Vijayapura: ಜಿಲ್ಲೆಯಲ್ಲಿ 5 ಗಂಟೆಗೂ ಅಧಿಕ ಕಾಲ ಸುರಿದ ಮಳೆ… ತುಂಬಿ ಹರಿದ ಹಳ್ಳ-ಕೊಳ್ಳಗಳು
Team Udayavani, Sep 24, 2024, 9:47 AM IST
ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ(ಸೆ.23) ರಾತ್ರಿ ಸತತವಾಗಿ 5 ಗಂಟೆಗೂ ಅಧಿಕ ಕಾಲ ಭಾರೀ ಮಳೆ ಸುರಿದಿದೆ. ಜನಜೀವನ ಅಸ್ತವ್ಯಸ್ತಗೊಂಡು, ಮನೆ-ಅಂಗಡಿಗಳಿಗೆ ಮಳೆ ನೀರು ನುಗ್ಗಿ ಪರದಾಡುವಂತಾಗಿದೆ. ಹಳ್ಳ-ಕೊಳ್ಳಗಳು ತುಂಬಿದ್ದು, ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ದೇವಸ್ಥಾನ ಜಲಾವೃತಗೊಂಡಿದೆ.
ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಆರಂಭವಾದ ಮಳೆ ಇಡೀ ರಾತ್ರಿ ಸತತವಾಗಿ ಅಬ್ಬರಿಸಿತು. ನಗರದಲ್ಲಿ ಜೋರು ಮಳೆ ಸುರಿದರೆ, ಜಿಲ್ಲೆಯ ವಿವಿಧೆಡೆ ಗುಡುಗು ಸಹಿತವಾಗಿ ಸುರಿಯಿತು. ಅದರಲ್ಲೂ ನಗರದಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಶಾಲಿ ನಗರ, ಭಾಗವಾನ್ ಕಾಲೋನಿ, ರಹೀಂ ನಗರ, ಮುಜಾವರ್ ಪ್ಲಾಟ್, ಪ್ರೈಂ ನಗರ, ಕನ್ನಾನ್ ನಗರ, ನೆಹರೂ ನಗರದಲ್ಲಿ ಮನೆಗಳು, ಅಂಗಡಿಗಳು ಜಲಾವೃತಗೊಂಡಿವೆ. ಕುಟುಂಬಸ್ಥರು ರಾತ್ರಿ ಜಾಗರಣೆ ಮಾಡುವಂತೆ ಆಗಿತ್ತು.
ಮನೆಗಳಲ್ಲಿರುವ ಪಡಿತರ, ಇನ್ನಿತರ ವಸ್ತುಗಳು ಮಳೆ ನೀರಿಗೆ ಹಾಳಾಗಿದ್ದು, ಜನ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅಲ್ಲದೆ, ಬೈಕ್ ಗಳು ನೀರಲ್ಲಿ ಮುಳುಗಿವೆ. ಮನೆಗಳಿಂದ ನೀರು ಹೊರ ಹಾಕಲು ಹರಸಾಹಸ ಪಡುವಂತಾಗಿದೆ. ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹ ಸ್ಥಳಗಳಿಗೆ ಭೇಟಿ ಕೊಟ್ಟು ನೀರು ಹೊರ ಹಾಕುವಲ್ಲಿ ನೆರವಾಗಿದ್ದಾರೆ.
ದೇವಸ್ಥಾನ ಜಲಾವೃತ: ವಿಜಯಪುರ ನಗರ ಮಾತ್ರವಲ್ಲದೇ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ನಾಲತವಾಡ, ತಿಕೋಟಾ, ನಿಡಗುಂದಿ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲೂ ಧಾರಾಕಾರ ಮಳೆ ಸುರಿದಿದೆ. ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳ ಭರ್ತಿಯಾಗಿದೆ.
ಈ ಹಳ್ಳದ ನೀರಿನಿಂದ ಸಂಗಮನಾಥ ದೇವಸ್ಥಾನ ಜಲಾವೃತವಾಗಿದೆ. ಸಂಗಮನಾಥನ ಗರ್ಭಗುಡಿಗೆ ಹಳ್ಳದ ನೀರು ಹೊಕ್ಕಿದ್ದು, ಐದಾರು ಅಡಿ ಎತ್ತರ ನೀರು ನಿಂತಿದೆ. ಇದರಿಂದ ಪೂಜಾ, ಕೈಂಕರ್ಯ ಸ್ಥಗಿತಗೊಂಡಿವೆ. ಅಲ್ಲದೇ, ಸಂಗಮನಾಥ ದೇವಸ್ಥಾನದ ಬಳಿಯ ರಸ್ತೆ ಜಲಾವೃತಗೊಂಡಿದೆ.
