Muddebihal: ಗಾಂಧಿ ಜಯಂತಿಯಂದು ಪೊಲೀಸರಿಂದ ಮಾದರಿ ಕಾರ್ಯ


Team Udayavani, Oct 2, 2024, 1:10 PM IST

6-muddebihala

ಮುದ್ದೇಬಿಹಾಳ: ಪೊಲೀಸರೆಂದರೆ ಕ್ರಿಮಿನಲ್ ಗಳ ಬೆನ್ನು ಹತ್ತುವವರು, ಅಪರಾಧ ತಡೆಯಲು ಶ್ರಮಿಸುವವರು ಅನ್ನೋ ಭಾವ ಜನರಲ್ಲಿದೆ. ಆದರೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೊಲೀಸರು ಗಾಂಧಿ ಜಯಂತಿಯಂದು ಸಾರ್ಥಕ ಕೆಲಸ ಮಾಡುವ ಮೂಲಕ ಗಾಂಧಿ ತತ್ವಗಳಾದ ಶ್ರಮದಾನ, ಸ್ವಚ್ಛತೆಯನ್ನು ಪಾಲಿಸಿ, ಜನತೆಗೆ, ಸಂಘ ಸಂಸ್ಥೆಯವರಿಗೆ ಮಾದರಿಯ ಸಂದೇಶ ನೀಡಿದ್ದಾರೆ.

ಮುದ್ದೇಬಿಹಾಳ ನಗರದ ಅಂಬೇಡ್ಕರ್ ವೃತ್ತ ಜನನಿಬಿಡ ಮಾತ್ರವಲ್ಲದೆ ಹೆಚ್ಚು ವಾಹನ ಸಂಚಾರವಿರುವ ಅತ್ಯಂತ ಕಿರಿದಾದ ಸರ್ಕಲ್. ಸಮೀಪದಲ್ಲೇ ಶಾಲೆ, ಕಾಲೇಜುಗಳಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಓಡಾಟ ಇರುತ್ತದೆ. ಸಾರ್ವಜನಿಕರು ಬಸ್ಸಿಗಾಗಿ ಇದೇ ವೃತ್ತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಯುತ್ತಾರೆ. ಇದರಿಂದಾಗಿ ಸಹಜವಾಗಿ ಇಲ್ಲಿ ಅಪಘಾತಳ ಸಂಖ್ಯೆಯೂ ಹೆಚ್ಚು. ಇದನ್ನು ಮನಗಂಡ ಪುರಸಭೆ ಆಡಳಿತ ಈಚೆಗೆ ಸರ್ಕಲ್ ಸುತ್ತಲಿನ ಅತಿಕ್ರಮಣ ತೆರವುಗೊಳಿಸಿತ್ತು. ಮತ್ತೆ ಅತಿಕ್ರಮಣ ಆಗದಂತೆ ತಡೆಯಲು ಪೊಲೀಸರು ಅಲ್ಲಿ ಬಸ್ ಶೆಲ್ಟರ್ ಮಾಡುವ ಯೋಜನೆ ಜಾರಿಗೊಳಿಸಿದರು.

ಶ್ರಮದಾನ, ಸ್ವಚ್ಛತೆ: ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪಿಎಸೈಗಳಾದ ಸಂಜಯ್ ತಿಪ್ಪರಡ್ಡಿ, ಆರ್.ಎಲ್.ಮನ್ನಾಭಾಯಿ, ಎಎಸೈ, ಮುಖ್ಯಪೇದೆ, ಮಹಿಳಾ ಪೇದೆ ಸೇರಿ ಹಲವು ಪೊಲೀಸರು ಶ್ವೇತ ವರ್ಣದ ಟೀಶರ್ಟ್, ಕಪ್ಪು ಪ್ಯಾಂಟ್ ಸಮವಸ್ತ್ರಧಾರಿಗಳಾಗಿ ಸರ್ಕಲನ ಎಪಿಎಂಸಿ ಕಂಪೌಂಡ್ ಗೋಡೆಗೆ ಹೊಂದಿಕೊಂಡಿರುವ ಸ್ಥಳ ಸ್ವಚ್ಛಗೊಳಿಸಿದರು. ಸಲಿಕೆ ಹಿಡಿದು ಗರಸು ಮಣ್ಣು ಹಾಕಿ ಸಮತಟ್ಟುಗೊಳಿಸಿದರು. ಸಾರ್ವಜನಿಕರಿಗೆ ಕುಳುತುಕೊಳ್ಳಲು ಸಂಚಾರ ನಿಯಮ ಬರೆದ ಸಿಮೆಂಟ್ ಕಾಂಕ್ರಿಟ್ ಆಸನಗಳನ್ನು ಅಳವಡಿಸಿದರು. ಒಟ್ಟಾರೆ ಅಂದಾಜು 3-4 ಗಂಟೆಗಳ ಕಾಲ ಶ್ರಮದಾನ ಮಾಡಿ ಮಾದರಿಯ ಸಂದೇಶ ನೀಡಿದರು.

