PUC Result ರಾಜ್ಯಕ್ಕೆ 2ನೇ ರ‍್ಯಾಂಕ್‌ ಬಂದವ ಗುಳೆಹೋಗಿದ್ದ…!

ರತ್ನಗಿರಿಯಲ್ಲಿ ತಂದೆ ಜತೆ ಕೆಲಸ... ಸಿಹಿ-ಸಂಭ್ರಮ ಆಚರಣೆ

Team Udayavani, Apr 21, 2023, 3:37 PM IST

1-sadsad

ವಿಜಯಪುರ : ಪಿಯುಸಿ ದ್ವಿತಿಯ ವರ್ಷದ ಫಲಿತಾಂಶದಲ್ಲಿ ತನಗೆ ರಾಜ್ಯಕ್ಕೆ 2ನೇ ರ‍್ಯಾಂಕ್‌ ಬಂದ ಸುದ್ದಿಯನ್ನು ಶಿಕ್ಷಕರು ಮೊಬೈಲ್ ಮೂಲಕ ಸಂತಸದ ಸುದ್ದಿ ತಿಳಿಸಿದಾಗ ಆತ ಗುಳೆಹೋಗಿದ್ದ. ನೆರೆ ರಾಜ್ಯ ಮಹಾರಾಷ್ಟ್ರದ ನೆಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಸುದ್ದಿ ತಿಳಿದ ಕೂಲಿ ಗ್ಯಾಂಗಿನ ಜನರು ಕನ್ನಡದ ಕುವರನ ಸಾಧನೆಗೆ ಮಹಾರಾಷ್ಟ್ರ ನೆಲದಲ್ಲಿ ಸಿಹಿ ತಿನ್ನಿಸಿ ಸಂಭ್ರಮ ಮೆರೆದಿದ್ದಾರೆ.

ಇದು ಕಲಾ ವಿಭಾಗದಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್‌ ಬಂದಿರುವ ರಾಹುಲ್ ಮೋತಿಲಾಲ್ ರಾಠೋಡ ಎಂಬ ಪ್ರತಿಭಾವಂತ ವಿದ್ಯಾರ್ಥಿ ಅನುಭವಿಸಿದ ಅದ್ಭುತ ಕ್ಷಣ. ಯಾದಗಿರಿ ಜಿಲ್ಲೆಯ ಹುಣಡಸಗಿ ತಾಲೂಕಿನ ಮನ್ನಾನಾಯಕ ತಾಂಡಾದ ಈ ವಿದ್ಯಾರ್ಥಿಯ ತಂದೆ ಮೋತಿಲಾಲ್-ತಾಯಿ ಸವಿತಾ ಒಂದೂವರೆ ದಶಕದ ಹಿಂದೆಯೇ ಮಹಾರಾಷ್ಟ್ರದ ರತ್ನಗಿರಿಗೆ ಗುಳೆ ಹೋಗಿದ್ದಾರೆ.

ಬಡತನದಿಂದ ತಾವು ಅನುಭವಿಸುತ್ತಿರುವ ಸಂಕಷ್ಟದ ಜೀವನ ತಮ್ಮ ಮಕ್ಕಳಿಗೆ ಬಾರದಿರಲೆಂದು ಮಕ್ಕಳನ್ನು ಅವರವರ ಶಿಕ್ಷಣಕ್ಕೆ ತಕ್ಕಂತೆ ಬೇರೆ ಬೇರೆ ಸ್ಥಳಗಳಲ್ಲಿ ಶಾಲೆಗೆ ಸೇರಿಸಿದ್ದಾರೆ. ಮಗ ರಾಹುಲ್ ತಾಳಿಕೋಟೆಯ ಎಸ್.ಕೆ.ಪಿಯು ಕಾಲೇಜಿನಲ್ಲಿ ಓದುತ್ತಿದ್ದಾನೆ. ಹೆಣ್ಣು ಮಕ್ಕಳಾದ ರಂಜಿತಾಳನ್ನು ಮುರಾರ್ಜಿ ಶಾಲೆಗೂ, ದೀಪಾಳನ್ನು ಕೆಂಭಾವಿ ಖಾಸಗಿ ಶಾಲೆಗೂ ದಾಖಲು ಮಾಡಿದ್ದಾರೆ.

ಬಡತನ ಬೇಗೆಯಲ್ಲೂ ತಂದೆಯ ಬೆವರ ಹನಿಯನ್ನು ಅರಿತಿರುವ ಮಕ್ಕಳು ಎಲ್ಲರೂ ಪ್ರತಿಭಾವಂತಿಕೆ ಮೆರೆಯುತ್ತಿದ್ದಾರೆ. ಇದೀಗ ದ್ವಿತಿಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್‌ ಸಾಧನೆಯಿಂದಲೇ ರಾಹುಲ್ ಹೆತ್ತವರಿಗೆ ಮಾತ್ರವಲ್ಲದೇ ಹುಟ್ಟಿದ ಊರಿಗೆ, ಶಿಕ್ಷಣ ಕೊಟ್ಟ ಕಾಲೇಜಿಗೆ, ವಿದ್ಯೆ ಕಲಿಸಿದ ಗುರುಗಳಿಗೆ ಕೀರ್ತಿ ತಂದಿದ್ದಾನೆ.

