ಸ್ಲಂ ನಿವಾಸಿಗಳಿಂದ ಎಸಿಗೆ ಕಚೇರಿ ದಿಢೀರ್ ಮುತ್ತಿಗೆ
Team Udayavani, Dec 19, 2021, 3:16 PM IST
ಲಿಂಗಸುಗೂರು: ನಿವೇಶನ ಮಂಜೂರು ಮಾಡುವಂತೆ ಆಗ್ರಹಿಸಿ ತಾಲೂಕಿನ ವಿವಿಧಡೆಯ ಸ್ಲಂ ನಿವಾಸಿಗಳು ಎಸಿ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿದ ಪ್ರಸಂಗ ಶನಿವಾರ ನಡೆದಿದೆ.
ಪಟ್ಟಣ ಸೇರಿ ತಾಲೂಕಿನ ಹಟ್ಟಿ, ಮುದಗಲ್ ಸ್ಲಂ ನಿವಾಸಿಗಳು, ಮಂಗಳಮುಖೀಯರು, ವಿಧವೆಯರಿಗೆ ನಿವೇಶನ ನೀಡುವುದಾಗಿ ಈ ಹಿಂದೆ ಇದ್ದ ತಹಶೀಲ್ದಾರ್ ಶಂಶಾಲಂ ಭರವಸೆ ನೀಡಿ ಶನಿವಾರ ಕಚೇರಿ ಬರುವಂತೆ ಹೇಳಿದ್ದರಿಂದ ನಿವಾಸಿಗಳು ಶಾಂತಿಯುತವಾಗಿ ಎಸಿ ಕಚೇರಿ ಆವರಣದಲ್ಲಿ ಧರಣಿ ನಡೆಸುತ್ತಿದ್ದರು.
ಧರಣಿ ಸ್ಥಳಕ್ಕೆ ನೂತನ ತಹಶೀಲ್ದಾರ್ ಬಲರಾಮ್ ಕಟ್ಟಿಮನಿ ಆಗಮಿಸಿ ನಾನು ನಿನ್ನೆಯಷ್ಟೇ ಅಧಿಕಾರ ಸ್ವೀಕರಿಸಿದ್ದೇನೆ. ತಾಲೂಕಿನಲ್ಲಿ ಎಲ್ಲಿಲ್ಲಿ ಸರ್ಕಾರಿ ಜಾಗವಿದೆ ಎಂದು ಪರಿಶೀಲನೆ ನಡೆಸಿ ನಿವೇಶನ ಮಂಜೂರು ಮಾಡುವ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರೂ ಧರಣಿನಿರತರು ಪ್ರತಿಭಟನೆ ಕೈಬಿಡಲಿಲ್ಲ.
ತಹಶೀಲ್ದಾರ್ ಬಲರಾಮ್ ಕಟ್ಟಿಮನಿ ತೆರಳಿದ ನಂತರ ಏಕಾಏಕಿಯಾಗಿ ಎಸಿ ಕಚೇರಿಗೆ ಮುತ್ತಿಗೆ ಹಾಕಿ ಎಸಿಗೆ ಧಿಕ್ಕಾರ ಘೋಷಣೆ ಕೂಗಿದರು. ಸ್ಥಳಕ್ಕೆ ದೌಡಾಯಿಸಿದ ಸಿಪಿಐ ಮಹಾಂತೇಶ ಸಜ್ಜನ್, ಯಾವುದೇ ಪ್ರತಿಭಟನೆ ನಡೆಸಬೇಕಾದರೆ ಪೊಲೀಸ್ ಇಲಾಖೆ ಅನುಮತಿ ಕಡ್ಡಾಯವಾಗಿ ಪಡೆಯಲೇಬೇಕು. ಆದರೆ ದಿಢೀರ್ ಆಗಿ ಮುತ್ತಿಗೆ ಹಾಕಿದರೆ ಅದು ಕಾನೂನು ಉಲ್ಲಂಘನೆ ಮಾಡಿದಂತಾಗುತ್ತಿದೆ. ನಿಮ್ಮ ಬೇಡಿಕೆಗಳ ಬಗ್ಗೆ ಮೊದಲೇ ನಮಗೆ ಹೇಳಿದ್ದರೆ ಆಯಾ ಸಂಬಂಧಪಟ್ಟ ಅಧಿಕಾರಿಗಳನ್ನು ಇಲ್ಲಿಗೆ ಕರೆಸುವ ಪ್ರಯತ್ನ ಮಾಡುತ್ತೇವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.