
ಕನ್ನಡ ಪರ ಸಂಘಟನೆಗಳು ರಾಜಕೀಯದಿಂದ ದೂರವಿರಲಿ; ಎ.ಎಸ್. ಪಾಟೀಲ
Team Udayavani, Jul 30, 2022, 6:21 PM IST

ತಾಳಿಕೋಟೆ: ಕನ್ನಡ ಪರ ಸಂಘಟನೆಗಳು ರಾಜಕೀಯೇತರ ಸಂಘಟನೆಗಳಾಗಿ ಕಾರ್ಯನಿರ್ವಹಿಸಬೇಕು ರಾಜಕಾರಣಿಗಳಿರಲಿ ಅಥವಾ ಅಧಿಕಾರಿಗಳಿರಲಿ ಅವರನ್ನು ಎಚ್ಚರಿಸುವಂತಹ ಕಾರ್ಯಗಳನ್ನು ಮಾಡುತ್ತಾ ಸಾಗಬೇಕು ಎಂದು ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಹೇಳಿದರು.
ಶುಕ್ರವಾರ ಜಯ ಕರ್ನಾಟಕ ಸಂಘಟನೆಯ ತಾಳಿಕೋಟೆ ತಾಲೂಕು ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕ ಹಿತಾಸಕ್ತಿಗೋಸ್ಕರ ಹುಟ್ಟಿಕೊಂಡಿರುವ ಸಂಘಟನೆಗಳು, ಕನ್ನಡ ನೆಲ, ಜಲ ವಿಷಯ ಬಂದಾಗ ಒಗ್ಗಟ್ಟಿನಿಂದ ಎದುರಿಸಿ ಕನ್ನಡ ತನವನ್ನು ಬಿಂಬಿಸುವಂತಹ ಮತ್ತು ಕನ್ನಡ ಭಾಷೆಯನ್ನು ಪ್ರಜ್ವಲಿಸುವಂತಹ ಕಾರ್ಯ ಮಾಡಲಿ ಎಂದರು.
ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ (ಕೂಚಬಾಳ) ಮಾತನಾಡಿ, ಜಯ ಕರ್ನಾಟಕ ಸಂಘಟನೆಯು ತನ್ನತನವನ್ನು ಯಾವತ್ತಿಗೂ ಯಾವ ರಾಜಕೀಯ ಪಕ್ಷಕ್ಕೆ ಬಿಟ್ಟುಕೊಟ್ಟಿಲ್ಲ. ಕನ್ನಡ ನೆಲ ಜಲ ವಿಷಯವಾಗಿ ಹೋರಾಟಗಳನ್ನು ಮಾಡುತ್ತ ಬಂದಿರುವ ರಾಜ್ಯದ ಬಲಿಷ್ಠ ಸಂಘಟನೆಗಳಲ್ಲಿ ಒಂದಾಗಿದೆ.
ಸಂಘಟನೆಯ ತಾಲೂಕು ಕಾರ್ಯಾಲಯ ಆರಂಭಗೊಂಡಿದ್ದು ತಾಲೂಕಿನ ಸಮಸ್ಯೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಹೋರಾಟದ ಹೆಜ್ಜೆಗಳನ್ನು ಇಡುವುದರ ಜೊತೆಗೆ ತಪ್ಪು ಮಾಡುವ ರಾಜಕಾರಣಿಗಳಿಗೆ ಎಚ್ಚರಿಸಿ ಸರಿ ದಾರಿಯತ್ತ ಕೊಂಡೊಯ್ಯುವಂತಹ ಕಾರ್ಯ ಮಾಡಲಿ ಎಂದು ಆಶಿಸಿದರು.
ಕಾರ್ಯಕ್ರಮಕ್ಕೂ ಮುಂಚೆ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಸಂಘಟನೆಯ ತಾಲೂಕಾಧ್ಯಕ್ಷ ಬಸನಗೌಡ ಸಿಂಗನಳ್ಳಿ ಅವರು ಚಾಲನೆ ನೀಡಿದರು. ಜಯ ಕರ್ನಾಟಕ ಸಂಘಟ ಜಿಲ್ಲಾಧ್ಯಕ್ಷ ಮಹೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು.
