ತಮಟೆ ಚಳವಳಿಯಾಗಿ ಬದಲಾದ ದಲಿತರ ಧರಣಿ
Team Udayavani, Dec 28, 2021, 9:06 PM IST
ಮುದ್ದೇಬಿಹಾಳ: ತಂಗಡಗಿ ಪಿಡಿಒ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ, ಮುದ್ದೇಬಿಹಾಳ ಪಟ್ಟಣದಲ್ಲಿ ಎರಡು ಮದ್ಯದ ಅಂಗಡಿಗಳಿಗೆ ಅನಧಿಕೃತ ಪರವಾನಗಿ ನೀಡಿರುವುದನ್ನು ರದ್ದುಪಡಿಸುವಂತೆ ಆಗ್ರಹಿಸಿ ಮತ್ತು ಅಬಕಾರಿ ಇಲಾಖೆ ದುರಾಡಳಿತ ಖಂಡಿಸಿ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ತಾಲೂಕು ಶಾಖೆ ಪದಾಧಿಕಾರಿಗಳು ಇಲ್ಲಿನ ತಾಪಂ ಕಚೇರಿ ಎದುರು ಡಿ. 23ರಿಂದ ನಡೆಸುತ್ತಿರುದ ಧರಣಿ ಸತ್ಯಾಗ್ರಹ ಸೋಮವಾರ 4ನೇ ದಿನಕ್ಕೆ (ರವಿವಾರ ಹೊರತುಪಡಿಸಿ) ಕಾಲಿಟ್ಟಿದ್ದು ತಮಟೆ ಚಳವಳಿಯಾಗಿ ಮಾರ್ಪಾಡಾಯಿತು.
ಸಂಘಟನೆ ಸದಸ್ಯರು ತಾಪಂ ಕಚೇರಿಯಿಂದ ಅಬಕಾರಿ ಕಚೇರಿವರೆಗೆ, ಅಬಕಾರಿ ಕಚೇರಿಯಿಂದ ತಾಪಂ ಕಚೇರಿವರೆಗೆ ಪ್ರಮುಖ ರಸ್ತೆಯಲ್ಲಿ ತಮಟೆ ಬಾರಿಸುತ್ತ ತೆರಳಿದರು. ತಾಪಂ ಮತ್ತು ಅಬಕಾರಿ ಕಚೇರಿ ಎದುರು ಕೂಡಾ ಬಹಳ ಹೊತ್ತು ತಮಟೆ ಬಾರಿಸಿ ಆಕ್ರೋಶ ಹೊರಹಾಕಿದರು. ಈ ಬಾರಿ ತಮ್ಮ ಹೆಚ್ಚಿನ ಗಮನವನ್ನು ಅಬಕಾರಿ ಇಲಾಖೆ ವಿರುದ್ಧ ಕೇಂದ್ರೀಕರಿಸಿದ್ದಂತೆ ಕಂಡ ಮುಖಂಡರು ಮುದ್ದೇಬಿಹಾಳ ಪಟ್ಟಣದ ಸಿಎಲ್-2 ತೋರಗಲ್ಲ ಬಾರ್ ಮತ್ತು ಮಹಾಲಕ್ಷಿ ¾à ಬಾರ್ ರೆಸ್ಟೋರೆಂಟ್ನ ಸಿಎಲ್-9 ಮದ್ಯದ ಅಂಗಡಿ ಮಾಲಿಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಮುಖಂಡರಾದ ಹರೀಶ ನಾಟೀಕಾರ, ಬಸವರಾಜ ಪೂಜಾರಿ, ಪರಶುರಾಮ ಮುರಾಳ ಮತ್ತಿತರರು ಮಾತನಾಡಿ, ಅಬಕಾರಿ ಇಲಾಖೆ ಅಧಿಕಾರಿಗಳ ಮೀನ ಮೇಷದ ನಡವಳಿಕೆಯನ್ನು ಖಂಡಿಸಿದರು. ಮುಖಂಡರಾದ ಚನ್ನಪ್ಪ ವಿಜಯಕರ್, ಲಕ್ಷ ¾ಣ ವಡ್ಡರ, ತಿಪ್ಪಣ್ಣ ದೊಡಮನಿ, ಪ್ರಕಾಶ ಚಲವಾದಿ ಸರೂರ, ಶೇಖರ ಆಲೂರ, ತಂಗಡಗಿ ಗ್ರಾಪಂ ಮಾಜಿ ಅಧ್ಯಕ್ಷ ಸಂಗಯ್ಯ ಸಾರಂಗಮಠ, ಗೋವಿಂದ ಅರಮನಿ, ಸಂತೋಷ ಅಜಮನಿ, ಅಂಬರೀಷ ಹಂಗರಗಿ, ಪಾವಡೆಪ್ಪ ದೊಡಮನಿ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಹಲವರು ಪಾಲ್ಗೊಂಡಿದ್ದರು. ಈ ಮಧ್ಯೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಹೊಕ್ರಾಣಿ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿ ಕೈ ಬಿಡುವಂತೆ ಮನವೊಲಿಸುವ ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ಹೈಕಮಾಂಡ್ ಅನುಮತಿಸಿದರೆ ಬಸವಕಲ್ಯಾಣದಿಂದ ಬೆಂಗಳೂರಿಗೆ ಪಾದಯಾತ್ರೆ: ಶಾಸಕ ಯತ್ನಾಳ
MUDA; ಅವರು-ಇವರು ಕಳ್ಳರು ಎನ್ನೋದು ಬೇಡ, ರಾಜೀನಾಮೆ ಕೊಟ್ಟು ನೀವು ಸ್ವಚ್ಛವಾಗಿರಿ: ಯತ್ನಾಳ್
Award: 2023-24, 2024-25ನೇ ಸಾಲಿನ “ಗಡಿನಾಡ ಚೇತನ” ಪ್ರಶಸ್ತಿ ಪ್ರಕಟ
Muddebihal: ನಿಂತಿದ್ದ ಕ್ಯಾಂಟರ್ ಗೆ ಕಾರು ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು
ಎಲೆಕ್ಷನ್ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ರಾಜೀನಾಮೆ ಕೊಡಬೇಕಲ್ವಾ?: ಎಂ.ಬಿ.ಪಾಟೀಲ್ ಪ್ರಶ್ನೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ
Ibbani Tabbida Ileyali 50 ಸ್ಕ್ರೀನ್ನಿಂದ 200 ಸ್ಕ್ರೀನ್ವರೆಗೆ…
Agra: ಪ್ರವಾಸಿಗರಂತೆ ವೇಷ ಧರಿಸಿ ತಡರಾತ್ರಿ ಓಡಾಡಿದ ಮಹಿಳಾ ಪೋಲೀಸ್; ಮಂದೆ ಆಗಿದ್ದೇನು?
Hangyo Ice Cream: ಬಿಗ್ಬಾಸ್ ಕನ್ನಡ ಮನೆಯೊಳಗೆ ಹಾಂಗ್ಯೋ ಐಸ್ಕ್ರೀಂ!
Mangaluru: ಸೆನ್ ಪೊಲೀಸ್ ಠಾಣೆಗಳು ಮೇಲ್ದರ್ಜೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.