ರಾಗಿ ಬೆಳೆ ಖರ್ಚಿಗಿಂತ ಕೊಯ್ಲು ವೆಚ್ಚ ಜಾಸ್ತಿ !

ಮಳೆ ಹಾವಳಿ ಮಧ್ಯೆ ಅಳಿದುಳಿದ ರಾಗಿ ಫಸಲು ಕೊಯ್ಲಿಗೆ ಬೆಳೆಗಾರರು ಹೈರಾಣ

Team Udayavani, Nov 20, 2019, 4:13 PM IST

20-November-15

„ಎಚ್‌.ಬಿ. ನಿರಂಜನ ಮೂರ್ತಿ

ಭರಮಸಾಗರ: ಕಳೆದ ತಿಂಗಳು ಎಡೆಬಿಡದೆ ಸುರಿದ ಮಳೆಯಿಂದ ತೆನೆಗಟ್ಟಿದ ರಾಗಿ ಫಸಲಿಗೆ ಕಂಟಕ ಎದುರಾಗಿತ್ತು. ಇದೀಗ ಕಟಾವಿಗೆ ಬಂದಿರುವ ರಾಗಿ ಕೊಯ್ಲಿಗೆ ರೈತರಿಗೆ ದುಬಾರಿ ಕೂಲಿ ದರದ ಸಮಸ್ಯೆ ಎದುರಾಗಿದೆ.

ಚಿತ್ರದುರ್ಗ ತಾಲೂಕಿನಲ್ಲಿ ರಾಗಿ ಬಿತ್ತನೆ ಪ್ರದೇಶದ ಹೋಬಳಿವಾರು ವಿವರ ಇಂತಿದೆ. ಕಸಬಾ-1650 ಹೆಕ್ಟೇರ್‌, ಭರಮಸಾಗರ- 1260 ಹೆಕ್ಟೇರ್‌, ಹಿರೇಗುಂಟನೂರು- 620 ಹೆಕ್ಟೇರ್‌, ತುರುವನೂರು-1025 ಹೆಕ್ಟೇರ್‌ ಸೇರಿದಂತೆ 4555 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ.

ಸಿರಿಧಾನ್ಯ ಬೆಳೆಯಾಗಿರುವ ರಾಗಿಯನ್ನು ಕಳೆದ ವರ್ಷ ಸರ್ಕಾರ ಬೆಂಬಲ ಬೆಲೆಯಡಿ ಎಪಿಎಂಸಿ ಮಾರುಕಟ್ಟೆ ಖರೀದಿ ಕೇಂದ್ರಗಳ ಮೂಲಕ ಖರೀದಿ ಮಾಡಿತ್ತು. ಒಂದು ಎಕರೆ ರಾಗಿ ಫಸಲು ಕೊಯ್ಲಿಗೆ 8 ರಿಂದ 10 ಸಾವಿರ ರೂ.ಗಳನ್ನು ಗುತ್ತಿಗೆ ನೀಡಿ ಕೊಯ್ಲು ಮಾಡಿಸಬೇಕು. ಇಲ್ಲವೇ ಬೆಳಿಗ್ಗೆ 10 ಗಂಟೆಗೆ ಬಂದು ಸಂಜೆ 5ಕ್ಕೆ ಕೆಲಸ ಮುಗಿಸುವ ಕೂಲಿಕಾರರಿಗೆ 400 ರೂ. ನೀಡಬೇಕು. ಹೀಗಾಗಿ ಹಲವು ರೈತರು ದುಬಾರಿ ದರದ ರಾಗಿ ಕೊಯ್ಲಿನ ಸಮಸ್ಯೆಯಿಂದ ರಾಗಿ ಬಿತ್ತನೆಯಿಂದ ಹಿಂದೆ ಸರಿದಿದ್ದೂ ಇದೆ. ಪ್ರಸಕ್ತ ವರ್ಷ ಮಳೆ ತಡವಾಗಿ ಶುರುವಾಯಿತು. ಇದರಿಂದ ಮೆಕ್ಕೆಜೋಳ ಬಿತ್ತನೆ ಅವಧಿ ಮುಗಿದು ಕೊನೆಯ ಆಟ ಎಂಬಂತೆ ರಾಗಿ ಬಿತ್ತನೆ ಬಿಟ್ಟರೆ ಬೇರೆ ಬೆಳೆಗಳನ್ನು ಬೆಳೆಯಲು ಅವಕಾಶವಿಲ್ಲ.

