Vijayapura; ಗುಮ್ಮಟ ನಗರಿಯಲ್ಲಿ ಜಮೀನಿಲ್ಲದ ಯುವಕನಿಂದ ಅಣಬೆ ಕೃಷಿ ಸಾಧನೆ

ಕಡಿಮೆ ಸ್ಥಳ, ಕಡಿಮೆ ಬಂಡವಾಳ, ಕಡಿಮೆ ಶ್ರಮದಿಂದ ಹೆಚ್ಚು ಆದಾಯ

Team Udayavani, Jul 30, 2024, 7:18 PM IST

ಗುಮ್ಮಟ ನಗರಿಯಲ್ಲಿ ಜಮೀನಿಲ್ಲದ ಯುವಕನಿಂದ ಅಣಬೆ ಕೃಷಿ ಸಾಧನೆ

ವಿಜಯಪುರ: ಒಂದು ಗುಂಟೆ ಜಮೀನು ಇಲ್ಲದೆಯೂ ಕೃಷಿಕ ಎನಿಸಿಕೊಳ್ಳಬೇಕು ಎಂಬ ಕನಸು ಕೊನೆಗೂ ನನಸಗಾಗಿದೆ. ಶಿಕ್ಷಕ ವೃತ್ತಿಯ ಪದವಿ ಪಡೆದಿರುವ ಯುವಕನ ಕೃಷಿ ಕನಸು ನನಸಾಗಿಸಿದ್ದು ಅಣಬೆ.

ಡಿಎಡ್ ಓದಿರುವ ವಿಜಯಪುರ ನಗರದ ಗಣೇಶನಗರ ನಿವಾಸಿ ವಿರೂಪಾಕ್ಷಯ್ಯ ಶಾಸ್ತ್ರಿಮಠ ಕೃಷಿಕನಾಗಬೇಕು ಎಂಬ ಹಂಬಲ ಹೊಂದಿದಾತ. ಆದರೆ ಅವರ ಕುಟುಂಬಕ್ಕೆ ತುಂಡು ಜಮೀನೂ ಇರಲಿಲ್ಲ. ಆದರೂ ಛಲ ಬಿಡದ ವಿರೂಪಾಕ್ಷಯ್ಯ ಕಳೆದ ಕೆಲ ವರ್ಷಗಳಿಂದ ವಿಜಯಪುರದಿಂದ 40-50 ಕಿ.ಮೀ. ದೂರದ ನೀರಿನ ಸಮಸ್ಯೆ ಇರುವ ಇಂಡಿ ಪರಿಸರದಲ್ಲಿ ವಾರ್ಷಿಕ ಲಾವಣಿ ಆಧಾರದಲ್ಲಿ ಕೃಷಿ ಜಮೀನು ಪಡೆದು ಒಕ್ಕಲುತನ ಮಾಡಿದ. ತರಕಾರಿ, ಹಣ್ಣು ಅಂತೆಲ್ಲ ಏನೇನೋ ಬೆಳೆದು ಕೃಷಿಕನಾಗಬೇಕು ಎಂಬ ಹಂಬಲ ಈಡೇರಿಸಿಕೊಳ್ಳಲು ಹೆಣಗುತ್ತಲೇ ಇದ್ದ.

ಈ ಹಂತದಲ್ಲಿ ಸಹೋದರ ಪ್ರವೀಣ ಶಾಸ್ತ್ರಿಮಠ ಅವರೊಂದಿಗೆ ಚರ್ಚೆ ಮಾಡಿ, ಆನ್‌ಲೈನ್‌ ನಲ್ಲಿ ಹುಡುಕಾಟದಲ್ಲಿ ತೊಡಗಿದಾಗ ಜಮೀನು ಇಲ್ಲದೆಯೂ ಕೃಷಿಕ ಎನಿಸಿಕೊಳ್ಳುವ ಅವಕಾಶ ಕಲ್ಪಿಸುವ ಅಣಬೆ ಬಗ್ಗೆ ತಿಳಿದಿಕೊಂಡರು.

