ಮತಯಾಚನೆಗೆ ನೂತನ ತಂತ್ರಗಾರಿಕೆ

ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಜಾಲತಾಣದ ಮೂಲಕವೂ ಪಂಚಾಯತ್‌ ಚುನಾವಣೆ ಪ್ರಚಾರ

Team Udayavani, Dec 24, 2020, 4:08 PM IST

ಮತಯಾಚನೆಗೆ ನೂತನ ತಂತ್ರಗಾರಿಕೆ

ಸಿಂದಗಿ: ಜಾಲತಾಣದಲ್ಲಿ ಹರಿದಾಡುತ್ತಿರುವ ಮತಪತ್ರ.

ಸಿಂದಗಿ: ತಾಲೂಕಿನಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತ್‌ ಚುನಾವಣೆ ಪ್ರಚಾರ ರಂಗೇರಿದೆ. ಮನೆ ಮನೆಗೆ ಹೋಗಿ ಮತಯಾಚನೆ ಮಾಡುವುದಲ್ಲದೇ ಸಾಮಾಜಿಕ ಜಾಲತಾಣ ಬಳಸಿಕೊಂಡು ಮತ ಸೆಳೆಯಲು ಮುಂದಾಗಿದ್ದಾರೆ ಉಮೇದುವಾರರು.

ಗೆಲುವಿನ ಆತ್ಮವಿಶ್ವಾಸ ಹೆಚ್ಚಿಸಿ ಕೊಳ್ಳುವ ಮೂಲಕ ಮತದಾರರ ವಿಶ್ವಾಸ ಗಳಿಸುವತ್ತಲೂ ಸ್ಪ ರ್ಧಿಗಳು ಚಿಂತನೆ ನಡೆಸಿದ್ದಾರೆ. ದೂರದ ಊರುಗಳಲ್ಲಿರುವ ಬಂಧುಗಳು, ನೆರೆ ಹೊರೆಯವರನ್ನು ಸೆಳೆದು ಮತನೀಡುವಂತೆ ವಿನಂತಿಸಿಕೊಳ್ಳುವ ಉಮೇದಿನಲ್ಲಿ ಜಾಲತಾಣದಲ್ಲೇ ಸಕ್ರಿಯರಾಗಿದ್ದಾರೆ ಅಭ್ಯರ್ಥಿಗಳು.ಈಗ ಎಲ್ಲರ ಬಳಿಯೂ ಸ್ಮಾರ್ಟ್‌ ಮೊಬೈಲ್‌ಗ‌ಳಿವೆ.ಪ್ರತಿ ಕ್ಷಣವೂ ಜನರು ಮೊಬೈಲ್‌ ಸಂದೇಶಗಳಿಗೆ ಅಪ್‌ಡೇಟ್‌ ಆಗುತ್ತಾರೆ. ಈ ತಂತ್ರವನ್ನು ಗೆಳೆಯನಂತೆ ಮಾಡಿಕೊಂಡ ಅಭ್ಯರ್ಥಿಗಳು ಮತ ಸೆಳೆಯಲು ನಾನಾ ಕಸರತ್ತು ನಡೆಸುತ್ತಿದ್ದು, ಜನಮನ ಗೆಲ್ಲುವ ಆಪ್ತ ಬರಹಗಳು ಗಮನ ಸೆಳೆಯುತ್ತಿವೆ.