ಹಾಗಾಗಿ ಅನಿವಾರ್ಯವಾಗಿ ರೈತರು ರಾಗಿ ಬಿತ್ತನೆ ಕಡೆ ಮುಖ ಮಾಡಿದ್ದರು. ರಾಗಿ ಬಿತ್ತನೆ ಪ್ರದೇಶ ಹೆಚ್ಚು: ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ರಾಗಿ ಬಿತ್ತನೆ ಪ್ರದೇಶ ಹೆಚ್ಚಿದೆ. ಎಕರೆಗೆ 15 ರಿಂದ 20 ಸಾವಿರ ರೂ.ಗಳನ್ನು ಖರ್ಚು ಮಾಡಿ ರಾಗಿ ಬೆಳೆದಿರುವ ರೈತ, ಇದೀಗ ಅದರ ಅರ್ಧದಷ್ಟು ಹಣವನ್ನು ಕೊಯ್ಲಿಗೆ ವ್ಯಯಿಸಬೇಕಿದೆ. ಈ ನಡುವೆ ಮಳೆಯಿಂದ ತೆನೆಗಟ್ಟಿದ ರಾಗಿ ಹೊಲಗಳಲ್ಲೇ ಉದುರಿದರೆ ಹುಲ್ಲು ನೆಲಕ್ಕೆ ಬಿದ್ದು ಹಾಳಾಗುತ್ತದೆ. ಈ ನಡುವೆ ರಾಗಿ ಹುಲ್ಲು ಮತ್ತು ಕಾಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೂಲಿಕಾರರು ಮತ್ತು ದುಬಾರಿ ಗುತ್ತಿಗೆ ದರಕ್ಕೆ ಬೆಳೆಗಾರರು ಹೈರಾಣಾಗಿದ್ದಾರೆ.

ಕೃಷಿ ಇಲಾಖೆ ಮೂಲಕ ಒದಗಿಸಲಾಗಿರುವ ಯಂತ್ರಗಳ ಮೂಲಕ ಬಿದ್ದಿರುವ ರಾಗಿ ಬೆಳೆ ಕಟಾವಿಗೆ ಮುಂದಾದರೆ ಕೆಲಸ ಪರಿಪೂರ್ಣವಾಗದು ಎಂಬ ಹಿನ್ನೆಲೆಯಲ್ಲಿ ಆ ಯಂತ್ರಗಳ ಕಡೆ ರೈತರು ತಿರುಗಿಯೂ ನೋಡುತ್ತಿಲ್ಲ. ಕುಟುಂಬಸ್ಥರೇ ಸೇರಿ ಆದಷ್ಟು ರಾಗಿ ಕೊಯ್ಲು ಮಾಡಿಕೊಳ್ಳಲು ಮುಂದಾದರೆ ಮತ್ತೆಲ್ಲಿ ಮಳೆ ಶುರುವಾಗಿ ಮತ್ತಷ್ಟು ಹಾಳು ಮಾಡುತ್ತದೆಯೋ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ಇದರಿಂದ ಅನಿವಾರ್ಯವಾಗಿ ಗುತ್ತಿಗೆ ನೀಡುವುದು ಅಥವಾ ಕೂಲಿಕಾರರ ಸಹಾಯದಿಂದ ಕೊಯ್ಲು ಮಾಡಬೇಕಿದೆ. ಒಟ್ಟನಲ್ಲಿ ರಾಗಿ ಬೆಳೆಯುವುದಕ್ಕಿಂತ ಅದರ ಕಟಾವಿಗೇ ಹೆಚ್ಚು ತಲೆ ಕೆಡಿಸಿಕೊಳ್ಳುವಂತಾಗಿದೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.