![UDP-DC](https://www.udayavani.com/wp-content/uploads/2024/12/UDP-DC-415x249.jpg)
ವಿಶ್ವ ಜೀವವೈವಿಧ್ಯ ದಿನಾಚರಣೆ
Team Udayavani, May 23, 2020, 1:34 PM IST
![23-May-13](https://www.udayavani.com/wp-content/uploads/2020/05/23-May-13-620x399.gif)
ಬಳ್ಳಾರಿ: ಸಸಿ ನೆಡುವ ಕಾರ್ಯಕ್ರಮಕ್ಕೆ ಕುಲಪತಿ ಪ್ರೊ| ಸಿದ್ದು ಪಿ.ಅಲಗೂರು ಚಾಲನೆ ನೀಡಿದರು.
ಬಳ್ಳಾರಿ: ಅಂತಾರಾಷ್ಟ್ರೀಯ ಜೀವ ವೈವಿಧ್ಯ ದಿನದ ಅಂಗವಾಗಿ ನಗರದ ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿ ಆವರಣದಲ್ಲಿ ವಿವಿಧ ರೀತಿಯ 100 ಗಿಡಗಳನ್ನು ಶುಕ್ರವಾರ ನೆಡಲಾಯಿತು.
ವಿಎಸ್ಕೆ ವಿವಿ, ಬಳ್ಳಾರಿ ಸಮೃದ್ಧಿ ಫೌಂಡೇಷನ್ ಜಂಟಿ ಸಹಭಾಗಿತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವಿವಿ ಕುಲಪತಿ ಪ್ರೊ| ಸಿದ್ದು ಪಿ. ಅಲಗೂರು ಅವರು ಗಿಡನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಜೀವವೈವಿಧ್ಯ ರಕ್ಷಣೆ ಜೊತೆಗೆ ಕೋವಿಡ್ 19ರ ಹರಡುವಿಕೆ ಕುರಿತು ಜಾಗೃತಿ ಸಾರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದವರು ಸಲಹೆ ನೀಡಿದರು.
ಫೌಂಡೇಷನ್ನ ಮುಖ್ಯಸ್ಥೆ ಹರಿಣಿ ರಾಯಸಂ ಮಾತನಾಡಿ, ಜಾಗತಿಕ ತಾಪಮಾನ ಏರಿಕೆಯಾದ ಕಾರಣ ಜೀವವೈವಿಧ್ಯಗಳು ನೆಲೆಕಚ್ಚುತ್ತಿವೆ. ಮರ ಬೆಳೆಸುವುದರಿಂದ ತಾಪಮಾನ ನಿಯಂತ್ರಿಸಬಹುದು ಮತ್ತು ಜೀವಸಂಕುಲ ಉಳಿಸಬಹುದು ಎಂದರು. ಜಿಲ್ಲಾ ಅರಣ್ಯ ಅಧಿಕಾರಿ ಕಿರಣ್ ಮಾತನಾಡಿ, ಮರಗಳನ್ನು ಬೆಳೆಸುವುದರಿಂದ ಪರಿಸರಕ್ಕೆ ಕೊಡುಗೆ ನೀಡುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದರು. ಈ ವೇಳೆ ಕುಲಸಚಿವೆ ಪ್ರೊ| ಬಿ ಕೆ ತುಳಸಿಮಾಲ, ಹಣಕಾಸು ಅಧಿಕಾರಿ ಡಾ| ಕೆ.ಸಿ.ಪ್ರಶಾಂತ್, ಮುಖ್ಯ ಇಂಜಿನಿಯರ್ ಮುರಳೀಧರ್, ಸಮೃದ್ಧಿ ಸಂಸ್ಥೆಯ ಪ್ರಹ್ಲಾದ್ ರೆಡ್ಡಿ, ರಾಜೇಂದ್ರ ಹಾಗೂ ಅರಣ್ಯ ಇಲಾಖೆ ವಿವಿಧ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
![UDP-DC](https://www.udayavani.com/wp-content/uploads/2024/12/UDP-DC-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ](https://www.udayavani.com/wp-content/uploads/2024/12/nagalsk-150x84.jpg)
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
![1-qewqe](https://www.udayavani.com/wp-content/uploads/2024/12/1-qewqe-150x90.jpg)
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
![1-lokkk](https://www.udayavani.com/wp-content/uploads/2024/12/1-lokkk-150x98.jpg)
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
![Ballari–Minister](https://www.udayavani.com/wp-content/uploads/2024/12/Ballari-Minister-150x90.jpg)
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
![1-dinnu](https://www.udayavani.com/wp-content/uploads/2024/12/1-dinnu-150x84.jpg)
Ballari; ಮೃ*ತ ಬಾಣಂತಿಯರ ಮನೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.