ಬಿಎಲ್‌ಡಿಇಯಿಂದ ಪೊರ್ಟೆಬಲ್‌ ಮಷಿನ್‌ ಆವಿಷ್ಕಾರ

ಐದೇ ನಿಮಿಷದಲ್ಲಿ ಮರುಬಳಕೆ ವಸ್ತುಗಳ ಸ್ವತ್ಛತೆ ಕೊರೊನಾ ವೈರಸ್‌ ನಿಷ್ಕ್ರಿಯಗೊಳಿಸಲು ಸಹಕಾರಿ

Team Udayavani, Apr 14, 2020, 5:41 PM IST

ಬಿಎಲ್‌ಡಿಇಯಿಂದ ಪೊರ್ಟೆಬಲ್‌ ಮಷಿನ್‌ ಆವಿಷ್ಕಾರ

ವಿಜಯಪುರ: ಕೋವಿಡ್-19 ಕಾಯಿಲೆ ಹಿನ್ನೆಲೆಯಲ್ಲಿ ಬಿಎಲ್‌ಡಿಇ ಬಿ.ಎಂ. ಪಾಟೀಲ್‌ ವೈದ್ಯಕೀಯ ಕಾಲೇಜು-ಆಸ್ಪತ್ರೆಯಿಂದ ವಚನ ಪಿತಾಮಹ
ಡಾ| ಫ.ಗುಹಳಕಟ್ಟಿ ಇಂಜನಿಯರಿಂಗ್‌ ಕಾಲೇಜು ಸಹಯೋಗದಲ್ಲಿ ಕೋ-ಅಲ್ಟ್ರಾ ಸಲ್ಯೂಶನ್‌-20 ವಿವಿಧೋದ್ಧೇಶದ ಪೊರ್ಟೆಬಲ್‌ ಮಷಿನ್‌ನ್ನು ಆವಿಷ್ಕರಿಸಲಾಗಿದೆ. ಸದರಿ ಯಂತ್ರ ರೋಗ ನಿಗ್ರಹದಲ್ಲಿ ಆಸ್ಪತ್ರೆ, ವೈದ್ಯರು ಮಾತ್ರವಲ್ಲ ಮನೆ-ಮನೆಗೂ ಸದರಿ ಯಂತ್ರ ಉಪಯೋಗಕ್ಕೆ ಬರಲಿದೆ.

ಈ ಕುರಿತು ಪ್ರಕಟಣೆ ನೀಡಿರುವ ಬಿಎಲ್‌ಡಿಇ ಸಂಸ್ಥೆ,  ಡಾ| ಸುರೇಖಾ ಕಲ್ಯಾಣಪ್ಪಗೋಳ, ಡಾ| ಗಿರೀಶ ಭದ್ರಗೊಂಡ, ಡಾ| ಜಯಲಕ್ಷ್ಮೀ ಗೋನಾಳ, ಡಾ| ಸ್ಮಿತಾ ಮಂಗಲಗಿ ಅವರಿದ್ದ ತಂಡವು ರೋಗ ತಡೆಗಟ್ಟುವಿಕೆ ಹಾಗೂ ಮುಂಜಾಗ್ರತಾ ಮಾತ್ರವಲ್ಲದೇ ಕೊರೊನಾದಂತಹ ವೈರಸ್‌ಗಳನ್ನು ಅಲ್ಟ್ರಾವೆಲೈಟ್‌ ಕಿರಣಗಳ ಮೂಲಕ ನಾಶಪಡಿಸಬಹುದು, ಇಲ್ಲವೇ ನಿಷ್ಕ್ರಿಯಗೊಳ್ಳುತ್ತವೆ ಎಂದು ತಿಳಿಸಲಾಗಿದೆ.

ಅಲ್ಟ್ರಾ ವೈಲೆಟ್‌ ಕಿರಣಗಳನ್ನು ಬಳಸಿ, ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಇತರೆ ಸಿಬ್ಬಂದಿ ತಮ್ಮ ಸ್ಟೇಥಸ್ಕೋಪ್‌, ಬಿ.ಪಿ.ಯಂತ್ರ, ಆಸ್ಪತ್ರೆ ದಾಖಲೆಗಳು, ಪೆನ್ನು, ಕೀ ಚೈನ್‌, ಪರ್ಸ್‌, ಚಪ್ಪಲಿಗಳು, ಮೊಬೈಲ್‌, ಲ್ಯಾಪ್‌ಟಾಪ್‌ಗ್ಳು ಸೇರಿದಂತೆ ಮರುಬಳಕೆ ವಸ್ತ್ರಗಳು ಮತ್ತು ಕವಚಗಳನ್ನು ಈ ಯಂತ್ರದ ಸಹಾಯದಿಂದ ಸಂಪೂರ್ಣ ಶುಚಿ ಮಾಡಲು ಸಾಧ್ಯವಿದೆ ಎಂದು ವಿವರಿಸಿದ್ದಾರೆ. ಅಲ್ಲದೇ ಮನೆಗಳಲ್ಲಿಯೂ ಸಹ ಹೊರಗಡೆಯಿಂದ ತರಿಸುವ ಹಾಲು, ತರಕಾರಿ, ದಿನಸಿ ಹಾಗೂ ಇತರೆ ಸಾಮಗ್ರಿಗಳನ್ನು ಸಹ ಈ ಯಂತ್ರದ ಮೂಲಕ ಶುಚಿತ್ವಗೊಳಿಸಬಹುದಾಗಿದೆ. ಯಾರಾದರು ವ್ಯಕ್ತಿಗಳು ಈ ಯಂತ್ರದ ಮುಂದೆ ನಿಂತರೆ ಅದು ಸ್ವಯಂ ಚಾಲಿತವಾಗಿ ತೆರೆದು, ಸ್ವಯಂ ಚಾಲಿತವಾಗಿ ಮುಚ್ಚುವುದು ವಿಶೇಷವಾಗಿದೆ. ಇದರಲ್ಲಿ ಇಡುವ ವಸ್ತುಗಳು 3-5ನಿಮಿಷಗಳಲ್ಲಿ ಸಂಪೂರ್ಣ ಶುಚಿತ್ವಗೊಳ್ಳುವವು.

ಬಿಎಲ್‌ಡಿಇ ವೈದ್ಯರ ತಂಡದ ಈ ಸಾಧನೆಗೆ ಮಾಜಿ ಸಚಿವ, ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ್‌ ಶ್ಲಾಘನೆ ವ್ಯಕ್ತಪಡಿಸಿದ್ದು, ಕೊವಿಡ್‌-19 ಕೊರೊನಾ ಕಾಯಿಲೆ ಕಷ್ಟಕರ ಸಂದರ್ಭದಲ್ಲಿ ಇಂತಹ ಆವಿಷ್ಕಾರಗಳು ಹಲವರಿಗೆ ವಿಶೇಷವಾಗಿ ವೈದ್ಯರಿಗೆ ನೆರವಾಗುವುದಾಗಿ ಹೇಳಿದ್ದಾರೆ.

ಟಾಪ್ ನ್ಯೂಸ್

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ

ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ

Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ

Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ

10

Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !

Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

VJP-Bagappa

Vijayapura: ರವಿ ಮೇಲಿನಕೇರಿ ಕೊ*ಲೆ ಸೇಡಿಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹ*ತ್ಯೆ?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.