ಸಸ್ಯಹಾರಿಗಳ ಮಾಂಸ ಎಂದು ಕರೆಸಿಕೊಳ್ಳುವ ಅಣಬೆ ಹೆಚ್ಚು ಪೌಷ್ಠಿಕತೆ ಸೇರಿದಂತೆ ಹಲವು ಆರೋಗ್ಯಕರ ಅಂಶಗಳನ್ನು ಹೊಂದಿದೆ. ಮಾಂಸಹಾರಕ್ಕೆ ಪರ್ಯಾಯ ಎಂದೂ ಕರೆಸಿಕೊಳ್ಳುವ ಮಶ್ರೂಮ್ ಗೆ ಇತ್ತೀಚೆಗೆ ಹೋಟೆಲ್, ಡಾಬಾಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇದನ್ನರಿತು ವಿರೂಪಾಕ್ಷಯ್ಯ ಅಣಬೆ ಬೆಳೆಯತ್ತ ವಾಲಿದ್ದಾರೆ.

ಕಡಿಮೆ ಬಂಡವಾಳ, ಕಡಿಮೆ ಶ್ರಮ, ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ತರುವ ಕೃಷಿಯತ್ತ ಒಲವು ತೋರಿದರು. ಇದಕ್ಕಾಗಿ ನಗರದ ಬಾಗಲಕೋಟ ರಸ್ತೆಯ ಪರಿಸರದಲ್ಲಿ ಕೇವಲ ಒಂದು ನಿವೇಶನದಲ್ಲಿ ಶೆಡ್ ನಿರ್ಮಿಸಿಕೊಂಡು ಅಣಬೆ ಬೇಸಾಯಕ್ಕೆ ಮುಂದಾಗಿದ್ದಾರೆ.

ಒಂದೂವರೆ ವರ್ಷದಿಂದ ಅಣಬೆ ಕೃಷಿ ಮಾಡುತ್ತಿರುವ ವಿರೂಪಾಕ್ಷಯ್ಯ ವಿಜಯಪುರ ಜಿಲ್ಲೆಯ ಮೊದಲ ಅಣಬೆ ಕೃಷಿಕನೆಂಬ ಕೀರ್ತಿ ಪಡೆದಿದ್ದಾರೆ. ಕೃಷಿ ಇಲಾಖೆ ವಿರೂಪಾಕ್ಷಯ್ಯ ಅವರ ಅಣಬೆ ಕೃಷಿ ಆಸಕ್ತಿಯನ್ನು ಕಂಡು ಸರ್ಕಾರಿ ಯೋಜನೆಯ ನೆರವು ನೀಡಿದೆ.

ಅಣಬೆ ಉತ್ಪಾದನೆ ಜೊತೆಗೆ ಸ್ವಂತ ಬ್ರ್ಯಾಂಡ್ ಕೂಡ ಹೊಂದಿದ್ದಾರೆ. ಒಣ-ಹಸಿ ಅಣಬೆ ಮಾರಾಟದ ಜೊತೆಗೆ ಅಣಬೆ ಮೌಲ್ಯವರ್ಧನೆಯನ್ನೂ ಮಾಡುತ್ತಾರೆ. ಹಪ್ಪಳ ಸೇರಿದಂತೆ ವಿವಿಧ ಖಾದ್ಯ ತಯಾರಿಕೆಗೆ ಬೇಕಾದಂತೆ ಪ್ಯಾಕ್ ಮಾಡಿ ಅಣಬೆ ಪೂರೈಸುತ್ತಿದ್ದಾರೆ.

ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಗ್ರಾಹಕರನ್ನು ಹುಡುಕಿಕೊಂಡಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಅವರ ಮನೆಗೆ ತೆರಳಿ ಅಣಬೆ ಪೂರೈಸುತ್ತಾರೆ. ಹೆಚ್ಚು ಗ್ರಾಹಕರನ್ನು ಹೊಂದಿಸಿಕೊಂಡರೆ ಪೂರೈಕೆ ಅಸಾಧ್ಯವೆಂದು ಸೀಮಿತ ಗ್ರಾಹಕರ ಬಳಗದಲ್ಲೇ ಅಣಬೆ ಮಾರುವ ಮಾರುಕಟ್ಟೆ ಕಂಡುಕೊಂಡಿದ್ದಾರೆ.

