![Baba Waterfall:ಭಾರೀ ಫೇಮಸ್ಸು ಬಾಬಾ ಫಾಲ್ಸ್:ಅಂಬೋಲಿಗಿಂತ ಇಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕ](https://www.udayavani.com/wp-content/uploads/2024/07/Baba01-415x291.jpg)
ನಾಳೆ ಗುಬ್ಬಿ-ಅರಣ್ಯ-ಜಲ ಸಂರಕ್ಷಣೆ ಜಾಗೃತಿಗಾಗಿ ಸೈಕ್ಲಿಂಗ್
Team Udayavani, Mar 22, 2022, 4:40 PM IST
![27cycling](https://www.udayavani.com/wp-content/uploads/2022/03/27cycling-620x265.jpg)
ವಿಜಯಪುರ: ವಿಶ್ವ ಗುಬ್ಬಚ್ಚಿ ದಿನಾಚರಣೆ(ಮಾ. 20), ವಿಶ್ವ ಅರಣ್ಯ ದಿನಾಚರಣೆ (ಮಾ. 22) ಹಾಗೂ ವಿಶ್ವ ಜಲ ದಿನಾಚರಣೆ (ಮಾ. 23) ಅಂಗವಾಗಿ ಪರ್ಯಾವರಣ ಸಂರಕ್ಷಣಾ ವೇದಿಕೆಯಿಂದ ಮಾ. 23ರಂದು ನಗರದಲ್ಲಿ ಬೃಹತ್ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ.
ಪರಿಸರ ಸಂರಕ್ಷಣಾ ಗತಿವಿ ಸಂಘಟನೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಸೈಕಲ್ ಜಾಥಾ ಕುರಿತು ಸೋಮವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಬಸವರಾಜ ಬೈಜಚಬಾಳ ಹಾಗೂ ಸೈಕ್ಲಿಂಗ್ ಸಂಸ್ಥೆ ರಾಜ್ಯಾಧ್ಯಕ್ಷ ರಾಜು ಬಿರಾದಾರ, ವಿವಿಧ ಪರಿಸರ ಸಂರಕ್ಷಣೆ ಸಂಘಟನೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದರು.
ಸೈಕಲ್ ಜಾಥಾದಲ್ಲಿ ಸುಮಾರು 500 ಸೈಕ್ಲಿಸ್ಟ್ಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಗರದ ಬಂಜಾರಾ ಕ್ರಾಸ್ನಲ್ಲಿ ಮಾ. 23ರಂದು ಬೆಳಗ್ಗೆ 6ಕ್ಕೆ ಚಾಲನೆ ದೊರೆಯಲಿದ್ದು, ಲಿಂಗದ ಗುಡಿ, ಸಿದ್ಧೇಶ್ವರ ಗುಡಿ, ಮಹಾತ್ಮಾ ಗಾಂಧೀಜಿ ವೃತ್ತ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಐತಿಹಾಸಿಕ ಗಗನ ಮಹಲ್ ಬಂದು ತಲುಪಲಿದೆ ಎಂದು ವಿವರಿಸಿದರು.
ಜಿಲ್ಲಾಧಿಕಾರಿ ಸುನೀಲಕುಮಾರ, ಜಿ.ಪಂ. ಸಿಇಒ ರಾಹುಲ್ ಸಿಂಧೆ, ಎಸ್ಪಿ ಆನಂದಕುಮಾರ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಪರಿಸರದ ವೈವಿಧ್ಯತೆ ಸಂರಕ್ಷಣೆ ವಿಷಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಪರಿಸರಕ್ಕೆ ಪೂರಕವಾಗಿರುವ ಸೈಕ್ಲಿಂಗ್ ಮೂಲಕವೇ ಜಾಗೃತಿಗೆ ಮುಂದಾಗಿದ್ದೇವೆ ಎಂದರು.
