![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 16, 2021, 3:33 PM IST
ಬೀದರ: ತಾಲೂಕಿನ ಕೋಳಾರ (ಕೆ) ಗ್ರಾಮದಲ್ಲಿರುವ ರೇಷ್ಮೆ ಇಲಾಖೆಯ ಸುಮಾರು 49.23 ಎಕರೆ ಜಮೀನನ್ನು ಹಳ್ಳದಕೇರಿ ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಉಚಿತವಾಗಿ ಹಸ್ತಾಂತರಿಸಲು ಸರ್ಕಾರ ಆದೇಶಿಸಿದೆ ಎಂದು ಎಂಎಲ್ಸಿ ಅರವಿಂದಕುಮಾರ ಅರಳಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೀದರ ತೋಟಗಾರಿಕೆ ಕಾಲೇಜಿಗೆ ನಿಯಮದಂತೆ ಮೂಲ ಸೌಕರ್ಯಕ್ಕಾಗಿ 80 ಎಕರೆ ಜಮೀನು ಹೊಂದಿರಬೇಕೆಂಬ ನಿಯಮವಿದೆ. ಆದರೆ, ಈ ಕಾಲೇಜಿಗೆ 27.20 ಎಕರೆ ಮಾತ್ರ ಜಮೀನು ಇದೆ. ಕಳೆದ ಹಲವು ವರ್ಷಗಳಿಂದ ಕಾಲೇಜು ಉಳಿಸಿಕೊಳ್ಳುವ ಪ್ರಯತ್ನದ ಮಧ್ಯ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹಾಗೂ ಹಿಂದಿನ ಡಿಸಿ ಡಾ| ಮಹಾದೇವ ಜಿಲ್ಲಾ ಸಂಕೀರ್ಣ ನಿರ್ಮಾಣಕ್ಕೆ ರೇಷ್ಮೆ ಇಲಾಖೆ ಜಮೀನು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಈಗ ಕಾಲೇಜಿಗೆ ಜಮೀನು ನೀಡಬೇಕೆಂಬ ಆದೇಶ ನನ್ನಲ್ಲಿನ ಆತಂಕ ದೂರ ಆದಂತಾಗಿದೆ ಎಂದರು.
ಕಾಲೇಜಿನಲ್ಲಿ ಮೂಲ ಸೌಕರ್ಯಗಳ ಪರಿಶೀಲನೆಗಾಗಿ ಪ್ರತಿ 5 ವರ್ಷಕ್ಕೊಮ್ಮೆ ಬರುವ ಐಸಿಎಂಆರ್ ತಂಡವು ಆರಂಭದ 5 ವರ್ಷದಲ್ಲಿ ಇನ್ನಷ್ಟು ಜಮೀನು ಪಡೆಯಲು ಹೇಳಿತ್ತು. 2008ರಲ್ಲಿ ಅಂದಿನ ಡಿಸಿ ಹರ್ಷಗುಪ್ತ ರೇಷ್ಮೆ ಇಲಾಖೆಯ ಜಮೀನು ತೋರಿಸಿದ್ದರು. ನಂತರ ಡಿಸಿ ಪಿ.ಸಿ. ಜಾಫರ್ ಅವರೂ ಸಂಬಂಧಪಟ್ಟ ಇಲಾಖೆಗೆ ಈ ಕುರಿತು ಪತ್ರ ವ್ಯವಹಾರ ನಡೆಸಿದ್ದರೆಂದು ಮಾಹಿತಿ ನೀಡಿದರು.
2014ರಲ್ಲಿ ಸಿದ್ದರಾಮಯ್ಯ ಸರ್ಕಾರ ರೇಷ್ಮೆ ಇಲಾಖೆಗೆ ಸೇರಿದ ಸರ್ವೇ ನಂ. 287/1ರಲ್ಲಿ 40 ಎಕರೆ ಜಮೀನನ್ನು ಡಿಸಿ ನಿಗದಿಪಡಿಸಿದ ದರಕ್ಕೆ ಹಾಗೂ 20 ವಸತಿ ಗೃಹಗಳನ್ನು ಲೋಕೋಪಯೋಗಿ ಇಲಾಖೆ ನಿಗದಿಪಡಿಸುವ ದರದಂತೆ ತೋಟಗಾರಿಕೆ ವಿವಿಗೆ ಹಸ್ತಾಂತರಿಸಲು ಸಂಪುಟದಲ್ಲಿ ಒಪ್ಪಿಗೆ ನೀಡಿತ್ತು. ದರ ನಿಗದಿ ಬಳಿಕ ಕಾರಣಾಂತರಗಳಿಂದ ಭೂಮಿ ಹಸ್ತಾಂತರ ಕಾರ್ಯ ನನೆಗುದಿಗೆ ಬಿದ್ದಿತ್ತು ಎಂದು ತಿಳಿಸಿದರು.
