B. S. Yediyurappa; ಸಿಎಂ ಆಗಲು ಯೋಗೇಶ್ವರ್ ಕಾರಣ: ಯತ್ನಾಳ್
Team Udayavani, Oct 28, 2024, 12:54 AM IST
ವಿಜಯಪುರ: ಕಾಂಗ್ರೆಸ್ನಿಂದ 17 ಮಂದಿ ಶಾಸಕರು ಬಿಜೆಪಿಗೆ ಬಂದು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ
ಯಾಗಲು ಸಿ.ಪಿ. ಯೋಗೇಶ್ವರ್ ಕಾರಣ. ಆಗ ವಿಜಯೇಂದ್ರಜೀ ಇರಲಿಲ್ಲ.
ಪೌಡರ್, ಸ್ನೋ ಹೊಡೆದುಕೊಂಡು ಓಡಾಡುತ್ತಿದ್ದ. ಅಂಥವರನ್ನು ಈಗ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದು ಪಕ್ಷದ ದುರ್ದೈವ. ಈಗ ಹೊಂದಾಣಿಕೆ ಗಿರಾಕಿಗಳದ್ದೇ ಕಾಲವಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲೋದು ಖಚಿತ. ಅಲ್ಲಿ ಹಿಂದೂ ವರ್ಸಸ್ ಮುಸ್ಲಿಂ ಇದೆ. ಪಂಚಮಸಾಲಿ ಅಂತೆಲ್ಲಾ ಬಿಡಬೇಕು. ಹಿಂದೂ ಬಚೇಗಾತೋ ಹಮ್ ಬಚೇಗಾ (ಹಿಂದೂ ಉಳಿದರೆ, ನಾವು ಉಳಿಯುತ್ತೇವೆ). ಇಲ್ಲವಾದರೆ ಯಾವ ರೆಡ್ಡಿ, ಪಂಚಮಸಾಲಿ, ಗಾಣಿಗ, ದಲಿತರು ಯಾರೂ ಉಳಿಯಲ್ಲ. ನಾವು ಜಗಳವಾಡುತ್ತ ಹೋದರೆ ಸಬ್ ಹಮಾರಾ ಹೈ (ಎಲ್ಲವೂ ನಮ್ಮದೇ) ಎನ್ನುತ್ತಾರೆ. ಬಾಂಗ್ಲಾದಲ್ಲಿ ಏನಾಗುತ್ತಿದೆ? ಹೀಗಾಗಿ ನಾವು ಜಾತಿ ಬಿಟ್ಟು ಒಂದಾಗಬೇಕು. ಈಗ ಜಾತಿ ಹೋಗಿದೆ, ಕೇವಲ ಹಿಂದೂ ಎಂದಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mann Ki Baat: “ಡಿಜಿಟಲ್ ಅರೆಸ್ಟ್’ಗೆ ತುತ್ತಾಗದ ವಿಜಯಪುರ ವ್ಯಕ್ತಿಗೆ ಮೋದಿ ಮೆಚ್ಚುಗೆ
Basangouda Patil Yatnal: ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲು ಹುಚ್ಚು ಹಿಡಿದಿದೆಯಾ?
Waqf Property: ವಕ್ಫ್ ವಿವಾದ: ವಿಜಯಪುರ ರೈತರ ಅಹವಾಲು ಆಲಿಸಲು ಬಿಜೆಪಿಯಿಂದ ತಂಡ ರಚನೆ
Waqf; ವಿಜಯಪುರದಲ್ಲಿ ಗೆಜೆಟ್ ದೋಷದಿಂದ ರೈತರ ಜಮೀನಿನಲ್ಲಿ ಗೊಂದಲ: ಎಂ.ಬಿ.ಪಾಟೀಲ
Vijayapura: ಸೈಬರ್ ಕ್ರೈಂ; ನೊಂದವರ ಖಾತೆಗೆ 7.48 ಕೋಟಿ ರೂ. ಮರು ಜಮೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.