
ಕೃಷ್ಣೆ ತಟದಲ್ಲಿದ್ದರೂ ನೀರಿಗಾಗಿ ತಪ್ಪಿಲ್ಲಪರದಾಟ
Team Udayavani, Jan 4, 2018, 2:52 PM IST

ಆಲಮಟ್ಟಿ: ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಲ್ಲೊಂದಾದ ಕೃಷ್ಣಾ ಮೇಲ್ದಂಡೆ ಯೋಜನೆಯ 2017-18ನೇ ಸಾಲಿನ ಹಿಂಗಾರು ಹಂಗಾಮಿನ ಎರಡನೇ ಬಾರಿಯ ನೀರಾವರಿ ಸಲಹಾ ಸಮಿತಿ ಸಭೆ ಜ. 5ರಂದು ನಡೆಯಲಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಬುಧವಾರ 516.450 ಮೀ. ಎತ್ತರದಲ್ಲಿ 77.925 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕಳೆದ ಬಾರಿ ಜ. 3ರಂದು 513.81ಮೀ. ಎತ್ತರದಲ್ಲಿ 53.249 ಟಿಎಂಸಿ ಅಡಿ ನೀರು ಸಂಗ್ರಹವಿತ್ತು, ಇದರಲ್ಲಿ 17.620 ಟಿಎಂಸಿ ಅಡಿ ನೀರು ಜಲಚರಗಳಿಗಾಗಿ ಮೀಸಲಿರಿಸುವುದು ಕಡ್ಡಾಯವಾಗಿದ್ದರೂ ಅನಿವಾರ್ಯವಾಗಿ ಅದೇ ನೀರನ್ನು ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಪೂರೈಸಿದ್ದರೂ ಕೃಷ್ಣೆ ತಟದಲ್ಲಿದ್ದರೂ ಪರದಾಡುವಂತಾಗಿದೆ.
ಇತ್ತೀಚೆಗೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಉಮಾಶ್ರೀಯವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಹಿಂಗಾರು ಹಂಗಾಮಿಗೆ ಕಾಲುವೆಗಳಿಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ, ಮಾರ್ಚ್ 24ರವರೆಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಇದನ್ನು ನಂಬಿದ ರೈತರು ಅಲ್ಲಿವರೆಗೆ ಫಸಲಿಗೆ ಬರುವ ಬೆಳೆಗಳನ್ನು ಬಿತ್ತಿದ್ದಾರಲ್ಲದೇ ಈ ಭಾಗದಲ್ಲಿ ಉಳ್ಳಾಗಡ್ಡಿಯನ್ನು ಹೆಚ್ಚು ರೈತರು ಹಚ್ಚಿದ್ದಾರೆ.
ಇದರಲ್ಲಿ ನಿಗದಿಪಡಿಸಿದ ದಿನಕ್ಕಿಂತಲೂ ಮುಂಚೆಯೇ ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದರೆ ಕಾಲುವೆ ನೀರನ್ನು ನಂಬಿದ ರೈತರ ಗೋಳು ಹೇಳತೀರದಾಗುತ್ತದೆ. ಮಾರ್ಚ್ ನಂತರವೇ ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸುವಂತಾಗಬೇಕು. ಇನ್ನು ಆಲಮಟ್ಟಿ ಜಲಾಶಯಕ್ಕಾಗಿ ಭೂಮಿ ಕಳೆದುಕೊಂಡಿರುವ ಅಖಂಡ ಜಿಲ್ಲೆಯ ರೈತರ ಹಿತ ಕಾಪಾಡಲು ಸರ್ಕಾರ ಆಂತರಿಕವಾಗಿ ಜಲಾಶಯ ವ್ಯಾಪ್ತಿಗೆ ಸಂಬಂಧಿ ಸಿದಂತೆ ಮೊದಲು ಈ ಭಾಗಕ್ಕೆ ನೀರು ಕೊಡಬೇಕು ಎನ್ನುತ್ತಾರೆ
ಪ್ರಗತಿಪರ ರೈತ ಶಾಂತಪ್ಪ ಮನಗೂಳಿ.
