Vijayapura: ಮುಂದುವರೆದ ಮಳೆಯ ಆರ್ಭಟ ಸಿಡಿಲಿಗೆ ಎಮ್ಮೆ-ಕುರಿ ಸಾವು; ಹತ್ತಾರು ಮನೆಗಳು ಕುಸಿತ


Team Udayavani, Jun 8, 2024, 7:28 PM IST

Vijayapura: ಮುಂದುವರೆದ ಮಳೆಯ ಆರ್ಭಟ ಸಿಡಿಲಿಗೆ ಎಮ್ಮೆ-ಕುರಿ ಸಾವು; ಹತ್ತಾರು ಮನೆಗಳು ಕುಸಿತ

ವಿಜಯಪುರ: ಭಾರಿ ಆರ್ಭಟದೊಂದಿಗೆ ಜಿಲ್ಲೆಯನ್ನು ಪ್ರವೇಶಿಸಿರುವ ಮೃಗಶಿರ ಮಳೆ ಶನಿವಾರವೂ ಮುಂದುವರೆದಿದೆ. ನಿನ್ನೆ 32.7 ಮಿ.ಮೀ. ಮಳೆಯಾಗಿದ್ದರೆ, ಇಂದು 12.16 ಮಿ.ಮೀ. ಮಳೆಯಾಗಿದೆ. ಸಿಡಿಲಿಗೆ ಎಮ್ಮೆಗಳು ಬಲಿಯಾಗಿದ್ದರೆ, ಭಾರಿ ಮಳೆಗೆ ಹತ್ತಾರು ಮನೆಗಳು ನೆಲಕ್ಕೆ ಉರುಳಿವೆ. ಡೋಣಿ ನದಿ ಸೇರಿದಂತೆ ಹಳ್ಳಗಳು ಮೈದುಂಬಿ ಹರಿಯುತ್ತಿವೆ.

ಅಬ್ಬರದ ಮಳೆಗೆ ಚಡಚಣದಲ್ಲಿ ಶನಿವಾರ ಸಂಜೆ ಬಡಿದ ಸಿಡಿಲಿಗೆ ದುಂಡಪ್ಪ ನಿರಾಳೆ ಎಂಬವರಿಗೆ ಸೇರಿದ ಎಮ್ಮೆ ಸಾವಿಗೀಡಾಗಿದ್ದು, ಪಕ್ಕದಲ್ಲಿದ್ದ ಮೇವಿನ ಬಣವೆಗೂ ಬಂಎಕಿ ಹೊತ್ತಿಕೊಂಡಿದೆ. ಚಡಚಣ ಭಾಗದಲ್ಲೇವಿಠ್ಠಲ ಅಗಸರ ಎಂಬವರಿಗೆ ಸೇರಿದ ಎಮ್ಮೆ ಸಿಡಿಲು ಬಡಿದು ಸಾವಿಗೀಡಾಗಿದೆ.

ಆಲಮೇಲ ತಾಲೂಕಿನ ಕುಮಸಗಿ ಗ್ರಾಮದಲ್ಲಿ ಶರಣಪ್ಪ ಯಂಕಂಚಿ ಎಂಬವರಿಗೆ ಸೇರಿದ ಕುರಿ ಬಲಿಯಾಗಿದೆ. ಜಿಲ್ಲೆ ಗ್ರಾಮೀಣ ಭಾಗದಲ್ಲಿ ಮಳೆಯಿಂದಾಗಿ ಜನ ವಸತಿಯ ಮಣ್ಣಿನ ಕಟ್ಟಡಗಳು ಬೀಳು ಆರಂಭಿಸಿವೆ.

ವಿಜಯಪುರ ಒಂದೇ ಭಾಗದಲ್ಲಿ 8 ಕ್ಕೂ ಹೆಚ್ಚು ಮನೆಗಳು ಮಳೆಯಿಂದಾಗಿ ನೆಲಕ್ಕುರುಳಿವೆ. ಬಸವನಬಾಗೇವಡಿ ತಾಲೂಕಿನ ಯರನಾಳ ಗ್ರಾಮದಲ್ಲಿ ಸಿದ್ದವ್ವ ವಾಲೀಕಾರ ಹಾಗೂ ತಂಗೆವ್ವ ಒಂಟಗುಡಿ ಎಂಬವ ಮನೆಗಳು ಮೇಲ್ಛಾವಣಿ, ಗೋಡೆಗಳು ಬಿದ್ದು ಮನೆಗಳು ಹಾನಿಯಾಗಿವೆ.

ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ವರೆಗೆ ಜಿಲ್ಲೆಯಾದ್ಯಂತ 32.7 ಮಿ.ಮೀ. ಮಳೆಯಾಗಿದ್ದರೆ, ಶನಿವಾರ ಬೆಳಗಿನ ವರೆಗೆ ಕಳೆದ 24 ಗಂಟೆಯಲ್ಲಿ ಮತ್ತೆ 12.6 ಮಿ.ಮೀ. ಮಳೆಯಾಗಿದ್ದು, ಸಂಜೆಯ ವರೆಗೂ ಜಿಲ್ಲೆಯ ಹಲವು ಕಡೆಗಳಲ್ಲಿ ಅಲ್ಲಲ್ಲಿ ಮತ್ತೆ ಮಳೆ ಸುರಿದಿದೆ.

ಶನಿವಾರ ಬೆಳಗಿನ ವರೆಗಿನ 24 ಗಂಟೆ ಅವಧಿಯಲ್ಲಿ  ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ 85 ಮಿ.ಮೀ. ಮಳೆಯಾಗಿದ್ದರೆ,  ಕೊಲ್ಹಾರ ತಾಲೂಕಿಕ ಕೂಡಗಿ ಭಾಗದಲ್ಲಿ 70.5 ಮಿ.ಮೀ. ಮಳೆಯಾಗಿದೆ. ಬಬಲೇಶ್ವರ ತಾಲೂಕಿನ ಅರ್ಜುಣಗಿ ಭಾಗದಲ್ಲಿ 61.5 ಮಿ.ಮೀ. ಮಳೆಯಾಗಿದ್ದರೆ, ಸಿಂದಗಿ ತಾಲೂಕಿನ ಗುಬ್ಬೇವಾಡ ಪರಿಸರದಲ್ಲಿ 56.5 ಮಿ.ಮೀ. ಮಳೆ ಸುರಿದಿದೆ.

ಬಸವನಬಾಗೇವಾಡಿ ತಾಲೂಕಿನ ಮಾರ್ಕಬ್ಬನಳ್ಳಿ ಭಾಗದಲ್ಲಿ 53.5 ಮಿ.ಮೀ. ಮಳೆಯಾಗಿದ್ದು, ಯರನಾಳ ಭಾಗದಲ್ಲಿ 48 ಮಿ.ಮೀ. ಮಳೆ ದಾಖಲಾಗಿದೆ. ಇಂಡಿ ತಾಲೂಕಿನ ಲಾಳಸಂಗಿ ಭಾಗದಲ್ಲಿ 44 ಮಿ.ಮೀ. ಮಳೆ ಆಗಿದ್ದು, ಆಲಮೇಲ ತಾಲೂಕಿನ ಮೋರಟಗಿ ಭಾಗದಲ್ಲಿ 36 ಮಿ.ಮೀ. ಹಾಗೂ ಚಡಚಣ ತಾಲೂಕ ಕೇಂದ್ರದ ಸುತ್ತಲೂ 35 ಮಿ.ಮೀ. ಮಳೆಯಾಗಿದೆ.

ಶನಿವಾರವೂ ಮತ್ತೆ ಮಳೆ ಮುಂದುವರೆದಿದ್ದು, ಹಳ್ಳಗಳು ಭರ್ತಿಯಾಗಿ ಮೈದುಂಬಿ ಹರಿಯುತ್ತಿವೆ, ಜಿಲ್ಲೆಯ ಕಣ್ಣೀರ ನದಿ ಡೋಣಿ ಕೂಡ ಕಳೆದ ಎರಡು ದಿನಗಳಿಂದ ತುಂಬಿ ಹರಿಯುತ್ತಿದ್ದು, ಹಲವು ಕಡೆಗಳಲ್ಲಿ ನದಿ ತೀರದ ರೈತರ ಜಮೀನಗೂ ನುಗ್ಗಿದೆ.

ಟಾಪ್ ನ್ಯೂಸ್

ISREL

Warning; ಶಿಲಾಯುಗಕ್ಕೆ ಮರಳಿಸುತ್ತೇವೆ ! : ಲೆಬನಾನ್ ಗೆ ಇಸ್ರೇಲ್ ಎಚ್ಚರಿಕೆ

ಜಿಯೋ ಆಯ್ತು ಈಗ ಏರ್ಟೆಲ್ ನಿಂದಲೂ ದರ ಏರಿಕೆ!

