ಹುಲುಗಪ್ಪನ ಮಾನವೀಯ ಕಾರ್ಯಕ್ಕೆ ಸಲಾಂ


Team Udayavani, Jun 19, 2021, 11:43 AM IST

ಹುಲುಗಪ್ಪನ ಮಾನವೀಯ ಕಾರ್ಯಕ್ಕೆ ಸಲಾಂ

ಬಳ್ಳಾರಿ: ಕೋವಿಡ್‌ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳನ್ನು ಮುಟ್ಟೋಕೆ ಹಿಂಜರಿಯುತ್ತಿರುವ ಸಂಕಷ್ಟದ ಸಮಯದಲ್ಲಿ ಇಲ್ಲೊಬ್ಬ ಹುಲುಗಪ್ಪ ಎಂಬ ವ್ಯಕ್ತಿ ಕೋವಿಡ್‌ನಿಂದ ಮೃತಪಟ್ಟ ನೂರಾರು ಶವಗಳನ್ನು ಶವ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆಯುವುದರ ಜತೆಗೆ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಹಾಮಾರಿ ಕೋವಿಡ್‌ ಸೋಂಕು ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಕೋವಿಡ್‌ಸೋಂಕು ಹಲವು ಸಂಕಷ್ಟಗಳನ್ನು ತಂದೊಡ್ಡಿದೆ. ಕುಟುಂಬದ ಮುಖ್ಯಸ್ಥರನ್ನು ಬಲಿ ಪಡೆದು ಮಕ್ಕಳನ್ನು, ಅವಲಂಬಿತರನ್ನು ಬೀದಿಪಾಲು ಮಾಡಿರುವ ಕೋವಿಡ್‌ ಸೋಂಕು ಜನಸಾಮಾನ್ಯರಲ್ಲಿ ಆತಂಕ, ಭಯವನ್ನು ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕೋವಿಡ್‌ ಸೋಂಕಿನಿಂದ ಮೃತಪಟ್ಟಿರುವ ಬಹುತೇಕ ಶವಗಳನ್ನು ಕುಟುಂಬಸ್ಥರು ಪಡೆದು ಅಂತ್ಯಸಂಸ್ಕಾರ ಮಾಡದೆ ಬಿಟ್ಟುಹೋಗಿರುವ ಹಾಗೂ ಅಂತ್ಯ ಸಂಸ್ಕಾರ ಮಾಡಲು ಮುಂದೆ ಬಂದ ಸಂಘ ಸಂಸ್ಥೆಗಳಿಗೆ ನೀಡಿರುವ ಹಲವಾರು ಉದಾಹರಣೆಗಳಿವೆ. ಅಂತಹದ್ದರಲ್ಲಿ ಕೋವಿಡ್‌ ಸೋಂಕಿನ ಯಾವುದೇ ಭಯ, ಆತಂಕ ಪಡದ ಹುಲುಗಪ್ಪ ಸುಮಾರು 440 ಕೋವಿಡ್‌ ಶವಗಳನ್ನು ಶವ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಗರದ ರೂಪನಗುಡಿ ರಸ್ತೆಯಲ್ಲಿ ಆರ್ಯವೈಶ್ಯ ಅಸೋಸಿಯೇಷನ್‌ನವರು ನಿರ್ಮಿಸಿರುವಹರಿಶ್ಚಂದ್ರ ಘಾಟ್‌ನಲ್ಲಿ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸುತ್ತಿರುವ ಹುಲುಗಪ್ಪನವರು, ಶವಗಳನ್ನು ಸಹ ಸಂಸ್ಕಾರ ಮಾಡುತ್ತಿದ್ದಾರೆ. ಶವಗಳನ್ನು ಹೊತ್ತೂಯ್ಯುವ ವಾಹನದ ಚಾಲಕನಾಗಿಯೂ ಕಾರ್ಯನಿರ್ವಹಿಸುವ ಇವರು, ಈವರೆಗೆ ಸರಿ ಸುಮಾರು ಒಂದು ಸಾವಿರ ಶವಗಳನ್ನು ಸಂಸ್ಕಾರ ಮಾಡಿದ್ದು, ಈ ಪೈಕಿ ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯಲ್ಲಿ (ಕಳೆದ 2020 ಜುಲೆ„ 31 ರಿಂದ 2020 ಇಲ್ಲಿವರೆಗೆ) 440 ಕೋವಿಡ್‌ ಶವಗಳನ್ನು ಸಂಸ್ಕಾರ ಮಾಡಿದ್ದಾರೆ.

