಗೂ ಅಚ್ಚುಮೆಚ್ಚು. ಮಹಾತ್ಮ ಗಾಂಧಿ  ಒಂದೆರಡು ಬಾರಿ ಭೇಟಿ ನೀಡಿ, ಇಲ್ಲಿನ ಪ್ರಕೃತಿ ಸೌಂದರ್ಯ ಕಂಡು “ಸೀ ಸಂಡೂರ್‌ ಇನ್‌ ಸೆಪ್ಟೆಂಬರ್‌’ ಎಂದು ಉದ್ಘಾರ ತೆಗೆದಿದ್ದರು. ಕೆಎಂಆರ್‌ಇಸಿ ಮೂಲಕ ಅದೆಷ್ಟೇ ಗಿಡ ಬೆಳೆಸಿದರೂ ಪ್ರಾಕೃತಿಕವಾಗಿ ಬೆಳೆದ ಕಾಡಿಗೆ ಸಮ ಆಗಲಾರದು ಎಂದು ಮನವಿಯಲ್ಲಿ ಅಲವತ್ತುಕೊಳ್ಳಲಾಗಿದೆ. ಸಿಇಸಿ ಅಧಿಕಾರಿಗಳು ಸಲ್ಲಿಸುವ ವರದಿಯನ್ನು ಆಧರಿಸಿ ಸುಪ್ರೀಂಕೋರ್ಟ್‌ ಯಾವ ರೀತಿ ನಿರ್ಣಯ
ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಟಾಪ್ ನ್ಯೂಸ್

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

Punjab; Aam Aadmi leader shot by Akali Dal leader

Punjab; ಆಮ್‌ ಆದ್ಮಿ ನಾಯಕನಿಗೆ ಗುಂಡೇಟು ಹೊಡೆದ ಅಕಾಲಿ ದಳ ಮುಖಂಡ

10-ckm

Chikkamagaluru: ಪ್ರವಾಸಿಗರನ್ನು ಕರೆತಂದಿದ್ದ ಬೆಂಗಳೂರಿನ ಚಾಲಕ ಹೃದಯಾಘಾತದಿಂದ ಮೃತ್ಯು

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

9-mng-1

Mumtaz Ali ನಾಪತ್ತೆ ಪ್ರಕರಣ; ಶೋಧ ಕಾರ್ಯಾಚರಣೆಗೆ ಈಶ್ವರ ಮಲ್ಪೆ ತಂಡ ಆಗಮನ

Hubbali: ಅಪಾರ್ಟ್‌ಮೆಂಟ್ ಆವರಣದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿ ಧ್ವಂಸಗೈದ ಕಿಡಿಗೇಡಿಗಳು

Hubbali: ಅಪಾರ್ಟ್‌ಮೆಂಟ್ ಆವರಣದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿ ಧ್ವಂಸಗೈದ ಕಿಡಿಗೇಡಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ

Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

1-reee

Siddaramaiah 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ

1-redddi

Ballari;13 ವರ್ಷದ ಬಳಿಕ ಜನಾರ್ದನ ರೆಡ್ಡಿ ಗ್ರ್ಯಾಂಡ್ ಎಂಟ್ರಿ: ಅಭಿಮಾನಿಗಳ ಸಂಭ್ರಮಾಚರಣೆ

ಬಳ್ಳಾರಿ: ತಾರಾನಾಥ ಆಯುರ್ವೇದ ಆಸ್ಪತ್ರೆ ಕಟ್ಟಡ ಶೀಘ್ರ ನಿರ್ಮಾಣ- ಭರತ್‌

ಬಳ್ಳಾರಿ: ತಾರಾನಾಥ ಆಯುರ್ವೇದ ಆಸ್ಪತ್ರೆ ಕಟ್ಟಡ ಶೀಘ್ರ ನಿರ್ಮಾಣ- ಭರತ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

9

Malpe: 8 ಜಿಲ್ಲಾಡಳಿತದಿಂದ ತಡೆಬೇಲಿ ತೆರವು 8ವಾಟರ್‌ ಸ್ಪೋರ್ಟ್ಸ್ ಮತ್ತೆ ಆರಂಭ

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

Punjab; Aam Aadmi leader shot by Akali Dal leader

Punjab; ಆಮ್‌ ಆದ್ಮಿ ನಾಯಕನಿಗೆ ಗುಂಡೇಟು ಹೊಡೆದ ಅಕಾಲಿ ದಳ ಮುಖಂಡ

8

Udupi: ಸಾಲು-ಸಾಲು ರಜೆ; ನವರಾತ್ರಿ ಸಂಭ್ರಮ; ಎಲ್ಲೆಡೆ ವಾಹನ ದಟ್ಟಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.