![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 1, 2022, 6:17 PM IST
ವಿಜಯಪುರ: ಸದಾ ಕಾಲ ಸಾಹಿತ್ಯ ಕ್ಷೇತ್ರಕ್ಕೆ ತನ್ನದೆ ವಿಶಿಷ್ಠ ಕೊಡುಗೆ ನೀಡುತ್ತಿರುವ ವಿಜಯಪುರ ಜಿಲ್ಲೆ ಸಾಮಾಜಿಕ, ಸಾಂಸ್ಕೃತಿಕ, ಐತಿಹಾಸಿಕ, ಜಾನಪದ ಹೀಗೆ ಎಲ್ಲ ಕ್ಷೇತ್ರಗಳಿಗೂ ತನ್ನ ಪ್ರತಿಭೆಗಳನ್ನು ಧಾರೆ ಎರೆದಿದೆ. ಅಪಾರ ಪ್ರಮಾಣದ ವೈವಿಧ್ಯಪೂರ್ಣ ಜ್ಞಾನ ಸಂಪತ್ತಿನ ಕೃತಿಗಳನ್ನು ನಾಡಿಗೆ ನೀಡಿದ ನೆಲವಿದು ಎಂದು ವಿವೇಕಾನಂದ ಸಬರದ ಅಭಿಪ್ರಾಯಪಟ್ಟರು.
ನಗರದ ಖ್ಯಾತ ಆಯುರ್ವೇದ ವೈದ್ಯೆ ಡಾ| ಸನ್ಮತಿ ಕುರಂದವಾಡೆ ರಚಿಸಿದ ಎ ಯೂನಿಕ್ ಹ್ಯಾಂಡ್ ಬುಕ್ ಆಫ್ ಇಂಟಿಗ್ರೇಟೆಡ್ ಮೆಡಿಕಲ್ ಪ್ಯಾಕ್ಟೀಸನರ್ ಆ್ಯಂಡ್ ಆಯುರ್ವೇದ ಕೃತಿ ಲೋರ್ಕಾಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ಆ ಸಾಹಿತ್ಯ ಕ್ಷೇತ್ರ ಮುಂದುವರಿದು ಆಯುರ್ವೇದ ವೈದ್ಯಕೀಯ ವಿಷಯಗಳು ಸಾಹಿತ್ಯಿಕವಾಗಿ ಓದುಗರಿಗೆ ಮುಟ್ಟಿಸುವ ಹಿನ್ನೆಲೆ ಹೊಂದಿದೆ ಎಂದರು.
ಪತ್ರಿಕಾ ಪ್ರಕಟಿತ ವಿವಿಧ ಲೇಖನಗಳನ್ನು ಕ್ರೋಢೀಕರಿಸಿ ಉತ್ತಮ ಕೃತಿ ಹೊರ ತಂದಿರುವುದು ಅರ್ಥಪೂರ್ಣ ಕಾರ್ಯ. ಆಯುರ್ವೇದ ಒಂದು ಅದ್ಭುತವಾದ ಪ್ರಪಂಚ. ಅನೇಕ ರೋಗಗಳಿಗೆ ಆಯುರ್ವೇ ದದಲ್ಲಿ ಮದ್ದು ಅಡಗಿದೆ ಎಂದರು.
ಇಡಿ ಜಗತ್ತು ಆಯುರ್ವೇದದ ಶಕ್ತಿಯನ್ನು ಮೆಚ್ಚಿಕೊಳ್ಳುತ್ತಿದೆ, ಯಾವುದೇ ಅಡ್ಡಪರಿಣಾಮ ಗಳಿಲ್ಲದ ವೈದ್ಯ ಪದ್ಧತಿ ಆಯುರ್ವೇದ ಇಡಿ ಜಗತ್ತಿನ ಗಮನ ಸೆಳೆಯುತ್ತಿರುವುದು ಸಂತೋಷದ ಸಂಗತಿ ಎಂದರು.
ಡಾ| ಪ್ರವೀಣಕುಮಾರ ಬಗಲಿ ಅಧ್ಯಕ್ಷತೆ ವಹಿಸಿದ್ದರು. ಅಶೋಕಕುಮಾರ ಬಾಗಮಾ, ಗೌರವ ತಿವಾರಿ, ಡಾ| ನಿ ಧಿ ಗುಪ್ತಾ, ಆರ್. ಎಸ್. ಪಾಂಡೆ, ಎಸ್.ಎಂ. ಕರ್ಪೂರಮಠ, ಡಾ| ಓಂಕಾರ ಕಾಕಡೆ, ಕೆ.ಬಿ.ನಾಗೂರ, ಜೆ.ಸಿ. ಹುದ್ದಾರ, ವಿನಯಕುಮಾರ ತುಂಗಳ, ಅನಿತಾ ನಾಯಕ, ಆನಂದ ಕಟ್ಟಿ, ಎಸ್.ಪಿ.ಮನಗೂಳಿ, ಡಿ.ಎನ್.ಧರಿ, ಅರವಿಂದ ಢಾಣಕಶಿರೂರ, ಎ.ಎಂ.ವಾಲಿ, ರಮೇಶ ಕತ್ತಿ, ಭರತೇಶ ಕುರಂದವಾಡೆ, ವಿಜಯಮಹಾಂತೇಶ ಚೌಧರಿ, ಅಮರ ಗಡೆಕರ, ಅಮೀರುದ್ದೀನ್ ಖಾಜಿ ಸೇರಿದಮತೆ ಇತರರು ಇದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವ್ಯಂಗ್ಯ ಚಿತ್ರಕಾರ ಸಮೀರ್ ಹಾದಿಮನಿ, ಬಿಷಕ್ ಭೂಷಣ ರಾಜ್ಯ ಪ್ರಶಸ್ತಿ ವಿಜೇತೆ ರೇಣುಕಾ ತೆನಳ್ಳಿ, ಲಿಂಗಾರಡ್ಡಿ ಬಿರಾದಾರ, ಸದಾ ಬಸವರಾಜ ತೇಲಿ ಅವರನ್ನು ಸನ್ಮಾನಿಸಲಾಯಿತು. ಗೀತಾ ಕುಲಕರ್ಣಿ ಸಂಗೀತ ಕಾರ್ಯಕ್ರಮ ನೀಡಿದರು. ಮಂಜುನಾಥ ಜುನಗೊಂಡ ನಿರೂಪಿಸಿದರು.
ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ
Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ
Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !
Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Vijayapura: ರವಿ ಮೇಲಿನಕೇರಿ ಕೊ*ಲೆ ಸೇಡಿಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹ*ತ್ಯೆ?
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.