ಉಕ್ರೇನಿನಿಂದ ಹುಟ್ಟಿದೂರಿಗೆ ಮರಳಿದ ನವೀನ್ ಕುಮಾರ್ : ಮನೆಗೆ ಶಾಸಕ ,ತಹಸೀಲ್ದಾರ್ ಭೇಟಿ
Team Udayavani, Mar 8, 2022, 11:51 AM IST
ಕುರುಗೋಡು: ಉಕ್ರೇನ್ ಲ್ಲಿ ಇದ್ದಾಗ ಬಾಂಬ್ ಸ್ಫೋಟದ ಸದ್ದು,ಕೇಳಿ ಆತಂಕ ಉಂಟಾಗುತಿತ್ತು, ಬಂಕರ್ ನಲ್ಲಿ ಕಾಲ ಕಳೆಯುತ್ತಿರುವುದರಿಂದ ಸರಿಯಾಗಿ ಊಟ ಮಾಡುತಿದ್ದೀಲ್ಲ.ಭಾರತ ಪ್ರದೇಶಕ್ಕೆ ಬಂದ ನಂತರ ತುಂಬಾ ಊಟ ಮಾಡಿದೆ.
ಇದು ಕುರುಗೋಡು ತಾಲೂಕಿನ ನವೀನ್ ಕುಮಾರ್ ಅವರ ಮಾತುಗಳಿವು,
ಇವರ ತಂದೆ ಜಗದೀಶ್ ಕಿರಾಣಿ ಸ್ಟೋರ್ ನಡೆಸುತ್ತಾರೆ. ತಾಯಿ ಸೈಲಾಜ್ ಮನೆಯ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಮಗ ಓದಿ ವೈದ್ಯನಾಗಬೇಕೆಂಬ ಕನಸಿನೊಂದಿದೆ ಪೋಷಕರು ಉಕ್ರೇನಿಗೆ ಕಳಿಸಿದ್ದರು.
ಉಕ್ರೇನಿನ ಯೂನಿವರ್ಸಟಿ ಆಪ್ ಝುಕರೂಜಿಯದಲ್ಲಿ ಎಂಬಿಬಿಎಸ್ ಮೊದಲನೇ ವರ್ಷ ಓದುತ್ತಿದ್ದ, ಮೂರೂವರಿ ತಿಂಗಳು ಉಕ್ರೇನಿ ನಲ್ಲಿ ಇದ್ದ ಅವರು ಯುದ್ಧಗ್ರಸ್ಥ ಉಕ್ರೆನಿನಿಂದ ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ.
ನವೀನ್ ಕುಮಾರ್ ಮನೆಗೆ ಬಂದ ವಿಷಯ ಕೇಳಿ ತಹಸೀಲ್ದಾರ್ ರಾಘವೇಂದ್ರ ರಾವ್, ಶಾಸಕ ಗಣೇಶ್, ಸಂಬಂದಿಕರು ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು.
ನಾವು ಓದುತಿದ್ದ ಕಾಲೇಜು ನಿಂದ ಸ್ವಲ್ಪ ದೂರದಲ್ಲಿ ಬಾಂಬ್ ಸ್ಫೋಟದ ಸದ್ದು ಕೇಳಿ ಆತಂಕವಾಗಿತ್ತು, ಅಲ್ಲಿಂದ ನಮ್ಮನ್ನು ಹಾಸ್ಟೆಲ್ ಗೆ ಶಿಫ್ಟ್ ಮಾಡಿದರು. ಬಳಿಕ ಸ್ವಯಂ ಸೇವಕರುಬಂದು ಆಹಾರ, ನೀರು ಒದಗಿಸುತಿದ್ದರು.ಆದಷ್ಟು ಕಡಿಮೆ ತಿಂದು ರೇಷನ್ ಉಳಿಸಿಕೊಳ್ಳಬೇಕು ಎಂದು ಹೇಳುತ್ತಿದ್ದರು ಹೀಗಾಗಿ ಹೊಟ್ಟೆ ತುಂಬಾ ಊಟ ಮಾಡಲು ಆಗುತ್ತಿರಲಿಲ್ಲ ಎಂದು ವಿದ್ಯಾರ್ಥಿ ನವೀನ್ ಕುಮಾರ್ ತಿಳಿಸಿದರು.
