![Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ](https://www.udayavani.com/wp-content/uploads/2024/12/6-37-415x249.jpg)
ಬೆಳಗ್ಗೆ ನೀರಸ-ಸಂಜೆ ಬಿರುಸಿನ ಮತದಾನ
Team Udayavani, May 13, 2018, 3:17 PM IST
![bid-2.jpg](https://www.udayavani.com/wp-content/uploads/2018/05/13/bid-2.jpg)
ಬೀದರ: ಜಿಲ್ಲೆಯಲ್ಲಿ ಶನಿವಾರ ಮತದಾನವು ಸುಗಮ ಮತ್ತು ನೈತಿಕ ಚುನಾವಣೆ ಗುರಿಯಂತೆ ನಡೆಯಿತು. ಜಿಲ್ಲೆಯ
ಬಸವಕಲ್ಯಾಣ, ಹುಮನಾಬಾದ್, ಬೀದರ ದಕ್ಷಿಣ, ಬೀದರ, ಭಾಲ್ಕಿ ಮತ್ತು ಔರಾದ ಕ್ಷೇತ್ರ ಸೇರಿದಂತೆ ಆರೂ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ನಡೆಯಿತು.
ಕೆಲ ಮತಗಟ್ಟೆಗಳಲ್ಲಿ ಮತದಾನವು ಬೆಳಗ್ಗೆಯಿಂದಲೇ ಬಿರುಸಿನಿಂದ ಕೂಡಿತ್ತು. ಕೆಲ ಮತಗಟ್ಟೆಗಳಲ್ಲಿ ಮಧ್ಯಾಹ್ನದ ನಂತರ ಚುರುಕುಗೊಂಡಿತು. ಆರೂ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದ ಮತದಾನದ ಮುಕ್ತಾಯದ ಅವಧಿವರೆಗೆ ಯಾವುದೇ ತೊಂದರೆಯಿಲ್ಲದೇ ಶಿಸ್ತುಬದ್ಧವಾಗಿ ನಡೆಯಿತು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಸುವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿದರು.
ಬೆಳಗಿನ 9:40ರ ವೇಳೆಗೆ ಬೀದರ ಕ್ಷೇತ್ರ ವ್ಯಾಪ್ತಿಯ ಮರಕಲ್ನ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ
ಮತಚಲಾವಣೆಗೆ ಗ್ರಾಮಸ್ಥರು ಹೆಚ್ಚು ಸಂಖ್ಯೆಯಲ್ಲಿ ಸಾಲಾಗಿ ನಿಂತಿದ್ದು ಕಂಡು ಬಂದಿತು. ಮತಗಟ್ಟೆ ಸಂಖ್ಯೆ 36ರಲ್ಲಿ 1,182 ಮತದಾರರ ಪೈಕಿ 200, ಮತಗಟ್ಟೆ ಸಂಖ್ಯೆ 37ರಲ್ಲಿ 729 ಮತದಾರರ ಪೈಕಿ 100 ಜನರು ಮತದಾನ ಮಾಡಿದ್ದು ಕಂಡು ಬಂದಿತು.
ಬೆಳಗಿನ 10ರ ವೇಳೆಗೆ ಔರಾದ ಕ್ಷೇತ್ರ ವ್ಯಾಪ್ತಿಯ ಕೌಠಾ (ಬಿ)ನ ಮತಗಟ್ಟೆಗಳಲ್ಲಿ ಶೇ.20ರಷ್ಟು ಮತದಾನ ದಾಖಲಾಗಿತ್ತು. ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿದ್ದ ಮತಗಟ್ಟೆ ಸಂಖ್ಯೆ 264 ಹಾಗೂ 247 ಮತಗಟ್ಟೆಗಳಲ್ಲಿ ಮತದಾನ ಅಚ್ಚುಕಟ್ಟಾಗಿ ನಡೆದಿತ್ತು. ಬೆಳಗಿನ 10:20ರ ವೇಳೆಯಲ್ಲಿ ತಾಲೂಕಿನ ಅಲಿಯಂಬರ್ ಸರ್ಕಾರಿ ಶಾಲಾ
ಕಟ್ಟಡದಲ್ಲಿದ್ದ ಮತಗಟ್ಟೆ ಸಂಖ್ಯೆ 18ರಲ್ಲಿ ಶೇ.16ರಷ್ಟು ಹಾಗೂ 20ರಲ್ಲಿ ಶೇ.20ರಷ್ಟು ಮತದಾನವಾಗಿತ್ತು.