ನೀರಾವರಿ ಪ್ರದೇಶ: ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯದಿಂದ ಒಟ್ಟು 1,33,300 ಹೆಕ್ಟೇರ್ ಪ್ರದೇಶ ನೀರಾವರಿಗೊಳಪಡಲಿದೆ. ಅದರಲ್ಲಿ 83 ಕಿ.ಮೀ. ಉದ್ದದ ಆಲಮಟ್ಟಿ ಎಡದಂಡೆ ಕಾಲುವೆಯ 40 ವಿತರಣಾ ಕಾಲುವೆಗಳಿಂದ ಸುರಪುರ, ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿ ತಾಲೂಕಿನ 20,235 ಹೆ. ಪ್ರದೇಶ, 62 ಕಿ.ಮೀ. ಉದ್ದದ ಆಲಮಟ್ಟಿ ಬಲದಂಡೆ ಕಾಲುವೆಯ 32 ವಿತರಣಾ ಕಾಲುವೆಗಳಿಂದ ಹುನಗುಂದ ಹಾಗೂ ಬಾಗಲಕೋಟೆ ತಾಲೂಕಿನ 9,900 ಹೆ. ಪ್ರದೇಶ, ತಿಮ್ಮಾಪುರ ಏತ ನೀರಾವರಿ ಯೋಜನೆಯ ಡಿಸಿ-1ರ 52 ಕಿ.ಮೀ. ಉದ್ದದ ಕಾಲುವೆಯ 26 ವಿತರಣಾ ಕಾಲುವೆಗಳಿಂದ 12,400 ಹೆ. ಪ್ರದೇಶ, ತಿಮ್ಮಾಪುರ ಏತ ನೀರಾವರಿ ಯೋಜನೆಯ ಡಿಸಿ-2ರ 33 ಕಿ.ಮೀ. ಉದ್ದ ಕಾಲುವೆಯ 18 ವಿತರಣಾ ಕಾಲುವೆಯಿಂದ ಬಾಗಲಕೋಟೆ ತಾಲೂಕಿನ 4 ಸಾವಿರ ಹೆಕ್ಟೇರ್ ಪ್ರದೇಶ, ಮುಳವಾಡ ಏತ ನೀರಾವರಿ ಯೋಜನೆಯ 17 ಕಿ.ಮೀ. ಉದ್ದದ ಪೂರ್ವ ಕಾಲುವೆಯ 7 ವಿತರಣಾ ಕಾಲುವೆಗಳಿಂದ ಬ.ಬಾಗೇವಾಡಿ ತಾಲೂಕಿನ 6 ಸಾವಿರ ಹೆ. ಪ್ರದೇಶ, 78 ಕಿ.ಮೀ. ಉದ್ದದ ಪಶ್ಚಿಮ ಕಾಲುವೆಯ 43 ವಿತರಣಾ ಕಾಲುವೆಯಿಂದ ಬ.ಬಾಗೇವಾಡಿ, ವಿಜಯಪುರ ಹಾಗೂ ಜಮಖಂಡಿ ತಾಲೂಕಿನ 16 ಸಾವಿರ ಹೆ. ಪ್ರದೇಶ, ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪಶ್ಚಿಮ ಕಾಲುವೆಯು 54 ಕಿ.ಮೀ. ಉದ್ದದ 24 ವಿತರಣಾ ಕಾಲುವೆಯಿಂದ ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿ ತಾಲೂಕಿನ 5 ಸಾವಿರ ಹೆ.ಪ್ರ. ಮತ್ತು 3 ಕೆರೆಗಳನ್ನು ತುಂಬಿಸಲಾಗಿದೆ.
ರೊಳ್ಳಿ-ಮನ್ನಿಕೇರಿ ಯೋಜನೆಯ 2,500 ಹೆ. ಪ್ರದೇಶದ ಪೈಕಿ 790 ಹೆ.ಪ್ರ. ಹಾಗೂ ಸೊನ್ನ ಏತ ನೀರಾವರಿ ಯೋಜನೆಯ ಒಂದು ಸಾವಿರ ಹೆ.ಪ್ರ.ದ ಪೈಕಿ 547 ಹೆ.ಪ್ರ, ತೆಗ್ಗಿ-ಸಿದ್ದಾಪುರ ಯೋಜನೆಯ 3 ಸಾವಿರ ಹೆ.ಪ್ರ, ಪೈಕಿ 472 ಹೆ.ಪ್ರದೇಶಗಳು ಬೀಳಗಿ ತಾಲೂಕಿನಲ್ಲಿ ನೀರಾವರಿಗೊಳಪಡುತ್ತಿದೆ.
ರಾಮಥಾಳ ಏತ ನೀರಾವರಿ ಯೋಜನೆಯ 51 ಕಿ.ಮೀ. ಉದ್ದದ ಪೂರ್ವ ಕಾಲುವೆಯ 20 ವಿತರಣಾ ಕಾಲುವೆ ಜಾಲದಿಂದ 6 ಸಾವಿರ ಹೆ.ಪ್ರ, 62 ಕಿ.ಮೀ. ಉದ್ದದ ಪಶ್ಚಿಮ ಕಾಲುವೆಯ 24 ವಿತರಣಾ ಕಾಲುವೆಗಳ ಮೂಲಕ 6,900 ಹೆ.ಪ್ರ, ಇನ್ನೂ ಹನಿ ನೀರಾವರಿ ಯೋಜನೆಯ ಪೂರ್ವ ಕಾಲುವೆಯಿಂದ 12,300 ಹೆ.ಪ್ರ, ಪಶ್ಚಿಮ ಕಾಲುವೆ ಮೂಲಕ 11,700 ಹೆ. ಪ್ರದೇಶ ಹುನಗುಂದ ತಾಲೂಕಿನಲ್ಲಿ ನೀರಾವರಿಗೆ ಒಳಪಡುತ್ತಿದೆ ಎಂದು ಕೆಬಿಜೆಎನ್ಎಲ್ ತಿಳಿಸಿದೆ.
ಶಂಕರ ಜಲ್ಲಿ
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ

State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ

Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.