![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 16, 2020, 6:20 PM IST
ಚಾಮರಾಜನಗರ: ಹತ್ತು ವರ್ಷದ ಬಾಲಕಿ ಸೇರಿದಂತೆ ಜಿಲ್ಲೆಯಲ್ಲಿ ಗುರುವಾರ 12 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇದೇ ವೇಳೆ 19 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದಿನ 12 ದೃಢ ಪ್ರಕರಣಗಳಲ್ಲಿ 7 ಮಂದಿ ಬೆಂಗಳೂರಿನಿಂದ, ಇಬ್ಬರು ಮೈಸೂರಿನಿಂದ ಬಂದವರು.
ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 217ಕ್ಕೇರಿದೆ. ಆದರೆ ಇವರಲ್ಲಿ 135 ಮಂದಿ ಗುಣಮುಖರಾಗಿದ್ದಾರೆ. 79 ಸಕ್ರಿಯ ಪ್ರಕರಣಗಳಿವೆ. 7 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ನಿಂದ ಜಿಲ್ಲೆಯಲ್ಲಿ ಒಟ್ಟು 3 ಜನ ಮೃತಪಟ್ಟಿದ್ದಾರೆ.
ಇಂದು ಒಟ್ಟು 772 ಜನರ ಗಂಟಲು ದ್ರವ ಮಾದರಿಗಳ ಪರೀಕ್ಷೆಯಲ್ಲಿ ನಡೆಸಿದ್ದು ಅದರಲ್ಲಿ 12 ಮಾದರಿಗಳು ಪಾಸಿಟಿವ್ ಆಗಿದೆ. ಉಳಿದ 760 ಪ್ರಕರಣಗಳು ನೆಗೆಟಿವ್ ಆಗಿವೆ.
12 ಪ್ರಕರಣಗಳಲ್ಲಿ ಗುಂಡ್ಲುಪೇಟೆಗೆ 5, ಕೊಳ್ಳೇಗಾಲಕ್ಕೆ 4, ಚಾಮರಾಜನಗರ, ಯಳಂದೂರು, ಹನೂರಿಗೆ ತಲಾ 1 ಪ್ರಕರಣ ಸೇರಿವೆ.
ಪ್ರಕರಣಗಳ ವಿವರ:
ಗುಂಡ್ಲುಪೇಟೆ ತಾಲೂಕು: 27 ವರ್ಷದ ಯುವಕ ಸಂಪಿಗೆಪುರ, 24 ವರ್ಷದ ಯುವಕ ಬೊಮ್ಮಲಾಪುರ. 10 ವರ್ಷದ ಬಾಲಕಿ ಗುಂಡ್ಲುಪೇಟೆ. 40 ವರ್ಷದ ಮಹಿಳೆ, ಬೊಮ್ಮಲಾಪುರ. 52 ವರ್ಷದ ಮಹಿಳೆ ತೆರಕಣಾಂಬಿ.
ಕೊಳ್ಳೇಗಾಲ ತಾಲೂಕು: 21 ವರ್ಷದ ಯುವಕ, ಮಧುವನಹಳ್ಳಿ. 27 ವರ್ಷದ ಯುವತಿ, ಕೊಳ್ಳೇಗಾಲ ಮೋಳೆ. 24 ವರ್ಷದ ಯುವಕ ಜಾಗೇರಿ. 40 ವರ್ಷದ ಪುರುಷ, ಕೊಳ್ಳೇಗಾಲ ಪಟ್ಟಣ.
ಚಾಮರಾಜನಗರ ತಾಲೂಕು: 20 ವರ್ಷದ ಯುವತಿ, ಅರಳೀಪುರ.
ಯಳಂದೂರು ತಾಲೂಕು: 35 ವರ್ಷದ ಪುರುಷ, ಮಾಂಬಳ್ಳಿ. (ಮೈಸೂರಿನಲ್ಲಿ ವಾಸವಿದ್ದರು)
ಹನೂರು ತಾಲೂಕು: 65 ವರ್ಷದ ವೃದ್ಧೆ, ಅಜ್ಜೀಪುರ.
ಇವರೆಲ್ಲರೂ ನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.