ರಾಹುಲ್ ರ‍್ಯಾಂಕ್‌ ಪಡೆದ ಸುದ್ದಿ ತಿಳಿಯುತ್ತಲೇ ರಸ್ತೆ ಕಾಮಗಾರಿ ಕೆಲಸದಲ್ಲಿದ್ದ ತಂದೆ ಹಾಗೂ ಕಾರ್ಮಿಕ ಸ್ನೇಹಿತರ ಬಳಗ ಕೆಲಸದ ಸ್ಥಳದಲ್ಲೇ ರಾಹುಲ್‍ಗೆ ಸಿಹಿ ತಿನ್ನಿಸಿ ಸಂಭ್ರಮ ಆಚರಿಸಿದೆ. ಸಂತಸದ ಸುದ್ದಿಹೊರುತ್ತು ತಂದೆ-ಮಗ ಮನೆಗೆ ಬರುತ್ತಲೇ ತಾವಿ ಹಾಗೂ ಕುಟುಂಬದ ಇತರೆ ಸದಸ್ಯರು ಸಿಹಿ ಹಂಚುವ ಜೊತೆಗೆ ಕಾರ್ಮಿಕರ ಬಳಕ್ಕೆ ತಂಪು ಪಾನೀಯದ ಪಾರ್ಟಿ ಕೊಡಿಸಿ ಸಂತಸ ಸೂರೆಗೊಳಿಸಿದ್ದಾರೆ.

ಸಮಾಶಾಸ್ತ್ರ, ಶಿಕ್ಷಣ ವಿಷಯದಲ್ಲಿ ನೂರಕ್ಕೆ 100 ಅಂಕ ಪಡೆದಿರುವ ರಾಹುಲ್, ಸಂಸ್ಕøತದಲ್ಲಿ 99, ಕನ್ನಡ ಹಾಗೂ ಇತಿಹಾಸ ವಿಭಾಗದಲ್ಲಿ 98 ಅಂಕ ಪಡೆದಿದ್ದಾನೆ. ಆರ್ಥಶಾಸ್ತ್ರದಲ್ಲಿ ಪಡೆದಿರುವ ಅಂಕ 97.

ನಮ್ಮ ಪರಿಶ್ರಮಕ್ಕೆ ತಕ್ಕಂತೆ ನಮ್ಮ ಮಗ ಶೈಕ್ಷಣಿಕ ಸಾಧನೆ ಮೂಲಕ ಕೀರ್ತಿ ತಂದಿರುವುದು ಸಂತಸವಾಗಿದೆ. ಆತನ ಸಾದನೆಗೆ ನಮ್ಮಲ್ಲಿ ವರ್ಣಿಸಲು ಪದಗಳಿಲ್ಲ. ನಾವು ದುಡಿಯುವ ಕಷ್ಟದ ಅರಿವು ನಮ್ಮ ಮಕ್ಕಳಿಗೆ ಇರುವ ಕಾರಣವೇ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾನೆ ರಾಹುಲ್ ತಂದೆ ಮೋತಿಲಾಲ್ ರಾಠೋಡ.

ನಮ್ಮ ವಿದ್ಯಾರ್ಥಿ ರಾಹುಲ್ ಶಿಸ್ತು ಮಾತ್ರವಲ್ಲ ಪ್ರತಿಭಾವಂತನೂ ಹೌದು. ಶಾಂತ ಸ್ವಭಾವದವದ ಆತ ಶಾಲೆಯಲ್ಲಿ ಹೇಳುತ್ತಿದ್ದ ಪಾಠವನ್ನು ತದೇಕಚಿತ್ತದಿಂದ ಕೇಳುತ್ತಿದ್ದ. ತಿಳಿಯದ ವಿಷಯದ ಕುರಿತು ನಮ್ಮೊಂದಿಗೆ ಚರ್ಚಿಸಿ, ಲೋಪಗಳನ್ನು ತಿದ್ದಿಕೊಳ್ಳುತ್ತಿದ್ದ. ಆತನ ಪರಿಶ್ರಮ ಇದೀಗ ನಮ್ಮ ಕಣ್ಮುಂದೆ ಫಲಿತಾಂಶ ತಂದಿಟ್ಟಿದೆ ಎಂದು ಕಾಲೇಜಿನ ಉಪನ್ಯಾಸಕ ಬಳಕ ಸಂಭ್ರಮಿಸುತ್ತಿದೆ.