ನಿತ್ಯ ಒಂದೆರಡು ಗಂಟೆ ಕೆಲಸ ಮಾಡಿ, ಕೃಷಿಯಲ್ಲಿ ತೊಡಗಿದ್ದಾರೆ. ಪ್ರತಿ ಕೆ.ಜಿ. ಅಣಬೆ 500 ರೂ. ದರಕ್ಕೆ ಮಾರಾಟ ಮಾಡುತ್ತಾರೆ. ಅಣಬೆ ಬೇಸಾಯದಿಂದ ಮಾಸಿಕ ಸುಮಾರು 25 ಸಾವಿರ ರೂ. ಆದಾಯ ಪಡೆಯುತ್ತಿದ್ದಾರೆ.

ಇದೀಗ ವಿರೂಪಾಕ್ಷಯ್ಯ ಅವರ ಅಣಬೆ ಪ್ರಯೋಗಾಲಯವೇ ಪ್ರಾತ್ಯಕ್ಷಿಕೆ ಕೇಂದ್ರ ಎನಿಸಿದೆ. ಅಣಬೆ ಕೃಷಿಯಲ್ಲಿ ಬಗ್ಗೆ ವಿರೂಪಾಕ್ಷಯ್ಯ ಅವರಿಗೆ ನಿತ್ಯವೂ ನೂರಾರು ಮೊಬೈಲ್ ಕರೆಗಳು ಬರುತ್ತವೆ. ಹತ್ತಾರು ಜನರು ಇವರ ಅಣಬೆ ಪ್ರಯೋಗಾಲಯದ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.

ಅಷ್ಟರ ಮಟ್ಟಿಗೆ ಜಮೀನು ಇಲ್ಲದೆಯೂ ಕೃಷಿಕ ಎಂದು ಕರೆಸಿಕೊಳ್ಳುವ ಹಂಬಲವನ್ನು ಈಡೇರಿಸಿಕೊಳ್ಳುವ ಜೊತೆಗೆ ಅಣಬೆ ಉದ್ಯಮಿಯಾಗಿಯು ವಿರೂಪಾಕ್ಷಯ್ಯ ಸಾಧನೆ ಮಾಡುತ್ತಿದ್ದಾರೆ. ಇವರ ಸಾಧನೆಗೆ ಕೃಷಿ ವಿಜ್ಞಾನ ಕೇಂದ್ರ ಸನ್ಮಾನ ಮಾಡಿ ಗೌರವಿಸಿದೆ.

ನನ್ನ ಕುಟುಂಬಕ್ಕೆ ಜಮೀನು ಇರಲಿಲ್ಲ, ಆದರೆ ಕೃಷಿಕ ಎನಿಸಿಕೊಳ್ಳಬೇಕು ಎಂಬ ಕನಸು ದೊಡ್ಡದಾಗಿತ್ತು. ಆಗ ನನ್ನ ಕನಸು ನನಸಾಗಿಸಿದ್ದು ಅಣಬೆ. ವಿಜಯಪುರ ಜಿಲ್ಲೆಯಲ್ಲೇ ಅಣಬೆ ಬೆಳೆಯುವ ಮೊದಲಿಗ ಎಂಬ ಹಿರಿಮೆಯ ಜೊತೆಗೆ ಅಣಬೆ ಕೃಷಿಕ ಎಂದೂ ಜನ ನನ್ನನ್ನು ಗುರುತಿಸುತ್ತಿರುವುದು ಸಂತಸ ಉಂಟು ಮಾಡಿದೆ ಎನ್ನುತ್ತಾರೆ ವಿರೂಪಾಕ್ಷಯ್ಯ.

ತನ್ನಲ್ಲಿರುವ ಆರೋಗ್ಯ ಸಂಬಂಧಿ ವಿಶೇಷ ಗುಣಗಳಿಂದ ಅಣಬೆ ಮಾಂಸಾಹಾರಕ್ಕೆ ಪರ್ಯಾಯ ಎನಿಸಿಕೊಂಡಿದೆ. ವಿಜಯಪುರ ಜಿಲ್ಲೆ ಅಣಬೆ ಬೆಳೆಗೆ ಪೂರಕ ಪರಿಸರ ಹೊಂದಿದ್ದು, ಸಣ್ಣ ಸ್ಥಳದಲ್ಲಿ ಕಡಿಮೆ ಬಂಡವಾಳದಿಂದ ಅಣಬೆ ಕೃಷಿ ಮಾಡುತ್ತಿರುವ ವಿರೂಪಾಕ್ಷಯ್ಯ ನಿದರ್ಶನವಾಗಿದ್ದಾರೆ ಎನ್ನುತ್ತಾರೆ ಕೃ.ವಿ.ಕೇಂ. ಹಿಟ್ನಳ್ಳಿ ಕೃಷಿ ವಿಜ್ಞಾನಿ ಶ್ವೇತಾ ಮಣ್ಣಿಕೇರಿ.

