Golgumbaz Express ರೈಲು ಸೇವೆ ಪಂಢರಪುರಕ್ಕೆ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ

ವಿಜಯಪುರ ರೈಲು ನಿಲ್ದಾಣದಲ್ಲಿ ಸಂಸದ ಜಿಗಜಿಣಗಿ ಚಾಲನೆ

Team Udayavani, Sep 5, 2023, 5:03 PM IST

Golgumbaz Express ರೈಲು ಸೇವೆ ಪಂಢರಪುರಕ್ಕೆ ವಿಸ್ತರಣೆ: ಸಂಸದ ಜಿಗಜಿಣಗಿ ಚಾಲನೆ

ವಿಜಯಪುರ : ಮೈಸೂರು- ಸೋಲಾಪುರ ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲು ಪಂಢರಪುರಕ್ಕೆ ವಿಸ್ತರಣೆಯಾಗಿದೆ. ವಿಜಯಪುರ ಸಂಸದ ರಮೇಶ ಜಿಗಜಿಣಗಿ ಮಂಗಳವಾರ ಬೆಳಿಗ್ಗೆ ವಿಜಯಪುರ ರೈಲು ನಿಲ್ದಾಣದಲ್ಲಿ ಪಂಢರಪುರ ವರೆಗೆ ಸಂಚಾರ ವಿಸ್ತರಣೆಯಾಗಿರುವ ಮೈಸೂರು ಗೋಲಗುಂಜ ರೈಲಿಗೆ ಹಸಿರು ನಿಶಾನೆ ತೋರಿಸಿ, ಚಾಲನೆ ನೀಡಿದರು.

ಪಂಡರಪುರ ವರೆಗೆ ರೈಲು ಸಂಚಾರಕ್ಕೆ ಚಾಲನೆ ನೀಡಿ, ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂದ ರಮೇಶ ಜಿಗಜಿಣಗಿ, ವಿಜಯಪುರ, ಬಾಗಲಕೋಟೆ, ಗದಗ ಸೇರಿದಂತೆ ಉತ್ತರ ಕರ್ನಾಟಕದ ಭಾಗದ ಜನರು ಪಂಡರಾಪುರಕ್ಕೆ ರೈಲು ಪ್ರಾರಂಭಿಸುವ ಬೇಡಿಕೆ ಇರಿಸಿದ್ದರು. ಜನರ ಬೇಡಿಕೆ ಇದೀಗ ಈಡೇರಿದೆ ಎಂದರು.

ಸದರಿ ರೈಲು ಪಂಢರಪುರ ಧಾರ್ಮಿಕ ಕ್ಷೇತ್ರದ ವರೆಗ ವಿಸ್ತರಣೆ ಆಗಿರುವುದರಿಂದ ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಿಂದ ವಿಠ್ಠಲನ ಭಕ್ತರು ಪಂಢರಪುರಕ್ಕೆ ತೆರಳಲು ಅನುಕೂಲವಾಗಲಿದೆ ಎಂದರು.

ವಿಜಯಪುರ ನಿಲ್ದಾಣದಿಂದ ಪಂಢರಪುರದ ವಿಠ್ಠಲನ ದರ್ಶನಕ್ಕೆ ಹೊರಟ ಭಕ್ತರು ಪಂಢರಪುರ ರೈಲು ವಿಸ್ತರಣೆಗೆ ಚಾಲನೆ ನೀಡಿದ ಸಂಸದ ಮದ್ದಳೆ ಬಾರಿಸಿ ಭಕ್ತರೊಂದಿಗೆ ಸಂಭ್ರಮ ಆಚರಿಸಿದರು.

ಬಿಜೆಪಿ ಮುಖಂಡರಾದ ಪ್ರಕಾಶ ಅಕ್ಕಲಕೋಟ, ಶ್ರೀಧರ ಮ ಬಿಜ್ಜರಗಿ ಸೇರಿದಂತೆ ವಿಠ್ಠಲನ ಫೋಟೋ ಹಾಕಿಕೊಂಡು ಭಜನೆ ಮಾಡುತ್ತ ಕುಣಿದು ಸಂತಸ ವ್ಯಕ್ತಪಡಿಸಿದರು.

