Darshan ಶಿಫ್ಟ್ ಹಿನ್ನೆಲೆ ಬಳ್ಳಾರಿ ಜೈಲಿನಲ್ಲಿ ಹೈ ಅಲಟ್೯:ಸಿಬಂದಿಗಳಿಗೆ ಎಚ್ಚರಿಕೆ
ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಯಾವುದೇ ವಿಐಪಿ ಸೆಲ್ ಗಳು ಇಲ್ಲ...!!
Team Udayavani, Aug 28, 2024, 10:30 AM IST
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ, ನಟ ದರ್ಶನ್ ಶಿಫ್ಟ್ ಹಿನ್ನೆಲೆಯಲ್ಲಿ ಬಳ್ಳಾರಿ ಕೇಂದ್ರ ಕಾರಗೃಹದಲ್ಲಿ ಅಧಿಕಾರಿಗಳು ಹೈ ಅಲಟ್೯ ಆಗಿದ್ದಾರೆ.
ಜೈಲು ಅಧೀಕ್ಷಕಿ ಲತಾ ಅವರು ಮಂಗವಾರ ರಾತ್ರಿ ಸಿಬಂದಿಗಳ ತುರ್ತು ಸಭೆ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಗಳು ತೀವ್ರ ಎಚ್ಚರಿಕೆಯ ನಡೆ ಅನುಸರಿಸುತ್ತಿದ್ದುಸಿಸಿ ಟಿವಿಗಳ ಕಾರ್ಯಚರಣೆ, ಸೆಲ್ ಗಳ ಸ್ಥಿತಿಗತಿ ಪರಿಶೀಲನೆ ನಡೆಸಿದ್ದಾರೆ. ಜೈಲಿನ ಎಲ್ಲ ಸಿಬಂದಿಗಳೊಂದಿಗೆ ಅಧೀಕ್ಷಕಿ ಮಾತುಕತೆ ನಡೆಸಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ನಡೆದ ಘಟನೆ ಇಲ್ಲಿ ಮರುಕಳಿಸಿದಂತೆ ಎಚ್ಚರಿಕೆ ವಹಿಸಲಾಗಿದ್ದು ಯಾವುದೇ ಸಿಬಂದಿಗಳು ಖೈದಿಗಳ ಜತೆ ನಂಟು ಬೆಳೆಸಿರುವುದು ಗೊತ್ತಾದರೆ ಕಠಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಜೈಲಿನ ಬಳಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲು ತೀರ್ಮಾನಿಸಲಾಗಿದೆ.
ಜೈಲಿನಲ್ಲಿ ಸದ್ಯ 100 ಜನ ಸಿಬಂದಿಗಳು ಮಾತ್ರ ಕರ್ತವ್ಯ ನಿರವಹಿಸುತ್ತಿದ್ದು ಹೆಚ್ಚಿನ ಸಿಬಂದಿಗಳ ನಿಯೋಜನೆಗೆ ಚಿಂತನೆ ನಡೆಸಲಾಗಿದೆ. ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಯಾವುದೇ ವಿಐಪಿ ಸೆಲ್ ಗಳು ಇಲ್ಲ, ಎಲ್ಲವೂ ಸಾಮಾನ್ಯ ಸೆಲ್ ಗಳಾಗಿದ್ದು ಸ್ಟಾರ್ ನಟ ದರ್ಶನ್ ಕೂಡ ಇಲ್ಲಿರುವ ಎಲ್ಲ ಖೈದಿಗಳಂತೆಯೇ ಸಾಮಾನ್ಯ ಖೈದಿಯಾಗಿ ಮುಂದುವರಿಯಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.