ಕೆಪಿಸಿಸಿ ಸದಸ್ಯ ಬಿ.ಎಸ್. ಪಾಟೀಲ (ಯಾಳಗಿ), ಜೆಡಿಎಸ್ ನಾಯಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ), ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ| ಪ್ರಭುಗೌಡ ಲಿಂಗದಳ್ಳಿ, ಎಬಿಡಿ ಫೌಂಡೇಶನ್ ಮುಖ್ಯಸ್ಥ ಆನಂದ ದೊಡಮನಿ, ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಕೇಶ ಕಲ್ಲೂರ, ರಾಜ್ಯ ಕಾರ್ಯದರ್ಶಿ ಬಿ.ಬಿ. ಇಂಗಳಗಿ, ಜಿಲ್ಲಾ ಉಪಾಧ್ಯಕ್ಷ ಪಿಂಟು ಗಬ್ಬೂರ, ಜಿಲ್ಲಾ ಕಾರ್ಯಾಧ್ಯಕ್ಷ ಸಂಗಮೇಶಗೌಡ ದಾಶ್ಯಾಳ, ಶಿವನಗೌಡ ಬಿರಾದಾರ (ಅಸ್ಕಿ), ಕೃಷಿ ಅಧಿಕಾರಿ ಮಹೇಶ ಜೋಶಿ ವೇದಿಕೆಯಲ್ಲಿದ್ದರು.
ಪ್ರಭುಗೌಡ ಪೋತರಡ್ಡಿ, ಸುರೇಶಬಾಬುಗೌಡ ಫಿರಾಪುರ, ಶಿವರಡ್ಡಿ ಐನಾಪುರ, ಯಂಕಾರಡ್ಡಿ ಬಿರಾದಾರ, ಶಂಕರಗೌಡ ದೇಸಾಯಿ, ಪ್ರಭು ನಾಡಗೌಡ, ಸಂಗನಗೌಡ ಪಾಟೀಲ, ಮಂಜು ಗೋನಾಳ, ಬಸವರಾಜ ನೀರಲಗಿ, ಅಪ್ಪು ಆನೇಸೂರ, ಆನಂದ ಮದರಕಲ್ಲ, ರವಿ ಹಯ್ನಾಳ, ಮಡುಸೌಕಾರ ಬಿರಾದಾರ, ಚನ್ನಾರಡ್ಡಿ ಚಬನೂರ, ಸಂಘಟನೆಯ ಮುಖಂಡರುಗಳಾದ ಚನ್ನಪ್ಪಗೌಡ ಪಾಟೀಲ (ಪಡೇಕನೂರ), ಬಸವಂತ್ರಾಯ ಬಿರಾದಾರ, ಮಲ್ಲನಗೌಡ ಆನೇಸೂರ,
ನಿಂಗನಗೌಡ ಬಿರಾದಾರ, ಭೀಮನಗೌಡ ಟಕ್ಕಳಕಿ, ಯಮನೂರಿ ಸವದಿ, ವೀರೇಶ ಹಿರೇಮಠ, ಬಾಲಪ್ಪಗೌಡ ಲಿಂಗದಳ್ಳಿ, ಹಣಮಂತ್ರಾಯ ಹಾಲರಡ್ಡಿ, ರುದ್ರಗೌಡ ಬಿರಾದಾರ, ರವಿ ಐನಾಪುರ, ನಿಂಗನಗೌಡ ಪಾಟೀಲ, ನಿಂಗನಗೌಡ ಬಿರಾದಾರ, ರಾಮನಗೌಡ ತುಂಬಗಿ, ಹಯಾಜ ಮಕಾಂದಾರ, ಸಂಗನಗೌಡ ಮೂಲಿಮನಿ, ಶ್ರೀಶೈಲ ಜಲಪುರ, ದೇವಾನಂದಗೌಡ ಪಾಟೀಲ, ರಾಮನಗೌಡ ಚೌದ್ರಿ, ಶರಣಗೌಡ ಗುಂಡಕನಾಳ, ದೊಡ್ಡಪ್ಪಗೌಡ ಬಿರಾದಾರ, ಪ್ರಕಾಶ ಹಿರೇಕುರಬರ, ಶಂಕರಗೌಡ ಮಾಳಿ, ರಮೇಶ ಜಾಲಹಳ್ಳಿ, ಜಗನ್ನಾಥರಡ್ಡಿ ಪಾಟೀಲ ಇದ್ದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ

State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ

Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.