![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Feb 17, 2022, 5:59 PM IST
ಬೀದರ: ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ನಲ್ಲಿ ಸಂವಿಧಾನದ 371(ಜೆ) ತಿದ್ದುಪಡಿ ಕಾಯ್ದೆ ಅನುದಾನದಡಿ ಜಿಲ್ಲೆಗೆ ಕೃಷಿ ಕಾಲೇಜು ಮಂಜೂರು ಮಾಡುವಂತೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಜಿಲ್ಲಾ ರೈತ ಸಂಘದ ಪದಾಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು. ಫಲವತ್ತಾದ ಮಣ್ಣು, ಉತ್ತಮ ಹವಾಮಾನ ಇರುವ ಕಾರಣ ಜಿಲ್ಲೆಯಲ್ಲಿ ವಿವಿಧ ಪದ್ಧತಿಗಳಲ್ಲಿ 52 ಬಗೆಯ ಬೆಳೆ ಬೆಳೆಯಲಾಗುತ್ತಿದೆ. ಜಿಲ್ಲೆಯ ಆರ್ಥಿಕತೆ ಒಕ್ಕಲುತನವನ್ನೇ ಅವಲಂಬಿಸಿದೆ ಎಂದು ಸಚಿವರ ಗಮನ ಸೆಳೆದರು.
ಸರ್ಕಾರ, ರಾಜ್ಯದಲ್ಲಿ 10 ಕೃಷಿ ವಲಯ ರಚಿಸಿದ್ದು, ಬೀದರ ವಲಯ 1 (ಅರೆ ಮಲೆನಾಡು) ರಲ್ಲಿ ಇದೆ. ಈಗಾಗಲೇ ವಲಯ 2ರಲ್ಲಿ ರಾಯಚೂರು ಕೃಷಿ ವಿವಿ ಅಡಿಯಲ್ಲಿ ಮೂರು ಕೃಷಿ ಕಾಲೇಜುಗಳು ಹಾಗೂ ಒಂದು ಕೃಷಿ ಎಂಜಿನಿಯರಿಂಗ್ ಕಾಲೇಜು ಇದೆ. ಆದರೆ, ಬೀದರನಿಂದ ದೂರ ಇರುವುದರಿಂದ ಬಡ ಕೃಷಿಕರ ಮಕ್ಕಳಿಗೆ ಕೃಷಿ ಅಧ್ಯಯನಕ್ಕೆ ತೊಡಕಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರಗಳಿವೆ. ಕೃಷಿಯಲ್ಲಿನ ಆಧುನಿಕ ತಾಂತ್ರಿಕತೆ ರೈತರಿಗೆ ತಲುಪಿಸಲು ಕೃಷಿ ಕಾಲೇಜು ಅವಶ್ಯ ಎಂದು ಮನವರಿಕೆ ಮಾಡಿದರು.
ಕೃಷಿ ಕಾಲೇಜಿಗೆ 70 ಎಕರೆ ಜಮೀನು ಬೇಕು. ಜನವಾಡ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ 36 ಎಕರೆ ಮತ್ತು ಹಳ್ಳದಕೇರಿ ಸಮೀಪದ ಕೃಷಿ ಸಂಶೋಧನಾ ಕೇಂದ್ರದಲ್ಲಿ 34 ಎಕರೆ ಜಮೀನು ಸೇರಿ ಒಟ್ಟು 70 ಎಕರೆ ಜಮೀನು ಲಭ್ಯ ಇದೆ. ಕೆವಿಕೆಯಲ್ಲಿ ಕೃಷಿ ಡಿಪ್ಲೊಮಾ ಕೋರ್ಸ್ಗಳು ನಡೆಯುತ್ತಿವೆ. ಇದಕ್ಕಾಗಿ 3.5 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಇದನ್ನು ಕೃಷಿ ಕಾಲೇಜಿಗೆ ಬೋಧನಾ ಕೊಠಡಿ, ಆಡಳಿತ ಕಚೇರಿ, ವಿದ್ಯಾರ್ಥಿಗಳ ವಸತಿಗೃಹ ಹಾಗೂ ಪ್ರಾಯೋಗಿಕ ಪಾಠ ಬೋಧನೆಗೆ ಬಳಸಿಕೊಳ್ಳಬಹುದು ಎಂದರು.
ಈ ವರ್ಷದಿಂದಲೇ ಮೊದಲ ವರ್ಷದ ಕೃಷಿ ವಿಷಯದ ಬೋಧನೆಗೆ ಕೃಷಿ ವಿವಿ ಅಧೀನದ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಡಿಪ್ಲೊಮಾ ಸಂಸ್ಥೆಗಳ ಸಿಬ್ಬಂದಿ ಸೇವೆ ಪಡೆಯಬಹುದಾಗಿದೆ. ರಾಯಚೂರು ಕೃಷಿ ವಿವಿ ಡಿನ್ಸ್ ಟೀಮ್ ಬೀದರನಲ್ಲಿ ಕೃಷಿ ಕಾಲೇಜು ಆರಂಭಿಸುವ ಕುರಿತು ಸರ್ಕಾರಕ್ಕೆ ಸಕಾರಾತ್ಮಕ ವರದಿ ಸಲ್ಲಿಸಿದೆ ಎಂದರು.
ಸಚಿವರು ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಉನ್ನತ ಅಧಿಕಾರಿಗಳಿಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದರು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ಶ್ರೀಮಂತ ಬಿರಾದಾರ, ನಾಗಯ್ಯ ಹಿರೇಮಠ, ಬಾಬುರಾವ್ ಜೊಳದಾಪಕಾ, ಪ್ರವೀಣ ಕುಲಕರ್ಣಿ ಸೇರಿದಂತೆ ಇತರರಿದ್ದರು.
Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್ ಪ್ರಕರಣದ ಆರೋಪಿಗಳ ಗುರುತು ಪತ್ತೆ
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ
You seem to have an Ad Blocker on.
To continue reading, please turn it off or whitelist Udayavani.