ಕೃಷಿ ಸಂಕಷ್ಟಗಳ ಪರಿಹಾರಕ್ಕೆ ರೈತರ ಒಗ್ಗೂಡುವಿಕೆ ಅಗತ್ಯ
Team Udayavani, Feb 19, 2022, 5:21 PM IST
![24crop](https://www.udayavani.com/wp-content/uploads/2022/02/24crop-620x399.jpg)
![24crop](https://www.udayavani.com/wp-content/uploads/2022/02/24crop-620x399.jpg)
ವಿಜಯಪುರ: ಕೃಷಿ ಪ್ರಧಾನ ಭಾರತದಲ್ಲಿ ರೈತರು ಪರಿಶ್ರಮ ವಹಿಸಿ ಬೆಳೆ ಬೆಳೆದಾಗ ಮಾತ್ರವೇ ದೇಶವಾಸಿಗಳು ನೆಮ್ಮದಿಯಿಂದ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯ. ಆದರೆ ಪ್ರಸ್ತುತ ಸಂದರ್ಭದಲ್ಲಿ ಕೃಷಿ ವ್ಯವಸ್ಥೆ ಹಲವು ಸಮಸ್ಯೆ ಎದುರಿಸುತ್ತಿದೆ. ರೈತನಿಗೆ ಬೆಲೆ ನೀಡುವಲ್ಲಿ ಮೋಸ, ತೂಕದಲ್ಲಿ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸಂಗಮೇಶ ಸಗರ ಹೇಳಿದರು.
ಕೋಡಿಹಳ್ಳಿ ಚಂದ್ರಶೇಖರ ಬಣದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯಪುರ ತಾಲೂಕಿನ ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಿಸಿ ಮಾತನಾಡಿದ ಅವರು, ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ರೈತರೆಲ್ಲರನ್ನೂ ಸಂಘಟಿತ ವ್ಯವಸ್ಥೆಗೆ ತರಬೇಕಿದೆ ಎಂದರು.
ಯಾವೊಬ್ಬ ರೈತನಿಗೂ ಅನ್ಯಾಯವಾದರೆ ರೈತ ಸಂಘಟನೆ ಧ್ವನಿ ಎತ್ತಿ, ನ್ಯಾಯ ಒದಗಿಸುವುದು ಮೂಲ ಉದ್ದೇಶ. ಅಲ್ಲದೇ ಸರ್ಕಾರ ರೈತರಿಗಾಗಿ ರೂಪಿಸುವ ಯೋಜನೆಗಳನ್ನು ಅರ್ಹ ಪ್ರತಿಯೊಬ್ಬ ರೈತನಿಗೂ ತಿಳಿಸುವ ಮಹತ್ತರ ಜವಾಬ್ದಾರಿ ನಿರ್ವಹಿಸಬೇಕಿದೆ ಎಂದರು.
ವಿಜಯಪುರ ತಾಲೂಕಾಧ್ಯಕ್ಷರಾಗಿ ನೇಮಕಗೊಂಡ ರಾಕೇಶ ಕೋಟಿ, ಉಪಾಧ್ಯಕ್ಷ ಪ್ರತಾಪ ನಾಗರಗೋಜಿ, ಸಂಚಾಲಕರನ್ನಾಗಿ ಚಂದ್ರಶೇಖರ ನಾಗರಗೋಜಿ ಅವರನ್ನು ಆದೇಶ ಪ್ರತಿ ನೀಡಿ, ಹಸಿರು ಶಾಲು ಹೊದಿಸಿ ಸನ್ಮಾನಿಸಲಾಯಿತು.
ನೂತನ ಪದಾಧಿಕಾರಿಗಳಿಗೆ ಸಂಘಟನೆಯನ್ನು ಬಲಪಡಿಸಲು ವಿಜಯಪುರ ತಾಲೂಕಿನ ಎಲ್ಲ ಹೋಬಳಿ ಮತ್ತು ಗ್ರಾಮಗಳಲ್ಲಿ ರೈತರೊಂದಿಗೆ ಸಂಪರ್ಕ ಇರಿಸಿಕೊಳ್ಳಬೇಕು. ಜಾತಿ, ಮತ, ಪಕ್ಷ ಪಂಗಡದ ಹಮಗಿಲ್ಲದೇ ರೈತರೆಲ್ಲರೂ ಸಂಘಟಿತರಾಗಿ ಅನ್ಯಾಯದ ವಿರುದ್ಧ ಧ್ವನಿ ಎತ್ತುಂವತೆ ಜಾಗೃತಿ ಮೂಡಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ](https://www.udayavani.com/wp-content/uploads/2025/02/tipper-150x99.jpg)
![ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ](https://www.udayavani.com/wp-content/uploads/2025/02/tipper-150x99.jpg)
ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ
![Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ](https://www.udayavani.com/wp-content/uploads/2025/02/vijayapura-1-150x74.jpg)
![Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ](https://www.udayavani.com/wp-content/uploads/2025/02/vijayapura-1-150x74.jpg)
Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ
![10](https://www.udayavani.com/wp-content/uploads/2025/02/10-15-150x80.jpg)
![10](https://www.udayavani.com/wp-content/uploads/2025/02/10-15-150x80.jpg)
Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !
![Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್](https://www.udayavani.com/wp-content/uploads/2025/02/vijya-150x84.jpg)
![Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್](https://www.udayavani.com/wp-content/uploads/2025/02/vijya-150x84.jpg)
Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
![VJP-Bagappa](https://www.udayavani.com/wp-content/uploads/2025/02/VJP-Bagappa-1-150x90.jpg)
![VJP-Bagappa](https://www.udayavani.com/wp-content/uploads/2025/02/VJP-Bagappa-1-150x90.jpg)
Vijayapura: ರವಿ ಮೇಲಿನಕೇರಿ ಕೊ*ಲೆ ಸೇಡಿಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹ*ತ್ಯೆ?