ಈಗಾಗಲೇ ಸ್ಪರ್ಧಿಗಳಿಗೆ ಚುನಾವಣಾ ಆಯೋಗದ ಚಿಹ್ನೆಗಳು ದೊರಕಿದ್ದು, ಕನ್ನಡವರ್ಣಮಾಲೆಗೆ ಅನುಸಾರ ಮತ ಪತ್ರದಲ್ಲಿಅಭ್ಯರ್ಥಿಗಳ ಹೆಸರು, ಗುರುತು ನೀಡಿದೆ.ಇದಕ್ಕೆ ಅನುಸಾರ ಉಮೇದುವಾರರುತಮ್ಮ ಕ್ರಮ ಸಂಖ್ಯೆ ಮತ್ತು ತಮ್ಮ ಭಾವ ಚಿತ್ರಗಳನ್ನುಕರಪತ್ರದಲ್ಲಿ ಮುದ್ರಣ ಮಾಡಿಸಿದ್ದಾರೆ. ಇಂತಹ ಪತ್ರಗಳ ಚಿತ್ರ ತೆಗೆದು, ವಾಟ್ಸ್‌ಆ್ಯಪ್‌ ಹಾಗೂ ಫೇಸ್‌ಬುಕ್‌ ಮೂಲಕ ಪೋಸ್ಟ್‌ ಮಾಡಿ, ಮತ ಯಾಚಿಸುವ ಪರಿ ಗಮನ ಸೆಳೆಯುತ್ತಿದೆ.

ಸ್ಪರ್ಧಿಗಳ ಸ್ನೇಹಿತರು, ಕುಟುಂಬಸ್ಥರ ವಾಟ್ಸ್‌ ಆ್ಯಪ್‌ ಗ್ರೂಪ್‌, ಫೇಸ್‌ಬುಕ್‌ ಖಾತೆಗಳಲ್ಲಿ ಕರಪತ್ರಗಳ ಚಿತ್ರವನ್ನು ಹರಿಬಿಟ್ಟು, ಆರ್ಥಿಕ ಸಂದೇಶ ಕಳಿಸುತ್ತಿದ್ದಾರೆ. ಸ್ನೇಹಿತರು ಜನ ಸೇವೆಗೆ ಮುಂದಾಗಿದ್ದು, ಮಾದರಿ ಗ್ರಾಮವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಇವರಿಗೆ ಮತ ನೀಡಬೇಕು ಎಂತಲೂ, ಮತ್ತೆ ಕೆಲವರು ಆಕರ್ಷಕ ವಿಡಿಯೋ ತುಣುಕುಗಳ ಮೂಲಕ ಮತದಾರರ ಮನಗೆಲ್ಲಲು ಮುಂದಾಗಿದ್ದಾರೆ.

ಆತ್ಮೀಯರ ಮೂಲಕ ಸಂದೇಶಗಳನ್ನು ಟ್ಯಾಗ್‌ ಮಾಡಿ, ಮತ ಹಾಕುವಂತೆ ಒಲಿಸುವ ಪ್ರಯತ್ನವೂ ಸಾಗಿದೆ.ಅಭಿಮಾನಿ ಬಳಗ, ರಾಜಕಾರಣಿ ಗಳ ಗ್ರೂಪ್‌,ವಿದ್ಯಾರ್ಥಿ ಮತ್ತು ಮಹಿಳಾ ಸಂಘ-ಸಂಸ್ಥೆಗಳಸದಸ್ಯರಿಗೆ ಸಂದೇಶ ಕಳಿಸಿ, ತಮ್ಮ ಪರ ಮತ ನೀಡುವಂತೆ ವಿನಂತಿಸುವವರು ಇದ್ದಾರೆ. ಪಟ್ಟಣಗಳಲ್ಲಿ ನೆಲೆಸಿರುವ ಸಂಬಂಧಿಗಳು ಮತ್ತು ಶ್ರಮಿಕರಿಗೆ ಮತದಾರರ ಪಟ್ಟಿಯ ವಿವರ, ಸಂಖ್ಯೆ ಮತ್ತು ಚಿತ್ರಗಳನ್ನು ರವಾನಿಸಿ, ವಿಶ್ವಾಸ ಕುದುರಿಸುವ ಕೊಂಡಿಯಾಗಲು ಜಾಲತಾಣ ನೆರವಾಗಿದೆ ಎನ್ನುತ್ತಾರೆ ಉಮೇದುವಾರರು.