Mobile Recharge Plans; ಜಿಯೋ ಆಯ್ತು ಈಗ ಏರ್ಟೆಲ್ ನಿಂದಲೂ ದರ ಏರಿಕೆ!

Bidar; I was defeated for our selfishness says Bhagwanth Khuba

Bidar; ನಮ್ಮವರ ಸ್ವಾರ್ಥಕ್ಕಾಗಿ ನನಗೆ ಸೋಲಾಯಿತು…: ಭಗವಂತ ಖೂಬಾ ಬೇಸರ

Randheer-Jaiswal

Biased; ಧಾರ್ಮಿಕ ಸ್ವಾತಂತ್ರ್ಯ ಕುರಿತು ವರದಿ: ಅಮೆರಿಕಕ್ಕೆ ಭಾರತ ತಿರುಗೇಟು

Mudhol ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ

Mudhol ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ

Rajya sabha ಕಲಾಪದಲ್ಲಿ ಪ್ರತಿಭಟನೆ ವೇಳೆ ಕುಸಿದು ಬಿದ್ದ ಕಾಂಗ್ರೆಸ್‌ ಸಂಸದೆ…

Rajya sabha ಕಲಾಪದಲ್ಲಿ ಪ್ರತಿಭಟನೆ ವೇಳೆ ಕುಸಿದು ಬಿದ್ದ ಕಾಂಗ್ರೆಸ್‌ ಸಂಸದೆ…

Minister RB Timmapur ರಾಜ್ಯ ಸರ್ಕಾರ ರೈತರ ಪರವಾಗಿ ಕಾರ್ಯ ಮಾಡುತ್ತಿದೆ

Minister RB Timmapur ರಾಜ್ಯ ಸರ್ಕಾರ ರೈತರ ಪರವಾಗಿ ಕಾರ್ಯ ಮಾಡುತ್ತಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wew-e-weewqewq

Muddebihal; 2 ಮರಿಗಳ ಸಮೇತ ಬೃಹತ್ ಹೆಣ್ಣು ಮೊಸಳೆ ಸೆರೆ

dinesh-gu

GST ವಿಚಾರದಲ್ಲಿ ಟೀಕೆ: ನಿರ್ಮಲಾ ಸೀತಾರಾಮನ್ ವಿರುದ್ಧ ದಿನೇಶ್ ಗುಂಡೂರಾವ್ ಕಿಡಿ

yatnal

BJP ಹೈಕಮಾಂಡ್ ಗೆ ದೊಡ್ಡವರ ಪಕ್ಷ ವಿರೋಧಿ ಚಟುವಟಿಕೆ ಮಾಹಿತಿ: ಯತ್ನಾಳ್

1-Yat

B.S.Y.; ವೀರಶೈವ ಮಹಾಸಭಾ ಮೂರು ಕುಟುಂಬಗಳ ಆಸ್ತಿಯಂತಾಗಿದೆ: ಯತ್ನಾಳ್ ಕಿಡಿ

1-babay

Vijayapura: ವಿದ್ಯಾರ್ಥಿನಿಯರ ರೂಮ್ ಎದುರು ನವಜಾತ ಶಿಶುವಿನ ಶವ ಪತ್ತೆ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

1-wew-e-weewqewq

Muddebihal; 2 ಮರಿಗಳ ಸಮೇತ ಬೃಹತ್ ಹೆಣ್ಣು ಮೊಸಳೆ ಸೆರೆ

1-wqeqwe

Gundlupete: ಜನಸ್ಪಂದನಾ ಕಾರ್ಯಕ್ರಮ ಮುಗಿಸಿ ಬರುವಾಗ ಅಪಘಾತ: ಆಹಾರ ನಿರೀಕ್ಷಕ ಸಾವು

1-sdsads

Ramanagara; ಡಿಸಿ ಕಚೇರಿಯಲ್ಲೇ ಹೃದಯಾಘಾತದಿಂದ ನೌಕರ ಸಾವು

dinesh-gu

GST ವಿಚಾರದಲ್ಲಿ ಟೀಕೆ: ನಿರ್ಮಲಾ ಸೀತಾರಾಮನ್ ವಿರುದ್ಧ ದಿನೇಶ್ ಗುಂಡೂರಾವ್ ಕಿಡಿ

1-aaa

Kottigehara; ನದಿಯ ಕಿರು ಕಾಲುವೆಗೆ ಬಿದ್ದ ಕಾರು: ಇಬ್ಬರು ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.