ವಿದ್ಯಾನಗರದಲ್ಲಿ ಮನೆಗಳ್ಳತನ-ಪರಿಶೀಲನೆ


Team Udayavani, Apr 9, 2022, 2:27 PM IST

15theft

ಮುದ್ದೇಬಿಹಾಳ: ಬೇಸಿಗೆಯ ಧಗೆಯ ಹಿನ್ನೆಲೆ ತಾಯಿ ಮತ್ತು ಮಗ ಇಬ್ಬರೂ ಮನೆಯ ಮಾಳಿಗೆ ಮೇಲೆ ಮಲಗಿದ ಸಮಯ ಸಾಧಿಸಿದ ಕಳ್ಳರು ಮನೆ ಮುಂಬಾಗಿಲ ಬೀಗ ಮತ್ತು ಮನೆಯೊಳಗಿನ ಮೂರು ಟ್ರೇಜರಿ ಮುರಿದು ಚಿನ್ನಾಭರಣ, ನಗದು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕಳುವು ಮಾಡಿ ಪರಾರಿಯಾದ ಘಟನೆ ಶುಕ್ರವಾರ ಬೆಳಗ್ಗೆ ಪಟ್ಟಣದ ವಿದ್ಯಾನಗರದಲ್ಲಿ ಬೆಳಕಿಗೆ ಬಂದಿದೆ.

ಪಟ್ಟಣದ ಎಂಜಿಎಂಕೆ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಜಗದೀಶ ಗಂಗಣ್ಣ ಮೇಟಿ ಅವರ ಮನೆಯಲ್ಲಿಯೇ ಕಳ್ಳತನ ನಡೆದಿದೆ. ಈ ವೇಳೆ ರಾತ್ರಿ ಮನೆಯ ಪಕ್ಕದಿಂದ ಶೂ, ಚಪ್ಪಲಿ ಬಿಚ್ಚಿಟ್ಟು ಮನೆಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಟ್ರೇಜರಿಯಲ್ಲಿದ್ದ 25,000 ರೂ. ನಗದು, ತಾಳಿ ಚೈನು, ಉಂಗುರ, ಕಿವಿಯೋಲೆ, ಬೆಂಡೋಲೆ ಸೇರಿ ಅಂದಾಜು 3 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ.

ಮಧ್ಯರಾತ್ರಿ ನಿಶ್ಯಬ್ಧವಾಗಿ ನಡೆದ ಈ ಘಟನೆಯಿಂದ ಅಕ್ಕಪಕ್ಕದವರಿಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಘಟನಾ ಸ್ಥಳಕ್ಕೆ ಸಿಪಿಐ ಆನಂದ ವಾಘ್ಮೋಡೆ, ಪಿಎಸೈ ರೇಣುಕಾ ಜಕನೂರ, ಎಎಸೈ ಎ.ಬಿ. ಟಕ್ಕಳಕಿ ಹಾಗೂ ಪೊಲೀಸ್‌ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮಧ್ಯಾಹ್ನದ ಹೊತ್ತಿಗೆ ವಿಜಯಪುರದಿಂದ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಯಿಸಿ ತಪಾಸಣೆ ನಡೆಸಲಾಗಿದೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೇಸಿಗೆ ಆರಂಭವಾಗಿದ್ದು ಕಳ್ಳರ ಹಾವಳಿ ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ವಿದ್ಯಾನಗರದಲ್ಲಿ ಪೊಲೀಸರು ಗಸ್ತು ಹೆಚ್ಚಿಸಬೇಕು ಎಂದು ನಿವಾಸಿಗಳಾದ ಎಂ.ಎಸ್‌.ಗೌಡರ, ವಿಜಯಕುಮಾರ ಬಡಿಗೇರ, ಎಸ್‌.ಎಸ್‌.ಮೇಟಿ, ಶಶಿಧರ ನೆರಬೆಂಚಿ ಮೊದಲಾದವರು ಆಗ್ರಹಿಸಿದ್ದಾರೆ.