ಹೆಚ್ಚುತ್ತಿರುವ ಮರಗಳ ವಿನಾಶದಿಂದ ಶುದ್ಧ ಗಾಳಿಗೆ ಸಂಚಕಾರ ಬಂದಿದೆ. ಪಕ್ಷಿ ಸಂಕುಲಕ್ಕೆ ಅದರಲ್ಲೂ ಗುಬ್ಬಿಗಳು ಅಳಿವಿನ ಅಂಚಿಗೆ ಬಂದು ತಲುಪಿವೆ. ಮತ್ತೂಂದೆಡೆ ಜಲ ಮಾಲಿನ್ಯ, ಜಲಮೂಲಗಳ ವಿನಾಶದಿಂದಾಗಿ ಮನುಕುಲ ಮಾತ್ರವಲ್ಲ ಇಡೀ ಜೀವವೈವಿಧ್ಯಕ್ಕೆ ಅಪಾಯದ ದುಸ್ಥಿತಿಗೆ ತಲುಪಿದೆ. ಇದನ್ನು ತಡೆಯಲು ಜನರದಲ್ಲಿ ಜಾಗೃತಿ ಮೂಡಿಸಲು ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಪರಿಸರಕ್ಕೆ ಮಾರಕವಾಗಿರುವ ನಿಷೇಧಿತ ಪ್ಲಾಷ್ಟಿಕ್ ಬಳಕೆ ಮಾಡದತೆ, ಪರಿಸರ ಸ್ನೇಹಿ ಚೀಲಗಳನ್ನು ಮಾರುಕಟ್ಟೆಗೆ ನಾವೇ ಕೊಂಡೊಯ್ದು ವಸ್ತುಗಳನ್ನು ಖರೀದಿಸುವ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಪರಿಶುದ್ಧ ಗಾಳಿ ಮಾತ್ರವಲ್ಲ ಪರಿಸರ ಸಂರಕ್ಷಣೆಯ ಪಾಠ ಕಲಿತಿದ್ದೇವೆ. ಹೀಗಾಗಿ ಸಸಿಗಳನ್ನು ನೆಟ್ಟು ಮರಗಳಾಗಿ ಬೆಳೆಸುವ ಮಹತ್ವ, ಮನೆಗಳ ಛಾವಣಿ ಮೇಲೆ ಹಸಿರು ಮನೆಗಳ ನಿರ್ಮಾಣ ಹಾಗೂ ಮನೆಗಳಲ್ಲಿನ ತ್ಯಾಜ್ಯದ ನೀರಿನ ಮರು ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.
ಮಳೆ ನೀರು ಕೊಯ್ಲು ಮೂಲಕ ಜಲ ಸಂರಕ್ಷಣೆ ಜೊತೆಗೆ ವಿದ್ಯುತ್ ಮಿತ ಬಳಕೆಯಿಂದ ಜಲ ಆಧಾರಿತ ವಿದ್ಯುತ್ ಉತ್ಪಾದನೆ ತಗ್ಗಸಿ ಹಾಗೂ ಸೌರ ವಿದ್ಯುತ್ ಬಳಕೆ ಮೂಲಕ ಪರಿಸರ ಸ್ನೇಹಿ ಇಂಧನ ಬಳಸುವ ಅಗತ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ನಡೆಸಿದ್ದೇವೆ ಎಂದರು.
ಎಲ್ಲಕ್ಕಿಂತ ಮುಖ್ಯವಾಗಿ ಪರಿಸರದ ಎಲ್ಲ ವಿಭಾಗಕ್ಕೆ ಅಪಾಯ ತಂದೊಡ್ಡಿರುವ ಪ್ಲಾಸ್ಟಿಕ್ ಮರು ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸುವ ಜೊತೆಗೆ, ಜನ ಸಮುದಾಯದ ಸಹಕಾರದಲ್ಲಿ ಅನುಷ್ಠಾನಕ್ಕೆ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.
ಪರಿಸರ ಸಂರಕ್ಷಣೆ ಗತಿವಿ ಸಂಸ್ಥೆಯ ವಿವಿಧ ವಿವಿಧ ವಿಭಾಗಗಳ ಪ್ರಮುಖರಾದ ಶಶಿಧರ ರೂಡಗಿ, ಪಲ್ಲವಿ ವಾಯದಂಡೆ, ಡಾ| ಬಾಬು ಸಜ್ಜನ ಇತರರು ಇದ್ದರು.
