ಕೊರೊನಾ ಕರ್ಫ್ಯೂ ತಂದಿಟ್ಟ ಸಂಕಷ್ಟ


Team Udayavani, May 1, 2021, 2:59 PM IST

,ಮನಬವಚಷಞಷ

ವಿಜಯಪುರ: ಕೋವಿಡ್‌ ಎರಡನೇ ಅಲೆಯ ಕೊಂಡಿ ಕಳಚುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ಫ್ಯೂ ನಿರ್ಭಂಧ ರೈತರ ಮೇಲಾಗುತ್ತಿದೆ. ಬೇಸಿಗೆಯ ಈ ಹಂತದಲ್ಲಿ ವಿವಿಧ ಹಣ್ಣುಗಳ ಸುಗ್ಗಿಯ ಕಾಲವೂ ಆರಂಭಗೊಂಡಿದೆ. ಕೊಯ್ಲಿಗೆ ಬಂದಿರುವ ಹಣ್ಣು, ದಾಸ್ತಾನು ಅಸಾಧ್ಯವಾದ ತರಕಾರಿ ಉತ್ಪಾದಕ ರೈತರು ಮಾರುಕಟ್ಟೆ ಕಂಡುಕೊಳ್ಳಲಾಗದೇ ಕಂಗಾಲಾಗಿದ್ದಾರೆ.

ರಾಜ್ಯದಲ್ಲೇ ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ, ಲಿಂಬೆ ಅತ್ಯಧಿಕ ಪ್ರದೇಶದಲ್ಲಿ ಬೆಳೆಯುವ ಕಾರಣಕ್ಕೆ ತೋಟಗಾರಿಕೆ ಬೆಳೆಗಳ ತವರು ಎನಿಸಿಕೊಳ್ಳುತ್ತಿದೆ. ಇದಲ್ಲದೇ ಈಚೆಗೆ ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬುವ ಯೋಜನೆ ಅನುಷ್ಠಾನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಬೇಸಿಗೆ ಹಂಗಾಮಿನಲ್ಲಿ ಕೈ ಹಿಡಿಸಯುವ ಕಲ್ಲಂಗಡಿ, ಕರಬೂಜ ಬೆಳೆಯೂ ಇದೀಗ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.

ಲಿಂಬೆ, ಮಾವು ಮಾರುಕಟ್ಟೆಗೆ ಲಗ್ಗೆ ಇಡುವ ಈ ಹಂತದಲ್ಲಿ ಕರ್ಫ್ಯೂ ಜಾರಿಗೆ ಬಂದಿರುವುದ ರೈತರನ್ನು ಕಂಗೆಡಿಸಿದೆ. ಕರ್ಫ್ಯೂ ಸಂದರ್ಭದಲ್ಲಿ ನಿತ್ಯವೂ ಬೆಳಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಡಿಲಿಕೆ ಇದ್ದರೂ ಹಳ್ಳಿಗಳಿಂದ ಮಾರುಕಟ್ಟೆ ಇರುವ ನಗರ-ಪಟ್ಟಣ ಪ್ರದೇಶಗಳಿಗೆ ತೋಟಗಾರಿಕೆ ಉತ್ಪನ್ನ ಸಾಗಿಸುವುದಕ್ಕೇ ಒಂದೆರಡು ಗಂಟೆ ಬೇಕು. ಕರ್ಫ್ಯೂ ಸಡಿಲಿಕೆಯ 4 ಗಂಟೆಯ ಸಮಯ ಸಾಕಾಗುವುದಿಲ್ಲ. ಅಲ್ಲದೇ ಕರ್ಫ್ಯೂ ಸಂದರ್ಭದಲ್ಲಿ ವಾಹನಗಳ ಓಡಾಟಕ್ಕೆ ನಿರ್ಬಂಧವಿದೆ. ಆಟೋಗಳಲ್ಲಿ ಸರಕು ಸಾಗಿಸಿದರೆ ಪೊಲೀಸರು ತಕರಾರು ಮಾಡುತ್ತಾರೆ, ಸಣ್ಣ ಪ್ರಮಾಣದಲ್ಲಿ ತರಕಾರಿ-ಹಣ್ಣು ಬೆಳೆದ ರೈತರಿಗೆ ಸರಕು ವಾಹನಗಳಲ್ಲಿ ಸಾಗಿಸಲು ಹೆಚ್ಚಿನ ಬಾಡಿಗೆ ಕೇಳುತ್ತಾರೆ.

