ಗಿಡ-ಮರಗಳ ಗೋಳು ಕೇಳ್ಳೋರ್ಯಾರು?

ಮರಗಳ ಬುಡದಲ್ಲಿ ತ್ಯಾಜ್ಯ ಸುರಿದು ಬೆಂಕಿ ಹಚ್ಚುವ ಕೃತ್ಯ ನಿರಂತರ ಅರಣ್ಯ ಇಲಾಖೆ ನಿರ್ಲಕ್ಷ್ಯ

Team Udayavani, Jan 1, 2020, 1:20 PM IST

1–January-11

ಭರಮಸಾಗರ: ಇಲ್ಲಿನ ಅಕ್ಕಮಹಾದೇವಿ ಪ್ರೌಢಶಾಲೆಯಿಂದ ಬಿಳಿಚೋಡು ಕಡೆ ಸಂಚರಿಸುವ ರಸ್ತೆಯ ಇಕ್ಕೆಲಗಳಲ್ಲಿನ ಬೇವು, ಹುಣಸೆ ಇತರೆ ಸಾಲು ಮರಗಳಡಿ ಅಡಕೆ ಸಿಪ್ಪೆ, ಇತರೆ ಕಸದ ತ್ಯಾಜ್ಯವನ್ನು ಮರಗಳಡಿ ಸುರಿಯಲಾಗುತ್ತಿದೆ. ಅಲ್ಲದೆ ಮರಗಳ ಬುಡದಲ್ಲಿ ಬೆಂಕಿ ಹಾಕುವ ಮೂಲಕ ಹಸಿರು ಮರಗಳ ಮಾರಣಹೋಮ ನಡೆಸಲಾಗುತ್ತಿದೆ.

ಈಗಾಗಲೇ ಇಲ್ಲಿನ ರಸ್ತೆ ಇಕ್ಕೆಲಗಳಲ್ಲಿನ ಮರಗಳಡಿ ಟ್ರ್ಯಾಕ್ಟರ್‌ಗಳ ಮೂಲಕ ತಂದ ಅಡಕೆ ಸಿಪ್ಪೆಯನ್ನು ಕಳೆದ ತಿಂಗಳಿನಿಂದ ಸುರಿಯಲಾಗುತ್ತಿದೆ. ಇದೀಗ ಸಿಪ್ಪೆ ಸೇರಿದಂತೆ ಸ್ಥಳೀಯರು ಬಿಸಾಡುವ ಕಸ ಸೇರಿ ಒಣಗಿದ ಕಸಕ್ಕೆ ಬೆಂಕಿ ಹಚ್ಚುವ ಪ್ರವೃತ್ತಿ ಶುರುವಾಗಿದೆ.

ಸೋಮವಾರ ಇಡೀ ದಿನ ಇಲ್ಲಿನ ಹುಣಸೆ ಮರದ ಬುಡದಲ್ಲಿ ಬೆಳಿಗ್ಗೆ 9 ಗಂಟೆ ವೇಳೆ ಕಿಡಿಗೇಡಿಗಳು ಹಚ್ಚಿದ ಬೆಂಕಿ ಸಂಜೆ 5ರವರೆಗೂ ಹೊತ್ತಿ ಉರಿದಿದೆ. ಇದರಿಂದ ಹುಣಸೆ ಮರದ ಬುಡ ಸುಟ್ಟು ಹೋಗಿದೆ.

ಅಲ್ಲದೆ ಉತ್ತಮ ಮಳೆಯಿಂದ ಸಮೃದ್ಧ ಹಸಿರಿನಿಂದ ಕಂಗೊಳಿಸುತ್ತಿದ್ದ ಮರದ ರೆಂಬೆ ಕೊಂಬೆಗಳಲ್ಲಿನ ಹಸಿರೆಲೆಗಳು ತರಗಲೆಗಳಂತೆ ಬೆಂಕಿಯ ಜಳಕ್ಕೆ ಉದುರಿದರೆ ಮೇಲ್ಭಾಗದ ರೆಂಬೆ ಕೊಂಬೆಗಳು ಸುಟ್ಟಂತಾಗಿವೆ. ಇಕ್ಕೆಲಗಳಲ್ಲಿ 100ಕ್ಕೂ ಹೆಚ್ಚು ಮರಗಳು ದ್ಯಾಪನಹಳ್ಳಿ ಕ್ರಾಸ್‌ ವರೆಗೆ ಬೆಳೆದು ಸಂಚಾರದಲ್ಲಿ ಒಂದಷ್ಟು ಹಸಿರು ವಾತಾವರಣ ಉಳಿದು ಸವಾರರ ಕಣ್ಮನ ಸೆಳೆಯುವ ಈ ಮರಗಳಿಗೆ ಅಡಕೆ ಸಿಪ್ಪೆ ಸೇರಿದಂತೆ ಕಸದ ರಾಶಿ ಬಂದು ಮರಗಳಡಿ ಬೀಳುತ್ತಿದೆ. ಒಣಗಿದ ಬಳಿಕ ಮರಗಳಡಿ ಬೆಂಕಿ
ಹಚ್ಚುವುದು ಕಂಡುಬರುತ್ತಿದೆ. ಇಲ್ಲಿನ ಮರ ಒಂದರ ಬಳಿ ಬೆಂಕಿ ತಗುಲಿ ಮರ ಸುಡುತ್ತಿರುವುದನ್ನು ತಡೆದು ಇಲ್ಲಿನ ಸಾಲು ಮರಗಳ ರಕ್ಷಣೆಗೆ ಧಾವಿಸುವಂತೆ ಜಿಲ್ಲಾ ಅರಣ್ಯ ಇಲಾಖೆಯ ಡಿಎಫ್‌ಒ ಅವರಿಗೂ ಮಾಹಿತಿ ನೀಡಲಾಗಿತ್ತು. ಅವರು ಈ ಬಗ್ಗೆ ಕ್ರಮ ಕೈಗೊಳ್ಳುವದಾಗಿ ತಿಳಿಸಿದ್ದರು.

