ಗುರು ಸ್ಮರಣೆಯಿಂದ ಬದುಕು ಸಾರ್ಥಕ

ಚನ್ನಬಸವಾಶ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜನೆ

Team Udayavani, Jul 22, 2019, 2:55 PM IST

22-July-32

ಭಾಲ್ಕಿ: ಚನ್ನಬಸವಾಶ್ರಮದಲ್ಲಿ ನಡೆದ ಶ್ರೀ ಗುರು ಪೂಜಾ ಉತ್ಸವ ಕಾರ್ಯಕ್ರಮದಲ್ಲಿ ಧ್ವಜ ವಂದನ ನೆರವೇರಿಸಲಾಯಿತು.

ಭಾಲ್ಕಿ: ಗುರು ಎಂದರೆ ಜ್ಞಾನದ ಆಗರ. ಗುರುವಿನ ಸ್ಮರಣೆಯಲ್ಲಿ ಜೀವನ ಸಾಗಿಸಿದರೆ ಬದುಕು ಸಾರ್ಥಕವಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಕರ್ನಾಟಕ ಪ್ರಾಂತ ಸಹ ಸೇವಾ ಪ್ರಮುಖ, ಹಗರಿಬೊಮ್ಮನ ಹಳ್ಳಿಯ ದುರ್ಗಣ್ಣ ಹೇಳಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ರವಿವಾರ ಆಷಾಢ ಕೃಷ್ಣ ಚತುರ್ಥಿ ನಿಮಿತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜಿಸಿದ್ದ ಶ್ರೀ ಗುರು ಪೂಜಾ ಉತ್ಸವ ಕಾರ್ಯಕ್ರಮದಲ್ಲಿ ಅವರು ಬೌದ್ಧಿಕ್‌ ಪ್ರವಚನ ನೀಡಿದರು.

ನಮ್ಮ ದೇಶದ ಋಷಿಮುನಿಗಳ ಪರಂಪರೆ ಅಗಾಧವಾಗಿದೆ. ಅವರು ಜಗತ್ತಿಗೆ ಸಾಕಷ್ಟು ಜ್ಞಾನ ನೀಡಿದ್ದಾರೆ. ಆದರೆ ಅವರು ಯಾರೂ ತಮ್ಮ ಹೆಸರು ಹೇಳಿಕೊಂಡಿಲ್ಲ, ಆದರೆ ಜಗತ್ತಿನ ಅನೇಕ ದಾರ್ಶನಿಕರು ತಾವು ತಿಳಿಸಿದ ಜ್ಞಾನಕ್ಕೆ ತಮ್ಮ ಹೆಸರು ಕೊಟ್ಟಿದ್ದಾರೆ. ಮಾರ್ಕೋನಿಗಿಂತಲೂ ಮೊದಲೇ ರೇಡಿಯೋ ತರಂಗಳ ಬಗ್ಗೆ ಮಾಹಿತಿ ನೀಡಿದ್ದು ನಮ್ಮವರೇ ಆದ ವಿಜ್ಞಾನಿ ಸರ್‌ ಜಗದೀಶ ಚಂದ್ರ ಭೋಷ್‌. ಆದರೆ ಅವರು ಅದಕ್ಕೆ ತಮ್ಮ ಹೆಸರು ಕೊಟ್ಟಿಲ್ಲ. ಇಂತಹ ಮಹಾನ್‌ ಜ್ಞಾನಿಗಳು ನಮ್ಮಲ್ಲಿದ್ದಾರೆ. ಅವರ ಪರಂಪರೆಯೇ ನಮ್ಮ ಭಾರತ. ಇಂತಹ ಜ್ಞಾನಿಗಳ ನಾಡಿನಲ್ಲಿ ಜನಸಿದ ನಾವೇ ಧನ್ಯರು ಎಂದರು.

ನಮಗೆ ಹುಟ್ಟು ಗೊತ್ತಿಲ್ಲ, ಆದರೆ ಸಾವು ನಿಶ್ಚಿತ. ಜೀವನ ಸಾರ್ಥಕತೆ ಮಾಡಿಕೊಳ್ಳುವುದೇ ಬದುಕು. ಗುರುವಿಲ್ಲದೇ ಯಾರ ಜೀವನವೂ ಪರಿಪೂರ್ಣವಲ್ಲ. ಗುರುವಿಗೆ ಪ್ರಾಧಾನ್ಯತೆ ಇರುವುದು ಹಿಂದೂ ಧರ್ಮದಲ್ಲಿ ಮಾತ್ರ. ನಮ್ಮಿಂದ ಸಮಾಜಕ್ಕೇನಾದರೂ ಪುಣ್ಯದ ಕೆಲಸ ಮಾಡುವುದೇ ಸಾರ್ಥಕ ಜೀವನ. ಈ ಜೀವನದ ಅಂತಿಮ ಲಕ್ಷ ಮುಟ್ಟಿಸುವಾತನೆ ಗುರು. ಅದಕ್ಕಾಗಿ ಗುರುವಿಗೆ ಶರಣು ಹೋದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಮಕ್ಕಳ ತಜ್ಞ ಡಾ|ಯುವರಾಜ ಜಾಧವ, ಆತ್ಮ ಪರಮಾತ್ಮನನ್ನು ಸೇರುವ ಮಾರ್ಗ ತಿಳಿಸುವಾತನೇ ಗುರು. ಹೀಗಾಗಿ ನಮ್ಮ ಅಂತಿಮ ಲಕ್ಷ ಮುಟ್ಟಲು ಗುರುವಿಗೆ ಶರಣು ಹೋಗಬೇಕು ಎಂದು ಹೇಳಿದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ, ಬಿಜೆಪಿ ಪ್ರಮುಖ ಡಿ.ಕೆ.ಸಿದ್ರಾಮ, ಸುರೇಶ ಬಿರಾದಾರ, ಶಿವರಾಜ ಗಂದಗೆ, ಸೂರಜಸಿಂಗ್‌ ರಜಪೂತ, ಧನರಾಜ ನೀಲಂಗೆ, ಪ್ರಕಾಶ ಮಾಶೆಟ್ಟೆ ಮತ್ತಿತರರು ಇದ್ದರು. ಪ್ರಾರಂಭದಲ್ಲಿ ಧ್ವಜ ವಂದನ ಕಾರ್ಯಕ್ರಮ ನಡೆಯಿತು. ಭಗವಾ ಧ್ವಜಕ್ಕೆ ಎಲ್ಲರೂ ವಂದನೆ ಸಲ್ಲಿಸಿದರು. ಶಿವಕುಮಾರ ಕಂಜೋಳಗೆ ಸ್ವಾಗತಿಸಿದರು. ಶಿವಲಿಂಗ ಕುಂಬಾರ ನಿರೂಪಿಸಿದರು. ಈಶ್ವರ ರುಮ್ಮಾ ವಂದಿಸಿದರು.

ಟಾಪ್ ನ್ಯೂಸ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.