ನಾಗಠಾಣ ಶಾಸಕ ವಿಠ್ಠಲ ಕಟಕದೋಂಡ, ಹುಬ್ಬಳ್ಳಿ ರೈಲ್ವೇ ವಿಭಾಗದ ಅಪರ ವಿಭಾಗೀಯ ವ್ಯವಸ್ಥಾಪಕ ಸಂತೋಷಕುಮಾರ ವರ್ಮಾ, ಹುಬ್ಬಳ್ಳಿ ವಾಣಿಜ್ಯ ವಿಭಾಗದ ಸಹಾಯಕ ವ್ಯವಸ್ಥಾಪಕಿ ನಿವೇದಿತಾ ಬಾಲರೆಡ್ಡಿ, ವಲಯ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸದಸ್ಯ ದಾಮೋದರ ದಾಸ ರಾಠಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮೈಸೂರು-ಪಂಢರಪುರ ರೈಲಿನ ಸಂಖ್ಯೆ : ರೈಲು ಸಂಖ್ಯೆ 16535/16536 ಮೈಸೂರು-ಸೋಲಾಪುರ-ಮೈಸೂರು ಗೋಲಗುಂಬಜ್ ಎಕ್ಸ್ ಪ್ರೆಸ್ ಪಂಢರಪುರ ವರೆಗೆ ವಿಸ್ತರಣೆಗೆ ರೈಲ್ವೇ ಮಂಡಳಿ ಅನುಮತಿಸಿದಂತೆ ಸೆ.4 ರಿಂದ ಜಾರಿಗೆ ಬಂದಿದ್ದು, ಸೆ.5 ರಂದು ಬೆಳಿಗ್ಗೆ ವಿಜಯಪುರ ತಲುಪಿದ ರೈಲಿನ ಸಂಚಾರವನ್ನು ಪಂಢರಪುರಕ್ಕೆ ವಿಸ್ತರಿಸಿ, ಚಾಲನೆ ನೀಡಲಾಯಿತು.

ರೈಲು ಸಂಖ್ಯೆ 16535/16536 ಮೈಸೂರು-ಸೋಲಾಪುರ-ಮೈಸೂರು ಗೋಲಗುಂಬಜ್ ಎಕ್ಸ್‍ಪ್ರೆಸ್ ರೈಲು ಪಂಢರಪುರ ವರೆಗೆ ಚಾಲನೆ ನೀಡಲಾಗಿದೆ. ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16535 ಮೈಸೂರು – ಸೋಲಾಪುರ ಗೋಲಗುಂಬಜ್ ಎಕ್ಸ್ ಪ್ರೆಸ್ ರೈಲು ಪಂಢರಪುರ ವರೆಗೆ ವಿಸ್ತರಣೆಗೊಂಡಿದೆ. ಸೆ. 5 ರಂದು 16536 ಸಂಖ್ಯೆಯ ರೈಲು ಪಂಢರಪುರ ನಿಲ್ದಾಣದಿಂದ ವಿಜಯಪುರ ಮಾರ್ಗವಾಗಿ ಮೈಸೂರಿಗೆ ಹೊರಡಲಿದೆ.

