![kambala2](https://www.udayavani.com/wp-content/uploads/2025/02/kambala2-1-415x249.jpg)
![kambala2](https://www.udayavani.com/wp-content/uploads/2025/02/kambala2-1-415x249.jpg)
Team Udayavani, Oct 6, 2018, 12:41 PM IST
ಸಿಂದಗಿ: ಉತ್ತರಕರ್ನಾಟಕದ ಜಾನಪದ ಕಲಾವಿದರು ಯಾವುದೇ ಪ್ರಶಸ್ತಿ, ದಾಖಲೆಗೆ, ಫಲಾಪೇಕ್ಷೆಗೆ ಬೆನ್ನು ಬಿಳದೇ ತಮ್ಮ ಆತ್ಮ ತೃಪ್ತಿಗಾಗಿ ಕಲಾಪ್ರದರ್ಶನ ಮಾಡಿದ ಪುಣ್ಯಾತ್ಮರು ಎಂದು ಕರ್ನಾಟಕ ಜಾನಪದ ಅಕಾಡೆಮಿ ರಾಜ್ಯ ಸದಸ್ಯ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು.
ಶುಕ್ರವಾರ ಪಟ್ಟಣದ ಪಿಇಎಸ್ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಮತ್ತು ತಾಲೂಕಾ ಘಟಕದ ಅಡಿಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಚ್.ಎಲ್. ನಾಗೇಗೌಡರು ಕಟ್ಟಿದ ಕರ್ನಾಟಕ ಜಾನಪದ ಪರಿಷತ್ ಇಂದು ಟಿ. ತಿಮ್ಮೇಗೌಡರ ನೇತೃತ್ವದಲ್ಲಿ ನಾಡಿನ ಉದ್ದಗಲಕ್ಕೂ ಜಾನಪದ ಕಲಾವಿದರನ್ನು ಗುರುತಿಸುವ ಮೂಲಕ ತನ್ನದೆಯಾದ ಛಾಪು ಮೂಡಿಸಿದೆ. ಅವರಿಬ್ಬರ ಸದಾಶೆಯಂತೆ ಸಿಂದಗಿ ತಾಲೂಕು ಘಟಕ ಜಾನಪದ ಕಲಾವಿದರನ್ನು ಗುರುತಿಸುವುದರ ಮೂಲಕ ಉತ್ತಮ ಕಾರ್ಯ
ನಿರ್ವಹಿಸುತ್ತಿದೆ ಎಂದು ಪ್ರಶಂಸಿಸಿದರು.
ಜಾನಪದ ಕಲೆ ನಶಿಸಿಹೊಗುತ್ತಿದೆ. ರಾಜ್ಯದಲ್ಲಿ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಕಲಾವಿದರಿದ್ದಾರೆ. ಅದರಲ್ಲಿ ವಿಜಯಪುರ ಜಿಲ್ಲೆ ಹೆಚ್ಚಿನ ಕಲಾವಿದರ ಸಂಖ್ಯೆ ಹೊಂದಿದೆ ಎಂದು ಹೇಳಲು ಹೆಮ್ಮೆಯೆನಿಸುತ್ತಿದೆ. ಸರಕಾರ ಜಾನಪದ ಕಲಾವಿದರೆಗೆ ನೀಡುವ ಮಾಸಾಶನ 5 ಸಾವಿರಕ್ಕೆ ಹೆಚ್ಚಿಸಬೇಕು. ಕಲಾವಿದರ ವಯೋಮಿತಿಯನ್ನು 55ಕ್ಕೆ ಇಳಿಸಬೇಕು. ಕೇಂದ್ರ ಸರಕಾರ ಜಾನಪದ ಕಲಾವಿದರಿಗೆ ನೀಡುವ ಮಾಸಾಶನ ಮಾದರಿಯಲ್ಲಿ ರಾಜ್ಯ ಸರಕಾರ ಸೌಲತ್ತನ್ನು ನೀಡಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕ ಜಾನಪದ ಕಲಾವಿದರು ಸರಕಾರದಿಂದ ಸೌಲಭ್ಯ ಪಡೆದುಕೊಳ್ಳುವಲ್ಲಿ ಸಾಕಷ್ಟು ವಂಚಿತರಾಗಿದ್ದಾರೆ. ಇದಕ್ಕೆ ಕಾರಣ ಅವರ ಅನಕ್ಷರತೆ. ಆದ್ದರಿಂದ ಕಲಾವಿದರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಬಳುವಳಿಯಾಗಿ ಬಂದ ಜಾನಪದ ಕಲೆಯನ್ನು ಕಲಿಸಿಕೊಡವೇಕು. ಈ ಮೂಲಕ ಜಾನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಜಾನಪದ ಕಲಾವಿದರ ಪಾತ್ರ ಹಿರಿಯದಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪಿಇಎಸ್ ಸಂಸ್ಥೆಯ ಗೌರವಕಾರ್ಯದರ್ಶಿ ಬಿ.