ತಾಂತ್ರಿಕ ಪದವೀಧರನಾಗಿರುವ ನಾನು ಅಣಬೆ ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದು, ವಿರೂಪಾಕ್ಷಯ್ಯ ಅವರಿಂದ ಪ್ರೇರಿತನಾಗಿ ಅಣಬೆ ಬೆಳೆಯಲು ಯೋಜಿಸಿದ್ದೇನೆ. ಇದಕ್ಕಾಗಿ ಅಣಬೆ ಕೃಷಿ ಕುರಿತು ತರಬೇತಿಯನ್ನೂ ಪಡೆದಿದ್ದು, ಅಣಬೆ ಬೆಳೆಯುವ ಆಸಕ್ತಿ ಹೆಚ್ಚಿಸಿದೆ ಎನ್ನುತ್ತಾರೆ ಪಡನೂರಿನ ಸಚಿನ್ ಅರವತ್.

ಜಿ.ಎಸ್.ಕಮತರ

ಟಾಪ್ ನ್ಯೂಸ್

police crime

Kolkata; ಟ್ರೈನಿ ವೈದ್ಯೆ ಕೇಸು:1 ಕಿ.ಮೀ. ಬರಲು ಪೊಲೀಸರಿಗೆ 1ತಾಸು!

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Census

Census ಈ ಬಾರಿ ಜಾತಿ ಕಾಲಂ ಸೇರ್ಪಡೆಗೆ ಕೇಂದ್ರ ಸರಕಾರ‌ ಚಿಂತನೆ?

Namma-clinic

Karnataka; ಬಸ್‌ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ ಸಮುಚಿತ ನಿರ್ಧಾರ

Dinesh-Meeting

Bengaluru: ನಿಫಾಗೆ ಬಲಿಯಾದ ವಿದ್ಯಾರ್ಥಿಯ ಸಂಪರ್ಕದಲ್ಲಿದ್ದ 25 ಮಂದಿ ಪತ್ತೆ

PUNJALAKATTE

Punjalkatte: ಆರ್‌ಎಎಫ್ ಪೊಲೀಸರಿದ್ದ ಲಾರಿ ಪಲ್ಟಿ , ಇಬ್ಬರಿಗೆ ಗಾಯ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kota-shivanand

ಕಾಳಿಂಗ ನಾವಡ ಪ್ರಶಸ್ತಿಗೆ ಕೋಟ ಶಿವಾನಂದ ಆಯ್ಕೆ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

BYV

Talk Fight: ಯಾರು ಏನೇ ಅಂದ್ರೂ ಬಿಜೆಪಿ ಕಾರ್ಯಕರ್ತರು ನನ್ನ ಒಪ್ಪಿದ್ದಾರೆ: ವಿಜಯೇಂದ್ರ

COngress-Meet

Munirathna:ಒಕ್ಕಲಿಗ ಹೆಣ್ಣುಮಕ್ಕಳ ಬಗ್ಗೆ ಹೇಳಿಕೆ; ಸಮುದಾಯದ ಸಚಿವ, ಶಾಸಕರಿಂದ ಸಿಎಂಗೆ ಮನವಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

police crime

Kolkata; ಟ್ರೈನಿ ವೈದ್ಯೆ ಕೇಸು:1 ಕಿ.ಮೀ. ಬರಲು ಪೊಲೀಸರಿಗೆ 1ತಾಸು!

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Census

Census ಈ ಬಾರಿ ಜಾತಿ ಕಾಲಂ ಸೇರ್ಪಡೆಗೆ ಕೇಂದ್ರ ಸರಕಾರ‌ ಚಿಂತನೆ?

1-eewqe

‘Wrestling Champions Super League’: ಅನುಮತಿ ನೀಡಲು ನಕಾರ

1-gread

Manipur ಸಚಿವ ಖಶಿಮ್‌ ಮನೆ ಮೇಲೆ ಗ್ರೆನೇಡ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.