ಪುರಸಭೆ ಸಹಕಾರ: ಪುರಸಭೆ ಆಡಳಿತದ ಕಾರ್ಯದಲ್ಲಿ ಕೈಜೋಡಿಸಲು ಜೆಸಿಬಿ ನೀಡಿ, ಕೆಲ ಪೌರಕಾರ್ಮಿಕರನ್ನು ಒದಗಿಸಿ ಸಹಕರಿಸಿದರು.

ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ಪುರಸಭೆಯವರು ಮಾಡಬೇಕಿದ್ದ ಕಾರ್ಯವನ್ನು ಪೊಲೀಸರು ಮಾಡಿದ್ದಕ್ಕೆ ಅಭಿನಂದಿಸಿ ಶಾಸಕರ ಅನುದಾನದಲ್ಲಿ ಬಸ್ ಸೇಲ್ಟರ್ ನಿರ್ಮಿಸುವ ವಾಗ್ದಾನ ಮಾಡಿದರು.

ಮುಖಂಡರು ಪಾಲು: ಪೊಲೀಸರೊಂದಿಗೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸಮಾಜ ಸೇವಕರು ಕೈಜೋಡಿಸಿ ಶ್ರಮದಾನದಲ್ಲಿ ಭಾಗವಹಿಸಿ ಪೊಲೀಸರಿಗೆ ಸಾಥ್ ನೀಡಿದರು.

ಸಿಪಿಐ ಹೇಳಿಕೆ: ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ ಮಾತನಾಡಿ, ಈ ಸರ್ಕಲ್ ಅಪಘಾತದ ಸ್ಥಳವಾಗಿತ್ತು. ಸಂಚಾರಕ್ಕೆ ಸಮಸ್ಯೆ ಮಾಡಿದ್ದನ್ನು ಕಿತ್ತುಹಾಕಿ ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಸ್ವಚ್ಚಗೊಳಿಸಿ ನಮ್ಮ ಪೊಲೀಸರು ಶ್ರಮದಾನದ ಮೂಲಕ ಸಾರ್ವಜನಿಕರ ವಿಶ್ರಾಂತಿ ತಾಣವಾಗಿ ಮಾಡಿದರು. ಇಲ್ಲಿ ಬಸ್ ಶೆಲ್ಟರ್ ನಿರ್ಮಾಣವಾಗಬೇಕು. ಗಾಂಧಿ ಜಯಂತಿಯಂದು ಗಾಂಧೀಜಿಯವರ ಸಂದೇಶ ಪಾಲಿಸಿದ್ದೇವೆ. ಪೊಲೀಸರು ಕೂಡಾ ಸಮಾಜಮುಖಿ ಕೆಲಸ ಮಾಡುತ್ತಾರೆ ಅನ್ನೋದನ್ನು ಮಾಡಿ ತೋರಿಸಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ… ಮನೆಯಲ್ಲಿತ್ತು ಡೆತ್ ನೋಟ್

ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ… ಮನೆಯೊಳಗಿತ್ತು ಡೆತ್ ನೋಟ್

1-a-souti

India tour ಮುನ್ನ ನಾಯಕತ್ವ ತೊರೆದ ಸೌಥಿ :ಕಿವೀಸ್ ಗೆ ಹೊಸ ಸಾರಥಿ

Thalapathy 69: ದಳಪತಿ ವಿಜಯ್‌ 69ನೇ ಸಿನಿಮಾಕ್ಕೆ ನಾಯಕಿಯಾದ ಕರಾವಳಿ ಬೆಡಗಿ

Thalapathy 69: ದಳಪತಿ ವಿಜಯ್‌ 69ನೇ ಸಿನಿಮಾಕ್ಕೆ ನಾಯಕಿಯಾದ ಕರಾವಳಿ ಬೆಡಗಿ

Udupi-ಮಣಿಪಾಲ: 9ತಿಂಗಳಲ್ಲಿ 25 ಮನೆ, ಅಂಗಡಿ ಲೂಟಿ; ಪೊಲೀಸ್‌ ವ್ಯವಸ್ಥೆಗೇ ಸವಾಲಾದ ಕಳ್ಳರು

Udupi-ಮಣಿಪಾಲ: 9ತಿಂಗಳಲ್ಲಿ 25 ಮನೆ, ಅಂಗಡಿ ಲೂಟಿ; ಪೊಲೀಸ್‌ ವ್ಯವಸ್ಥೆಗೇ ಸವಾಲಾದ ಕಳ್ಳರು

1-pawan-kalyana

Andhra DCM 11 ದಿನಗಳ ವ್ರತ; ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಪವನ್ ಕಲ್ಯಾಣ್

