![Mulabagil](https://www.udayavani.com/wp-content/uploads/2024/12/Mulabagil-415x249.jpg)
ಮೃತ್ಯುಕೂಪವಾದ ಮಾವಿನಹಳ್ಳಿ ಬ್ರಿಡ್ಜ್!
Team Udayavani, Nov 8, 2021, 1:17 PM IST
![15road](https://www.udayavani.com/wp-content/uploads/2021/11/15road-620x465.jpg)
ಭಾಲ್ಕಿ: ತಾಲೂಕು ಕೇಂದ್ರದಿಂದ ಸುಮಾರು 15 ಕಿ.ಮೀ ಅಂತರದಲ್ಲಿರುವ ಮಾವಿನಹಳ್ಳಿ ಗ್ರಾಮದ ಹಳ್ಳದ ಮೇಲೆ ನಿರ್ಮಿಸಲಾದ ಬ್ರಿಡ್ಜ್ ಅಕ್ಷರಶಃ ಮೃತ್ಯುಕೂಪವಾಗಿ ಮಾರ್ಪಟ್ಟಿದೆ.
ಭಾಲ್ಕಿಯಿಂದ ಘೊರವಾಡಿ ಮಾರ್ಗವಾಗಿ ಹುಮನಾಬಾದಗೆ ತೆರಳುವ ಮುಖ್ಯ ರಸ್ತೆ ಇದಾಗಿದೆ. ಈ ರಸ್ತೆ ಮೇಲೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ವಾಹನಗಳು, ಗೂಡ್ಸ್ ವಾಹನಗಳು, ಬೈಕ್, ಕಾರುಗಳು ಸೇರಿದಂತೆ ಸಾಕಷ್ಟು ವಾಹನಗಳಿಗೆ ಈ ರಸ್ತೆಯೇ ಮುಖ್ಯವಾಗಿದೆ.
ವಾಹನಗಳು ಮೇಲಿನಿಂದ ಸಂಚರಿಸುತ್ತಲಿದ್ದರೂ, ಸುಮಾರು ಮೂರು ತಿಂಗಳಿನಿಂದ ರಸ್ತೆಯ ಮೇಲಿನ ಬ್ರಿಡ್ಜ್ ಮಾತ್ರ ದುರಸ್ತಿ ಕಾಣದಿರುವುದು ವಿಪರ್ಯಾಸದ ಸಂಗತಿ. ಈ ರಸ್ತೆಯಿಂದ ಪ್ರತಿ ರವಿವಾರ ಮತ್ತು ಗುರುವಾರ ಹುಮನಾಬಾದ ತಾಲೂಕಿನ ಘೊರವಾಡಿ ಗ್ರಾಮದಲ್ಲಿಯ ಮುಸ್ಲಿಂ ದೇವರಿಗೆ ಪೂಜೆ ಸಲ್ಲಿಸಲು ಸಾವಿರಾರು ಭಕ್ತರು ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದ ಆಗಮಿಸುತ್ತಾರೆ. ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ಈ ರಸ್ತೆ ಮೂಲಕ ಓಡಾಡುವ ಎಲ್ಲರಿಗೂ ತಿಳಿದ ವಿಷಯ.
ಆದರೆ ತುಂಬ ದಿನಗಳಿಂದ ರಸ್ತೆ ಮಾತ್ರ ದುರಸ್ತಿ ಕಾಣದಾಗಿದ್ದು, ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಬ್ರಿಡ್ಜ್ ಹತ್ತಿರದ ಅರ್ಧ ರಸ್ತೆಯಲ್ಲಿಯೇ ವಾಹನಗಳು ಸಂಚರಿಸುತ್ತಿದ್ದು, ರಾತ್ರಿ ಸಮಯದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ಅಪರಿಚಿತ ವಾಹನಗಳು ಈ ರಸ್ತೆ ಮೇಲಿನಿಂದ ಓಡಾಡಿದರೆ ಹಳ್ಳಕ್ಕೆ ಬೀಳುವುದದಂತು ಗ್ಯಾರೆಂಟಿ ಎನ್ನುವಂತಾಗಿದೆ.