ಬಳಿಕ ಅರಣ್ಯ ಇಲಾಖೆ ರೇಂಜರ್‌ ರುದ್ರಮುನಿ ಎಂಬುವರು ಕರೆ ಮಾಡಿ ಯಾವ ಸ್ಥಳದಲ್ಲಿ ಮರದ ಬಳಿ ಬೆಂಕಿ ಹಚ್ಚಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದಿದ್ದು ಬಿಟ್ಟರೆ ಸಂಜೆ 5ಗಂಟೆ ಬಳಿಕವೂ ಮರದ ಬಳಿ ಹಾಕಲಾಗಿದ್ದ ಅಡಕೆ ಸಿಪ್ಪೆ ತ್ಯಾಜ್ಯದಿಂದ ಹೊಗೆ ಬರುತ್ತಲೇ ಇತ್ತು. ಮರಗಳಡಿ ಈಗಾಗಲೇ ಸುರಿದಿರುವ ಕಸದ ತ್ಯಾಜ್ಯಕ್ಕೆ ಬರುವ ದಿನಗಳಲ್ಲಿ ಬೆಂಕಿ ಹಾಕುವುದು ಗ್ಯಾರಂಟಿ. ರಕ್ಷಣೆಗೆ ಧಾವಿಸಬೇಕಾದ ಅರಣ್ಯ ಮತ್ತು ಲೋಕೋಪೋಯೋಗಿ ಇಲಾಖೆ ಅಧಿಕಾರಿಗಳು ಎಚ್ಚೇತ್ತುಕೊಳ್ಳದೆ ಇರುವುದು ವಿಪರ್ಯಾಸ.

ಮರಗಳಡಿ ಕಸದ ರಾಶಿಯನ್ನು ಸುರಿದು ಬೆಂಕಿ ಹಚ್ಚುವ ಪ್ರವೃತ್ತಿ ಒಳ್ಳೇಯದಲ್ಲ. ಈಗಾಗಲೇ ಹೈವೇ ಇಕ್ಕೆಲಗಳಲ್ಲಿ ಹಾಗೂ ಭರಮಸಾಗರ ಮುಖ್ಯ ರಸ್ತೆಯ ಮರಗಳನ್ನು ರಸ್ತೆ ಅಗಲೀಕರಣದಡಿ ಕಡಿದು ಹಾಕಲಾಗಿದೆ. ಇತ್ತ ಬಿಳಿಚೋಡು ರಸ್ತೆಯಲ್ಲಿನ ಅಳಿದುಳಿದ ಮರಗಳನ್ನು ಬೆಂಕಿ ಹಾಕಿ ಸುಡುತ್ತಿರುವುದು ಘೋರ ಅನ್ಯಾಯ. ಮರಗಳ ರಕ್ಷಣೆಗೆ ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಧಾವಿಸಬೇಕು. ಮರಗಳಡಿ ಕಸ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜ್ಯೋತ್ಸವ,
ಭರಮಸಾಗರ.

ಮರದಡಿ ಬಿದ್ದ ಬೆಂಕಿಯನ್ನು ನಮ್ಮ ಮೋಟಿವೇಟರ್‌ನ್ನು ಸ್ಥಳಕ್ಕೆ ಕಳುಹಿಸಿ ಅವರ ಮೂಲಕ ನಂದಿಸಲಾಗಿದೆ. ಮರಳಡಿ ಬಿದ್ದ ಕಸ ತ್ಯಾಜ್ಯವನ್ನು ತೆಗೆಸಲಾಗುತ್ತದೆ.
ರುದ್ರಮುನಿ, ರೇಂಜರ್‌,
ಅರಣ್ಯ ಇಲಾಖೆ.

„ಎಚ್‌.ಬಿ. ನಿರಂಜನ ಮೂರ್ತಿ

ಟಾಪ್ ನ್ಯೂಸ್

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

mantrika kannada movie

Kannada Cinema; ಮಾಂತ್ರಿಕ ಆಟ ಶುರು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.