ಕೆಎಎಸ್-ಐಎಎಸ್ ಅಧಿಕಾರಿಯಾಗುವ ಗುರಿ ಇದೆ. ಕುಟುಂಬದ ಬಡತ ನೀಗಲು ನಾನು ಧಾರವಾಡಕ್ಕೆ ಹೋಗಿ ಬಿಎ ಪದವಿ ಪಡೆದು, ಗುರಿ ಸಾಧನೆಗೆ ಪರಿಶ್ರಮದೊಂದಿಗೆ ಹೆತ್ತವರ ಸಂಕಷ್ಟ ನಿವಾರಿಸುವ ಮಹದಾಸೆ ಕಣ್ಮುಂದಿದೆ ಎಂದು ರಾಹುಲ್ ರಾಠೋಡ ಹೇಳಿಕೊಂಡಿದ್ದಾನೆ.

ಮಾಸಿಕ, ತ್ರೈಮಾಸಿಕ ಸೇರಿದಂತೆ ಇತರೆ ಪರೀಕ್ಷೆಗಳಲ್ಲಿ ತನಗೆ ಕಡಿಮೆ ಅಂಕ ಬಂದಲ್ಲಿ ತಕ್ಷಣ ಕಡಿತವಾದ ಅಂಕಗಳ ಕುರಿತು ರಾಹುಲ್ ಉಪನ್ಯಾಸಕರೊಂದಿಗೆ ಚರ್ಚಿಸಿ, ಸುಧಾರಿಸಿಕೊಳ್ಳುತ್ತಿದ್ದ. ಓರ್ವ ಶಿಕ್ಷಕರಿಗೆ ಇದಕ್ಕಿಂತ ಇನ್ನೇನು ಗುರುಕಾಣಿಕೆ ಬೇಕಿಲ್ಲ ಎಂದು ಎಸ್.ಕೆ. ಪ.ಪೂ. ತಾಳಿಕೋಟೆ ಕಾಲೇಜು ಉಪನ್ಯಾಸಕಿ ಬಸಮ್ಮ ನಾಟೀಕರ ಅಭಿನಂದಿಸಿದ್ದಾರೆ.

ನಮ್ಮ ಪರಿಶ್ರಮ ಆತನನ್ನು ಸಾಧನೆ ಆಸನದಲ್ಲಿ ಕೂಡಿಸಿದೆ ಎನ್ನುವ ಮಗನ ಕೃತಜ್ಞತೆ ನಮ್ಮ ಕಣ್ಣಂಚಲ್ಲೂ ನೀರು ತರಿಸಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕಿಂತ ನಮಗೆ ಇನ್ನೇನು ಬೇಕಿದೆ ಹೇಳಿ. ಇನ್ನೂ ಉನ್ನತ ಸ್ಥಾನ, ಕೀರ್ತಿ ಸಂಪಾದಿಸಲಿ ಎಂದು ರಾಹುಲ್ ಹೆತ್ತವರಾದ ಮೋತಿಲಾಲ್-ಸವಿತಾ ರಾಠೋಡ ಸಂಭ್ರಮ ವ್ಯಕ್ತ ಪಡಿಸಿದ್ದಾರೆ.

ಜಿ.ಎಸ್.ಕಮತರ

ಟಾಪ್ ನ್ಯೂಸ್

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Muddebihal: ಕೃಷ್ಣಾ ನದಿ ಪಾಲಾದ ಯುವತಿ: ಶವ ಪತ್ತೆ

Muddebihal: ಕೃಷ್ಣಾ ನದಿ ಪಾಲಾದ ಯುವತಿ: ಶವ ಪತ್ತೆ

Muddebihal: ಕೃಷ್ಣಾ ನದಿಪಾಲಾದ ಯುವತಿ: ಶವಕ್ಕಾಗಿ ಶೋಧ

Muddebihal: ಕೃಷ್ಣಾ ನದಿ ಪಾಲಾದ ಯುವತಿ: ಶವಕ್ಕಾಗಿ ಶೋಧ

Vijayapura: ಮುನಿರತ್ನ ಚನ್ನಾರೆಡ್ಡಿ ಪ್ರಕರಣಕ್ಕೆ ತಳುಕು ಬೇಡ: ಎಂ.ಬಿ.ಪಾಟೀಲ

Vijayapura: ಮುನಿರತ್ನ ಚನ್ನಾರೆಡ್ಡಿ ಪ್ರಕರಣಕ್ಕೆ ತಳುಕು ಬೇಡ: ಎಂ.ಬಿ.ಪಾಟೀಲ

Congress: Make 100 laws, I am Anjala: MLA Basan Gowda Patil Yatnal

Congress: ನೂರು ಕಾನೂನು ಮಾಡಿ,ನಾನು ಅಂಜಲ್ಲ: ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್

MB Patil ತುಚ್ಛ ಮಾತು ಯತ್ನಾಳ ಮನೆತನದ ಸಂಸ್ಕೃತಿ ಅಲ್ಲ

MB Patil ತುಚ್ಛ ಮಾತು ಯತ್ನಾಳ ಮನೆತನದ ಸಂಸ್ಕೃತಿ ಅಲ್ಲ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.