ಕ್ವಾರಂಟೈನ್ ಸ್ಟ್ಯಾಂಪ್ ಹಾಕಿಕೊಳ್ಳಲು ತಗಾದೆ; ಸ್ಟ್ಯಾಂಪ್ ಅಳಿಸಲೂ ನೀವೇ ಬರಬೇಕು ಎಂದ !


Team Udayavani, Mar 31, 2020, 3:11 PM IST

ಕ್ವಾರಂಟೈನ್ ಸ್ಟ್ಯಾಂಪ್ ಹಾಕಿಕೊಳ್ಳಲು ತಗಾದೆ; ಸ್ಟ್ಯಾಂಪ್ ಅಳಿಸಲೂ ನೀವೇ ಬರಬೇಕು ಎಂದ !

ವಿಜಯಪುರ: ಗುಜರಾತ್‍ನಿಂದ ಬಂದಿರುವ ಕೋವಿಡ್-19 ಹೋಂ ಕ್ವಾರೈಂಟನ್ ವ್ಯಕ್ತಿಯೊಬ್ಬರು ತಮ್ಮ ಕೈ ಮೇಲೆ ಸ್ಟ್ಯಾಂಪಿಂಗ್ ಹಾಕಿಸಿಕೊಳ್ಳಲು ಕಿರಿಕ್ ಮಾಡಿ, ಸ್ಥಳಕ್ಕೆ ತೆರಳಿದ ತಹಸೀಲ್ದಾರರೊಂದಿಗೆ ತಗಾದೆ ತೆಗೆದಿದ್ದಾನೆ. ವಶಕ್ಕೆ ಪಡೆಯುವ ಎಚ್ಚರಿಕೆ ನೀಡಿದ ಬಳಿಕ ಸ್ಟ್ಯಾಂಪಿಂಗ್ ಹಾಕಿಸಿಕೊಳ್ಳಲು ಮುಂದಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ವಂದಾಲ ಗ್ರಾಮಕ್ಕೆ ಗುಜರಾತ್ ನಿಂದ ಬಂದಿದ್ದ ವ್ಯಕ್ತಿಗೆ ಮನೆಯಲ್ಲೇ ನಿಗಾದಲ್ಲಿ ಇರುವಂತೆ ಅಧಿಕಾರಿಗಳು ಸೂಚಿಸಿದ್ದರು. ಇದೀಗ ಜಿಲ್ಲಾಡಳಿತ ವಿದೇಶದಿಂದ ಮಾತ್ರವಲ್ಲ ಹೊರ ರಾಜ್ಯ ಹಾಗೂ ಜಿಲ್ಲೆಗಳ ವ್ಯಕ್ತಿಳಿಗೂ ಕೋವಿಡ್-19 ಹೋಂ ಕ್ವಾರೈಂಟನ್ ಸ್ಟ್ಯಾಂಪಿಂಗ್ ಮಾಡುವುದನ್ನು ಕಡ್ಡಾಯಗೊಳಿಸಿದೆ.

ಇದರಿಂದಾಗಿ ನಿಡಗುಂದಿ ತಹಸೀಲ್ದಾರ ತಹಶೀಲ್ದಾರ್ ಪ್ರಭು ವಾಲಿ ತಮ್ಮ ಸಿಬ್ಬಂದಿಯೊಂದಿಗೆ ಮಂಗಳವಾರ ಗುಜರಾತ್‍ನಿಂದ ಬಂದಿರುವ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಸ್ಟ್ಯಾಂಪಿಂಗ್ ಹಾಕಲು ಮನೆಗೆ ಹೋದಾಗ ತಗಾದೆ ತೆಗೆದಿದ್ದಾರೆ. ನಾನು ಮನೆಯಲ್ಲಿ ಇರುತ್ತೇನೆ, ಸ್ಟ್ಯಾಂಪಿಂಗ್ ಮಾತ್ರ ಬೇಡ. ನಾನು ಗ್ರಾಮಕ್ಕೆ ಮರಳಿ 10 ದಿನ ಕಳೆದಿದ್ದು, ಇನ್ನು 4 ದಿನದಲ್ಲಿ ನನ್ನ ಹೋಂ ಕ್ವಾರಂಟೈನ್ ಕೊನೆಗೊಳ್ಳಲಿದೆ ಹೀಗಾಗಿ ನನಗೆ ಸ್ಟ್ಯಾಂಪಿಂಗ್ ಬೇಡ ಎಂದು ತಗಾದೆ ತೆಗೆದಿದ್ದಾನೆ.