ಪಿ. ಕರ್ಜಗಿ ಮಾತನಾಡಿ, ಆಧುನಿಕ ಭರಾಟೆಯಲ್ಲಿ ಜಾನಪದ ಸಾಹಿತ್ಯ, ಕಲೆ ಮರೆಯಾಗುತ್ತಿದೆ. ಯುವಕರು ಜಾನಪದ ಉಳಿಸಿ ಬೆಳೆಸುವಲ್ಲಿ ಶ್ರಮಿಸಬೇಕು ಎಂದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್. ಪಾಟೀಲ ಇಬ್ರಾಹಿಂಪುರ ಅವರು ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಹೆಸರುವಾಸಿಯಾಗಿರುವ ಪೀಡೆ ಹಾಡುಗಳು, ಗೌರಿ, ಗಂಗೆ, ಶಿಗಿ, ಸೋಬಾನೆ, ಜೋಗುಳ, ಗಿಗೀ ಹಾಡುಗಳನ್ನು ಹಾಡುವ ಮೂಲಕ ಅವುಗಳನ್ನು ಉಳಿಸಿಬೆಳೆಸಿಕೊಂಡು ಬರಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ತಾಲೂಕಿನ ಆಸಂಗಿಹಾಳ ಗ್ರಾಮದ ಆರೂಢ ಮಠದ ಶಂಕರಾನಂದ ಮಹಾರಾಜರು, ಜಾನಪದ ಸಂಗೀತ ಗೋಷ್ಠಿ ಉದ್ಘಾಟಿಸಿದ ಕೆ.ಎಚ್. ಸೋಮಾಪುರ, ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ ತಾಲೂಕಾಧ್ಯಕ್ಷ ರಮೇಶ ಪೂಜಾರ, ಮುಖ್ಯಅತಿಥಿಯಾದ ಸಾಹಿತಿ, ಶಿಕ್ಷಕ ಜಗದೇವಪ್ಪ ಸಿಂಗೆ, ಕಲಬುರಗಿಯ ಜಾನಪದ
ಸಂಘಟಿಕ ನಾಗಯ್ಯ ಸ್ವಾಮೀಜಿ ಮಾತನಾಡಿದರು. ಪ್ರಾಚಾರ್ಯ ಆರ್.ವಿ. ಬಿಂಗೆ, ಪತ್ರಕರ್ತ ವೀರಣ್ಣ ಕಲಕೇರಿ, ಶಿವಕುಮಾರ ಶಿವಸಿಂಪಿಗೇರ, ಮಹಾಂತೇಶ ನಾಗೋಜಿ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ವಿರಬದ್ರೇಶ್ವರ ಬಜನ ತಂಡ, ಚಿದಾನಂದ ಗೌಡಗಾವಿ ತಂಡ, ಇಮಾಂಬಿ ನದಾಫ್ ತಂಡ, ವಿರೇಶ ಬಿಡಗೇರ ತಂಡ, ತಿಪ್ಪಣ್ಣ ಹೂಗಾರ ಸೇರಿದಂತೆ ವಿವಿಧ ಕಲಾವಿದರ ತಂಡಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಜಾನಪದ ವಿವಿಧ ಪ್ರಕಾರದ ಹಾಡುಗಳನ್ನು ಹಾಡಿದರು. ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೇವರಹಿಪ್ಪರಗಿ ತಾಲೂಕಿನ ಕೊಂಡಗೂಳಿಯ ಕೇಶರಾಜ ಪ್ರೌಢಶಾಲೆಯ ಮುಖ್ಯೋಧ್ಯಾಪಕ ಎನ್.ಎಸ್. ಬಸರೆಡ್ಡಿ ಅವರನ್ನು ಹಾಗೂ ಜಾನಪದ ಕಲಾವಿದರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕರಾದ ಎನ್.ಜಿ. ಮಠ, ಆರ್.ಬಿ. ಗೊಡಕರ, ಡಿ.ಕೆ. ನೆಲ್ಲಗಿ, ಎಸ್.ಎಸ್. ಮಗಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಜಾನಪದ ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಹಾವಿದ್ಯಾಲಯದ ವಿದ್ಯಾರ್ಥಿನಿಯರು
ಪ್ರಾರ್ಥನೆ ಹಾಡಿದರು. ಬಿ.ಡಿ.ಅಂಜುಟಗಿ ಸ್ವಾಗತಿಸಿದರು. ಜಿ.ಎಸ್.ಕಡಣಿ ನಿರೂಪಿಸಿದರು. ಆರ್.ಎಸ್.ಗಾಯಕವಾಡ ವಂದಿಸಿದರು.
ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ
Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ
Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !
Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Vijayapura: ರವಿ ಮೇಲಿನಕೇರಿ ಕೊ*ಲೆ ಸೇಡಿಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹ*ತ್ಯೆ?
You seem to have an Ad Blocker on.
To continue reading, please turn it off or whitelist Udayavani.