ಅನಾಥ ಶವಗಳ ಸಂಸ್ಕಾರ: ಕೋವಿಡ್‌ ಸೋಂಕಿನಿಂದ ಮೃತಪಟ್ಟ ಶವವನ್ನು ಸಂಬಂಧಿ ಕರು ಸೇರಿ ಯಾರೂ ಮುಟ್ಟುವುದಿಲ್ಲ. ಕೇವಲ ದೂರದಿಂದಲೇ ನೋಡಿ ಹಿಂದೆ ಸರಿಯುತ್ತಾರೆ. ಕೆಲವೊಮ್ಮೆ ಶವ ಸಂಸ್ಕಾರ ಮಾಡಲು ಶವ ಹಿಂದೆಯೂ ಯಾರೂ ಬರಲ್ಲ. ಇಂಥ ಸಂದರ್ಭದಲ್ಲಿ ಸಂಬಂಧಿಕರು ಬರುವಿಕೆಯನ್ನು ನೋಡದೆ ಹುಲುಗಪ್ಪ ಅವರೇ ಶವವನ್ನು ಎತ್ತಿಕೊಂಡು ವಾಹನದೊಳಕ್ಕೆ ಹಾಕಿಕೊಂಡು ಶವ ಸಂಸ್ಕಾರ ಮಾಡಿದ್ದಾರೆ. ಮನೆಯಲ್ಲಿ ನಾಲ್ವರು ಮಕ್ಕಳು ಇದ್ದಾರೆ ಎಂಬ ಆತಂಕವೂ ಇಲ್ಲದೇ ಶವ ಸಂಸ್ಕಾರ ಮಾಡುತ್ತಿರುವ ಹುಲುಗಪ್ಪರ ನಿಸ್ವಾರ್ಥ ಸೇವೆಗೆ ಆರ್ಯವೈಶ್ಯ ಅಸೋಸಿಯೇಷನ್‌, ಮುಖಂಡರು, ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಎಸ್ಸೆಸ್ಸೆಲ್ಸಿ ವ್ಯಾಸಂಗ: ಶವ ಸಂಸ್ಕಾರದಲ್ಲಿ ತೊಡಗಿರುವಹುಲುಗಪ್ಪ ಓದಿದ್ದು ಕೇವಲ ಎಸ್ಸೆಸ್ಸೆಲ್ಸಿ ಮಾತ್ರ. ನಗರದ ಮುನಿಸಿಪಲ್‌ ಕಾಲೇಜಿನಲ್ಲಿ 10ನೇ ತರಗತಿ ಪೂರ್ಣಗೊಳಿಸಿರುವ ಹುಲುಗಪ್ಪ, ನಂತರ ವಿದ್ಯಾಭ್ಯಾಸ ಮುಂದುವರೆಸಲು ಆಸಕ್ತಿಯಿಲ್ಲದೇ ಅಲ್ಲಿಗೆ ಮುಗಿಸಿದ್ದಾರೆ. ನಂತರ 1992 ರಿಂದ ಟ್ಯಾಕ್ಸಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು, 2004ರಲ್ಲಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಂಬ್ಯುಲೆನ್ಸ್‌ ಚಾಲಕನಾಗಿ ಸೇರಿ 2012ರ ವರೆಗೆ ಕಾರ್ಯನಿರ್ವಹಿಸಿದ್ದಾರೆ. ನಂತರ ಆರ್ಯವೈಶ್ಯ ಅಸೋಸಿಯೇಷನ್‌ನ ಹರಿಶ್ಚಂದ್ರ ಘಾಟ್‌ ಗೆ ಸೇರಿದ ಇವರು, ಅಂದಿನಿಂದ ಶವಗಳನ್ನು ಸಾಗಿಸುವ ವಾಹನ ಚಾಲಕರಾಗಿ, ಘಾಟ್‌ ನಿರ್ವಹಿಸುವ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸುತ್ತಲೇ ಶವ ಸಂಸ್ಕಾರ ಮಾಡುವಂತಹ ಪುಣ್ಯದ ಕೆಲಸಗಳನ್ನು ಸಹ ಮಾಡುತ್ತಾ ಬಂದಿದ್ದಾರೆ.

