ಆತಂಕ ಸೃಷ್ಟಿಸಿದ ಲಘು ವಿಮಾನ ಹಾರಾಟ
Team Udayavani, Mar 24, 2017, 3:45 AM IST
ವಿಜಯಪುರ/ಆಲಮಟ್ಟಿ: ರಾಜ್ಯದ ಪ್ರಮುಖ ಜಲಾಶಯ ಆಲಮಟ್ಟಿಯ ಲಾಲ ಬಹದ್ದೂರ ಶಾಸ್ತ್ರೀ ಜಲಾಶಯದ ಮೇಲೆ ತೀರಾ ಕೆಳ ಹಂತದಲ್ಲಿ ಲಘು ವಿಮಾನವೊಂದು ಹಾರಾಟ ನಡೆಸಿ ಜಲಾಶಯದ ಅಧಿಕಾರಿಗಳು ಹಾಗೂ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಗುರುವಾರ ಬೆಳಗ್ಗೆ 9.45ರ ಸುಮಾರಿಗೆ ಕಲಬುರಗಿ ಕಡೆಯಿಂದ ಬಂದ ವಿಮಾನ ಜಲಾಶಯದಿಂದ ಕೇವಲ 100 ಮೀಟರ್ ಎತ್ತರದಲ್ಲಿ ಹಿನ್ನೀರಿನ ಮಾರ್ಗವಾಗಿ ಸಾಗಿ, ಅಲ್ಲಿ ತಿರುವು ಪಡೆದು ಮರಳಿದೆ. ಆಲಮಟ್ಟಿ ಶಾಸ್ತ್ರೀಜಿ ಜಲಾಶಯದ ಮೇಲೆ ಹಾರಾಡುವ ಮುನ್ನ ನಾರಾಯಣಪುರ ಬಳಿ ಬಸವಸಾಗರ ಜಲಾಶಯದ ಮೇಲೂ ಈ ವಿಮಾನ ಹಾರಾಟ ಮಾಡಿದೆ ಎನ್ನಲಾಗಿದೆ. ಈ ವಿಷಯ ತಿಳಿಯುತ್ತಲೇ ಆಲಮಟ್ಟಿ ಶಾಸ್ತ್ರೀಜಿ ಸ್ಥಳೀಯ ಜಲಾಶಯದ ಭದ್ರತೆಗೆ ಪ್ರತ್ಯೇಕವಾಗಿ ನಿಯೋಜಿಸಿರುವ ಪೊಲೀಸ್ ತಂಡ ಹಾಗೂ ಕರ್ನಾಟಕ ರಾಜ್ಯ ಕೈಗಾರಿಕೆ ಭದ್ರತಾ ಪಡೆ ಅಧಿಧಿಕಾರಿಗಳು ಆತಂಕಕ್ಕೀಡಾಗಿದ್ದಾರೆ.
ನಾಲ್ಕು ದಿನದ ಹಿಂದೆಯೂ ವಿಮಾನ ಹಾರಾಟ ನಡೆಸಿದ್ದು , ಅಧಿಕಾರಿಗಳು ಲಘು ವಿಮಾನ ಹಾರಾಟ ನಡೆಸುವ ಬೆಳಗಾವಿಯ ಸಾಂಬ್ರಾ, ಹುಬ್ಬಳ್ಳಿ, ಚೆನ್ನೈ ವಿಮಾನ ನಿಲ್ದಾಣದ ಕಂಟ್ರೋಲ್ ರೂಂ ಸಂಪರ್ಕಿಸಿದರೂ ತಮ್ಮ ವ್ಯಾಪ್ತಿಯಿಂದ ಯಾವುದೇ ವಿಮಾನ ಹಾರಾಟ ನಡೆಸಿಲ್ಲವೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದರಿಂದ ಕಂಗಾಲಾದ ಅಧಿಕಾರಿಗಳು ಲಘು ವಿಮಾನ ಹಾರಾಟದ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಧಿಕಾರಿಗಳಿಗೆ ನೀಡಿದ್ದಾರೆ.
ಆತಂಕ ಬೇಡ:
ಎಸ್ಪಿ ಸಿದ್ಧರಾಮಪ್ಪ ಬೀದರ ನಗರದಲ್ಲಿರುವ ಸೈನಿಕ ವಿಮಾನ ತರಬೇತಿ ಕೇಂದ್ರದ ಅಧಿಧಿಕಾರಿಗಳನ್ನು ಸಂಪರ್ಕಿಸಿದ್ದು, ತಮ್ಮ ಕೇಂದ್ರದಲ್ಲಿರುವ ತರಬೇತಿ ಲಘು ವಿಮಾನ ಕೃಷ್ಣಾ ತೀರದ ಮಾರ್ಗದಲ್ಲಿ ಹಾರಾಟ ಮಾಡಿದ್ದಾಗಿ ಅಧಿಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಜಿಲ್ಲಾಧಿಧಿಕಾರಿ ಶಿವಕುಮಾರ ಉದಯವಾಣಿಗೆ ಮಾತನಾಡಿ, ಲಘು ವಿಮಾನ ಬೀದರ ಸೈನಿಕ ವಿಮಾನ ಹಾರಾಟ ತರಬೇತಿ ಕೇಂದ್ರಕ್ಕೆ ಸೇರಿದ್ದು ಎಂದು ಎಸ್ಪಿ ಅವರು ಮಾಹಿತಿ ಸಂಗ್ರಹಿಸಿದ್ದಾರೆ. ಈ ಕುರಿತು ಬೀದರ ಸೇನಾ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಸ್ಥಳೀಯರು ಈ ವಿಮಾನ ಹಾರಾಟದ ಕುರಿತು ಆತಂಕ ಪಡುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ
Dr G Parameshwar: ಸೆನ್ ಠಾಣೆಗಳಿಗೂ ಎಸ್ಪಿ ಕೇಡರ್: ಗೃಹ ಸಚಿವ
Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.