ಕಡಿಮೆ ಅವಧಿಯಲ್ಲಿ ಮತದಾರರನ್ನು ಮುಟ್ಟಲು ಫೇಸ್‌ಬುಕ್‌ ನೆರವಾಗಿದೆ. ಕರಪತ್ರ ಮುದ್ರಿಸಿ ನೀಡಿದರೂ, ಜೊತೆಯಲ್ಲಿ ಇಟ್ಟುಕೊಳ್ಳುವ ನಂಬಿಕೆಇಲ್ಲ. ಆದರೆ, ವಾಟ್ಸ್‌ಆ್ಯಪ್‌ ಮತ್ತು ಟೆಲಿಗ್ರಾಂ ಮೂಲಕ ಸಂದೇಶ ಗಳನ್ನು ಮತದಾರರಿಗೆ ಸುಲಭವಾಗಿ ಮುಟ್ಟಿಸಬಹುದು. ಮುದ್ರಿಸಿ ಹಂಚುವ ವೆಚ್ಚ ಹಾಗೂ ಸಮಯವೂ ಉಳಿಯುತ್ತದೆ ಎಂದು ರಾಂಪುರ ಪಿಎ ಗ್ರಾಪಂ ವಾರ್ಡ್‌ ನಂ.1ರ ಅಭ್ಯರ್ಥಿ ಮಲ್ಲಮ್ಮ ಹನುಮಂತ ಹೂಗಾರ ಹೇಳುತ್ತಾರೆ.ಉದ್ಯೋಗಕ್ಕಾಗಿ ಊರು ಬಿಟ್ಟು ತೆರಳಿರುವ ಮತದಾರರನ್ನು ಪೋನ್‌ ಮೂಲಕ ಸಂಪರ್ಕಿಸಿ, ನನ್ನಪರವಾಗಿ ಮತದಾನ ಮಾಡುವಂತೆ ವಿನಂತಿಸಿದ್ದೇನೆ. ಅವರಿಗೆ ನನ್ನ ಆಯ್ಕೆಯ ಚಿಹ್ನೆ, ಕ್ರಮ ಸಂಖ್ಯೆ ಮತ್ತು ಮತಗಟ್ಟೆ ಸಂಖ್ಯೆಯನ್ನು ವ್ಯಾಟ್ಸ್‌ಆ್ಯಪ್‌ ಮೂಲಕ ತಿಳಿಸಿದ್ದೇನೆ. ಆತ್ಮೀಯರು ನನ್ನ ಪರವಾಗಿ ಮತ ಚಲಾಯಿಸುವ ನಂಬಿಕೆ ಇದೆ. ಸಾಮಾಜಿಕ ಜಾಲತಾಣದಿಂದ ಸುಲಭ ಪ್ರಚಾರ ಸಾಧ್ಯವಾಗಿಸಿದೆ. ವಿವಿಧ ಕಾರಣಗಳಿಂದ ದೂರ ಇದ್ದವರನ್ನು ಹತ್ತಿರಕ್ಕೆಕರೆ ತಂದು ವಿಶ್ವಾಸ ಹೆಚ್ಚಿಸಿದೆ ಎನ್ನುತ್ತಾರೆ ಬೊಮ್ಮನಹಳ್ಳಿ ಗ್ರಾಪಂ ಗುಂದಗಿಯ ವಾರ್ಡ್‌ ನಂ. 4ರ ಅಭ್ಯರ್ಥಿ ಉಮಾಬಾಯಿ ರಾವುತಪ್ಪ ಬಿರಾದರ.

 

-ರಮೇಶ ಪೂಜಾರ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ

ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ

Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ

Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ

10

Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !

Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

VJP-Bagappa

Vijayapura: ರವಿ ಮೇಲಿನಕೇರಿ ಕೊ*ಲೆ ಸೇಡಿಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹ*ತ್ಯೆ?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.