ಪೊಲೀಸರಿಂದ ಜಾಗೃತಿ

ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಆಟೋವೊಂದರಲ್ಲಿ ಮೈಕ್‌ ಮೂಲಕ ಸಾರ್ವಜನಿಕರು ಜಾಗೃತರಾಗಿರುವಂತೆ ಎಚ್ಚರಿಸುವ ಕೆಲಸವನ್ನು ದಿನ ಪೂರ್ತಿ ಮಾಡಿದರು. ಬೇಸಿಗೆಯಲ್ಲಿ ಮನೆಯ ಮಾಲೀಕರು ಮನೆಯ ಮಾಳಿಗೆ ಮೇಲೆ ಮಲಗುವಾಗ ತುಂಬಾ ಜಾಗ್ರತೆ ವಹಿಸಬೇಕು. ಮನೆಯೊಳಗೆ ಬೆಲೆ ಬಾಳುವ ವಸ್ತುಗಳು ಇದ್ದರೆ ಆದಷ್ಟು ಮನೆಯೊಳಗೆ ಮಲಗಬೇಕು. ಮನೆಗೆ ಬೀಗ ಹಾಕಿ ಪರ ಊರಿಗೆ ಹೋಗುವಾಗ ಪೊಲೀಸರಿಗೆ ಮಾಹಿತಿ ನೀಡಿ ಹೋಗಬೇಕು. ಆದಷ್ಟು ಬಡಾವಣೆಗಳ ಜನರು ಗಸ್ತು ತಿರುಗುವುದನ್ನು ಪಾಲಿಸಿ ಪೊಲೀಸರಿಗೆ ಸಹಕರಿಸಬೇಕು. ಸಂಶಯಾಸ್ಪದ ಅಪರಿಚಿತ ವ್ಯಕ್ತಿಗಳು ತಿರುಗಾಡುವುದು ಕಂಡು ಬಂದಲ್ಲಿ ತಕ್ಷಣ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ರಾತ್ರಿ ವೇಳೆ ಆದಷ್ಟು ಹೆಚ್ಚು ಜಾಗೃತೆಯಿಂದ ಇದ್ದು ಕಳ್ಳತನವಾಗುವುದನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಸೂಚನೆಗಳನ್ನು ನೀಡಲಾಗಿದೆ.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಗ್ರಾ.ಪಂ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಪಂ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ

Vijayapura: ಗ್ರಾ.ಪಂ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಪಂ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ

Muddebihal: ಕೃಷ್ಣಾ ನದಿ ಪಾಲಾದ ಯುವತಿ: ಶವ ಪತ್ತೆ

Muddebihal: ಕೃಷ್ಣಾ ನದಿ ಪಾಲಾದ ಯುವತಿ: ಶವ ಪತ್ತೆ

Muddebihal: ಕೃಷ್ಣಾ ನದಿಪಾಲಾದ ಯುವತಿ: ಶವಕ್ಕಾಗಿ ಶೋಧ

Muddebihal: ಕೃಷ್ಣಾ ನದಿ ಪಾಲಾದ ಯುವತಿ: ಶವಕ್ಕಾಗಿ ಶೋಧ

Vijayapura: ಮುನಿರತ್ನ ಚನ್ನಾರೆಡ್ಡಿ ಪ್ರಕರಣಕ್ಕೆ ತಳುಕು ಬೇಡ: ಎಂ.ಬಿ.ಪಾಟೀಲ

Vijayapura: ಮುನಿರತ್ನ ಚನ್ನಾರೆಡ್ಡಿ ಪ್ರಕರಣಕ್ಕೆ ತಳುಕು ಬೇಡ: ಎಂ.ಬಿ.ಪಾಟೀಲ

Congress: Make 100 laws, I am Anjala: MLA Basan Gowda Patil Yatnal

Congress: ನೂರು ಕಾನೂನು ಮಾಡಿ,ನಾನು ಅಂಜಲ್ಲ: ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.