ಟಾಪ್ ನ್ಯೂಸ್
![Baba Waterfall:ಭಾರೀ ಫೇಮಸ್ಸು ಬಾಬಾ ಫಾಲ್ಸ್:ಅಂಬೋಲಿಗಿಂತ ಇಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕ](https://www.udayavani.com/wp-content/uploads/2024/07/Baba01-415x291.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಕಾರ್ಮಿಕರು ಚಹಾ ಕುಡಿಯಲು ಹೋಗಿದ್ದರಿಂದ ತಪ್ಪಿತು ದುರಂತ](https://www.udayavani.com/wp-content/uploads/2024/07/nandi-150x83.jpg)
Vijayapura; ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ; ತಪ್ಪಿದ ಭಾರಿ ಅನಾಹುತ
![Earthquake: ತಿಕೋಟಾ ಭಾಗದಲ್ಲಿ ಲಘು ಭೂಕಂಪ… ಮನೆಯಿಂದ ಹೊರ ಓಡಿಬಂದ ಜನ](https://www.udayavani.com/wp-content/uploads/2024/07/earthquake1-150x81.jpg)
Earthquake: ತಿಕೋಟಾ ಭಾಗದಲ್ಲಿ ಲಘು ಭೂಕಂಪ… ಮನೆಯಿಂದ ಹೊರ ಓಡಿಬಂದ ಜನ
![pejawar swamiji reacts to Rahul Gandhi’s Hindu remark on parliament](https://www.udayavani.com/wp-content/uploads/2024/07/pejara-150x83.jpg)
Hindu remark; ಅಂತವರನ್ನು ದೂರ ಇಡಬೇಕು..: ರಾಹುಲ್ ಹೇಳಿಕೆಗೆ ಪೇಜಾವರಶ್ರೀ ಕಿಡಿ
![Vijayapura: ಕೃಷ್ಣಾ ನದಿ ತೆಪ್ಪ ದುರಂತ… ರಫೀಕ್ ಶವ ಪತ್ತೆ, ರಕ್ಷಣಾ ಕಾರ್ಯಾಚರಣೆ ಮುಕ್ತಾಯ](https://www.udayavani.com/wp-content/uploads/2024/07/teppa-150x89.jpg)
Vijayapura: ಕೃಷ್ಣಾ ನದಿ ತೆಪ್ಪ ದುರಂತ… ರಫೀಕ್ ಶವ ಪತ್ತೆ, ರಕ್ಷಣಾ ಕಾರ್ಯಾಚರಣೆ ಮುಕ್ತಾಯ
![2-Vijayapura](https://www.udayavani.com/wp-content/uploads/2024/07/2-Vijayapura-150x90.jpg)
Vijayapura: ಕೃಷ್ಣಾ ನದಿ ತೆಪ್ಪ ದುರಂತ: ಮತ್ತೊಬ್ಬನ ಶವ ಪತ್ತೆ
MUST WATCH
ಹೊಸ ಸೇರ್ಪಡೆ
![Ranebennur: ಜ್ವರದಿಂದ ಬಳಲುತ್ತಿದ್ದ ಬಾಲಕ ಸಾವು; ಗ್ರಾಮದಲ್ಲಿ ಆತಂಕ](https://www.udayavani.com/wp-content/uploads/2024/07/ranebannur-150x83.jpg)
Ranebennur: ಜ್ವರದಿಂದ ಬಳಲುತ್ತಿದ್ದ ಬಾಲಕ ಸಾವು; ಗ್ರಾಮದಲ್ಲಿ ಆತಂಕ
![Baba Waterfall:ಭಾರೀ ಫೇಮಸ್ಸು ಬಾಬಾ ಫಾಲ್ಸ್:ಅಂಬೋಲಿಗಿಂತ ಇಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕ](https://www.udayavani.com/wp-content/uploads/2024/07/Baba01-150x105.jpg)
Baba Waterfall:ಭಾರೀ ಫೇಮಸ್ಸು ಬಾಬಾ ಫಾಲ್ಸ್:ಅಂಬೋಲಿಗಿಂತ ಇಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕ
![12](https://www.udayavani.com/wp-content/uploads/2024/07/12-5-150x90.jpg)
Bigg Boss: ಪತ್ನಿ ಬಗ್ಗೆ ಮಾತನಾಡಿದ್ದಕ್ಕೆ ಕಪಾಳಮೋಕ್ಷ; ಬಿಗ್ ಬಾಸ್ ಮನೆಯಲ್ಲಿ ಹೈಡ್ರಾಮಾ
![Ronny](https://www.udayavani.com/wp-content/uploads/2024/07/Ronny-150x83.jpg)
Ronny; ಕಿರಣ್ ರಾಜ್ ನಟನೆಯ ಸಿನಿಮಾದ ಹಾಡು ಬಂತು
![Karachi: ಪಾಕಿಸ್ತಾನ್ ಷೇರುಪೇಟೆ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ವಹಿವಾಟು ಸ್ಥಗಿತ](https://www.udayavani.com/wp-content/uploads/2024/07/Exchange-150x79.jpg)
Karachi: ಪಾಕಿಸ್ತಾನ್ ಷೇರುಪೇಟೆ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ವಹಿವಾಟು ಸ್ಥಗಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.