ಹೀಗೆ ಏನೆಲ್ಲ ಸಂಕಷ್ಟಗಳನ್ನು ಎದುರಿಸಿ ಮಾರುಕಟ್ಟೆಗೆ ತಂದರೆ ಮಾರುಕಟ್ಟೆ ಅವಧಿ ಮೀರಿರುತ್ತದೆ. ಹೀಗಾಗಿ ರೈತರು ಮಾರುಕಟ್ಟೆಗೆ ಹೆಚ್ಚು ಸಮಯ ದಾಸ್ತಾನು ಅಸಾಧ್ಯವಾದ ಹಣ್ಣ-ತರಕಾರಿ ಸಾಗಿಸಲಾಗದೇ ಪರದಾಡುತ್ತಿದ್ದಾರೆ. ಇದರ ಮಧ್ಯೆಯೂ ಕೆಲವರು ರೈತರು ಅದಾಗಲೇ ಮಾರುಕಟ್ಟೆ ಪ್ರದೇಶದಲ್ಲಿ ನಿರಂತರ ವಹಿವಾಟಿನ ಸಂಪರ್ಕ ಹೊಂದಿರುವ ಸಗಟು ವ್ಯಾಪಾರಿಗಳನ್ನು ಸಂಪರ್ಕಿಸಿ, ಅವರ ಅಗತ್ಯಕ್ಕೆ ತಕ್ಕಂತೆ ಉತ್ಪನ್ನ ಸರಬರಾಜು ಮಾಡುತ್ತಿದ್ದಾರೆ. ಆದರೆ ಇಂತ ರೈತರ ಸಂಖ್ಯೆ ತೀರಾ ವಿರಳವಾಗಿದ್ದು, ಅನಕ್ಷರಸ್ತ ಹೆಚ್ಚಿನ ಸಂಖ್ಯೆಯ ರೈತರಿಗೆ ಕರ್ಫ್ಯೂ ಕರಾಳವಾಗಿ ಪರಿಣಮಿಸಿದೆ ಎನ್ನುತ್ತಾರೆ ರೈತರು.

ಇದರ ಹೊರತಾಗಿ ವಿಜಯಪುರ ತರಕಾರ-ಹಣ್ಣು ಮಾರುಕಟ್ಟೆಗೆ ಕರ್ಫ್ಯೂ ಆರಂಭದ ಎರಡು ದಿನಗಳಲ್ಲಿ ಆವಕದಲ್ಲಿ ಯಾವ ಬದಲಾವಣೆ ಆಗಿಲ್ಲ ಎಂದು ಎಪಿಎಂಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಕಿರುಕುಳ ವ್ಯಾಪಾರಿಗಳು ಸಂತೆ, ಬೀದಿ ಬದಿ ಮಾರಾಟದ ವ್ಯಾಪಾರ ವಹಿವಾಟಿಗೆ ಹೊಡೆತ ಬಿದ್ದಿದೆ. ಎರಡು ದಿನಗಳ ಹಿಂದೆ ಖರೀದಿಸಿರುವ ಹಣ್ಣು ಕೊಳ್ಳಲು ಕಿರುಕುಳ ವ್ಯಾಪಾರಿಗಳೇ ಮಾರುಕಟ್ಟೆಗೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ವ್ಯಾಪಾರ ನೆಲಕಚ್ಚಿದೆ ಎಂಬುದು ವಹಿವಾಟುದಾರ ಅನಿಸಿಕೆ. ಮಾರುಕಟ್ಟೆಯಿಂದ ಸಂತೆಗಳಿಗೆ ಹಣ್ಣು-ತರಕಾರಿ ತಂದು ಮಾರಾಟಕ್ಕೆ ಅಣಿಯಾಗುತ್ತಲೇ ಪೊಲೀಸರು ಬೆತ್ತದ ಏಟು ನೀಡುವ ಜೊತೆಗೆ ಕಾಲಿನಿಂದ ನಮ್ಮ ವಸ್ತುಗಳನ್ನು ಒದೆಯುವ, ನೆಲಕ್ಕೆ ಚಲ್ಲಿ ಹಾಳು ಮಾಡುತ್ತಾರೆ.

