ಆಡು-ಕುರಿಗಳಿಗೆ ಕಾಡುತ್ತಿದೆ ಪಿಪಿಆರ್‌ ರೋಗ ಭೀತಿ

ಆಡುಗಳನ್ನು ಕೂಡಲೆ ಹಿಂಡಿನಿಂದ ಬೇರ್ಪಡಿಸಿ ಪ್ರತ್ಯೇಕವಾಗಿಟ್ಟು ಉಪಚರಿಸಬೇಕು

Team Udayavani, Sep 6, 2021, 6:03 PM IST

ಆಡು-ಕುರಿಗಳಿಗೆ ಕಾಡುತ್ತಿದೆ ಪಿಪಿಆರ್‌ ರೋಗ ಭೀತಿ

ಇಂಡಿ: ಕುರಿಗಳಿಗೆ ಪಿಪಿಆರ್‌ ರೋಗ ಆವರಿಸುತ್ತಿದೆ. ಈ ರೋಗ ಬಂದಲ್ಲಿ ಆಡುಗಳು ಮೇವು ತಿನ್ನುವುದು ಕಡಿಮೆ ಮಾಡಿ, ನೆಗಡಿ, ಜ್ವರ, ಭೇದಿ ಮತ್ತು ಇತರೆ ಲಕ್ಷಣಗಳು ಕಾಣಿಸುತ್ತವೆ. ರೋಗದ ಬಗ್ಗೆ ನಿರ್ಲಕ್ಷ ಮಾಡದೆ ಪಶು ವೈದ್ಯರನ್ನು ಸಂಪರ್ಕಿಸಿ ಎಂದು ಪಶು ವಿಜ್ಞಾನಿ ಡಾ| ಸಂತೋಷ ಶಿಂಧೆ ತಿಳಿಸಿದರು.

ಶನಿವಾರ ತಾಲೂಕಿನ ಝಳಕಿ, ಲೋಣಿ ಹಾಗೂ ತದ್ದೆವಾಡಿ ಗ್ರಾಮದ ಆಡು ಸಾಕಾಣಿಕೆ ಮಾಡುತ್ತಿರುವ ರೈತರ ಜಮೀನುಗಳಿಗೆ ಭೇಟಿ ನೀಡಿ ಇದರ ಪರಿಶೀಲನೆ ಮಾಡಿ ರೈತರಿಗೆ ಅವರು ತಿಳಿವಳಿಕೆ ಹೇಳಿದರು. ಪಿಪಿಆರ್‌ ರೋಗ ಪ್ಯಾರಮಿಕೊÕ ಗುಂಪಿಗೆ ಸೇರಿದ ಮಾರಿºಲಿ ಎಂಬ ವೈರಾಣುದಿಂದ ಕುರಿ ಮತ್ತು ಮೇಕೆಗಳಲ್ಲಿ ರೋಗ ಬರುತ್ತದೆ. ಈ ರೋಗಕ್ಕೆ ಆಡುಗಳ ಪ್ಲೇಗ್‌ ಎಂದು ಕರೆಯುತ್ತಾರೆ.

ರೋಗ ಬಂದ ಹಿಂಡಿನಲ್ಲಿ ಶೇ. 100 ಆಡುಗಳು ಅಥವಾ ಕುರಿಗಳು ರೋಗಕ್ಕೆ ತುತ್ತಾಗುತ್ತವೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನಿಡದಿದ್ದರೆ ಶೇ. 90 ಆಡುಗಳು ಅಥವಾ ಕುರಿಗಳು ಸಾವನ್ನುಪ್ಪತ್ತವೆ. ಈರೋಗಕ್ಕೆಕಡಿಮೆ(ಒಂದುವರ್ಷದೊಳಗೆ) ವಯಸ್ಸಿನ ಆಡು ಅಥವಾ ಕುರಿಗಳು ಹೆಚ್ಚಾಗಿ ತುತ್ತಾಗುತ್ತವೆ. ವೈರಾಣು ರೋಗಗ್ರಸ್ತ ಕುರಿಯ ಸಿಂಬಳ, ಮಲ ಮತ್ತು ಕಣ್ಣಿನ ಕೀವು ಮಿಶ್ರಿತ ಪಿಸಿರಿನಲ್ಲಿದ್ದು ಕಲುಷಿತಗೊಂಡ ನೀರು ಅಥವಾ ಮೇವಿನ ಮೂಲಕ ಹರಡುತ್ತದೆ. ಈ ವೈರಾಣು ಗಾಳಿ ಮೂಲಕ ಆರೋಗ್ಯವಂತ ಕುರಿಗಳಿಗೂ ಬರುವ ಸಾಧ್ಯತೆ ಇದೆ.

