![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 31, 2022, 2:53 PM IST
ಕಂಪ್ಲಿ: ರಾಮಸಾಗರ ಗ್ರಾಮದ ಶ್ರೀ ಉಮಾಮಹೇಶ್ವರ (ಶ್ರೀ ನಗರೇಶ್ವರ) ಸ್ವಾಮಿಗೆ ಗ್ರಾಮದ ಸಕಲ ಸದ್ಭಕ್ತರು, ಗಣ್ಯರು, ದಾನಿಗಳ ನೆರವಿನಿಂದ ಆಕರ್ಷಕ ನೂತನ ರಥವನ್ನು ನಿರ್ಮಾಣ ಮಾಡಿದ್ದು ಹಿಂದೂ ನೂತನ ವರ್ಷವಾದ ಯುಗಾದಿ ಪಾಡ್ಯದಂದು ವಿವಿಧ ಹೋಮ ಹವನಗಳ ನಡೆಸಿ ಲೋಕಾರ್ಪಣೆ ಮಾಡಿ ರಥವನ್ನು ಎಳೆಯಲಿದ್ದಾರೆ.
ಗ್ರಾಮದ ಬಸ್ ನಿಲ್ದಾಣದ ಹತ್ತಿರವಿರುವ ಪುರಾತನ ಉಮಾಮಹೇಶ್ವರ (ನಗರೇಶ್ವರ) ಸ್ವಾಮಿಗೆ ಈ ಮೊದಲೇ ಎರಡು ತೇರುಗಳಿದ್ದು, ಅದರಲ್ಲಿ ದೊಡ್ಡ ತೇರು ಶಿಥಿಲಿಗೊಂಡಿದ್ದು, ಕಳೆದ ಹಲವು ವರ್ಷಗಳಿಂದ ಒಂದೇ ತೇರನ್ನು ಎಳೆಯುತ್ತಿದ್ದರು. ಕಳೆದ ವರ್ಷದಿಂದ ನೂತನ ಬೃಹತ್ ತೇರನ್ನು ನಿರ್ಮಿಸಲು ತೀರ್ಮಾನಿಸಿ ಉಮಾಮಹೇಶ್ವರ ಸೇವಾ ಟ್ರಸ್ಟ್ನ್ನು ರಚಿಸಿಕೊಂಡು ಗ್ರಾಮದ ಮುಖಂಡರಿಂದ, ಸಾರ್ವಜನಿಕರಿಂದ, ದಾನಿಗಳಿಂದ ದೇಣಿಗೆಯನ್ನು ಸಂಗ್ರಹಿಸಿ ಸುಮಾರು 22 ಲಕ್ಷರೂಗಳ ವೆಚ್ಚದಲ್ಲಿ ಇದೀಗ ನೂತನ ರಥವನ್ನು ನಿರ್ಮಿಸಿದ್ದಾರೆ.
ರಥ ಜೋಡಣೆ ಬಹುತೇಕ ಮುಗಿದಿದ್ದು, ಶುಕ್ರವಾರ ಹೋಮಹವನಗಳೊಂದಿಗೆ ರಥದ ಪೂಜೆ ನಡೆಯಲಿದೆ. ಯುಗಾದಿ ಪಾಡ್ಯ ಏ. 1ರಂದು ಬೆಳಗ್ಗೆ ಪುನಃ ವಿವಿಧ ಹೋಮ, ಹವನಗಳನ್ನು ನಡೆಸಿ ಮಡಿ ತೇರನ್ನು ಎಳೆಯಲಿದ್ದಾರೆ. ಸಂಜೆ 5 ಗಂಟೆಗೆ ಜೋಡಿ ಮಹಾರಥೋತ್ಸವ ಜರುಗಲಿದೆ.
ಮಹಾರಥೋತ್ಸವದಲ್ಲಿ ಸಾರ್ವಜನಿಕರು ಹೊಸ ವರ್ಷದ ಅಂಗವಾಗಿ ಹೊಸ ಹೊಸ ಬಟ್ಟೆಗಳನ್ನು ಧರಿಸಿ ಭಾಗವಹಿಸಿ ರಥಕ್ಕೆ ಹೂ, ಹಣ್ಣು, ಉತ್ತತ್ತಿಗಳನ್ನು ಎಸೆದು ಹರಕೆ ತೀರಿಸಲಿದ್ದಾರೆ.
Hosapete: ತುಂಬಿದ ಕೊಡ ತುಳುಕಿತಲೇ ಪರಾಕ್.. ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ
Kampli: ಕಣವಿ ತಿಮ್ಮಾಪುರದಲ್ಲಿ ಶ್ರೀ ಕೃಷ್ಣದೇವರಾಯನ ಕಾಲದ ತೆಲುಗು ಶಾಸನ ಪತ್ತೆ
BJP: ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಎಲ್ಲರನ್ನೂ ಒಂದುಗೂಡಿಸುವೆ: ಬಿ.ಶ್ರೀರಾಮುಲು
Prayagraj: ಕುಂಭಮೇಳದಲ್ಲಿ ಶ್ರೀರಾಮುಲು ದಂಪತಿಯಿಂದ ಪುಣ್ಯಸ್ನಾನ
Siruguppa: ತಹಶೀಲ್ದಾರ್ ಗೆ ಬೆದರಿಕೆ ಪ್ರಕರಣ, ಕೇಸು ದಾಖಲು
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.