ದಂಡದ ಹೆಸರಿನಲ್ಲಿ ಹಣ ವಸೂಲಿಗೂ ನಿಲ್ಲುತ್ತಾರೆ. ಇದರಿಂದ ದಿನದ ಗಂಜಿಯನ್ನು ಮಾತ್ರ ನಂಬಿರುವ ನಮಗೆ ಈ ಪರಿಯ ಸಂಕಷ್ಟ ಹಾಗೂ ಆರ್ಥಿಕ ನಷ್ಟವಾದಲ್ಲಿ ಸಹಿಸಿಕೊಳ್ಳುವ ಶಕ್ತಿ ಇಲ್ಲ. ಹೀಗಾಗಿ ಈ ಸಹವಾಸವೇ ಬೇಡ ಎಂದು ಬಹುತೇಕ ಹಣ್ಣು-ತರಕಾರಿ ವ್ಯಾಪಾರಿಗಳು ಮನೆಗಳಲ್ಲೇ ಉಳಿದಿದ್ದೇವೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಬೀದಿಬದಿ ವ್ಯಾಪಾರಿ ಮಹಿಳೆ. ಇದರ ಮಧ್ಯೆ ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ರೈತರ ನೆರವಿಗೆ ನಿಂತಿದ್ದ ತೋಟಗಾರಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಜನ್ಮ ತಳೆದಿರುವ ಹಾಪ್‌ಕಾಮ್ಸ್‌ ಈ ಬಾರಿ ಮುಂದಡಿ ಇಟ್ಟಿಲ್ಲ. ಈಗಾಗಲೇ ತಾನು ಹಣ್ಣು-ತರಕಾರಿ ಪೂರೈಸುವ ಹಾಸ್ಟೆಲ್‌, ಜೈಲ್‌, ಸೈನಿಕ ಶಾಲೆಗೆ ಅಗತ್ಯದಷ್ಟು ವಸ್ತುಗಳನ್ನು ಮಾತ್ರ ಖರೀದಿಸುತ್ತಿದೆ. ಇತರೆ ವ್ಯಾಪಾರಿಗಳಂತೆ ಹಾಪ್‌ಕಾಮ್ಸ್‌ ಮಳಿಗೆಗೂ ಕರ್ಫ್ಯೂ ಸಡಿಲಿಕೆ ಅನ್ವಯ ಎಂಬ ಕಾರಣಕ್ಕೆ ಹೆಚ್ಚುವರಿ ಖರೀದಿಗೆ ಮುಂದಾಗುತ್ತಿಲ್ಲ.

ಇನ್ನು ಜಿಲ್ಲೆಯ ತರಕಾರಿ-ಹಣ್ಣು ಬೆಳೆಯುವ ರೈತರು ಅನುಭವಿಸುತ್ತಿರುವ ಸಂಕಷ್ಟವನ್ನು ಅರಿತಿರುವ ಜಿಲ್ಲಾಡಳಿತ ತೋಟಗಾರಿಕೆ, ಎಪಿಎಂಸಿ, ಹಾಪ್‌ಕಾಮ್ಸ್‌ ಅಧಿಕಾರಿಗಳ ಸಮನ್ವಯದೊಂದಿಗೆ ಸಹಾಯವಾಣಿ ತೆರೆದಿದೆ. ಆದರೆ ವಾಸ್ತವದಲ್ಲಿ ಸಹಾಯವಾಣಿ ಕೇಂದ್ರದ ಸ್ಥಾಪನೆಯಿಂದ ರೈತರಿಗೆ ಇನ್ನೂ ನಿರೀಕ್ಷಿತ ಸಹಕಾರಿ ಆಗಿಲ್ಲ. ಸ್ಥಗಿತಗೊಂಡಿರುವ ದೂರವಾಣಿ ಸಂಖ್ಯೆ ನೀಡಿರುವ, ಕರೆ ಮಾಡಿದ ಸಂದರ್ಭದಲ್ಲಿ ಕೇವಲ ಉತ್ಪನ್ನ ಸಾಗಿಸಲು ಪರವಾನಿಗೆ ಕೊಡಿಸುವುದಷ್ಟೇ ನಮ್ಮ ಕೆಲಸ ಎಂದು ಜಾರಿಕೊಳ್ಳುವ ಅ ಧಿಕಾರಿಗಳ ವರ್ತನೆ ಇದಕ್ಕೆ ಸಾಕ್ಷಿ. ಈಗಾಗಲೇ ಜಿಲ್ಲಾಡಳಿತ ಕೋವಿಡ್‌ ಪರಿಸ್ಥಿತಿ ನಿರ್ವಹಣೆಯ ಸವಾಲು ಎದುರಿಸುತ್ತಿದೆ.

ಇದೀಗ ಗ್ರಾಮೀಣ ಪರಿಸರದಲ್ಲಿನ ತೋಟಗಾರಿಕೆ ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟ, ಅಗತ್ಯ ಪ್ರಮಾಣದಷ್ಟು ಹಣ್ಣು-ತರಕಾರಿಗಳು ಸಿಗದೇ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಳ್ಳುವ ಸ್ಥಿತಿ ಬಂದಿದೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ

ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ

Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ

Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ

10

Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !

Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

VJP-Bagappa

Vijayapura: ರವಿ ಮೇಲಿನಕೇರಿ ಕೊ*ಲೆ ಸೇಡಿಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹ*ತ್ಯೆ?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.