ಸಿಗದ ಬಾಡಿಗೆ ಮನೆ :

ಆರ್ಯವೈಶ್ಯ ಹರಿಶ್ಚಂದ್ರ ಘಾಟ್‌ನಲ್ಲಿ ನಿತ್ಯ ಶವಸಂಸ್ಕಾರಗಳನ್ನು ಮಾಡುವ ಹುಲುಗಪ್ಪಗೆ ಮೂವರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ ಇದ್ದಾರೆ. ಆದರೂ, ಕೋವಿಡ್‌ ಸೇರಿ ಶವಗಳನ್ನು ಸಂಸ್ಕಾರ ಮಾಡುತ್ತಾನೆ ಎಂದು ಇವರಿಗೆ ಬಾಡಿಗೆಮನೆ ನೀಡಲು ನಿರಾಕರಿಸಿದ್ದಾರೆ. ಮೊದಲುಇದ್ದ ಮನೆಯಿಂದಲೇ ಹೊರ ಹಾಕಿದ್ದ ಹುಲುಗಪ್ಪರಿಗೆ ಬೇರೆ ಕಡೆ ಬಾಡಿಗೆ ಕೇಳಲುಹೋದಾಗ ನಾನು ಮಾಡುವ ವೃತ್ತಿಯನ್ನುಕೇಳುತ್ತಿದ್ದಂತೆ ಮಾಲೀಕರು ಮನೆ ಬಾಡಿಗೆ ನೀಡದೆ ನಿರಾಕರಿಸುತ್ತಿದ್ದರು. ಸಮಾಜ ಎಂದರೆ,ಒಳ್ಳೆಯವರು, ಕೆಟ್ಟವರು ಇಬ್ಬರೂ ಇರುತ್ತಾರೆ. ಅದರಲ್ಲೂ ಒಬ್ಬರು ಮುಂದೆ ಬಂದು ನನಗೆ ಮನೆಬಾಡಿಗೆ ನೀಡಲು ಮುಂದೆ ಬಂದಿದ್ದಾರೆ ಎಂದು ಹುಲುಗಪ್ಪ ತನ್ನ ಅಳಲು ತೋಡಿಕೊಂಡಿದ್ದಾರೆ. ಹೀಗೆ ಶವಗಳನ್ನು ಸಂಸ್ಕಾರ ಮಾಡುತ್ತಿರುವ ಹುಲುಗಪ್ಪನನ್ನು ಫ್ರಂಟ್‌ಲೆçನ್‌ ವಾರಿಯರನ್ನಾಗಿ ಗುರುತಿಸುವುದು ಅಗತ್ಯವಾಗಿದೆ.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hosapete: ತುಂಬಿದ ಕೊಡ ತುಳುಕಿತಲೇ ಪರಾಕ್.. ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ

Hosapete: ತುಂಬಿದ ಕೊಡ ತುಳುಕಿತಲೇ ಪರಾಕ್.. ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ

10

Kampli: ಕಣವಿ ತಿಮ್ಮಾಪುರದಲ್ಲಿ ಶ್ರೀ ಕೃಷ್ಣದೇವರಾಯನ ಕಾಲದ ತೆಲುಗು ಶಾಸನ ಪತ್ತೆ

BJP: If given the post of state president, I will unite everyone: B. Sriramulu

BJP: ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಎಲ್ಲರನ್ನೂ ಒಂದುಗೂಡಿಸುವೆ: ಬಿ.ಶ್ರೀರಾಮುಲು

Prayagraj: ಕುಂಭಮೇಳದಲ್ಲಿ ಶ್ರೀರಾಮುಲು ದಂಪತಿಯಿಂದ ಪುಣ್ಯಸ್ನಾನ

Prayagraj: ಕುಂಭಮೇಳದಲ್ಲಿ ಶ್ರೀರಾಮುಲು ದಂಪತಿಯಿಂದ ಪುಣ್ಯಸ್ನಾನ

10-siruguppa

Siruguppa: ತಹಶೀಲ್ದಾರ್ ಗೆ ಬೆದರಿಕೆ ಪ್ರಕರಣ, ಕೇಸು ದಾಖಲು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.