ಬೆಳಗ್ಗೆ 11ಕ್ಕೆ ಭಾಲ್ಕಿ ಕ್ಷೇತ್ರ ವ್ಯಾಪ್ತಿಯಲ್ಲಿನ ಕೆರೂರ ಸರ್ಕಾರಿ ಶಾಲಾ ಕಟ್ಟಡದಲ್ಲಿನ ಮತಗಟ್ಟೆ ಸಂಖ್ಯೆ 135ರಲ್ಲಿ ಒಟ್ಟು
ಮತದಾರರ ಪೈಕಿ ಶೇ.27ರಷ್ಟು ಜನರು ಮತಹಕ್ಕು ಚಲಾಯಿಸಿದ್ದರು. ಮಹಿಳೆಯರು ಸರದಿ ಸಾಲಿನಲ್ಲಿ ಕುಳಿತು ಮತಹಕ್ಕು ಚಲಾಯಿಸುವುದು ಕಂಡು ಬಂದಿತು.
11:45ರ ವೇಳೆಗೆ ಭಾಲ್ಕಿ ಮತಕ್ಷೇತ್ರದ 129 ಮತಗಟ್ಟೆಯಲ್ಲಿ ಮತದಾನದ ಪ್ರಮಾಣ ಶೇ.40ರಷ್ಟಾಗಿತ್ತು. ಮಧ್ಯಾಹ್ನ
12:15ರ ವೇಳೆಗೆ ಖಟಕ್ ಚಿಂಚೋಳಿಯ ಪಿಕೆಪಿಎಸ್ ಬ್ಯಾಂಕ್ ಕಟ್ಟಡದಲ್ಲಿದ್ದ ನಂ.239 ಮತಗಟ್ಟೆಯಲ್ಲಿ ಶೇ.50ರಷ್ಟು
ಮತದಾನವಾಗಿತ್ತು. 12:45ರ ವೇಳೆಗೆ ಚಳಕಾಪುರದ ಗ್ರಾಪಂ ಕಚೇರಿಯಲ್ಲಿದ್ದ ಸಂಖ್ಯೆ 247ರ ಮತಗಟ್ಟೆಯಲ್ಲಿ 1,321 ಮತದಾರರ ಪೈಕಿ 227 ಜನರು ಮತ ಚಲಾಯಿಸಿದರು.
ಮಧ್ಯಾಹ್ನ 1:25ರ ವೇಳೆಗೆ ಹುಮನಾಬಾದ ಕ್ಷೇತ್ರದ ಹಳ್ಳಿಖೇಡ (ಬಿ) ಸರ್ಕಾರಿ ಪ್ರೌಢಶಾಲೆ ಮತಗಟ್ಟೆ ನಂ.44ರಲ್ಲಿ ಶೇ.47ರಷ್ಟು ಹಾಗೂ ಕಟ್ಟಡದ ಬಲಭಾಗದಲ್ಲಿದ್ದ 44ಎ ಮತಗಟ್ಟೆಯಲ್ಲಿ ಶೇ.42.85ರಷ್ಟು ಮತದಾನವಾಗಿತ್ತು.
ಮಧ್ಯಾಹ್ನ 2 ಗಂಟೆ ವೇಳೆಗೆ ಬೀದರ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಆಣದೂರನ ಗ್ರಾಪಂ ಕಟ್ಟಡ ಆವರಣದಲ್ಲಿದ್ದ ನಂ.16 ಮತಗಟ್ಟೆಯಲ್ಲಿ ಮತದಾನ ಪ್ರಮಾಣವು ಶೇ.49.35ರಷ್ಟಾಗಿತ್ತು.
ಟಾಪ್ ನ್ಯೂಸ್
![Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ](https://www.udayavani.com/wp-content/uploads/2024/12/6-37-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ](https://www.udayavani.com/wp-content/uploads/2024/12/sid-1-150x87.jpg)
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
![police](https://www.udayavani.com/wp-content/uploads/2024/12/police-18-150x92.jpg)
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
![ಮಾಜಿ ಉಪ ಸಭಾಪತಿ ಶತಾಯುಷ್ಸಿ ಕೇಶವರಾವ ನಿಟ್ಟೂರಕರ ಅಸ್ತಂಗತ](https://www.udayavani.com/wp-content/uploads/2024/12/kieshavar-150x84.jpg)
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
![police](https://www.udayavani.com/wp-content/uploads/2024/12/police-13-150x92.jpg)
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
![ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ](https://www.udayavani.com/wp-content/uploads/2024/12/bidar-1-150x87.jpg)
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![7](https://www.udayavani.com/wp-content/uploads/2024/12/7-30-150x90.jpg)
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
![ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ](https://www.udayavani.com/wp-content/uploads/2024/12/ud-1-1-150x97.jpg)
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
![Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ](https://www.udayavani.com/wp-content/uploads/2024/12/6-37-150x90.jpg)
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ
![Atlee to collaborate with Salman Khan](https://www.udayavani.com/wp-content/uploads/2024/12/atlee-150x87.jpg)
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
![11-](https://www.udayavani.com/wp-content/uploads/2024/12/11-1-5-150x90.jpg)
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.