ರೈತಾಪಿ ಜನರಿಗೆ ಸಂತಸ: ಈ ತಿಂಗಳ ಆರಂಭದಿಂದಲೂ ಮಳೆ ಕೈ ಕೊಟ್ಟಿತ್ತು. ಇದರಿಂದ ತೊಗರಿ, ಇತರ ಬೆಳೆಗಳ ರೈತರು ಮಳೆಗಾಗಿ ಮೋಡ ನೋಡುವಂತೆ ಆಗಿತ್ತು. ಕೆಲ ಕಡೆ ಮಳೆಗಾಗಿ ಪೂಜೆ ಮಾಡಿ ಪ್ರಾರ್ಥಿಸಲಾಗಿತ್ತು. ಸೋಮವಾರ ಒಂದೇ ರಾತ್ರಿ ಉತ್ತಮ ಮಳೆಯಾದ ಕಾರಣ ರೈತಾಪಿ ಜನರಿಗೆ ಸಂತಸ ತಂದಿದೆ. ಜತೆಗೆ ಹಿಂಗಾರು ಬಿತ್ತನೆಗೆ ಈ ಮಳೆಯಿಂದ ಅನುಕೂಲವಾಗಲಿದೆ.
ಎಲ್ಲೆಲ್ಲಿ ಎಷ್ಟು ಮಳೆ: ಜಿಲ್ಲೆಯ ಹಲವೆಡೆ ಮಳೆ ಆರ್ಭಟಿಸಿದೆ. ರಾತ್ರಿ 8ರಿಂದ 11, 12 ಗಂಟೆಯವರೆಗೂ ನಿಡಗುಂದಿ ತಾಲೂಕಿನ ಇಟಗಿ ಹೋಬಳಿಯಲ್ಲಿ 77 ಎಂಎಂ, ಆಲಮಟ್ಟಿಯಲ್ಲಿ 67 ಎಂಎಂ, ತಿಕೋಟಾ ತಾಲೂಕಿನ ಸಿದ್ದಾಪುರದಲ್ಲಿ 75 ಎಂಎಂ, ಘೋನಸಗಿಯಲ್ಲಿ 68 ಎಂಎಂ, ಬಸವನಬಾಗೇವಾಡಿ ತಾಲೂಕಿನ ದಿಂಡವಾರದಲ್ಲಿ 78 ಎಂಎಂ, ನರಸಲಗಿಯಲ್ಲಿ 69.5 ಎಂಎಂ, ಮುದ್ದೇಬಿಹಾಳ ತಾಲೂಕಿನ ಬಸರಕೋಡದಲ್ಲಿ 64.5 ಎಂಎಂ, ಮುದ್ದೇಬಿಹಾಳ ಹೋಬಳಿಯಲ್ಲಿ 77 ಎಂಎಂ ಮಳೆ ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರ ಮಾಹಿತಿ ನೀಡಿದೆ.
ಇದನ್ನೂ ಓದಿ: Aranthodu : ಸ್ಕೂಟಿ- ಕಂಟೈನರ್ ನಡುವೆ ಭೀಕರ ಅಪಘಾತ… ಸ್ಕೂಟಿ ಸವಾರ ಗಂಭೀರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಗಣೇಶನ ಮೂರ್ತಿ ವಿಸರ್ಜಿಸಿ ಬರುವಾಗ ರಸ್ತೆ ಅಪಘಾತ… ಯುವಕ ಮೃತ್ಯು
Female Staff: ಇನ್ನು ರಾತ್ರಿ ಪಾಳಿ ವೈದ್ಯೆ ಜತೆ ಮಹಿಳಾ ಸಿಬಂದಿ ಕಡ್ಡಾಯಕ್ಕೆ ಆದೇಶ
Vijayapura: ಜಲಾವೃತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೂಬಾಲನ್ ಭೇಟಿ, ಪರಿಶೀಲನೆ
Gangavathi: ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಮಾರಾಮಾರಿ… ಓರ್ವನಿಗೆ ಚಾಕು ಇರಿತ
Belagavi: ಐದೇ ದಿನದಲ್ಲಿ 9 ಮಂದಿಗೆ ತಲಾ 20 ವರ್ಷ ಶಿಕ್ಷೆ; ನ್ಯಾಯಾಧೀಶರ ಮಹತ್ವದ ತೀರ್ಪು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಾರ್ವಕಾಲಿಕ ದಾಖಲೆ, ಮೊದಲ ಬಾರಿಗೆ 85,000 ಅಂಕ ದಾಟಿದ ಸೂಚ್ಯಂಕ
City Lights Kannada Movie: ವಿಜಯ್ ‘ಸಿಟಿ ಲೈಟ್ಸ್’ಗೆ ವಿನಯ್ ಹೀರೋ
Tragedy: ಗಣೇಶನ ಮೂರ್ತಿ ವಿಸರ್ಜಿಸಿ ಬರುವಾಗ ರಸ್ತೆ ಅಪಘಾತ… ಯುವಕ ಮೃತ್ಯು
Arrested: ವಿಲ್ಲಾಗಳಿಗೆ ರಾತ್ರಿ ಕನ್ನ ಹಾಕುತ್ತಿದ್ದ ತ್ರಿಪುರ ಯುವಕ
Gangolli: ಅರಾಟೆ ಸೇತುವೆ ಬಳಿ ನಿಲ್ಲಿಸಿದ್ದ ಕಾರಿಗೆ ಬಸ್ ಡಿಕ್ಕಿ; ಕಾರು ಚಾಲಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.