ರೈಲಿನ ವೇಳಾಪಟ್ಟಿ : ರೈಲು ಸಂಖ್ಯೆ 16535 ಮೈಸೂರು-ಪಂಢರಪುರ ಗೋಲಗುಂಬಜ್ ಎಕ್ಸ್‍ಪ್ರೆಸ್ ಮಧ್ಯಾಹ್ನ 03:45ಕ್ಕೆ ಮೈಸೂರಿನಿಂದ ಹೊರಡಲಿದ್ದು, ಮರುದಿನ ಮಧ್ಯಾಹ್ನ 12:25 ಗಂಟೆಗೆ ಪಂಢರಪುರ ನಿಲ್ದಾಣ ತಲುಪಲಿದೆ. ಮೈಸೂರಿನಿಂದ ಬಸವನಬಾಗೇವಾಡಿ ರೋಡ್ ನಿಲ್ದಾಣದ ವರೆಗೆ ಈ ರೈಲಿನ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ವಿಜಯಪುರಕ್ಕೆ ಈ ರೈಲು ಬೆಳಿಗ್ಗೆ 07-55 ಗಂಟೆಗೆ ಆಗಮಿಸಿ ಬೆಳಿಗ್ಗೆ 08:00 ಗಂಟೆಗೆ ನಿಲ್ದಾಣದಿಂದ ಹೊರಡಲಿದೆ. ಇಂಡಿ ರೋಡ್ ನಿಲ್ದಾಣಕ್ಕೆ ಬೆಳಿಗ್ಗೆ 08:41 ಆಗಮಿಸಿ ಬೆ.08:42 ನಿರ್ಗಮಿಸಲಿದೆ. ಸೋಲಾಪುರ ನಿಲ್ದಾಣದ ಬೆ.10-15ಕ್ಕೆ ಆಗಮಿಸಿ, ಬೆ.10-20ಕ್ಕೆ ನಿರ್ಗಮಿಸಲಿದೆ. ಕುರ್ಡುವಾಡಿ ನಿಲ್ದಾಣಕ್ಕೆ ಬೆಳಿಗ್ಗೆ 11-25ಕ್ಕೆ ಆಗಮಿಸಿ, ಬೆ.11-27 ಗಂಟೆಗೆ ನಿರ್ಗಮಿಸಲಿದೆ.

16536 ಸಂಖ್ಯೆಯ ರೈಲು ಪಂಢರಪುರ-ಮೈಸೂರು ಗೋಲಗುಂಬಜ್ ಎಕ್ಸ್‍ಪ್ರೆಸ್ ರೈಲು ಪಂಢರಪುರ ರೈಲು ನಿಲ್ದಾಣದಿಂದ ಮಧ್ಯಾಹ್ನ 1-00 ಗಂಟೆಗೆ ಹೊರಡಲಿದ್ದು ಮರುದಿನ ಬೆಳಿಗ್ಗೆ 10:-45 ಗಂಟೆಗೆ ಮೈಸೂರು ರೈಲ್ವೇ ನಿಲ್ದಾಣಕ್ಕೆ ತಲುಪಲಿದೆ.

ಕುರ್ಡುವಾಡಿಗೆ ಮಧ್ಯಾಹ್ನ 2-00ಕ್ಕೆ ಆಗಮಿಸಿ, ಮಧ್ಯಾಹ್ನ 02-02 ಕ್ಕೆ ನಿರ್ಗಮಿಸಲಿದೆ. ಸೋಲಾಪುರ ನಿಲ್ದಾಣಕ್ಕೆ ಮಧ್ಯಾಹ್ನ 03-30ಕ್ಕೆ ಆಗಮಿಸಿ, ಮಧ್ಯಾಹ್ನ 03-42 ಗಂಟೆಗೆ ನಿರ್ಗಮಿಸಲಿದೆ. ಇಂಡಿ ರೋಡ್‍ಗೆ ಮಧ್ಯಾಹ್ನ 04-28ಕ್ಕೆ ಆಗಮಿಸಿ ಮಧ್ಯಾಹ್ನ 04-30ಕ್ಕೆ ನಿರ್ಗಮಿಸಲಿದೆ.