ಸಿದ್ದರಾಮಯ್ಯನವರ ಜನಪ್ರಿಯತೆ ಕಂಡು ಬಿಜೆಪಿ-ಜೆಡಿಎಸ್ ಅವರಿಗೆ ಹೊಟ್ಟೆ ಕಿಚ್ಚು: ದರ್ಶನಾಪುರ

ಸಿದ್ದರಾಮಯ್ಯನವರ ಜನಪ್ರಿಯತೆ ಕಂಡು ಬಿಜೆಪಿ-ಜೆಡಿಎಸ್ ಅವರಿಗೆ ಹೊಟ್ಟೆ ಕಿಚ್ಚು: ದರ್ಶನಾಪುರ

Delhi Drug Bust: ಬೃಹತ್‌ ಮಾದಕ ದ್ರವ್ಯ ಜಾಲ-2000 ಕೋಟಿ ರೂ. ಮೌಲ್ಯದ ಕೊಕೇನ್‌ ವಶ

Delhi Drug Bust: ಬೃಹತ್‌ ಮಾದಕ ದ್ರವ್ಯ ಜಾಲ-2000 ಕೋಟಿ ರೂ. ಮೌಲ್ಯದ ಕೊಕೇನ್‌ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಾರಾಷ್ಟ್ರದ ಗುಡ್ಡಾಪುರದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ: ಗಡಿ ನೆಲದಲ್ಲಿ ಕನ್ನಡ ಡಿಂಡಿಮ

ಮಹಾರಾಷ್ಟ್ರದ ಗುಡ್ಡಾಪುರದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ: ಗಡಿ ನೆಲದಲ್ಲಿ ಕನ್ನಡ ಡಿಂಡಿಮ

Basangouda Patil Yatnal

BJP: ಹೈಕಮಾಂಡ್ ಅನುಮತಿಸಿದರೆ ಬಸವಕಲ್ಯಾಣದಿಂದ ಬೆಂಗಳೂರಿಗೆ ಪಾದಯಾತ್ರೆ: ಶಾಸಕ ಯತ್ನಾಳ

ಅವರು-ಇವರು ಕಳ್ಳರು ಎನ್ನೋದು ಬೇಡ, ರಾಜೀನಾಮೆ ಕೊಟ್ಟು ನೀವು ಸ್ವಚ್ಛವಾಗಿರಿ: ಯತ್ನಾಳ್

MUDA; ಅವರು-ಇವರು ಕಳ್ಳರು ಎನ್ನೋದು ಬೇಡ, ರಾಜೀನಾಮೆ ಕೊಟ್ಟು ನೀವು ಸ್ವಚ್ಛವಾಗಿರಿ: ಯತ್ನಾಳ್

Gadinadu-Award

Award: 2023-24, 2024-25ನೇ ಸಾಲಿನ “ಗಡಿನಾಡ ಚೇತನ” ಪ್ರಶಸ್ತಿ ಪ್ರಕಟ

2-muddebihal

Muddebihal: ನಿಂತಿದ್ದ ಕ್ಯಾಂಟರ್‌ ಗೆ ಕಾರು ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Koppal: ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಕೂಸು ಮೃತಪಟ್ಟಾಗ ಗಂಡಾಯಿತು!

Koppal: ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಕೂಸು ಮೃತಪಟ್ಟಾಗ ಗಂಡಾಯಿತು!

10-shirva

Shirva: ಬಂಟಕಲ್ಲು ರಕ್ತದಾನ ಶಿಬಿರ- ರಕ್ತದಾನದಿಂದ ಜೀವ ಉಳಿಸುವ ಕಾರ್ಯ: ಕಾಪು ತಹಶೀಲ್ದಾರ್‌

ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ… ಮನೆಯಲ್ಲಿತ್ತು ಡೆತ್ ನೋಟ್

ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ… ಮನೆಯೊಳಗಿತ್ತು ಡೆತ್ ನೋಟ್

1-a-souti

India tour ಮುನ್ನ ನಾಯಕತ್ವ ತೊರೆದ ಸೌಥಿ :ಕಿವೀಸ್ ಗೆ ಹೊಸ ಸಾರಥಿ

Thalapathy 69: ದಳಪತಿ ವಿಜಯ್‌ 69ನೇ ಸಿನಿಮಾಕ್ಕೆ ನಾಯಕಿಯಾದ ಕರಾವಳಿ ಬೆಡಗಿ

Thalapathy 69: ದಳಪತಿ ವಿಜಯ್‌ 69ನೇ ಸಿನಿಮಾಕ್ಕೆ ನಾಯಕಿಯಾದ ಕರಾವಳಿ ಬೆಡಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.