ಇದನ್ನೂ ಓದಿ: ಕುಂಜೂರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ
ಕಳೆದ ತಿಂಗಳಲ್ಲಿ ಶಾಸಕ ಈಶ್ವರ ಖಂಡ್ರೆ ಈ ರಸ್ತೆ ಮಾರ್ಗವಾಗಿ ಓಡಾಡುವಾಗ ಅವಸ್ಥೆ ಕಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ, ಸಂಬಂಧ ಪಟ್ಟವರು ರಸ್ತೆ ಮೇಲೆ ಮಣ್ಣು ಸುರಿದು ತೇಪೆ ಹಾಕಿದರು. ಆದರೆ ಕೆಲವೇ ದಿನಗಳಲ್ಲಿ ಆ ಮಣ್ಣೆಲ್ಲ ಕೊಚ್ಚಿ ಹೋಗಿ ಮತ್ತೆ ಅದೇ ಅವಸ್ಥೆ ಈ ರಸ್ತೆಗಾಗಿದೆ ಎನ್ನುತ್ತಾರೆ ಸ್ಥಳೀಯರು.
ರಸ್ತೆ ದುರಸ್ತಿಗಾಗಿ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೆ ಯಾರೊಬ್ಬರು ಇತ್ತ ನೋಡುತ್ತಿಲ್ಲ. ಯಾವುದಾದರೂ ಅನಾಹುತವಾದರೆ ಮಾತ್ರ ಅಧಿಕಾರಿಗಳು ಇತ್ತ ಗಮನ ಹರಿಸುವರೇ ನೋಡಬೇಕು. ಅಲ್ಲಿಯವರೆಗೆ ಇದರ ಅವಸ್ಥೆ ಇಷ್ಟೇ. -ಸುಭಾಷ ಹುಲಸೂರೆ, ಸ್ಥಳೀಯರು
ಪ್ರತಿವರ್ಷ ಮಳೆಯಾದರೆ ಹಳ್ಳ ತುಂಬಿ ಹರಿಯುತ್ತದೆ. ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗುತ್ತದೆ. ಈ ಕುರಿತು ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಬ್ರಿಡ್ಜ್ ಎತ್ತರ ಹೆಚ್ಚಿಸುವುದು ಸೇರಿದಂತೆ ಇದರ ದುರಸ್ತಿಗಾಗಿ ಸಾಕಷ್ಟು ಬಾರಿ ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ. -ಗೋವಿಂದರಾವ್ ಬಿರಾದಾರ ಮಾವಿನಹಳ್ಳಿ, ಜೆಡಿಎಸ್ ಮಾಜಿ ತಾಲೂಕು ಅಧ್ಯಕ್ಷ, ಭಾಲ್ಕಿ
ಟಾಪ್ ನ್ಯೂಸ್
![Mulabagil](https://www.udayavani.com/wp-content/uploads/2024/12/Mulabagil-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![police](https://www.udayavani.com/wp-content/uploads/2024/12/police-18-150x92.jpg)
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
![ಮಾಜಿ ಉಪ ಸಭಾಪತಿ ಶತಾಯುಷ್ಸಿ ಕೇಶವರಾವ ನಿಟ್ಟೂರಕರ ಅಸ್ತಂಗತ](https://www.udayavani.com/wp-content/uploads/2024/12/kieshavar-150x84.jpg)
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
![police](https://www.udayavani.com/wp-content/uploads/2024/12/police-13-150x92.jpg)
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
![ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ](https://www.udayavani.com/wp-content/uploads/2024/12/bidar-1-150x87.jpg)
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
![Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ](https://www.udayavani.com/wp-content/uploads/2024/12/vijayendra-2-150x78.jpg)
Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
![Mulabagil](https://www.udayavani.com/wp-content/uploads/2024/12/Mulabagil-150x90.jpg)
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
![Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್](https://www.udayavani.com/wp-content/uploads/2024/12/gpar-150x93.jpg)
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
![Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ](https://www.udayavani.com/wp-content/uploads/2024/12/pet-dog-150x84.jpg)
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
![Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ](https://www.udayavani.com/wp-content/uploads/2024/12/renukaswamy-150x103.jpg)
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
![11](https://www.udayavani.com/wp-content/uploads/2024/12/11-21-150x80.jpg)
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.