Vijayapura: ಸಮಾಧಿಗೆ ನೀರು ತುಂಬಿಸಿ ಮಳೆಗಾಗಿ ವಿಶೇಷ ಪ್ರಾರ್ಥನೆ !
Team Udayavani, Jul 15, 2024, 2:50 PM IST
ವಿಜಯಪುರ: ಬಿತ್ತನೆಯ ಬಳಿಕ ಸುರಿಯದ ಮುಂಗಾರು ಸಮೃದ್ಧ ಮಳೆಗಾಗಿ ಜಿಲ್ಲೆಯ ಈ ಹಳ್ಳಿಯಲ್ಲಿ ಸಮಾಧಿಗೆ ರಂದ್ರ ಕೊರೆದು ನೀರು ತುಂಬಿಸಿ ವಿಚಿತ್ರ ಆಚರಣೆ ಮಾಡಿ ಗಮನ ಸೆಳೆದಿದ್ದಾರೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಸ್ಮಶಾನದಲ್ಲಿ ಮಳೆಗಾಗಿ ಈ ವಿಶೇಷ ಆಚರಣೆ ಮಾಡಲಾಗಿದೆ.
ವಾಗೀಶ ಹಿರೇಮಠ ನೇತೃತ್ವದಲ್ಲಿ ಟ್ಯಾಂಕರ್ ಮೂಲಕ ಸಮಾಧಿಯೊಳಗೆ ನೀರು ಹಾಕಿ ಪ್ರಾರ್ಥನೆ ಸಲ್ಲಿಸಲಾಗಿದೆ.
ಶವ ಹೂತಿದ್ದ ಸಮಾಧಿಗೆ ರಂದ್ರ ಕೊರೆದು ಟ್ಯಾಂಕರ್ ಮೂಲಕ ಸಮಾಧಿಯೊಳಗೆ ನೀರು ತುಂಬಿಸಿದ್ದಾರೆ.
ಗ್ರಾಮಸ್ಥರಲ್ಲಿ ಸಮಾಧಿಯೊಳಗೆ ನೀರು ಹಾಕಿದರೆ ಮಳೆ ಆಗುತ್ತದೆ ಎಂಬ ನಂಬಿಕೆ ಇದೆ. ಕೆಲ ವರ್ಷಗಳಿಂದ ಈ ಪದ್ದತಿ ಆಚರಣೆ ಮಾಡಿಕೊಂಡು ಬಂದಿರುವ ಗ್ರಾಮಸ್ಥರು ಶವ ಹೂತಿದ್ದ ಸಮಾಧಿಯೊಳಗೆ ನೀರು ಹಾಕಿದಾಗ ಮಳೆಯಾದ ಉದಾಹರಣೆ ಇದೆ ಎನ್ನುತ್ತಾರೆ.
ಹೀಗಾಗಿ ಸೋಮವಾರ ಶವ ಹೂತಿದ್ದ ಸಮಾಧಿಯೊಳಗೆ ನೀರು ಹಾಕಿರುವ ಗ್ರಾಮಸ್ಥರು ಈ ವಿಶೇಷ ಆಚರಣೆಯಲ್ಲಿ ಪಾಲ್ಗೊಂಡು ಉತ್ತಮ ಮಳೆಯಾಗಿ ಬೆಳೆಗಳು ಬರಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Vijayapura: ರಾಜಕಾಲುವೆಗೆ ಬಿದ್ದು 2 ವರ್ಷದ ಮಗು ಸಾವು
Vijayapura: ವಕ್ಫ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಯತ್ನಾಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
Basangouda Patil Yatnal: ಫಸ್ಟ್ ಲೈನ್ ನಾಯಕರ ಆಸ್ತಿ ಬಗ್ಗೆ ತನಿಖೆ ಆಗಲಿ
Vijayapura: ಖರ್ಗೆ ಕುಟುಂಬ ನಿವೇಶನ ವಾಪಸ್ ಕೊಟ್ಟಿದ್ದು ಗೊತ್ತಿಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.