ವಿಜಯಪುರ ನಿಲ್ದಾಣಕ್ಕೆ ಸಂಜೆ 5-50ಕ್ಕೆ ಆಗಮಿಸಿ ಸಂಜೆ 05-55ಕ್ಕೆ ನಿರ್ಗಮಿಸಲಿದೆ. ಬಸವನಬಾಗೇವಾಡಿ ರೋಡ್‍ಗೆ ಸಂಜೆ 06-27ಕ್ಕೆ ಆಗಮಿಸಿ ಸಂಜೆ 06-28 ಕ್ಕೆ ನಿರ್ಗಮಿಸಲಿದೆ. ಆಲಮಟ್ಟಿ ನಿಲ್ದಾಣಕ್ಕೆ ಸಂಜೆ 06-45ಕ್ಕೆ ಆಗಮಿಸಿ, ಸಂಜೆ 06-46 ಕ್ಕೆ ನಿರ್ಗಮಿಸಲಿದೆ. ಬಾಗಲಕೋಟೆಗೆ ರಾತ್ರಿ 07-23ಕ್ಕೆ ಆಗಮಿಸಿ, ರಾತ್ರಿ 07-25 ಗಂಟೆಗೆ ನಿರ್ಗಮಿಸಲಿದೆ.

ಗುಳೇದಗುಡ್ಡ ರೋಡ್‍ಗೆ ರಾತ್ರಿ 07-39ಕ್ಕೆ ಆಗಮಿಸಿ, ರಾತ್ರಿ 07-40 ಕ್ಕೆ ನಿರ್ಗಮಿಸಲಿದೆ. ಬಾದಾಮಿ ನಿಲ್ದಾಣಕ್ಕೆ ರಾತ್ರಿ 07-54ಕ್ಕೆ ಆಗಮಿಸಿ, ರಾತ್ರಿ 07-55ಕ್ಕೆ ನಿರ್ಗಮಿಸಲಿದೆ. ಹೊಳೆಆಲೂರು ನಿಲ್ದಾಣಕ್ಕೆ ರಾತ್ರಿ 08-17ಕ್ಕೆ ಆಗಮಿಸಿ, ರಾತ್ರಿ 08-18 ಗಂಟೆ ನಿರ್ಗಮಿಸಲಿದೆ. ಗದಗ ನಿಲ್ದಾಣಕ್ಕೆ ರಾತ್ರಿ 09-40 ಕ್ಕೆ ಆಗಮಿಸಿ, ರಾತ್ರಿ 09:45 ಕ್ಕೆ ನಿರ್ಗಮಿಸಲಿದೆ. ಅಣ್ಣಿಗೇರಿ ನಿಲ್ದಾಣಕ್ಕೆ ರಾತ್ರಿ 10:07ಕ್ಕೆ ಆಗಮಿಸಿ, 10-08 ಗಂಟೆ ನಿರ್ಗಮಿಸಲಿದೆ.

ಉಳಿದಂತೆ ಹುಬ್ಬಳ್ಳಿ ಎಸ್‍ಎಸ್‍ಎಸ್ ನಿಲ್ದಾಣದಿಂದ ಮೈಸೂರು ನಿಲ್ದಾಣದ ವರೆಗೆ ಸದರಿ ರೈಲಿನ ನಿಲುಗಡೆಗಳು ಹಾಗೂ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೇ ಅಧಿಕಾರಿಗಳು ವಿವರಿಸಿದರು.

ಇದನ್ನೂ ಓದಿ: District Collector CT Shilpanag: ದೌರ್ಜನ್ಯ ಪ್ರಕರಣ ಶೀಘ್ರ ವಿಲೇವಾರಿ ಮಾಡಿ

ಟಾಪ್ ನ್ಯೂಸ್

yathanal-jarakiholi

BJP Meeting: ದಾವಣಗೆರೆಯಲ್ಲಿ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಇಂದು ಮಹತ್ವದ ಸಭೆ

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yathanal-jarakiholi

BJP Meeting: ದಾವಣಗೆರೆಯಲ್ಲಿ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಇಂದು ಮಹತ್ವದ ಸಭೆ

Ramalinga-Raeddy

Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್‌ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

snemahamayi-Krishna

MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್‌ ಕೊಟ್ಟ ಸ್ನೇಹಮಯಿ ಕೃಷ್ಣ!

1-HDK

Documents ಬಿಡುಗಡೆಯಾದರೆ 6-7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಎಚ್ ಡಿಕೆ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

yathanal-jarakiholi

BJP Meeting: ದಾವಣಗೆರೆಯಲ್ಲಿ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಇಂದು ಮಹತ್ವದ ಸಭೆ

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.