ಕಳೆದ ಮಾ.20ರಂದು ಡಿಸಿಎಂ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಈ ವಿಷಯ ಗಮನಕ್ಕೆ ತಂದಾಗ ಕಾಲೇಜಿಗೆ ಜಮೀನು ಹಸ್ತಾಂತರ ಕುರಿತು ಅ ಧಿಕಾರಿಗಳಿಗೆ ಸೂಚನೆ ನೀಡಿದ್ದರು. ಜತೆಗೆ ಬೀದರನಲ್ಲಿಯೇ ತೋಟಗಾರಿಕೆ ಕಾಲೇಜು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ತೋಟಗಾರಿಕೆ ಸಚಿವರು ಮತ್ತು ಇಲಾಖೆ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತರಲಾಗಿತ್ತು ಎಂದರು.
ನಂತರ ಡಿ. 28ರಂದು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೇಷ್ಮೆ ಇಲಾಖೆಯ 49.23 ಎಕರೆ ಜಮೀನನ್ನು ತೋಟಗಾರಿಕೆ ಮಹಾವಿದ್ಯಾಲಯ ನಿರ್ಮಾಣದ ಉದ್ದೇಶಕ್ಕಾಗಿ ಉಚಿತವಾಗಿ ಹಸ್ತಾಂತರಿಸಲು ತೀರ್ಮಾನಿಸಲಾಗಿತ್ತು. ಜಮೀನು ಹಸ್ತಾಂತರ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಎಚ್. ವನಿತ್ ಆದೇಶ ಹೊರಡಿಸಿದ್ದಾರೆ. ರೇಷ್ಮೆ ಇಲಾಖೆಯಲ್ಲಿ ಉಳಿದ ಜಮೀನಿನಲ್ಲಿ ಇಲಾಖೆಗೆ ಜೀವ ತುಂಬಲು ಅಲ್ಲಿ ಸಂಶೋಧನಾ ಕೇಂದ್ರ ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ಅರಳಿ ತಿಳಿಸಿದರು.
ಜಿಲ್ಲೆಯ ಬಿಎಸ್ಎಸ್ಕೆ ಕಾರ್ಖಾನೆ ಬಿಜೆಪಿಯವರ ದುರುದ್ದೇಶದಿಂದ ಬಂದ್ ಆಗಿದೆ. ಸರ್ಕಾರ ಕೇವಲ 50 ಕೋಟಿ ರೂ. ಅನುದಾನ ನೀಡಿದರೆ ಖುದ್ದು ನಾನೇ ಆರಂಭಿಸುತ್ತೇನೆ. 200 ಕೋಟಿ ಖರ್ಚು ಮಾಡಿದರೂ ಕಾರ್ಖಾನೆ ಆರಂಭವಾಗಲ್ಲ ಎಂದು ಸಕ್ಕರೆ ಸಚಿವರಿಗೆ ತಪ್ಪು ಮಾಹಿತಿ ನೀಡಲಾಗಿದೆ.ಕಾರ್ಖಾನೆ ಪುನಶ್ಚೇತನಕ್ಕೆ ಅಗತ್ಯ ಹಣ ನೀಡಿ, ಇಲ್ಲವೇ ಖಾಸಗಿಯವರಿಗೆ ವಹಿಸಿ ರೈತರ ಹಿತ ಕಾಪಾಡಿ.
ಅರವಿಂದ ಅರಳಿ, ಎಂಎಲ್ಸಿ
Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್ ಪ್ರಕರಣದ ಆರೋಪಿಗಳ ಗುರುತು ಪತ್ತೆ
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.