ರಾಜ್ಯದ ವಿದ್ಯಾರ್ಥಿನಿ ನವೀನ್ ಸಾವನ್ನಪ್ಪಿರುವ ವಿಷಯ ಗೊತ್ತಾದಾಗ ನಾವು ಭಾರತದ ಕಡೆಗೆ ಬರುತ್ತಿದೆವು.ವಿಷಯ ತಿಳಿದು ಬಹಳ ದುಖ್ಖ ವಾಯಿತು.ನಾವು ಸುರಕ್ಷಿತವಾಗಿ ತಲಪುವ ಭರವಸೆ ಇದ್ದರು ನಮ್ಮ ಪೋಷಕರು ಆತಂಕದಲ್ಲಿದ್ದರು.ಮಗನನ್ನು ಕಳೆದುಕೊಂಡಿರುವ ಅವರ ಪೋಷಕರಿಗೆ ಎಷ್ಟು ದುಃಖ್ಖ ಆಗಿರಬಹುದು. ಹಾರ್ಕಿವ್ ನಲ್ಲಿ ತುಂಬಾ ಯುದ್ಧ ನಡೆಯುತ್ತಿತ್ತು.ನವೀನ್ ಹೊರಗೆ ಬರಬಾರದಿತ್ತು, ಆಹಾರ ಕೊರತೆ ಇತ್ತು ಆದರೂ ತಾಳ್ಮೆ ವಹಿಸಬೇಕಿತ್ತು.ನಾವು ಭಾರತಕ್ಕೆ ಸುರಕ್ಷಿತವಾಗಿ ಮರಳಿ ಬರಬೇಕಾದರೆ ಜಿಲ್ಲಾಡಳಿತ ಹಾಗೂ ಮೀಡಿಯಾ ಪಾತ್ರ ಬಹಳ ಇದೆ ಎಂದು ಸ್ಮರಿಸಿದರು.
ನಮ್ಮ ದೇಶದಲ್ಲಿ ಎಂಬಿಬಿಎಸ್ ಓದಬೇಕಾದರೆ ಕೋಟಿ ಗಟ್ಟಲೆ ಶುಲ್ಕ ಇದೆ ಅಷ್ಟೊಂದು ಶುಲ್ಕ ಇದ್ದಾರೆ ಬಡ, ಮಧ್ಯಮ ವರ್ಗದವರ ಮಕ್ಕಳು ಓದುವುದಾದರು ಹೇಗೆ ಎಂದು ನವೀನ್ ಕುಮಾರ್ ಪ್ರೆಶ್ನೆಸಿದರು.
ನಿಟ್ ಪರೀಕ್ಷೆ ಬರೆದರೂ ಸೀಟು ಸಿಗುತ್ತಿಲ್ಲ. ಸ್ಪರ್ಧೆ ಜಾಸ್ತಿ ಆಗಿದೆ.ಮ್ಯಾನೇಜ್ ಮೆಂಟ್ ಕೋಟಾದಲ್ಲಿ ಶುಲ್ಕ ಕಡಿತಗೊಳಿಸಿ, ಓದಲು ಅವಕಾಶ ಕಲ್ಪಿಸಬೇಕು. ನಮ್ಮ ದೇಶದಲ್ಲಿ ಕಡಿಮೆ ಶುಲ್ಕ ದಲ್ಲಿ ಶಿಕ್ಷಣ ಕೊಟ್ಟರೆ ಯಾರು ಕೂಡ ಹೊರ ದೇಶಗಳಿಗೆ ಹೋಗುವುದಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಜನಾರ್ದನ ರೆಡ್ಡಿ ಬಳ್ಳಾರಿ ವನವಾಸ ಅಂತ್ಯ
Bellary: ಭ್ರಷ್ಟಾಚಾರ ಕ್ಷಮಿಸಲಾಗದು ಎಂದಿದ್ದ ಸಿದ್ದರಾಮಯ್ಯ ಈಗ ರಾಜೀನಾಮೆ ಕೊಡಬೇಕು: ರಾಮುಲು
Bellary; ಜೈಲಿನಲ್ಲಿಂದು ದರ್ಶನ್ ಐಟಿ ವಿಚಾರಣೆ; ಬಳ್ಳಾರಿಗೆ ಬಂದ ಅಧಿಕಾರಿಗಳು
Darshan ಭೇಟಿಗೆ ಮಾಹಿತಿ ಇಲ್ಲದೇ ಮತ್ತೊಮ್ಮೆ ಜೈಲಿಗೆ ಬಂದ ವಕೀಲರು
Bellary: ದರ್ಶನ್ ನನ್ನು ಭೇಟಿಯಾದ ವಕೀಲ ಸುನೀಲ್; ಹಲವು ವಿಚಾರಗಳ ಬಗ್ಗೆ ಚರ್ಚೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Dandeli : ಸರಣಿ ಕಳ್ಳತನ ಪ್ರಕರಣ… ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ
Mangaluru: ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡಕ್ಕೆ ಸಮ್ಮಾನ
Tusshar Kapoor: ʼಗೋಲ್ ಮಾಲ್ʼ ನಟ ತುಷಾರ್ ಕಪೂರ್ ಫೇಸ್ಬುಕ್ ಖಾತೆ ಹ್ಯಾಕ್
Karkala: ಹೊಸ್ಮಾರು ಬಳಿ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು
Hubli: ಬಂಡತನ ಇದ್ದರೆ ಏನು ಮಾಡುವುದಕ್ಕಾಗುತ್ತದೆ…; ಸಿಎಂ ಕುರಿತು ಶೆಟ್ಟರ್ ಮಾತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.