ಜೊತೆಯಲ್ಲಿ ಬೇರೆ ಪ್ರದೇಶದಿಂದ ಖರೀದಿ ಮಾಡಿ ಸಾಕುತ್ತಿರುವ ಹಿಂಡಿನಲ್ಲಿ ಈ ರೋಗ ಹೆಚ್ಚಾಗಿ ಕಾಣಬಹುದಾಗಿದೆ ಎಂದರು. ರೋಗದ ಲಕ್ಷಣಗಳು: ತೀವ್ರ ಜ್ವರ, ಮೊದಲು ನೀರಿನಂತರ ಸಿಂಬಳ ಬರುವುದು, ನಂತರ ಕಣ್ಣುಗಳಿಂದ ಮತ್ತು ಹೊಳ್ಳೆಗಳಿಂದ ಹಳದಿ ಕೀವು ಮಿಶ್ರಿತ ದ್ರವ ಹೊರಬರುತ್ತದೆ. ಈ ರೋಗದಲ್ಲಿ ಭೇದಿ (ದುರ್ವಾಸನೆ) ಕಾಣಬಹುದು. ರೋಗ ಕಾಣಿಸಿಕೊಂಡ 3-4 ನಾಲ್ಕು ದಿನಗಳಲ್ಲಿ ತುಟಿ, ವಸಡು, ದವಡೆ ಮತ್ತು ನಾಲಿಗೆ ಮೇಲೆ ಹುಣ್ಣುಗಳು ಕಾಣಿಸಿಕೊಂಡು, ನಂತರ ಕೊಳೆತು ಮೇಲ್ಪದರವು ಉದುರಿ ಹೋಗುವಂತಾಗುತ್ತದೆ.
ಉಸಿರಾಟದ ತೊಂದರೆ ಮತ್ತು ನಿರ್ಜಲೀಕರಣದಿಂದಾಗಿ ಕುರಿಗಳು ನಿತ್ರಾಣಗೊಂಡು5-10ದಿನದಲ್ಲಿಸಾವನ್ನಪ್ಪುತ್ತವೆ. ಗರ್ಭ ಧರಿಸಿದ ಕುರಿ ಮತ್ತು ಮೇಕೆಗಳು ಕಂದು ಹಾಕಬಹುದು.

ರೋಗನಿಯಂತ್ರಣ-ನಿರ್ವಹಣೆ: ರೋಗಪೀಡಿತ ಕುರಿ, ಆಡುಗಳನ್ನು ಕೂಡಲೆ ಹಿಂಡಿನಿಂದ ಬೇರ್ಪಡಿಸಿ ಪ್ರತ್ಯೇಕವಾಗಿಟ್ಟು ಉಪಚರಿಸಬೇಕು. ಕುರಿ ಅಥವಾ ಆಡುಗಳ ಮನೆಯಲ್ಲಿ ಸ್ವತ್ಛತೆ ಕಾಪಾಡಬೇಕು.

ಆಡುಗಳ ಮನೆಯನ್ನು ಫಿನೈಲ್‌ ಅಥವಾ ಶೇ. 5 ಸೋಡಿಯಂ ಹೈಪೋಕ್ಲೋರೈಡ್‌ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಬೇಕು, ರೋಗಗ್ರಸ್ತ ಆಡುಗಳಿಗೆ ರೋಗ ಬರದಂತೆ ತಡೆಯಲು 3 ವರ್ಷಕ್ಕೊಮ್ಮೆ ಲಸಿಕೆಯನ್ನು ಮಾರ್ಚ್‌ ಅಥವಾ ಏಪ್ರಿಲ್‌ ತಿಂಗಳಲ್ಲಿ 4-6 ತಿಂಗಳ ಮೇಲ್ಪಟ್ಟ ಕುರಿ ಅಥವಾ ಆಡುಗಳಿಗೆ ತಪ್ಪದೆ ಹಾಕಿಸಬೇಕು. ಈ ತರಹದ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಪಶು ಆಸ್ಪತ್ರೆ ಭೇಟಿ ನೀಡಿ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಮಾಹಿತಿಗಾಗಿ ಡಾ| ಸಂತೋಷ ಶಿಂಧೆ (8791107090) ಅವರನ್ನು ಸಂಪರ್ಕಿಸಬಹುದು.

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ

ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ

Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ

Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ

10

Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !

Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

VJP-Bagappa

Vijayapura: ರವಿ ಮೇಲಿನಕೇರಿ ಕೊ*ಲೆ ಸೇಡಿಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹ*ತ್ಯೆ?

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.