ಇದಕ್ಕೆ ಸಮಾಜಯಿಷಿ ನೀಡಿದ ತಹಸೀಲ್ದಾರ ಪ್ರಭು ಅವರು, ಏಪ್ರೀಲ್ 14 ಕ್ಕೆ ಲಾಕ್ ಡೌನ್ ಕೊನೆ ಗೊಳ್ಳಲಿದೆ. ಅಲ್ಲಿಯ ವರೆಗೆ ಸರ್ಕಾರದ ಸೂಚನೆಯಂತೆ ಯಾರೂ‌ ಮನೆಯಿಂದ ಹೊರ ಬರದೇ ಮನೆಯಲ್ಲೇ ಇರಬೇಕು. ಇದೀಗ ಹೊರ ಜಿಲ್ಲೆ-ರಾಜ್ಯಗಳಿಂದ ಬಂದವರಿಗೂ ಸ್ಟ್ಯಾಂಪಿಂಗ್ ಹಾಕಲೇಬೇಕು ಎಂದು ಅಧಿಕಾರಿಗಳು ಹೇಳಿದರೂ ವ್ಯಕ್ತಿ ಸ್ಟ್ಯಾಂಪಿಂಗ್‍ಗೆ ಒಪ್ಪಿಕೊಳ್ಳಲಿಲ್ಲ.

ಅಂತಿಮವಾಗಿ ತಹಸೀಲ್ದಾರ್ ಪ್ರಭು ವಾಲಿ ಅವರು ನಿಮ್ಮನ್ನು ವಶಕ್ಕೆ ಪಡೆಯುವುದಾಗಿ ಎಚ್ಚರಿಸಿದಾಗ ಈತನು ಸೇರಿದಂತೆ ಕುಟುಂಬದ ಮೂವರಿಗೆ ಸ್ಟ್ಯಾಂಪಿಂಗ್ ಮಾಡಲಾಯಿತು. ಈ ಹಂತದಲ್ಲಿ ಮತ್ತೆ ತಗಾದೆ ತೆಗೆದ ವ್ಯಕ್ತಿ, ನೀವು ಹಾಕಿದ ಸೀಲ್ ಅಳಸಿಹೋಗದಿದ್ದರೆ ಲಾಕ್‍ಡೌನ್ ಬಳಿಕವೂ ನಾನು ಹೊರಗೆ ತಿರುಗುವುದು ದುಸ್ತರವಾಗಲಿದೆ. ಹೀಗಾಗಿ 4 ದಿನದ ಬಳಿಕ ನೀವೇ ಮನೆಗೆ ಬಂದು ಹಾಕಿದ ಸೀಲ್ ಅಳಸಿ ಹಾಕಿ ಎಂದು ವಾಗ್ವಾದ ಮಾಡಿದ್ದಾನೆ.

ಟಾಪ್ ನ್ಯೂಸ್

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Vijayapura: 2-year-old child passed away after falling into Raj canal

Vijayapura: ರಾಜಕಾಲುವೆಗೆ ಬಿದ್ದು 2 ವರ್ಷದ ಮಗು ಸಾವು

Vijayapura: ವಕ್ಫ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಯತ್ನಾಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Vijayapura: ವಕ್ಫ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಯತ್ನಾಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Basangouda Patil Yatnal: ಫಸ್ಟ್‌ ಲೈನ್‌ ನಾಯಕರ ಆಸ್ತಿ ಬಗ್ಗೆ ತನಿಖೆ ಆಗಲಿ

Basangouda Patil Yatnal: ಫಸ್ಟ್‌ ಲೈನ್‌ ನಾಯಕರ ಆಸ್ತಿ ಬಗ್ಗೆ ತನಿಖೆ ಆಗಲಿ

I don’t know about Kharge returned plot : Minister MB Patil

Vijayapura: ಖರ್ಗೆ ಕುಟುಂಬ ನಿವೇಶನ ವಾಪಸ್ ಕೊಟ್ಟಿದ್ದು ಗೊತ್ತಿಲ್ಲ: ಸಚಿವ ಎಂ.ಬಿ.ಪಾಟೀಲ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.